ಪ್ರಯಾಗ್ರಾಜ್: ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಭಾನುವಾರ ಪವಿತ್ರ ಸ್ನಾನ ಮಾಡಿದರು. ಗೋರಖ್ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಪ್ರಯಾಗ್ ರಾಜ್ಗೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗಂಗಾ, ಯಮುನಾ ಹಾಗೂ ಸರಸ್ವತಿ ಸಂಗಮವಾಗುವ ಸ್ಥಳದಲ್ಲಿ ಪ್ರಧಾನಿ ಮೋದಿ ಮಿಂದೆದ್ದರು. ತ್ರಿವೇಣಿ ಘಾಟ್ನಲ್ಲಿ ಗಂಗಾ ಆರತಿಯನ್ನೂ ನೆರವೇರಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹಾಜರಿದ್ದರು. ನಂತರ ಪ್ರಧಾನಿ ಮೋದಿ ಸ್ವಚ್ಛ…
ಕುಂಭಮೇಳಕ್ಕೆ ತೆರೆ
February 20, 2019ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರವನ್ನು ಸಮ್ಮಿಳಿತಗೊಳಿಸಿದ 11ನೇ ಮಹಾ ಕುಂಭಮೇಳಕ್ಕೆ ಹುಣ್ಣಿಮೆ ದಿನವಾದ ಮಂಗಳ ವಾರ ಸಂಭ್ರಮದ ತೆರೆ ಬಿದ್ದಿತು. ಮಹಾಕುಂಭಮೇಳದ ಅಂತಿಮ ದಿನವಾದ ಇಂದು ಲಕ್ಷಾಂತರ ಭಕ್ತರು, ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮಿ ಸುವ ಸ್ಥಳದಲ್ಲಿ ಪವಿತ್ರ ಪುಣ್ಯ ಸ್ನಾನ ಮಾಡಿ, ಪುನೀತರಾದರು. ಮಾಘ ಮಾಸದ ಹುಣ್ಣಿಮೆ ದಿನ ದಲ್ಲಿ ಪುಣ್ಯ ಸ್ನಾನ ಮಾಡಿದರೆ, ಪಾಪಕರ್ಮಗಳೆಲ್ಲಾ ಕಳೆದು, ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಯುಳ್ಳ ಭಕ್ತರು ಮುಂಜಾನೆಯಿಂದಲೇ ಭಕ್ತಾದಿ ಗಳು…
ಇದೇ ಮೊದಲ ಬಾರಿ ವಾರಣಾಸಿ ಮಾದರಿ ಗಂಗಾರತಿ
February 19, 2019ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 11ನೇ ಕುಂಭಮೇಳದ ಅಂಗವಾಗಿ ಸೋಮವಾರ ಸಂಜೆ ಇದೇ ಮೊದಲ ಬಾರಿ ಗಂಗಾರತಿ ಧಾರ್ಮಿಕ ಕೈಂಕರ್ಯ ಭಕ್ತಿಭಾವದಿಂದ ನೆರವೇರಿತು. ಉತ್ತರದ ವಾರಣಾಸಿ ಮಾದರಿಯಲ್ಲಿ ದಕ್ಷಿಣದ ತಿರುಮಕೂಡಲು ಕುಂಭಮೇಳದಲ್ಲಿ ನಡೆದ ಗಂಗಾಪೂಜೆ ಹಾಗೂ ದೀಪಾರತಿ ವಿಶಿಷ್ಟ ಕೈಂಕರ್ಯಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ನಾಡಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್,…
ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನರಿಂದ ಪುಣ್ಯಸ್ನಾನ
