ತಿತಿಮತಿಯಲ್ಲಿ ರೈತರು-ಅಧಿಕಾರಿಗಳ ಸಭೆ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ರೈತರ ಒತ್ತಾಯ, ಪ್ರತಿಭಟನೆ
ಕೊಡಗು

ತಿತಿಮತಿಯಲ್ಲಿ ರೈತರು-ಅಧಿಕಾರಿಗಳ ಸಭೆ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ರೈತರ ಒತ್ತಾಯ, ಪ್ರತಿಭಟನೆ

December 19, 2018

ಗೋಣಿಕೊಪ್ಪಲು:  ಕಾಡಾನೆ ಉಪ ಟಳ, ಹುಲಿ ಹಾವಳಿ ಸೇರಿದಂತೆ ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆಗಳ ನಷ್ಟದ ಬಗ್ಗೆ ಅರಣ್ಯ ಇಲಾಖೆಯು ನೀಡುವ ಪರಿಹಾರ ವಿಳಂಬ ನೀತಿಯ ಬಗ್ಗೆ ರೈತರು ಅರಣ್ಯ ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು.

ಮೊದಲ ಬಾರಿಗೆ ಗ್ರಾಮೀಣ ಪ್ರದೇಶ ತಿತಿಮತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು, ಸದಸ್ಯರು ಹಿರಿಯ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಆರಂಭದಲ್ಲಿ ಅರಣ್ಯ ಇಲಾಖೆಯ ಸುತ್ತೋಲೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುತ್ತೋ ಲೆಯನ್ನು ಹಿರಿಯ ವಕೀಲ ಹೇಮಚಂದ್ರ ಸುಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ತಿತಿಮತಿಯ ಪ್ರವಾಸಿ ಮಂದಿರ ದಲ್ಲಿ ಸಭೆ ಸೇರಿದ ರೈತ ಮುಖಂಡರು, ಹಲವು ಸಮಯದಿಂದ ರೈತರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಹಿರಿಯ ಅರಣ್ಯ ಅಧಿಕಾರಿ ಗಳ ಮುಂದೆ ಬಿಚ್ಚಿಟ್ಟರು. ದ.ಕೊಡಗಿನ ಬಹು ತೇಕ ಭಾಗದಲ್ಲಿ ಕಾಡಾನೆಯ ಹಿಂಡಿ ನಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿಯ ಬಗ್ಗೆ ಗಂಭೀರ ಚರ್ಚೆ ನಡೆ ದವು. ಕೊಡಗು ಜಿಲ್ಲಾ ಅರಣ್ಯ ಇಲಾ ಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹಾಗೂ ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕೃಷ್ಣರಾಜ್ ರೈತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಆದರೆ ಇದಕ್ಕೆ ತೃಪ್ತರಾಗದ ರೈತರು ತಿತಿಮತಿಯ ಮುಖ್ಯ ರಸ್ತೆಯಲ್ಲಿ ಸಾಗಿ ತಿತಿ ಮತಿಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡರು. ನಂತರ ಮರದ ಕೆಳಗೆ ನೂರಾರು ರೈತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಗಳು ಅಸೀನರಾಗಿ ರೈತರ ಅಹವಾಲು ಗಳನ್ನು ಸ್ವೀಕರಿಸಲಾಯಿತು. ಸಭೆಯ ಆರಂಭದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಕಾಡು ಪ್ರಾಣಿಗಳಿಂದ ನಷ್ಟ ಸಂಭವಿಸಿದಾಗ ಇಲಾಖೆಯು ನೀಡುವ ಪರಿಹಾರ ಏನೇನು ಸಾಲದು. ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಬಯಸಿದರು.

ಈ ಸಂದರ್ಭ ಕಾಡಾನೆ, ಹುಲಿ ಹಾವಳಿ ಯಿಂದ ತೊಂದರೆಗೀಡಾಗಿರುವ ರೈತರ ಸಂಕಷ್ಟಗಳನ್ನು ಆಲಿಸಿ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ರುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಲಿಂಗರಾಜು ಮಾಹಿತಿ ನೀಡಿದರು. ಸ್ವಂತ ಉಪಯೋಗಕ್ಕೆ ಮರಗಳನ್ನು ಬಳಸಿಕೊಳ್ಳಲು ನಿಗದಿತ ದಾಖಲಾತಿಗ ಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. 30 ದಿನದ ಒಳಗೆ ಅರ್ಜಿಗೆ ಉತ್ತರ ಲಭ್ಯ ವಾಗದಿದ್ದಲ್ಲಿ ರೈತರು ತಮ್ಮ ಭೂಮಿಯಲ್ಲಿ ತಾವೇ ಬೆಳೆದಿರುವ ಮರಗಳನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಬಹುದೆಂದು ಸಿಸಿಎಫ್ ಲಿಂಗರಾಜು ಮಾಹಿತಿ ನೀಡಿದರು.

