ಪೊನ್ನಂಪೇಟೆ: ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ್ದ ಸಂಸ್ಕೃತಿ ಯಿಂದ ನಾವು ಶಿಕ್ಷಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಕಂಡಿದ್ದೇವೆ. ಪೂರ್ವಜರು ನಮಗೆ ದಕ್ಕಿಸಿಕೊಟ್ಟಿರುವ ಸಂಸ್ಕೃತಿಯಿಂದ ನಮಗೆ ಗೌರವ ಸಿಗುತ್ತಿದೆ. ಅಂತಹ ಬೇರನ್ನು ಗಟ್ಟಿ ಮಾಡಬೇಕಾಗಿದೆ. ಇದನ್ನು ಉಳಿಸಿಕೊಳ್ಳಲು ಮಂದ್ನಂತಹ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದು ಯುಕೊ ಸಂಘ ಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು. ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆಯಲ್ಲಿ 5ನೇ ವರ್ಷದ ಯುಕೊ ಮಂದ್ ನಮ್ಮೆಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೊಡವರು…
ನೆರೆ ಸಂತ್ರಸ್ತರಿಗೆ ಮಣವಟ್ಟಿರ ಕುಟುಂಬದ ನೆರವು
December 26, 2018ಮಡಿಕೇರಿ: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯ ಆರು ಸಂತ್ರಸ್ತ ಕುಟುಂಬಗಳಿಗೆ ಮಣ ವಟ್ಟಿರ ಕುಟುಂಬಸ್ಥರು ತಲಾ 10 ಸಾವಿರ ರೂ.ಗಳಂತೆ ಒಟ್ಟು 60 ಸಾವಿರ ರೂ. ಗಳನ್ನು ನಗರದಲ್ಲಿ ವಿತರಿಸಿದರು. ಮಣವಟ್ಟಿರ ಸುಬ್ರಮಣಿ ನೀಡಿರುವ 30 ಸಾವಿರ ರೂ.ಸೇರಿದಂತೆ ಕುಟುಂಬದ ಸದಸ್ಯರಿಂದ ಸಂಗ್ರಹಿಸಿದ ಒಟ್ಟು ಮೊತ್ತ ವನ್ನು ಕೃಷ್ಣರಾವ್, ಅಲ್ಮಚಂಡ ಪ್ರಭು ಮತ್ತು ಶೈಲ, ಚೆನ್ನಪಂಡ ಸರಸು, ಅಯ್ಯಕುಟ್ಟಿರ ಪೆಮ್ಮಯ್ಯ, ಐಮುಡಿಯಂಡ ಶಾರದ ಹಾಗೂ ಮಡ್ಲಂಡ ಲವ ಅವರಿಗೆ ವಿತರಿಸಲಾಯಿತು. ಮಣವಟ್ಟಿರ ಕುಟುಂಬದ ಪ್ರಮುಖ…
ಪ್ರಕೃತಿ ವಿಕೋಪದಿಂದ ಕಾಡು ಪ್ರಾಣಿಗಳೂ ಸಂತ್ರಸ್ತ
December 22, 2018ಮಡಿಕೇರಿ: ಕೊಡಗಿನಲ್ಲಿ ಘಟಿಸಿದ ಪ್ರಕೃತಿ ವಿಕೋಪದಲ್ಲಿ ಮಾನ ವರು ಮಾತ್ರ ಸಂತ್ರಸ್ತರಾಗಿಲ್ಲ. ಬದಲಿಗೆ ವನ್ಯಜೀ ವಿಗಳು ಕೂಡ ತಮ್ಮ ಆವಾಸ ಸ್ಥಾನ ಕಳೆದುಕೊಂಡು ನಿರಾಶ್ರಿತವಾಗಿವೆ. ಅದರಲ್ಲೂ ಕಾಡು ಕುರಿ, ಮುಳ್ಳು ಹಂದಿ ಯಂತಹ ಮೂಕ ಪ್ರಾಣಿಗಳು ಕೂಡ ನೆಲೆ ಕಂಡು ಕೊಳ್ಳಲು ಹೆಣಗಾಡುತ್ತಿವೆ. ಕಾಡು ಕುರಿಯಂತಹ ತೀರಾ ಮೃದು ಹೃದಯದ ಪ್ರಾಣಿಗಳ ಸಂಖ್ಯೆಯಂತು ವಿನಾಶದ ಅಂಚಿಗೆ ಬಂದು ತಲುಪಿದೆ. ಮಾನವನ ಕಳ್ಳಬೇಟೆ ಮತ್ತು ಪ್ರಕೃತಿ ಯಲ್ಲಾದ ಏರುಪೇರು ಈ ಜೀವ ಸಂಕು ಲದ ಮೇಲೆ ಅಡ್ಡ ಪರಿಣಾಮ…
ಮೈಸೂರಿನಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಗೆಲುವು
December 22, 2018ಗೋಣಿಕೊಪ್ಪಲು: ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹಾರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಶುಭಾರಂಭ ಮಾಡಿದೆ. ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಕಿಕೂರ್ಗ್ ತಂಡ 7-0 ಗೋಲುಗಳ ಮೂಲಕ ಹಾಕಿ ಬಳ್ಳಾರಿ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಹಾಕಿಕೂರ್ಗ್ ಪರ ಲಿಕಿತ್ 3 ಗೋಲು ಹೊಡೆದರು. 7 ಹಾಗೂ 8ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಹಾಗೂ 36ನೇ ನಿಮಿಷದಲ್ಲಿ ಲಿಖಿತ್ ಫೀಲ್ಡ್…
ತಲಕಾವೇರಿ: ಭಗ್ನ ಲಿಂಗ ವಿಸರ್ಜನೆಗೆ ವಿರೋಧ
December 22, 2018ಮಡಿಕೇರಿ: ಜೀವನದಿ ಕಾವೇ ರಿಯ ಉಗಮ ಸ್ಥಾನ ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇಗುಲದಲ್ಲಿರುವ ಭಗ್ನ ಲಿಂಗವನ್ನು ತಮಿಳುನಾಡಿನ ಪೂಂಪು ಹಾರ್ನ ಸಮುದ್ರದಲ್ಲಿ ವಿಸರ್ಜನೆ ಮಾಡ ಬೇಕೆನ್ನುವ ಪ್ರಸ್ತಾಪ ಇತ್ತೀಚೆಗೆ ವ್ಯಕ್ತವಾ ಗಿದ್ದು, ಇದನ್ನು ತೀವ್ರವಾಗಿ ವಿರೋಧಿಸು ವುದಾಗಿ ಭಾಗಮಂಡಲ ಮತ್ತು ತಲಕಾ ವೇರಿ ವ್ಯಾಪ್ತಿಯ ಭಕ್ತಾದಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದು ಕುಳಿ ಭರತ್, ತಲಕಾವೇರಿಯಲ್ಲಿ ಕುಂಡಿಕೆ ತೀರ್ಥ ಪೂಜೆಯನ್ನು ಸ್ಥಗಿತಗೊಳಿಸಿರು ವುದು ಮತ್ತು ಅಗಸ್ತ್ಯ ಲಿಂಗವನ್ನು ಸಮು ದ್ರದಲ್ಲಿ ವಿಸರ್ಜನೆ ಮಾಡಬೇಕೆನ್ನುವ ವಿಚಾ ರಕ್ಕೆ ಸ್ಥಳೀಯರ…
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ
December 19, 2018ಮಡಿಕೇರಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜ್ಯ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು 6 ತಿಂಗಳು ಕಳೆದರೂ ಕೂಡ ಕೊಡಗು ಜಿಲ್ಲೆಗೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಕ್ಕಾಗಿ ಮಾತ್ರ ವಿವಿಧ ಇಲಾಖೆಗಳ ಮೂಲಕ 85 ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗಿದೆ. ಈ ನೆರವನ್ನು ಹೊರತುಪಡಿಸಿದರೆ ವಿಶೇಷ ಅನುದಾನ ಜಿಲ್ಲೆಗೆ ಬಂದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರು, ಬೆಳೆಗಾರರ ಅಲ್ಪಾವಧಿಯ ಸಾಲಮನ್ನಾ ಘೋಷಣೆ ರಾಜ್ಯಕ್ಕೆ ಸಂಬಂಧಿಸಿದಾಗಿದ್ದು, ಕೊಡಗು ಜಿಲ್ಲೆಯ 17,780 ಫಲಾನುಭವಿಗಳನ್ನು ವಿವಿಧ…
ತಿತಿಮತಿಯಲ್ಲಿ ರೈತರು-ಅಧಿಕಾರಿಗಳ ಸಭೆ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ರೈತರ ಒತ್ತಾಯ, ಪ್ರತಿಭಟನೆ