February 19, 2019ತಿ.ನರಸೀಪುರ: ದಕ್ಷಿಣಕಾಶಿ ತಿ.ನರಸೀಪುರದಲ್ಲಿ ನಡೆಯು ತ್ತಿರುವ 11ನೇ ಕುಂಭ ಮೇಳದ 2ನೆ ದಿನ ವಾದ ಸೋಮವಾರ ಲಕ್ಷಾಂತರ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಪುನೀತ ಭಾವದಲ್ಲಿ ಮಿಂದೆದ್ದರು. ಉತ್ತರ ಭಾರತದ ಮಾದರಿಯಲ್ಲಿ 3 ವರ್ಷಕ್ಕೊಮ್ಮೆ ತಿ.ನರಸೀಪುರದಲ್ಲಿ ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋ ವರ ಕೂಡುವ ತ್ರಿವೇಣಿ ಸಂಗಮದಲ್ಲಿ ವೈಭವಯುತ ಕುಂಭಮೇಳ ಆಚರಿಸ ಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ತೆಲಂಗಾಣ, ಕೇರಳ ಸೇರಿ ದಂತೆ ವಿವಿಧ ರಾಜ್ಯಗಳಿಂದಲೂ ಸಹಸ್ರ ಸಂಖ್ಯೆಯ…
ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಕಾವೇರಿ ಸ್ನಾನ ಪುಣ್ಯದಾಯಕ
February 19, 2019ಮೈಸೂರು: ಉತ್ತರ ಭಾರತದಲ್ಲಿ ಗಂಗಾ ನದಿಯಂತೆ ದಕ್ಷಿಣ ಭಾರತದಲ್ಲಿ ಕಾವೇರಿ ನದಿ ಪುಣ್ಯ ಸ್ನಾನ ಮಾಡಲು ಅರ್ಹ ಎಂದು ಶ್ರೀ ಲಗಧ ಮಹರ್ಷಿ ಜ್ಯೌತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಬಿ. ಅಮ ರೇಶ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ತಿ.ನರಸೀಪುರದ ಶ್ರೀ ಕ್ಷೇತ್ರ ತಿರುಮ ಕೂಡಲುವಿನಲ್ಲಿ ನಡೆಯುತ್ತಿರುವ 11ನೇ ಕುಂಭ ಮೇಳದ ಧಾರ್ಮಿಕ ಸಭೆಯಲ್ಲಿ ಸೋಮವಾರ ಬೆಳಿಗ್ಗೆ ಮಾಘ ಸ್ನಾನದ ಮಹತ್ವ ಕುರಿತು ಮಾತನಾಡಿದರು. ಎಲ್ಲರೂ ಮಹಾತ್ಮರಲ್ಲ, ಹಾಗೇ ಎಲ್ಲಾ ನದಿಗಳು ಸಹ ತೀರ್ಥ ಕ್ಷೇತ್ರಗಳಲ್ಲ. ಪ್ರತಿ ಯೊಂದು ಮಾಸಕ್ಕೂ…
ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಚಾಲನೆ
February 18, 2019ತಿ.ನರಸೀಪುರ: ತಿರುಮ ಕೂಡಲು ತ್ರಿವೇಣಿ ಸಂಗಮ ಶ್ರೀಕ್ಷೇತ್ರದಲ್ಲಿ ಜರುಗುತ್ತಿರುವ 11ನೇ ಮಹಾ ಕುಂಭ ಮೇಳಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು. ನದಿ ಮಧ್ಯದ ನಡುಗಡ್ಡೆಯಲ್ಲಿ ನಿರ್ಮಿ ಸಲಾಗಿರುವ `ತ್ರಿವೇಣಿ ಸಂಗಮ ವೇದಿಕೆ’ ಯಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರೊಡಗೂಡಿ ದೀಪ ಬೆಳಗಿಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದ ಅವರು, ಡೋಲು ಭಾರಿಸುವ ಮೂಲಕ ಮೂರು ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ವಿಧ್ಯುಕ್ತ ವಾಗಿ ಉದ್ಘಾಟಿಸಿದರು….