ತಿತಿಮತಿಯ ಸೌದೆ ಡಿಪೊ ಬಳಿ ಕಾಡಾನೆ ನಿರಂತರ ಅಲೆದಾಡುತ್ತಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಭಯ ಭೀತರಾಗಿದ್ದಾರೆ. ರೈಲ್ವೇ ಬ್ಯಾರಿಕೇಡ್‍ನ ಗೇಟ್ ನಿರ್ಮಾಣ ಮಾಡುವಂತೆ ತಿತಿ ಮತಿ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಗಮನ ಸೆಳೆದರು. ಈ ಸಂದರ್ಭ ಡಿಎಫ್‍ಓ ಮರಿಯಾಕೃಷ್ಟರಾಜ್ ಈ ಭಾಗ ದಲ್ಲಿ ಗೇಟ್ ನಿರ್ಮಾಣ ರಸ್ತೆ ಬದಿ ಬೆಳೆದು ನಿಂತಿರುವ ಕಾಡು ಕಡಿಸುವ ಕೆಲಸವನ್ನು ತುರ್ತಾಗಿ ಮಾಡಲಾಗುವುದು ಎಂದರು.

ಆರ್‍ಟಿಎಫ್ ತಂಡ ದಿನದ 24 ಗಂಟೆಯು ಕೆಲಸ ನಿರ್ವಹಿಸಬೇಕು. ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮತ್ತೊಂದು ತೋಟಕ್ಕೆ ಓಡಿಸಬಾರದು ಎಂದು ರೈತ ಸಂಘದ ಮುಖಂಡ ಪುಚ್ಚಿಮಾಡ ಸುಭಾಶ್ ಅಧಿಕಾರಿಗಳ ಗಮನ ಸೆಳೆದರು ಈ ಸಂದರ್ಭ ಉತ್ತರಿಸಿದ ಅರಣ್ಯಾಧಿಕಾರಿ ಗಳು ರೈತರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಲು ರೈತರ ಸಂಕಷ್ಟಕ್ಕೆ ಭಾಗಿ ಯಾಗಲು ಆರ್‍ಟಿಎಫ್ ತಂಡ ರಚಿಸಲಾ ಗಿದೆ. ಇನ್ನು ಮುಂದೆ ರಾತ್ರಿ ವೇಳೆಯಲ್ಲಿ ಕಾಡಾನೆಯನ್ನು ಓಡಿಸುವ ಪ್ರಯತ್ನ ನಿಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರುಗ ಳಾದ ಚಕ್ಕೇರ ಮಧುಕುಶಾಲಪ್ಪ, ಮೇಚಂಡ ಕಿಶಾ, ಲಕ್ಷ್ಮಿಕಾಂತ್, ಪುಚ್ಚಿಮಾಡ ಕಿಶೋರ್, ಬೋಪಯ್ಯ, ಪ್ರದೀಪ್ ಪೂವಯ್ಯ, ಅಜ್ಜಿ ಕುಟ್ಟಿರ ಸುರೇಶ್, ಮೀದೇರಿರ ಪ್ರವೀಣ್, ಕಳ್ಳಿಚಂಡ ಕುಶಾಲಪ್ಪ, ಸೋಮ ವಾರಪೇಟೆಯ ಶಂಕರಪ್ಪ, ಉಮೇಶ್, ಮಹೇಶ್, ತಮ್ಮಯ್ಯ, ರಂಜಿ, ಬೋಪಣ್ಣ, ಭೀಮಯ್ಯ, ಹರೀಶ್, ಮದನ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಣ್ಣ, ಮಾಯ ಮುಡಿಯ ಎಸ್.ಎಸ್.ಸುರೇಶ್, ಮರಿ ಸ್ವಾಮಿ, ಕಿರಣ್,ಅಣ್ಣಯ್ಯ, ಸೇರಿದಂತೆ ರೈತ ಸಂಘದ ಪದಾಧಿಕಾರಿಗಳಾದ ಅಜ್ಜಮಾಡ ಚಂಗಪ್ಪ, ತೀತರಮಾಡ ಸುನೀಲ್, ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಅರಣ್ಯ ಅಧಿಕಾರಿಗಳಾದ ಮಡಿಕೇರಿಯ ಮಂಜುನಾಥ್, ಎಂ.ಎಂ.ಜಯ, ಹುಣ ಸೂರು ವನ್ಯ ಜೀವಿ ವಿಭಾಗದ ಎಸಿಎಫ್ ಪ್ರಸನ್ನ ಕುಮಾರ್, ಆರ್‍ಎಫ್‍ಓ ಗೋಪಾಲ್, ಗಂಗಾಧರ್, ಅಶೋಕ್, ಅರುಣ್, ಪೌಲ್, ಸಿಬ್ಬಂದಿಗಳು ಸೇರಿದಂತೆ ಪೊನ್ನಂಪೇಟೆ ಠಾಣಾ ಧಿಕಾರಿ ಮಹೇಶ್, ಹಾಗೂ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »