ತಲಕಾವೇರಿ: ಭಗ್ನ ಲಿಂಗ ವಿಸರ್ಜನೆಗೆ ವಿರೋಧ
ಕೊಡಗು

ತಲಕಾವೇರಿ: ಭಗ್ನ ಲಿಂಗ ವಿಸರ್ಜನೆಗೆ ವಿರೋಧ

December 22, 2018

ಮಡಿಕೇರಿ:  ಜೀವನದಿ ಕಾವೇ ರಿಯ ಉಗಮ ಸ್ಥಾನ ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇಗುಲದಲ್ಲಿರುವ ಭಗ್ನ ಲಿಂಗವನ್ನು ತಮಿಳುನಾಡಿನ ಪೂಂಪು ಹಾರ್‍ನ ಸಮುದ್ರದಲ್ಲಿ ವಿಸರ್ಜನೆ ಮಾಡ ಬೇಕೆನ್ನುವ ಪ್ರಸ್ತಾಪ ಇತ್ತೀಚೆಗೆ ವ್ಯಕ್ತವಾ ಗಿದ್ದು, ಇದನ್ನು ತೀವ್ರವಾಗಿ ವಿರೋಧಿಸು ವುದಾಗಿ ಭಾಗಮಂಡಲ ಮತ್ತು ತಲಕಾ ವೇರಿ ವ್ಯಾಪ್ತಿಯ ಭಕ್ತಾದಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದು ಕುಳಿ ಭರತ್, ತಲಕಾವೇರಿಯಲ್ಲಿ ಕುಂಡಿಕೆ ತೀರ್ಥ ಪೂಜೆಯನ್ನು ಸ್ಥಗಿತಗೊಳಿಸಿರು ವುದು ಮತ್ತು ಅಗಸ್ತ್ಯ ಲಿಂಗವನ್ನು ಸಮು ದ್ರದಲ್ಲಿ ವಿಸರ್ಜನೆ ಮಾಡಬೇಕೆನ್ನುವ ವಿಚಾ ರಕ್ಕೆ ಸ್ಥಳೀಯರ ವಿರೋಧವಿದೆ ಎಂದು ತಿಳಿಸಿದರು. 2004ರಲ್ಲಿ ತಲಕಾವೇರಿಯಲ್ಲಿ ಕ್ಷೇತ್ರದ ಅಂದಿನ ತಂತ್ರಿಗಳಾಗಿದ್ದ ದಿವಂ ಗತ ನೀಲೇಶ್ವರ ಪದ್ಮನಾಭ ತಂತ್ರಿಗಳ ಮೂಲಕ ಅಷ್ಟಬಂಧ ಬ್ರಹ್ಮಕಲಶ ಕಾರ್ಯಕ್ರಮ ನಡೆ ದಿತ್ತು. ಆ ಸಂದರ್ಭ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಜಲವಾಸದಲ್ಲಿಟ್ಟು, ಅಷ್ಟಬಂಧ ಬ್ರಹ್ಮಕಲಶ ನೆರವೇರಿಸಲಾ ಗಿದೆ. ಮುಜರಾಯಿ ಆಯುಕ್ತರು ಮತ್ತು ಮುಜರಾಯಿ ಇಲಾಖೆಯ ಪಂಡಿತರು ತಲಕಾವೇರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಟಾ ಪನೆಯ ಅಗತ್ಯವಿಲ್ಲ. ಯಾವುದೇ ದೇವಾ ಲಯಗಳಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಮಾತ್ರ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಮಾಡು ವುದು ಸಂಪ್ರದಾಯವೆಂದು ತಿಳಿಸಿದ್ದಾರೆ. ಆದರೆ, ಈಗಿನ ಭಾಗಮಂಡಲ ತಲಕಾ ವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎರಡು ಬಾರಿ ಕ್ಷೇತ್ರದ ಬಗ್ಗೆ ಪ್ರಶ್ನೆಯನ್ನು ಇರಿಸಿದ್ದು, ಈ ಸಂದರ್ಭ ದ್ವಂದ್ವ ನಿಲುವು ಗಳನ್ನು ತೆಗೆದುಕೊಂಡ ಕಾರಣದಿಂದ ಭಕ್ತವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಪ್ರಶ್ನೆಯಲ್ಲಿ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಪೂಂಪುಹಾರ್‍ನ ಸಮುದ್ರ ದಲ್ಲಿ ವಿಸರ್ಜಿಸುವ ಕುರಿತು ವಿಷಯ ಪ್ರಸ್ತಾಪ ವಾಗಿದೆ. ಇದು ಅತ್ಯಂತ ಖಂಡನೀಯ ಕ್ರಮ ವಾಗಿದ್ದು, ಸಮಿತಿಯ ಧೋರಣೆಯನ್ನು ವಿರೋಧಿಸುವುದಾಗಿ ಭರತ್ ತಿಳಿಸಿದರು.

