ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ಯೋರ್ವ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ಈತನನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ. ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದವನಾಗಿದ್ದು, ಕೂಡಿಗೆ ಸೈನಿಕ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಚಿಂಗಪ್ಪ (14) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವಿದ್ಯಾರ್ಥಿ. ಈತ ಇಂದು ಸಂಜೆ ಶಾಲೆಯ ಶೌಚಾಲಯದಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಎನ್ನಲಾಗಿದ್ದು, ಅದನ್ನು ಗಮನಿಸಿದ ಶಾಲೆಯವರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ವಿದ್ಯಾರ್ಥಿ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ವಿದ್ಯಾರ್ಥಿ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆಯೇ ಕುಶಾಲನಗರ…
ವಿದ್ಯುತ್ ತಂತಿ ತುಳಿದು ಎರಡು ಹಸು ಸಾವು
June 16, 2018ಕುಶಾಲನಗರ: ಇಲ್ಲಿನ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂದಾನಿ ಪುರ ಫಾರಂನಲ್ಲಿ ವಿದ್ಯುತ್ ತಂತಿ ತುಳಿದು ಎರಡು ಹಸುಗಳು ಸ್ಥಳದಲ್ಲಿಯೆ ಮೃತಪಟ್ಟಿ ರುವ ಘಟನೆ ಇತ್ತೀಚೆಗೆ ನಡೆದಿದೆ. ಸಮೀಪದ ಆರನೇ ಹೊಸಕೋಟೆ ಗ್ರಾಮದ ನಿವಾಸಿ ರೈತ ರೇವಣ್ಣ ಎಂಬುವ ವರಿಗೆ ಈ ಹಸುಗಳೇ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು, ಈ ಹಸುಗಳ ಸಾವಿ ನಿಂದ ರೂ. 40 ಸಾವಿರಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ. ಅಂದಾನಿಪುರ ಫಾರಂಗೆ ಹಸುಗಳು ಹುಲ್ಲು ಮೇಯಲು ಹೋದ ಸಂದರ್ಭ ಈ ದುರ್ಘಟನೆ ನಡೆದಿದೆ….
ಕಾರು-ಮಿನಿ ಲಾರಿ ಡಿಕ್ಕಿ; ಮಹಿಳೆ ಸಾವು
June 14, 2018ಕುಶಾಲನಗರ: ಸಮೀಪದ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಉಪನ್ಯಾಸಕ ರಾಬಿನ್ ಎಂಬವರು ತಮ್ಮ ತಾಯಿ ಫಿಲೋಮಿನಾ ಮತ್ತು ಸಹೋದರ ಪ್ರದೀಪ್ ಡೇನಿಯಲ್ ಮತ್ತು ಅತ್ತಿಗೆ ಜೊತೆ ಮಡಿಕೇರಿಯಿಂದ ಕೆ.ಆರ್.ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಆನೆಕಾಡು ಬಳಿ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಿನಿ ಲಾರಿ ಕಾರಿಗೆ…
ಬೊಳ್ಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
