ಚಿನಕುರಳಿ: ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಸಿ.ಅಶೋಕ್ ಭಾನುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಓದು ಬರಹ ಗೊತ್ತಿಲ್ಲದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮಹಿಳೆಯರು ಅಕ್ಷರಸ್ಥರಾಗಬೇಕು ಎಂದು ತಿಳಿಸಿದರು. ಸಾಕ್ಷರ ಭಾರತ್ ಕಾರ್ಯಕ್ರಮವನ್ನು ಕಳೆದ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಸಮ್ಮಿಶ್ರ ಆರಂಭಿಸಿದೆ. ಇದರಿಂದ ಸಾಕಷ್ಟು ಅನಕ್ಷರಸ್ಥ ಮಹಿಳೆಯರಿಗೆ ಅನುಕೂಲ ವಾಗಲಿದೆ ಎಂದರು. ಈ ವೇಳೆ ತಾಪಂ ಸದಸ್ಯರಾದ ಸಿ.ಎಸ್.ಗೋಪಾಲೇಗೌಡ,…
ಕಾನೂನಿನಡಿ ಶ್ರೀರಾಮ ಮಂದಿರ ನಿರ್ಮಿಸಲಿ
February 11, 2019ಶ್ರೀರಂಗಪಟ್ಟಣ: ಕಾನೂನಿನಲ್ಲಿ ರುವ ಅವಕಾಶವನ್ನು ಬಳಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣ ಮಾಡ ಬೇಕು ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಶ್ಯಾಮ್ಭಟ್ ತಿಳಿಸಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರಾಜ್ಯ ದಿಕ್ಸೂಚಿ ಮತ್ತು ಸುಧಾ ರಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅವರ ರಾಮಮಂದಿರ ಮತ್ತು ಸುಗ್ರಿವಾಜ್ಞೆ ಸಾಧ್ಯತೆ ಒಂದು ಅವಲೋಕನ ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಜವಹರಲಾಲ್ ನೆಹರು ವಿಶ್ವವಿದ್ಯಾ ನಿಲಯದಲ್ಲಿ ಅಧ್ಯಯನ ಮಾಡಿದ ಹೆಚ್ಚು ಮಂದಿ ನ್ಯಾಯಾಧೀಶರು ಈಗ ಸುಪ್ರೀಂ…
ರಥಸಪ್ತಮಿ, ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಮೇಲುಕೋಟೆ ಸಜ್ಜು
February 11, 2019ಮೇಲುಕೋಟೆ: ಇಲ್ಲಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಾ ಲಯ ಫೆ.12 ರಂದು ನಡೆಯುವ ರಥಸಪ್ತಮಿ ಮಹೋ ತ್ಸವ ಮತ್ತು 20ನೇ ವರ್ಷದ ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಸಜ್ಜುಗೊಂಡಿದೆ. ಅಂದು ಮುಂಜಾನೆ 6ರಿಂದ 9.30 ರವರೆಗೆ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳ ದಲ್ಲಿ ಕರ್ನಾಟಕದ ಎಲ್ಲಾ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಭಾರತ ಸರ್ಕಾರದ ತಂಜಾವೂರಿನ ಸೌತ್ ಜೋನ್ ಕಲ್ಚರಲ್ ಸೆಂಟರ್ ಪ್ರಾಯೋ…
ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ
February 5, 2019ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದನ್ನು ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ. ಸಂಪಾದಕರೊಟ್ಟಿಗೆ ಅನೌಪಚಾರಿಕ ವಾಗಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಕೇಳಿ ಬಂದ ಪ್ರಶ್ನೆಗೆ ತಮ್ಮ ಪುತ್ರನ ಬಗ್ಗೆ ವ್ಯಾಖ್ಯಾನ ಮಾಡುವ ಮೂಲಕ ಆತನೇ ಅಭ್ಯರ್ಥಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಡಾಕ್ಟರ್…
ಕೆಆರ್ಎಸ್ ಸುತ್ತಮುತ್ತ ಇಂದು ಟ್ರಯಲ್ ಬ್ಲಾಸ್ಟ್
January 28, 2019ಮಂಡ್ಯ: ವಿಶ್ವ ವಿಖ್ಯಾತ ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ಯಿಂದ ಅಣೆಕಟ್ಟೆಗೆ ಧಕ್ಕೆಯಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸಿ ದರೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ತಾಂತ್ರಿಕ ವರದಿ ನೀಡುವ ಸಲುವಾಗಿ ಪುಣೆಯ ಸಿಡಬ್ಲ್ಯೂಪಿಆರ್ಎಸ್ ವಿಜ್ಞಾನಿಗಳ ತಂಡ ನಾಳೆ (ಜ.28) ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ (ಪರೀಕ್ಷಾರ್ಥ ಸ್ಫೋಟ) ನಡೆಸಲಿದೆ. ಆದರೆ ಈ ಟ್ರಯಲ್ ಬ್ಲಾಸ್ಟ್ಗೆ ರೈತರು ಮತ್ತು ಪ್ರಗತಿಪರರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಘಟನೆಗಳು ನಾಳೆ ‘ಗೋ…
ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