December 19, 2018ಗೋಣಿಕೊಪ್ಪಲು: ಕಾಡಾನೆ ಉಪ ಟಳ, ಹುಲಿ ಹಾವಳಿ ಸೇರಿದಂತೆ ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆಗಳ ನಷ್ಟದ ಬಗ್ಗೆ ಅರಣ್ಯ ಇಲಾಖೆಯು ನೀಡುವ ಪರಿಹಾರ ವಿಳಂಬ ನೀತಿಯ ಬಗ್ಗೆ ರೈತರು ಅರಣ್ಯ ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು. ಮೊದಲ ಬಾರಿಗೆ ಗ್ರಾಮೀಣ ಪ್ರದೇಶ ತಿತಿಮತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು, ಸದಸ್ಯರು ಹಿರಿಯ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಆರಂಭದಲ್ಲಿ ಅರಣ್ಯ ಇಲಾಖೆಯ ಸುತ್ತೋಲೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ…
ಕೊಡಗು ಜಿಲ್ಲೆಯಲ್ಲಿ ಶಂಕಿತ 24 ಎಚ್1 ಎನ್1 ಪ್ರಕರಣ ಪತ್ತೆ, 7 ಪ್ರಕರಣ ದೃಢ ರೋಗ ಹರಡದಂತೆ ಅರಿವು ಮೂಡಿಸಲು ಸೂಚನೆ
December 18, 2018ಮಡಿಕೇರಿ: ಎಚ್1 ಎನ್ 1 ರೋಗ ಬಗ್ಗೆ ಹೆಚ್ಚಿನ ಅರಿವು ಮೂಡಿಸು ವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಚ್1 ಎನ್ 1 ರೋಗದ ಬಗ್ಗೆ ಅಲ್ಲಲ್ಲಿ ಮಾಹಿತಿ ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ…
ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರಕ್ಕೆ ಕ್ರಮ
December 18, 2018ಗೋಣಿಕೊಪ್ಪಲು: ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಗೋಣಿಕೊಪ್ಪ ಪಟ್ಟಣದಲ್ಲಿ ಏಕಮುಖ ಸಂಚಾರಕ್ಕೆ ಪ್ರಾಯೋ ಗಿಕವಾಗಿ ಚಾಲನೆ ನೀಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪನ್ನೇಕರ್ ಹೇಳಿದರು.ಇಲ್ಲಿನ ಪರಿಮಳ ಮಂಗಳ ವಿಹಾದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋ ಜಿಸಿದ್ದ ವಾಹನ ಸುರಕ್ಷತೆ ಹಾಗೂ ಸಂಚಾರ ಪಾಲನೆ ಎಂಬ ವಿಷಯ ಕುರಿತು ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಹಾಗೂ ಸಾರ್ವಜನಿಕರು ಪಟ್ಟಣದಲ್ಲಿನ ವಾಹನ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್ ಮೂಲಕ ಏಕಮುಖ…
ಬಡಜನರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ
December 18, 2018ವಿರಾಜಪೇಟೆ: ಕಾಂಗ್ರೆಸ್ ಪಕ್ಷ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಬಡ ಜನರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿರುವುದರೊಂದಿಗೆ ಗ್ರಾಮೀಣ ಮಟ್ಟದ ಸದಸ್ಯರನ್ನು ಗುರುತಿಸುವಂತ ಕಾರ್ಯ ಮಾಡುತ್ತಿರುವುದಾಗಿ ಮಾಜಿ ಎಂಎಲ್ಸಿ ಪಕ್ಷದ ಶಕ್ತಿ ಕಾರ್ಯಕ್ರಮದ ಸಂಯೋಜಕ ಅರುಣ್ ಮಾಚಯ್ಯ ಹೇಳದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಸ್ಥಳಿಯ ಪುರಭವನದಲ್ಲಿ ಆಯೋ ಜಿಸಲಾಗಿದ್ದ ಪಕ್ಷಕ್ಕೆ ನೂತನ ಸದಸ್ಯರ ನೋಂದಣಿ ಶಕ್ತಿ ಚಾಲನ ಕಾರ್ಯಕ್ರಮ ದಲ್ಲಿ ಮಾತನಾಡಿದ ಅರುಣ್ ಮಾಚಯ್ಯ, ಪಕ್ಷದ ಶಕ್ತಿ ಕಾರ್ಯಕ್ರಮದ ಮೂಲಕ ದೆಹಲಿ ಯಲ್ಲಿ ಇಂದು…