June 12, 2018ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಎಚ್.ಡಿ.ಕೋಟೆ ನಿವಾಸಿ ಚನ್ನಪ್ಪ ಹತ್ಯೆ ಆಗಿರುವ ವ್ಯಕ್ತಿ. ಚನ್ನಪ್ಪನ ಸ್ನೇಹಿತ ನಾಗರಾಜು ಎಂಬಾತನೆ ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಇದೀಗ ತಲೆಮರೆಸಿ ಕೊಂಡಿದ್ದಾನೆ. ಬೊಳ್ಳೂರಿನ ಪರ್ಪಲ್ ಫಾರ್ಮ್ ರೆಸಾರ್ಟ್ನಲ್ಲಿ ಚನ್ನಪ್ಪ ಹಾಗೂ ನಾಗರಾಜು ಎಂಬವರು ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ವಾಸ್ತವ್ಯಕ್ಕಾಗಿ ರೇಸಾರ್ಟ್ ಮುಂಭಾಗದ ಹಳೇ ಡೈರಿ ಜಾಗದಲ್ಲಿ ರೂಂ ನೀಡಲಾಗಿತ್ತು. ಈ ರೂಂನಲ್ಲಿ ಇಬ್ಬರು ಒಟ್ಟಿಗೆ…
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಪ್ರಾಂಶುಪಾಲ ಸೇರಿ ಇಬ್ಬರ ಬಂಧನ
June 7, 2018ಕುಶಾಲನಗರ: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರ ಮತದಾರ ಶಿಕ್ಷಕರಿಗೆ ಹಣ ಹಂಚುತ್ತಿದ್ದ ಇಬ್ಬರು ಜೆಡಿಎಸ್ ಬೆಂಬಲಿತರನ್ನು ಚುನಾವಣಾ ಧಿಗಳು ಬುಧವಾರ ಬಂಧಿಸಿ ರೂ.40 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ. ಸಮೀಪದ ಹೆಬ್ಬಾಲೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ ಹಾಗೂ ಕೂಡಿಗೆ ಗ್ರಾಪಂ ಸದಸ್ಯ ಟಿ.ಕೆ.ವಿಶ್ವನಾಥ್ ಎಂಬುವವರೇ ಹಣ ಹಂಚುತ್ತಿದ್ದವರಾಗಿದ್ದು, ಇವರಿಬ್ಬರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಮೊಕ ದ್ದಮೆ ದಾಖಲಾಗಿದೆ. ಇವರು ಶಿರಂಗಾಲ ಮತ್ತು ಹೆಬ್ಬಾಲೆ…
ಬ್ರೇಕ್ ವಿಫಲಗೊಂಡು ಅಂಗಡಿಗೆ ನುಗ್ಗಿದ ಬಸ್
June 2, 2018ಕುಶಾಲನಗರ: ಬ್ರೇಕ್ ವಿಫಲ ಗೊಂಡ ಖಾಸಗಿ ಬಸ್ ಅಂಗಡಿಗೆ ನುಗ್ಗಿದ ಪರಿಣಾಮ ಪಾದಚಾರಿ ಮೃತಪಟ್ಟು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ಕುಶಾಲನಗರದ ಬಿಎಂ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಇಲ್ಲಿನ ಪಟ್ಣಣ ಪಂಚಾಯಿತಿ ವ್ಯಾಪ್ತಿಯ ಬೈಚನಹಳ್ಳಿ ಗುಂಡುರಾವ್ ನಗರದ ನಿವಾಸಿ ಗೋಪಾಲ್ ಎಂಬುವರ ಪುತ್ರ ರಾಜೇಶ್ (17) ಅಪಘಾತದಲ್ಲಿ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಬಸ್ ಚಾಲಕ ಮೋಹನ್ ಕುಮಾರ್ ಕುಶಾಲ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿನ ಬೈಪಾಸ್ ಸರ್ಕಲ್ನಿಂದ ಐಬಿ ರಸ್ತೆ ಮಾರ್ಗವಾಗಿ ಕಾರ್ಯಪ್ಪ…
ಬೈಕ್ಗಳ ಮುಖಾಮುಖಿ ಡಿಕ್ಕಿ; ಯುವಕ ಸಾವು
May 31, 2018ಕುಶಾಲನಗರ: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುಮ್ಮನಕೊಲ್ಲಿ ಬಳಿಯ ವೀರಭೂಮಿ ಸರ್ಕಲ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ತೊರೆನೂರು ಗ್ರಾಮದ ಮೀನಾಕ್ಷಿ ಎಂಬುವರ ಪುತ್ರ ರಕ್ಷಿತ್ (23) ಮೃತಪಟ್ಟ ಯುವಕ. ರಕ್ಷಿತ್ ತನ್ನ ಬೈಕ್ನಲ್ಲಿ ಸ್ನೇಹಿತ ಗಿರೀಶ್ ನೊಂದಿಗೆ ಕುಶಾಲನಗರದಿಂದ ತಮ್ಮ ಗ್ರಾಮ ತೊರೆನೂರಿಗೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ವೀರಭೂಮಿ ಸರ್ಕಲ್ ಬಳಿ ಎದುರಿನಿಂದ ಬಂದ ಬೈಕ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ರಸ್ತೆ ಮೇಲೆ ಬಿದ್ದ ರಕ್ಷಿತ್ಗೆ…
ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ
May 29, 2018ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿಯಲ್ಲಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಮುಂಗಟ್ಟುಗಳು ತೆರೆದಿದ್ದವು. ಕೆಎಸ್ಆರ್ಟಿಸಿ ಬಸ್ಗಳು ಸೇರಿದಂತೆ ಆಟೋರೀಕ್ಷಾ ಮತ್ತು ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳ ಸಂಚಾರ ಎಂದಿನಂತೆ ನಡೆಯಿತು. ಆದರೆ ಖಾಸಗಿ ಬಸ್ಗಳ ಸಂಚಾರ ಕ್ಷೀಣ ಸಿತ್ತು. ಚಿತ್ರಮಂದಿರ, ಹೋಟೆಲ್ಗಳು, ಔಷಧಿ ಅಂಗಡಿ, ಹಾಲಿನ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದವು. ಜನಸಂಚಾರ ಕೂಡ ಎಂದಿನಂತೆ ಇತ್ತು. ಶಾಲಾ ಕಾಲೇಜುಗಳ ಆರಂಭದ ಮೊದಲ ದಿನವಾದ ಇಂದು ಎಂದಿನಂತೆ…
10 ಕೋಟಿ ವೆಚ್ಚದಲ್ಲಿ ಹಾರಂಗಿ ದುರಸ್ತಿ ಕಾಮಗಾರಿ
May 29, 2018ಕುಶಾಲನಗರ: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟೆ ಯನ್ನು ರೂ.10 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಕಾವೇರಿ ಕಣ ವೆಯ ಪ್ರಮುಖ ಜಲಾ ಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾ ಶಯಕ್ಕೆ 35 ವರ್ಷಗಳ ಬಳಿಕ ಕಾಯಕಲ್ಪಕ್ಕೆ ಮುಂದಾಗಿರುವ ನೀರಾವರಿ ಇಲಾಖೆ ಸಂಪೂರ್ಣ ದುರಸ್ತಿ ಪಡಿಸುತ್ತಿದೆ. ಜಲಾಶಯದಲ್ಲಿ ಪ್ರತಿ ವರ್ಷ ಮಳೆ ಗಾಲದಲ್ಲಿ ಜಲಾಶಯ ಭರ್ತಿಯಾದ ನಂತರ ಅಣೆಕಟ್ಟೆಯಲ್ಲಿ ನೀರು ಸೋರಿಕೆ ಯಾಗುತ್ತಿತ್ತು. ಈ ಬಗ್ಗೆ ನೀರಾವರಿ ಅಧಿ ಕಾರಿಗಳು…
ಕುಶಾಲನಗರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
May 29, 2018ಕುಶಾಲನಗರ: ಇಲ್ಲಿನ ಬಿಎಂ ರಸ್ತೆಯ ಮನೆ ಯೊಂದರ ಶೌಚಗೃಹದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತನನ್ನು ವಾಲ್ನೂರು ತ್ಯಾಗತ್ತೂರು ನಿವಾಸಿ ಸೈದಲವಿ ಎಂಬುವವರ ಮಗ ಸಮದ್(36) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ. ಟಿಂಬರ್ ವ್ಯಾಪಾರಿಯಾಗಿದ್ದ ಸಮದ್ ತನ್ನ ವ್ಯಾಪಾರಕ್ಕೋಸ್ಕರ ಕುಶಾಲ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮೇ 22ಕ್ಕೆ ಈತನ ಮೊಬೈಲ್ನಲ್ಲಿ ಕೊನೆಯ ಕರೆ ದಾಖಲಾಗಿರುವುದು ಕಂದುಬಂದಿದ್ದು, ಅಂದೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈತನಿದ್ದ ಮನೆಯ ಬಳಿಯಲ್ಲಿ ಭಾನುವಾರ…