ಟಿ.ನರಸೀಪುರ ತಿರುಮಕೂಡಲು ಕುಂಭಮೇಳಕ್ಕೆ ಇಂದು ಚಾಲನೆ
February 17, 2019ತಿ. ನರಸೀಪುರ: ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಇಂದು 11ನೇ ಕುಂಭಮೇಳಕ್ಕೆ ಚಾಲನೆ ದೊರೆಯಲಿದೆ. ಇಂದಿನಿಂದ (ಫೆ.17) ಮೂರು ದಿನಗಳವರೆಗೆ ಜರುಗುವ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ದಕ್ಷಿಣ ಗಂಗೆ ಎನಿಸಿ ಕೊಂಡಿರುವ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮಗೊಳ್ಳುವ ದಕ್ಷಿಣದ ಪ್ರಯಾಗ ಎಂದೇ ಕರೆಯಲ್ಪಡುವ ತಿರುಮಕೂಡಲು ನರಸೀಪುರದಲ್ಲಿ ಜರುಗುತ್ತಿರುವ ಕುಂಭಮೇಳದಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಮುತುವರ್ಜಿಯಿಂದಾಗಿ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ.17, 18 ಹಾಗೂ 19ರವರೆಗೆ ನಡೆಯುವ ಧಾರ್ಮಿಕ…
ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ
February 16, 2019ಡಿಸಿ, ಸೇನಾ ಮುಖ್ಯಸ್ಥರಿಂದ ಅಂತಿಮ ಸಿದ್ಧತೆ ಪರಿಶೀಲನೆ ತಿ.ನರಸೀಪುರ: ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭ ಗೊಂಡಿದ್ದು, ಅಂತಿಮ ಗಳಿಗೆ ಸಿದ್ಧತೆಗಳು ಮುಕ್ತಾಯ ಹಂತದಲ್ಲಿವೆ. ಈಗಾಗಲೇ ಭಾರತೀಯ ಸೇನಾ ಯೋಧರು ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲಾ ನದಿಗೆ ಅಡ್ಡಲಾಗಿ ಆಕರ್ಷಣೀಯವಾದ ತೇಲುವ ಸೇತುವೆ ನಿರ್ಮಿಸಿದ್ದು, ಸೇನೆ ಮೇಜರ್ ಜನರಲ್ ಕೆ.ಜೆ.ಬಾಬು ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇಂದು ಸೇತುವೆ ಪರಿಶೀಲಿಸಿದರು. ಸದ್ಯ ತ್ರಿವೇಣಿ ಸಂಗಮದ ಮಧ್ಯ ಭಾಗ ದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿ ರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ…
ಕುಂಭಮೇಳಕ್ಕೆ ಸಜ್ಜಾಗುತ್ತಿದೆ ತಿರುಮಕೂಡಲು
February 15, 2019ತಿ.ನರಸೀಪುರ: ದಕ್ಷಿಣದ ಪ್ರಯಾಗ, ಕಾಶಿಯಂತಹ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ತಿರುಮಕೂಡಲು ನರಸೀಪುರದಲ್ಲಿ ಜೀವನದಿ ಕಾವೇರಿ, ಕಪಿಲಾನದಿ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ಈ ಬಾರಿ 11ನೇ ಕುಂಭಮೇಳ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಫೆ.17ರಿಂದ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದಲ್ಲಿ ಸಿದ್ಧತೆ ಕಾರ್ಯಗಳು ಭರ ದಿಂದ ಸಾಗಿವೆ. ಮೂರು ದಿನಗಳ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದ ಮರಳಿನ ರಾಶಿಯ ಮೇಲೆ ಯಾಗ ಮಂಟಪ, ಸಮಾರಂಭದ ವೇದಿಕೆ ನಿರ್ಮಾಣ…
ಕುಂಭಮೇಳ: ಶಾಸಕರ ಜತೆ ಡಿಸಿ ಸಿದ್ಧತೆ ಪರಿಶೀಲನೆ
February 2, 2019ತಿ.ನರಸೀಪುರ:ಕುಂಭಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅಗತ್ಯ ಸೂಚನೆ ನೀಡಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಹೊರಗುತ್ತಿಗೆ ಮೂಲಕ ಪಡೆಯಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ತಿರಮಕೂಡಲಿನ ಆದಿಚುಂಚನಗಿರಿ ಭವನದಲ್ಲಿ ನಡೆದ ಕುಂಭಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಅಗತ್ಯ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ. ಮೂರ್ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಾಮಗಾರಿ ಪ್ರಗತಿಯಲ್ಲಿದೆ….