Tag: Kodagu

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ
ಕೊಡಗು

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ

September 2, 2018

ಮಡಿಕೇರಿ:  ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ನಡೆಯಿತು. ಜಿಲ್ಲಾ ಅಂಚೆ ಕಚೇರಿಯ ಸೂಪರಿಡೆಂಟ್ ಎಸ್.ಆರ್.ನಾಗೇಂದ್ರ ಮಾತನಾಡಿ, ಪ್ರತಿ ಗ್ರಾಮೀಣ ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯು ಸೆಪ್ಟೆಂಬರ್ 1 ರಿಂದ ರಾಷ್ಟ್ರಾ ದ್ಯಂತ ಆರಂಭಗೊಳ್ಳುತ್ತಿದೆ ಎಂದರು. ಆರ್ಥಿಕ ಸ್ವಾಯತ್ತತೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸರಳ ವ್ಯವಹಾರ…

ಸಂತ್ರಸ್ತರಿಗೆ ಅವರ ಸ್ವಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಿಎನ್‍ಸಿ ಆಗ್ರಹ
ಕೊಡಗು

ಸಂತ್ರಸ್ತರಿಗೆ ಅವರ ಸ್ವಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಿಎನ್‍ಸಿ ಆಗ್ರಹ

September 2, 2018

ಮಡಿಕೇರಿ:  ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಒಳಗೊಂಡ ವಾಯುವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ತನ್ನ 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊವ್ದ್ ಹಬ್ಬದ ಸಂದರ್ಭ ಹಕ್ಕೊತ್ತಾಯವನ್ನು ಮಂಡಿಸಿದೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಮಂದ್‍ನಲ್ಲಿ ಕೈಲ್ ಮುಹೂರ್ತ ಪ್ರಯುಕ್ತ ಕೃಷಿಯುಪಕರಣ, ಬಂದೂಕುಗಳಿಗೆ…

ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ
ಕೊಡಗು

ವಿದ್ಯುತ್ ಮರು ಸಂಪರ್ಕಕ್ಕೆ ಸೆಸ್ಕ್ ಸಮರೋಪಾದಿ ಕಾರ್ಯಾಚರಣೆ

September 2, 2018

ಮಡಿಕೇರಿ: ಜಿಲ್ಲೆಯಲ್ಲಿ ಸಂಭ ವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಗ್ರಾಮ ಗಳಿಗೆ ಮರು ಸಂಪರ್ಕ ಕಲ್ಪಿಸುವ ನಿಟ್ಟಿ ನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ(ಸೆಸ್ಕ್) ಸಮರೋಪಾದಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಏ.1 ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್ 15ರ ಬಳಿಕ ಪ್ರಕೃತಿ ವಿಕೋಪದಿಂದ ವಿದ್ಯುತ್ ವಿತರಣಾ ವ್ಯವ ಸ್ಥೆಯಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ವಿದ್ಯುತ್ ಕಂಬಗಳು ತುಂಡಾಗಿ ಪರಿ ವರ್ತಕಗಳು ವಿಫಲಗೊಂಡು, ವಿದ್ಯುತ್ ಪರಿಕರಗಳು ಮಳೆಯಿಂದ ಕೊಚ್ಚಿ ಹೋಗಿ ಸುಮಾರು 5…

ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ
ಮೈಸೂರು

ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ

September 2, 2018

ಮೈಸೂರು: ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ)ಯಲ್ಲಿ ತರಬೇತಿ ಪಡೆಯುತ್ತಿರುವ 100 ಮಂದಿ ಡಿವೈಎಸ್‍ಪಿ ಮತ್ತು 300 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಕೊಡಗಿನ ಪ್ರಕೃತಿ ವಿಕೋಪಕ್ಕೊಳಗಾಗಿ ರುವ ಪ್ರದೇಶಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ಕಳೆದ ಮೂರು ದಿನಗಳಿಂದ ಮೂರು ತಂಡಗಳಾಗಿ ವಿಂಗಡಿಸಿ ಪ್ರತಿದಿನ 100 ಮಂದಿಯನ್ನು ಕರೆದೊಯ್ದು ಕೊಡಗಿನ ಅತಿವೃಷ್ಟಿಯಿಂದ ಉಂಟಾದ ಭೂ ಕುಸಿತ, ಜಲಾವೃತ ಪ್ರದೇಶ ಗಳು, ರಕ್ಷಣಾ ಕಾರ್ಯ ಪುನರ್ವಸತಿ ಪ್ರಕ್ರಿಯೆ ಹಾಗೂ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವವರ ಮೃತದೇಹಗಳನ್ನು ಹೊರತೆಗೆದ ಬಗ್ಗೆ ನೂತನ ಪೊಲೀಸ್…