January 24, 2019ಸುರಂಗಕ್ಕೆ ಕುತ್ತು ತಂದಿರುವ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ ಮಿಮ್ಸ್ ವಿರುದ್ಧ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಸಬ್ಬನಕುಪ್ಪೆ ಗ್ರಾಪಂ ವಿರುದ್ಧ ನೌಕರಳ ಧರಣಿ ತಾ.ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ ನೆಲಮಾಕನಹಳ್ಳಿ ಪಡಿತರದಾರರ ಪ್ರತಿಭಟನೆ ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಜಿಲ್ಲಾದ್ಯಂತ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಹೊರಗುತ್ತಿಗೆ ಕಾರ್ಮಿಕರು ಹಾಗೂ ರೈತರು, ಮದ್ದೂರಲ್ಲಿ ರೈತರು, ಬೆಸಗರಹಳ್ಳಿ, ಮಳವಳ್ಳಿಯಲ್ಲಿ ಪಡಿತರದಾರರು, ಸಬ್ಬನಕುಪ್ಪೆ ಗ್ರಾಪಂ ಮುಂದೆ ನೌಕರೆಯೊಬ್ಬರು ಒಳಗೊಂಡಂತೆ ಹಲವೆಡೆ ಪ್ರತಿಭಟನೆ ನಡೆದಿರುವ…
ಹಳ್ಳಕ್ಕೆ ಉರುಳಿದ ಕಾರು: ಅದರಲ್ಲಿದ್ದವರು ಅಪಾಯದಿಂದ ಪಾರು
January 24, 2019ಮಂಡ್ಯ: ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಹುಂಡೈ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಹಳ್ಳಕ್ಕೆ ಬಿದ್ದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ನಡೆದಿದೆ. ಕಾರು ಮಗುಚಿ ಬಿದ್ದಿದ್ದರು ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳ ನೋಂದಣಿ ಹೊಂದಿರುವ ಈ ಹುಂಡೈ ಕಾರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾದ ಕಾರು ಸಿನಿಮೀಯಾ ರೀತಿಯಲ್ಲಿ ಸುಮಾರು ನಾಲ್ಕು ಪಲ್ಟಿ ಆಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ…
ಮಂಡ್ಯ ಜಿಲ್ಲೆಯ ವಿಜ್ಞಾನಿಗೆ ಒಲಿದ ‘ಬಾಲ ಪುರಸ್ಕಾರ’
January 24, 2019ಮಂಡ್ಯ: ರಾಜ್ಯದ ಹೆಮ್ಮೆಯ ಪುತ್ರ, ಮಂಡ್ಯ ಜಿಲ್ಲೆಯ ಯುವ ವಿಜ್ಞಾನಿ ಸಿ.ಎಸ್.ಮೊಹಮ್ಮದ್ ಸುಹೇಲ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಸ್ಥಳೀಯ ಮಟ್ಟದಿಂದ ಸಂಶೋಧನೆಗಳನ್ನು ಆರಂಭಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೊಹಮ್ಮದ್ ಸುಹೇಲ್ಗೆ ಈ ಬಾರಿಯ ನಾವೀನ್ಯದ (ಇನೋವೆಷನ್) ಕ್ಷೇತ್ರದಲ್ಲಿ ಬಾಲ ಪುರಸ್ಕಾರ ಪ್ರಶಸ್ತಿ ಒಲಿದಿದೆ. ನಾವೀನ್ಯತೆ, ವಿದ್ವಾಂಸ, ಕ್ರೀಡಾ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಈ ವರ್ಷ ಒಟ್ಟು 26 ಮಕ್ಕಳಿಗೆ…
ಜಿಲ್ಲಾದ್ಯಂತ `ಶತಮಾನದ ಸಂತ’ನಿಗೆ ಭಾವಪೂರ್ಣ ನಮನ
January 23, 2019ಡಾ.ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ, ಭಾರತರತ್ನ ಪುರಸ್ಕಾರಕ್ಕೆ ಆಗ್ರಹ ಮಂಡ್ಯ: ಜಿಲ್ಲಾದ್ಯಂತ ಮಂಗಳವಾರ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಶಿವೈಕ್ಯ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳಿಗೆ ಭಕ್ತಿ, ಭಾವ ಪೂರ್ಣ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಕೇಂದ್ರ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ನಡೆದಾಡುವ ದೇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಭಾರತೀನಗರದಲ್ಲಿ ಶ್ರೀಗಳ ಗೌರವಾರ್ಥ ವರ್ತಕರಿಂದ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು….
ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ
January 23, 2019ಕೆ.ಆರ್.ಪೇಟೆ: ಪಟ್ಟಣ ಸೇರಿ ದಂತೆ ತಾಲೂಕಿನ ವಿವಿಧೆಡೆ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಶ್ರೀಶಿವಕುಮಾರಶ್ರೀ ಗಳಿಗೆ ಗೌರವ ನಮನ ಸಲ್ಲಿಸಿದವು. ತಾಲೂಕು ವೀರಶೈವ, ಲಿಂಗಾಯಿತ ಮಹಾ ಸಭಾ: ಸಿದ್ಧಗಂಗಾ ಶ್ರೀಮಠದ ಪೀಠಾಧ್ಯಕ್ಷ ಡಾ.ಶಿವಕುಮಾರಶ್ರೀಗಳಿಗೆ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಿವೈಕ್ಯರಾದ ಶ್ರೀಗಳಿಗೆ ಕಂಬನಿ ಮಿಡಿದು ಗೌರವ ಸಲ್ಲ್ಲಿಸಿದರು. ಈ ವೇಳೆ ತಾಲೂಕು ದಲಿತ ಸಂಘ ಟನೆಗಳ…