Tag: Madikeri

ಟೆಂಪೋ ಚಾಲಕ ಆತ್ಮಹತ್ಯೆ
ಕೊಡಗು

ಟೆಂಪೋ ಚಾಲಕ ಆತ್ಮಹತ್ಯೆ

October 27, 2018

ಮಡಿಕೇರಿ: ವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡ ಘಟನೆ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ನಗರದಲ್ಲಿ ಟೆಂಪೋ ಚಾಲಕನ ವೃತ್ತಿಯಲ್ಲಿದ್ದ ಮಹೇಶ(25) ಆತ್ಮಹತೈಗೆ ಶರಣಾದ ವ್ಯಕ್ತಿ. ಚಾಮುಂಡೇಶ್ವರಿನಗರದ ತನ್ನ ಮನೆಯಲ್ಲೇ ಶುಕ್ರವಾರ ಬೆಳಗ್ಗೆ 5 ಗಂಟೆ ಸಮಯದಲ್ಲಿ ಮಹೇಶ ಇಹಲೋಕ ತ್ಯಜಿಸಿದ್ದು, ಘಟನೆ ಕುರಿತು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹೇಶ ತಾಯಿ, ಪತ್ನಿ ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾನೆ. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆÉಸಿ, ಬಳಿಕ ಮೃತದೇಹವನ್ನು…

ನಾಳೆ ಜಿಲ್ಲಾಮಟ್ಟದ ಕ್ರೀಡಾಕೂಟ
ಕೊಡಗು

ನಾಳೆ ಜಿಲ್ಲಾಮಟ್ಟದ ಕ್ರೀಡಾಕೂಟ

October 27, 2018

ಮಡಿಕೇರಿ:  ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವು ಅಕ್ಟೋಬರ್ 28 ರಂದು ಬೆಳಗ್ಗೆ 9.30ಕ್ಕೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂ ಗಣದಲ್ಲಿ ನಡೆಯಲಿದೆ. 16 ವರ್ಷ ವಯಸ್ಸಿನ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ 100 ಮೀ. ಓಟ, 14 ವರ್ಷ ವಯಸ್ಸಿನ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ 400 ಮೀ. ಓಟ, 16 ವರ್ಷಕ್ಕಿಂತ…

ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ

October 26, 2018

ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಮೈಸೂರಿನ ನಟನ ಸಂಸ್ಥೆ ಯಿಂದ ನಗರದಲ್ಲಿ ಆಯೋಜಿಸಲ್ಪಟ್ಟ ಹೆಸರಾಂತ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಕಲಾಪ್ರೇಮಿಗಳ ಮನತಟ್ಟು ವಲ್ಲಿ ಸಫಲವಾಯಿತು. ಚೋರಚರಣದಾಸ ನಾಟಕಕ್ಕೆ ಭಾರತೀಯ ವಿದ್ಯಾಭವನದ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು ಕಲಾಪ್ರೇಮಿಗಳ ಸ್ಪಂದನೆಗೆ ಸಾಕ್ಷಿಯಾಗಿತ್ತು. ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ರಂಗನಿರ್ದೇಶಕ ಮಂಡ್ಯ ರಮೇಶ್, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಃಸ್ಥಿತಿ ಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟು ನಟನ ಎಂಬ…

ಸಮಾನ ವೇತನ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ
ಕೊಡಗು

ಸಮಾನ ವೇತನ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

October 26, 2018

ಮಡಿಕೇರಿ: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ನೌಕ ರರಿಗೆ ಸಮಾನ ವೇತನ ಮತ್ತು ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಮೂರು ತಾಲೂಕು ಗಳ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಛೇರಿ ಯಿಂದ ಮೆರವಣಿಗೆ ಮೂಲಕ ಸಾಗಿದ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸಂಘದ ಅಧ್ಯಕ್ಷ ಎಂ.ಮಹದೇವಪ್ಪ ಮಾತ ನಾಡಿ, ಜೀತ ವ್ಯವಸ್ಥೆಯ ಮತ್ತೊಂದು ರೂಪ…

ರೈಲು ಇಲ್ಲದ ಜಿಲ್ಲೆಯಲ್ಲೊಂದು ರೈಲ್ವೆ ಸ್ಟೇಷನ್:  ಪ್ರಕೃತಿ ಮುನಿಸಿಗೆ ಹಳಿ ಇಳಿದು ಯಾರ್ಡ್ ಸೇರಿದ ಟೂರಿಸ್ಟ್ ಎಕ್ಸ್‍ಪ್ರೆಸ್
ಕೊಡಗು