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ
ಕೊಡಗು

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಗಿಗೆ 25 ಲಕ್ಷ ಎಲ್ಲಾ ಶಾಸಕರಿಗೂ ಸ್ಪೀಕರ್ ಪತ್ರ

September 1, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಉಂಟಾದ ಅತಿವೃಷ್ಟಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮನೆ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವುದಲ್ಲದೆ ಸಾರ್ವಜನಿಕ ರಸ್ತೆ, ಸೇತುವೆಯ ಸಂಪರ್ಕ ವನ್ನು ಕಳೆದುಕೊಂಡಿದ್ದು, ಈ ಬಗ್ಗೆ ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 25 ಲಕ್ಷವನ್ನು ನೀಡುವಂತೆ, ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡ ಹಿನ್ನೆಲೆ ರಮೇಶ್ ಕುಮಾರ್ ಅವರು ಎಲ್ಲಾ ಶಾಸಕರುಗಳಿಗೆ ಪತ್ರ ಬರೆದು ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ….

ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ
ಕೊಡಗು

ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ

August 31, 2018

ಮಡಿಕೇರಿ: ಕೊಡಗಿನಲ್ಲಿ ಆರ್ಭಟವನ್ನೇ ಸೃಷ್ಟಿಸಿದ ಮಹಾಮಳೆಯ ರೌದ್ರ ನರ್ತನ ತಗ್ಗಿದೆ. ಕುಗ್ಗಿದ ಮನಸ್ಸುಗಳು ಹಿಗ್ಗುವ ಬದಲು ಮುಂದೇನು ಎನ್ನುವ ಚಿಂತೆಯಲ್ಲಿ ಮುಳುಗಿವೆ. ಕಣ್ಮರೆಯಾದ ಊರು ಹೇಗಿರಬಹುದು? ನಾವು ಸಾಕಿದ ಪ್ರಾಣಿಗಳು ಏನಾದವು? ಬದುಕು ಕಟ್ಟಿಕೊಟ್ಟ ಮನೆ ಉಳಿದಿದೆಯೇ? ಎನ್ನುವ ಕುತೂಹಲದ ನೋವು ನಿರಾಶ್ರಿತರನ್ನು ಕಾಡಲು ಆರಂಭಿಸಿದೆ. ಪರಿಹಾರ ಕೇಂದ್ರಗಳಲ್ಲಿ ಊಟ, ಬಟ್ಟೆ, ಹೊದಿಕೆ ಮತ್ತಿತರ ವಸ್ತುಗಳೇನೋ ಸಿಗುತ್ತಿವೆ. ಆದರೆ ಇದು ಎಷ್ಟು ದಿನ ಎಂಬ ಚಿಂತೆ ಎಲ್ಲರನ್ನೂ ಚುಚ್ಚುತ್ತಿದೆ. ಬಹುತೇಕ ಕಾಫಿ ತೋಟಗಳು ಮಣ್ಣಿನಡಿ ಸಿಲುಕಿ ಸರ್ವನಾಶವಾಗಿವೆ….

ಕೊಡಗಲ್ಲಿ 2 ಬಾರಿ ಲಘು ಭೂಕಂಪ: ಭೂಕಂಪನ ಮಾಪನದಲ್ಲಿ ದಾಖಲು
ಮೈಸೂರು

ಕೊಡಗಲ್ಲಿ 2 ಬಾರಿ ಲಘು ಭೂಕಂಪ: ಭೂಕಂಪನ ಮಾಪನದಲ್ಲಿ ದಾಖಲು

August 30, 2018

ಮಡಿಕೇರಿ: ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಅಳವಡಿಸಿರುವ ‘ಸಿಸ್ಮೋಮೀಟರ್’ ಮಾಪಕ 2 ಬಾರಿ ಭೂಮಿ ಕಂಪಿಸಿರುವ ದತ್ತಾಂಶವನ್ನು ದಾಖಲಿಸಿದೆ. ಆ.27 ಮತ್ತು 28ರಂದು ಗಾಳಿಬೀಡು, ಕಾಲೂರು, ಸಂಪಾಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಅತೀ ಕಡಿಮೆ ತೀವ್ರತೆಯ ಕಂಪನವಾಗಿ ರುವ ಕುರಿತು ಹೈದರಾಬಾದ್‍ನಲ್ಲಿರುವ ನ್ಯಾಷನಲ್ ಜಿಯೋಲಾಜಿಕಲ್ ಫಿಸಿಕ್ಸ್ ರಿಸರ್ಚ್ ಸಂಸ್ಥೆ ದೃಢಪಡಿಸಿದೆ. ಈ ಕುರಿತು ಎನ್‍ಜಿ ಆರ್‍ಐ ಸಂಸ್ಥೆಯ ಹಿರಿಯ ಡಾ.ರಾಘವನ್ ನವೋದಯ ಶಾಲೆಯ ಪ್ರಾಂಶುಪಾಲರಿಗೂ ಮಾಹಿತಿ ನೀಡಿದ್ದಾರೆ. ಭೂಮಿಯ ಆಳದಲ್ಲಿ ಶಿಲಾಪದರ ಪಲ್ಲಟವಾದ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿರುವ ಬಗ್ಗೆ…

ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ: ಕೊಡಗಿಗೆ 2 ಸಾವಿರ ಕೋಟಿ ಬಿಡುಗಡೆಗೆ ಮನವಿ
ಕೊಡಗು

ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ: ಕೊಡಗಿಗೆ 2 ಸಾವಿರ ಕೋಟಿ ಬಿಡುಗಡೆಗೆ ಮನವಿ

August 30, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ನಷ್ಟ ಉಂಟಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ನಿಯೋಗವು ಆಗಸ್ಟ್ 30 ರಂದು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವರು, ಅತಿವೃಷ್ಟಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಜನ, ಜಾನುವಾರು ಹಾನಿ, ತೋಟಗಾರಿಕೆ, ಕಾಫಿ, ಕರಿಮೆಣಸು ಸೇರಿ ದಂತೆ ಹಲವು ಕೃಷಿ ಹಾಗೂ…

ಗ್ರಾಮೀಣ ಭಾಗದ ಜನರ ಬದುಕು ಅತಂತ್ರ ಒಪ್ಪೊತ್ತಿನ ಊಟಕ್ಕೂ ಕೈಚಾಚುವ ದುರ್ಗತಿ
ಕೊಡಗು

ಗ್ರಾಮೀಣ ಭಾಗದ ಜನರ ಬದುಕು ಅತಂತ್ರ ಒಪ್ಪೊತ್ತಿನ ಊಟಕ್ಕೂ ಕೈಚಾಚುವ ದುರ್ಗತಿ

August 30, 2018

ಮಡಿಕೇರಿ:  ಕೊಡಗು ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಕೈ ಚಾಚುವ ದುರ್ಗತಿ ಬಂದೊದಗಿದೆ. ಜಿಲ್ಲೆಯ ಸುಮಾರು 32 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಸ್ಥರ ಬದುಕು ಕುರುಡಾಗಿದೆ. ಮಹಾಮಳೆಯ ದಾಳಿಗೆ ಸಿಲುಕಿದ ಗ್ರಾಮಗಳಲ್ಲಿ ಮಡಿಕೇರಿ ನಗರದ ಸಮೀಪದಲ್ಲಿರುವ ಉಡೋತ್‍ಮೊಟ್ಟೆ ಗ್ರಾಮ ಕೂಡ ಒಂದು. ಇಲ್ಲಿ ಹೆಚ್ಚಿನ ಸಂಖ್ಯೆಯ ಲ್ಲಿರುವ ಕಾರ್ಮಿಕ ವರ್ಗ ತಮ್ಮ ಬದುಕಿ ಗಾಗಿ ತೋಟದ ಕೆಲಸವನ್ನೇ ಅವಲಂಭಿಸಿದ್ದರು. ಆದರೆ, ಮಹಾಮಳೆ ತಂದೊಡ್ಡಿರುವ ದುರಂತ ಅಧ್ಯಾಯದಿಂದ…

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ
ಹಾಸನ

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ

August 29, 2018

ಹಾಸನ: ಬೆಳೆಗಳ ನಾಶದಿಂದ ಮಲೆನಾಡು ಜನರು ಸಂಕಷ್ಟದಲ್ಲಿ ಇದ್ದು, ಕೂಡಲೇ ಸರ್ಕಾರ ಧಾವಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕಾಫಿ ಮತ್ತು ಮೆಣಸು ಬೆಳೆ ಹಂತ-ಹಂತವಾಗಿ ನಾಶವಾಗಿತ್ತು. ಈ ವರ್ಷ ಶತಮಾನದ ಅತ್ಯಂತ ಹೆಚ್ಚಿನ ಮಳೆಯಿಂದಾಗಿ ಎರಡೂ ಬೆಳೆಗಳು ಸಂಪೂರ್ಣ ನಾಶದತ್ತ ಸಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಫಿ ಬೆಲೆ…

1 66 67 68 69 70 84
Translate »