ಡಿ.26 ರಂದು ವಿರೋಧಿಸುತ್ತೇವೆ: ಗೊಂದಲ ನಿವಾರಣೆಗಾಗಿ ಡಿ.26 ರಂದು ಮತ್ತೆ ಪ್ರಶ್ನೆ ಕಾರ್ಯಕ್ರಮವನ್ನು ಸಮಿತಿ ಆಯೋಜಿಸಿದ್ದು, ಈ ಸಂದರ್ಭ ಸ್ಥಳೀಯ ಭಕ್ತರು ಹಾಜರಿರುವುದಾಗಿ ತಿಳಿಸಿದ ಅವರು, ಒಂದು ವೇಳೆ ಲಿಂಗ ವಿಸರ್ಜನೆಗೆ ನಿರ್ಧಾರ ಕೈಗೊಂಡರೆ ತೀವ್ರ ವಿರೋಧ ವ್ಯಕ್ತಪಡಿ ಸುವುದಾಗಿ ಹೇಳಿದರು.

ಬ್ರಹ್ಮಗಿರಿ ಬೆಟ್ಟದಲ್ಲಿರುವ ಸಪ್ತಋಷಿ ಕುಂಡಿಕೆ ದರ್ಶನಕ್ಕೂ ಸಮಿತಿ ಅಡ್ಡಿಪಡಿಸು ತ್ತಿದೆ. ಇದು ಸಮಿತಿಯ ದ್ವಂದ್ವ ನಿರ್ಧಾರ ಗಳಿಂದ ಸ್ಥಳೀಯ ಭಕ್ತರು ಮಾತ್ರವಲ್ಲದೆ, ಜಿಲ್ಲೆ, ಹೊರ ಜಿಲ್ಲೆಯ ಭಕ್ತ ಸಮೂಹಕ್ಕೆ ನೋವಾಗಿದೆ. ಶತಮಾನಗಳಿಂದ ನಡೆದು ಕೊಂಡು ಬಂದಿರುವ ಮೂಲ ಸಂಪ್ರದಾ ಯವನ್ನು ಯಥಾಸ್ಥಿತಿಯಾಗಿ ಮುಂದು ವರಿಸಿಕೊಂಡು ಹೋಗದಿದ್ದಲ್ಲಿ ಮತ್ತು ಅಗಸ್ತ್ಯ ಲಿಂಗವನ್ನು ಸಮುದ್ರದಲ್ಲಿ ವಿಸರ್ಜಿ ಸುವ ನಿರ್ಧಾರದಿಂದ ಹಿಂದೆ ಸರಿಯದಿ ದ್ದಲ್ಲಿ ಭಕ್ತ ಸಮೂಹದ ಬೆಂಬಲದೊಂದಿಗೆ ಹೋರಾಟವನ್ನು ರೂಪಿಸುವುದಾಗಿ ಭರತ್ ಎಚ್ಚರಿಕೆ ನಿಡಿದರು.

ಪ್ರಮುಖರಾದ ಕಾಳನ ರವಿ, ಪಿ.ಎಂ. ರಾಜೀವ್ ಹಾಗೂ ಗ್ರಾಮಸ್ಥರು ಮಾತ ನಾಡಿ, ದೇವಾಲಯ ಸಮಿತಿಯ ಅಧ್ಯಕ್ಷÀ ಬಿ.ಎಸ್.ತಮ್ಮಯ್ಯ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳಿಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ ವೆಂದು ಟೀಕಿಸಿದರು. ಹೊಸ ಸಮಿತಿ ರಚನೆಯಾದ ನಂತರ ಅಧ್ಯಕ್ಷರ ವರ್ತನೆ ದೇವಾಲಯದ ಮಂದಿಗೆ ಮತ್ತು ಸುತ್ತ ಮುತ್ತಲ ಜನರಿಗೆ ಕಿರಿಕಿರಿಯನ್ನು ಉಂಟು ಮಾಡಿದೆ. ಸಮಿತಿ ಯಾವುದೇ ನಿರ್ಧಾರ ಕೈಗೊಂಡರು ಭಕ್ತ ಸಮೂಹ ಹಾಗೂ ಸಾರ್ವಜನಿಕ ವಲಯದ ಚರ್ಚೆಯ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿ ಯಲ್ಲಿ ಪಿ.ಪಿ.ವಿನೋದ್, ಮೂಲೆಮಜಲು ಪೂಣಚ್ಚ ಹಾಗೂ ಬಿ.ಕೆ.ರಾಜ ರೈ ಉಪಸ್ಥಿತರಿದ್ದರು.

Translate »