ರೈಲು ಇಲ್ಲದ ಜಿಲ್ಲೆಯಲ್ಲೊಂದು ರೈಲ್ವೆ ಸ್ಟೇಷನ್: ಪ್ರಕೃತಿ ಮುನಿಸಿಗೆ ಹಳಿ ಇಳಿದು ಯಾರ್ಡ್ ಸೇರಿದ ಟೂರಿಸ್ಟ್ ಎಕ್ಸ್‍ಪ್ರೆಸ್

October 24, 2018

ಮಡಿಕೇರಿ: ಈ ರೈಲ್ವೇ ಸ್ಟೇಷ ನ್‍ನಲ್ಲಿರೋದು ಕೇವಲ ಒಬ್ಬ ಟಿಕೇಟ್ ಕಲೆಕ್ಟರ್.. ಸ್ಷೇಷನ್‍ನಲ್ಲಿ ರೈಲಿಗಾಗಿ ಕಾದು ಕುಳಿತಿರೋ ಬೆರಳೆಣಿಕೆಯ ಜನ.. ರೈಲಿನ ವೇಳಾಪಟ್ಟಿ ತಿಳಿದು ಹತಾಶೆಯಿಂದ ನಿರ್ಗಮಿಸುತ್ತಿರುವ ಹೊರ ಊರ ಅತಿ ಥಿಗಳು.. ಪ್ರಕೃತಿ ವಿಕೋಪದ ಬಳಿಕ ಹಳಿಯಿಂದ ಇಳಿದು ‘ಯಾರ್ಡ್’ ಸೇರಿದ ‘ಟೂರಿಸ್ಟ್ ಎಕ್ಸ್‍ಪ್ರೆಸ್’.. ಇದು ಮಡಿಕೇರಿಯಲ್ಲಿ ಕಂಡು ಬರುವ ದೃಶ್ಯ. ರೈಲ್ವೇ ಹಳಿ ಇಲ್ಲದ ದೇಶದ ಏಕೈಕ ಜಿಲ್ಲೆ ಎಂಬ ಹೆಸರು ಪಡೆದಿರುವ ಕೊಡಗು, ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಗೆ ರೈಲು ಬಂದದ್ದಾದರೂ ಯಾವಾಗ…

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ
ಮೈಸೂರು

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡಿಗೆ ಬಲಿ

October 23, 2018

ಮಡಿಕೇರಿ:  ಬೇಟೆಗಾಗಿ ತೆರಳಿದ್ದ ಇಬ್ಬರಲ್ಲಿ ಗುಂಡೇಟು ಬಿದ್ದು ಓರ್ವ ಸಾವಿಗೀಡಾಗಿದ್ದು, ಮತ್ತೊಬ್ಬ ಪರಾರಿಯಾಗಿರುವ ಬಗ್ಗೆ ಮಡಿಕೇರಿ ಬಳಿಯ ಮಕ್ಕಂದೂರು ಸಮೀಪದ ಎಮ್ಮತ್ತಾಳು ಗ್ರಾಮದಿಂದ ವರದಿಯಾಗಿದೆ. ಎಮ್ಮತ್ತಾಳು ಗ್ರಾಮದ ಅಯ್ಯಕುಟ್ಟೀರ ದೇವಯ್ಯ ಎಂಬುವರ ಪುತ್ರ ರಂಜಿತ್(32) ಗುಂಡೇಟಿಗೆ ಬಲಿಯಾದವರಾಗಿದ್ದು, ಸಹ ಬೇಟೆಗಾರ ದಕ್ಷಿಣ ಕೊಡಗಿನ ಶ್ರೀಮಂಗಲ ವೆಸ್ಟ್ ನೆಮ್ಮಾಲೆ ನಿವಾಸಿ ಕಾಳಮಾಡ ದಿನೇಶ್ ತಲೆಮರೆಸಿಕೊಂಡಿದ್ದಾರೆ. ವಿವರ: ರಂಜಿತ್ ಮತ್ತು ದಿನೇಶ್ ಸಂಬಂಧಿಕರಾಗಿದ್ದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ವೆಸ್ಟ್ ನೆಮ್ಮಾಲೆಯ ದಿನೇಶ್, ಎಮ್ಮತ್ತಾಳು ವಿನ ರಂಜಿತ್ ಮನೆಗೆ ಬಂದಿದ್ದರು ಎನ್ನಲಾಗಿದೆ….

ಬಾರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಬಾರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

October 23, 2018

ಮಡಿಕೇರಿ: ಇಬ್ಬರು ಕ್ಯಾಂಟೀನ್ ನೌಕರರ ಮೇಲೆ 2 ದಿನಗಳ ಹಿಂದೆ ನಡೆದ ಗುಂಡಿನ ದಾಳಿ ಪ್ರಕರಣ ದಿಂದ ಅಸಮಾಧಾನಗೊಂಡಿರುವ ನಗರದ ಹಿಲ್‍ರಸ್ತೆ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸ್ಥಳೀಯ ಕಾವೇರಿ ಬಾರ್ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪಿಎಫ್‍ಐ ಸಂಘಟನೆ ಮತ್ತು ಸಲಫಿ ಮಸೀದಿಯ ಆಡಳಿತ ಮಂಡಳಿಯ ಪ್ರಮುಖರು ಬಾರ್ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಬಾರ್ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಗುಂಡು ಹಾರಿಸಿದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು….

ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕೊಡಗು

ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

October 22, 2018

ಮಡಿಕೇರಿ:  ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ನಿವೃತ್ತ ಪೊಲೀಸ್ ಅಧೀಕ್ಷ ಕರ ಪರವಾಗಿ ಅಪ್ಪಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಸುಂದರ ರಾಜ್, ಉಪ ವಿಭಾಗಾಧಿಕಾರಿ ಟಿ.ಜವರೇ ಗೌಡ, ಪೊಲೀಸ್ ನಿರೀಕ್ಷಕ ಮೇದಪ್ಪ, ಜಿಲ್ಲಾಸಶಸ್ತ್ರ…

ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ಕೌಶಲ ತರಬೇತಿಗೆ ಚಾಲನೆ
ಕೊಡಗು

ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ಕೌಶಲ ತರಬೇತಿಗೆ ಚಾಲನೆ

October 22, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಕೊಡಗು ಘಟಕ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ‘ಯಶಸ್ವಿ’ ಹೆಸರಿನಲ್ಲಿ ಹಮ್ಮಿಕೊಂಡಿರುವ ಟೈಲರಿಂಗ್ ಮತ್ತು ಆಹಾರೋತ್ಪನ್ನಗಳ ತಯಾರಿಕೆಯ ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ. ಕಾಲೂರು ಸರ್ಕಾರಿ ಶಾಲೆಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟಿಸಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂತ್ರಸ್ಥ ಗ್ರಾಮಸ್ಥರ ಭವಿಷ್ಯದ ಜೀವನಕ್ಕೆ ನೆರವಾಗಬಲ್ಲ ನಿಟ್ಟಿನಲ್ಲಿ ಇಂಥ ಯೋಜನೆಗಳು ಶ್ಲಾಘನೀಯ. ಕಾಲೂರು ಗ್ರಾಮದ ಮಹಿಳೆಯರು ಮುಂದಿನ ದಿನಗಳಲ್ಲಿ ಉತ್ಪಾದಿಸುವನ ಆಹಾರೋತ್ಪನ್ನಗಳನ್ನು ಜಿಲ್ಲಾಮಟ್ಟದಲ್ಲಿ ಪ್ರವಾಸಿಗರೂ ಸೇರಿದಂತೆ…

ವಿರಾಜಪೇಟೆ ಠಾಣೆಯಲ್ಲಿ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿ
ಕೊಡಗು

ವಿರಾಜಪೇಟೆ ಠಾಣೆಯಲ್ಲಿ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿ

October 22, 2018

ಮಡಿಕೇರಿ: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಶಂಕಿತ ಆರೋಪಿಯನ್ನು ಅ.20 ರಾತ್ರಿ ವಿರಾಜಪೇಟೆಯ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಕೇರಳ ಕಣ್ಣನೂರು ತಾಲೂಕಿನ ಪಿಣರಾಯಿ ಗ್ರಾಮದ ನಿವಾಸಿ ಸಲೀಂ(41) ಎಂಬಾತನನ್ನು ಕಳೆದ 15 ದಿನಗಳ ಹಿಂದೆ ಬೆಂಗಳೂರು ಸಿ.ಸಿ.ಬಿ. ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಸಲೀಂ ಮೇಲಿದ್ದು, ಸಿ.ಸಿ.ಬಿ. ಪೊಲೀಸರು ಈತನನ್ನು ಮಡಿವಾಳ ಪೊಲೀಸರ ವಶಕ್ಕೆ ನೀಡಿ, ಬಳಿಕ ನ್ಯಾಯಾಧೀಶರು ಬಂಧನಕ್ಕೆ ಒಪ್ಪಿಸಿದ್ದರು. ತದನಂತರ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ…

1 7 8 9 10 11 32
Translate »