Tag: Mandya

ತ್ರಿವಿಧ ದಾಸೋಹಿಗೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ
ಮಂಡ್ಯ

ತ್ರಿವಿಧ ದಾಸೋಹಿಗೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

January 23, 2019

ಪಾಂಡವಪುರ: ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶಿವಕುಮಾರಸ್ವಾಮೀಜಿ ಅವರಿಗೆ ತಾಲೂಕಿನ ವಿವಿಧ ಸಂಘಟನೆ ಗಳು ಶ್ರದ್ಧಾಂಜಲಿ ಸಲ್ಲಿಸಿದವು. ಕರ್ನಾಟಕ ರಾಜ್ಯ ರೈತ ಸಂಘ: ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶ್ರೀಶಿವಕುಮಾರಶ್ರೀಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಐದು ದೀಪದ ವೃತ್ತದಲ್ಲಿ ಸಿದ್ಧ ಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ರ್ಪಾಚನೆ ಮಾಡುವ ಮೂಲಕ ರೈತ ಸಂಘದ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ರೈತ…

ಮಹಿಳೆ ಸೇರಿ ಐವರ ಬಂಧನ
ಮಂಡ್ಯ

ಮಹಿಳೆ ಸೇರಿ ಐವರ ಬಂಧನ

January 19, 2019

ಮಂಡ್ಯ: ಮಳವಳ್ಳಿ ಕಿಡ್ನಿ ಮಾರಾಟ ದಂಧೆಗೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿ ಗಳನ್ನು ಬಂಧಿಸುವಲ್ಲಿ ಮಳವಳ್ಳಿ ಪೊಲೀ ಸರು ಯಶಸ್ವಿಯಾಗಿದ್ದಾರೆ. ಮಳವಳ್ಳಿ ಮಾಸ್ತಮ್ಮ ಕೇರಿಯ ತಾರಾ ನಾಗೇಂದ್ರ, ರಾಮನಗರ ಟೌನ್ ಶಾಂತಿ ಲಾಲ್ ಲೇಔಟ್‍ನ ಅಡುಗೆ ಗುತ್ತಿಗೆ ದಾರ ಗೋಪಾಲ್(ಕಿಡ್ನಿ ಗೋಪಾಲ್), ಮಂಡ್ಯ ತಾಲೂಕಿನ ಹೊಳಲು ಗ್ರಾಮದ ವಡೆ, ಸಮೋಸ ವ್ಯಾಪಾರಿ ಜವರಯ್ಯ, ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದ ಹೂವಿನ ವ್ಯಾಪಾರಿ ರಾಜು ಹಾಗೂ ರಾಮನಗರ ಟೌನ್ ವಿಜಯನಗರದ ಗಾರೆ ಕೆಲಸಗಾರ…

ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

January 17, 2019

ಮಂಡ್ಯ: ನಗರ ಸೇರಿದಂತೆ ಜಿಲ್ಲಾದ್ಯಂತ ಮಕರ ಸಂಕ್ರಮಣ ಹಬ್ಬವನ್ನು ಮಂಗಳ ವಾರ ಸಡಗರ- ಸಂಭ್ರಮದಿಂದ ಆಚರಿಸಲಾಯಿತು. ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಸೇರಿದಂತೆ ಹಳ್ಳಿ ಹಳ್ಳಿಗ ಳಲ್ಲೂ ರಾಸುಗಳನ್ನು ಕಿಚ್ಚು ಹಾಯಿಸುವ ಜೊತೆಗೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ಮಹಿಳೆಯರು, ಹೆಣ್ಣು ಮಕ್ಕಳು ನೆರೆಯವರು ಹಾಗೂ ಬಂಧುಗಳಿಗೆ ಎಳ್ಳು-ಬೆಲ್ಲ, ಕಬ್ಬು ಹಂಚಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ದೇವಾಲಯ ಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು….

ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
ಮಂಡ್ಯ

ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

January 17, 2019

ಶ್ರೀರಂಗಪಟ್ಟಣ: ತನ್ನ ಸಹಪಾಠಿಗಳೊಂದಿಗೆ ಈಜಲು ಕಾವೇರಿ ನದಿಗಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ತಾಲೂಕಿನ ಕಾರೇಕುರ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ. ಮೈಸೂರಿನ ರಘುರಾಮ್ ಅವರ ಪುತ್ರ ಹೇಮಂತ್ (21) ಮೃತ ವಿದ್ಯಾರ್ಥಿಯಾಗಿದ್ದು, ಈತನ ಸಹಪಾಠಿ ಗಳಾದ ಕೌಶಿಕ್, ಮನೋಜ್ ಹಾಗೂ ಲೋಕರಂಜನ್ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರು ಮೈಸೂರು ತಾಲೂಕಿನ ಬೆಳವಾಡಿಯ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಮೃತ ಹೇಮಂತ್…

ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ
ಮಂಡ್ಯ

ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ

January 17, 2019

ಮಂಡ್ಯ: ಪ್ರಸಿದ್ಧ ಪ್ರವಾಸಿತಾಣ ಕರೀಘಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ಹತ್ತಾರು ಎಕರೆ ಅರಣ್ಯ ಭೂಮಿ ಮರಗಳ ಸಹಿತ ಬೆಂಕಿಯ ಜ್ವಾಲೆಗೆ ಭಸ್ಮವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಸಮೀಪದ ಕರೀಘಟ್ಟ ದಲ್ಲಿ ಎತ್ತರವಾಗಿ ಹುಲ್ಲು ಬೆಳೆದಿದ್ದು, ಒಣಗಿ ದ್ದವು. ಶ್ರೀನಿವಾಸ ದೇವಾಲಯದ ಮುಂಭಾಗದ ಈ ಬೆಟ್ಟಕ್ಕೆ ಚಿನ್ನನಾಯಕ ನಹಳ್ಳಿ ಭಾಗದಿಂದ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ವಾತಾವರಣದಲ್ಲಿ ಗಾಳಿ ಬೀಸಿದಂತೆಲ್ಲಾ ಬೆಂಕಿಯ ಜ್ವಾಲೆ ಇತರೆಡೆಗೂ ಹಬ್ಬಿ ಬೆಂಕಿಗೆ ಹತ್ತಾರು ಎಕರೆ ಬೆಟ್ಟದ ಪ್ರದೇಶ, ಮರಗಿಡಗಳು ಸೇರಿದಂತೆ ಬೆಟ್ಟದಲ್ಲಿದ್ದ…

ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ
ಮಂಡ್ಯ

ಭೂಮಿ-ವಸತಿ ಕಲ್ಪಿಸಲು ಆಗ್ರಹಿಸಿ ಭಾರೀ ಪ್ರತಿಭಟನೆ

January 17, 2019

ಮಂಡ್ಯ: ಜಿಲ್ಲೆಯಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಸಮುದಾಯಕ್ಕೆ ಭೂಮಿ- ವಸತಿ ನೀಡಲು ಆಗ್ರಹಿಸಿ ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಭಾರೀ ಪ್ರತಿಭಟನೆ ನಡೆಸಲಾಯಿತು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಹಕ್ಕಿಪಿಕ್ಕಿ ಸಮುದಾಯದ ನೂರಾರು ಪ್ರತಿಭಟನಾಕಾ ರರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆ ಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ಸಂಚಾಲಕ ಸಿದ್ದರಾಜು ಮಾತ…

ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ  ಜೀವಾವಧಿ ಸಜೆ, 75 ಸಾವಿರ ರೂ. ದಂಡ
ಮಂಡ್ಯ

ನರ್ಸ್ ಕೊಲೆ ಪ್ರಕರಣ: ಭಗ್ನಪ್ರೇಮಿಗೆ ಜೀವಾವಧಿ ಸಜೆ, 75 ಸಾವಿರ ರೂ. ದಂಡ

January 17, 2019

ಮಂಡ್ಯ:ನಾಲ್ಕು ವರ್ಷಗಳ ಹಿಂದೆ ಪ್ರೀತಿ, ಮದುವೆಗೆ ನಿರಾಕ ರಿಸಿದ ಯುವತಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗ್ನಪ್ರೇಮಿ ಯೊಬ್ಬನಿಗೆ ಮಂಡ್ಯ ಜಿಲ್ಲಾ ಸತ್ರನ್ಯಾಯಾ ಲಯ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚಂದ ಗಾಲು ಗ್ರಾಮದ ಉಮೇಶ್ (28) ಎಂಬಾತನೇ ಜೀವಾವಧಿ ಶಿಕ್ಷೆಗೆ ಒಳಗಾದ ಭಗ್ನಪ್ರೇಮಿ. ಪ್ರಕರಣದ ಹಿನ್ನೆಲೆ: ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ಉಮೇಶ್ ಅದೇ ಗ್ರಾಮದ ಪ್ರತಿಮಾ ಎಂಬ ಯುವತಿಯನ್ನು ಪ್ರೀತಿ ಮಾಡುವಂತೆ ಹಾಗೂ ತನ್ನನ್ನೆ ಮದುವೆ…

ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ
ಮಂಡ್ಯ

ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ

January 15, 2019

ಮಂಡ್ಯ: ದಿ|| ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್‍ಗೆ ಮಂಡ್ಯ ಲೋಕಸಭಾ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರೇನು ಜೆಡಿಎಸ್‍ನಲ್ಲಿರಲಿಲ್ಲ,ಅವರು ಕಾಂಗ್ರೆಸ್‍ನಲ್ಲಿ ಶಾಸಕರಾಗಿದ್ದವರು,ಈಗ ಅವರ ಪತ್ನಿಯಾಗಲಿ,ಪುತ್ರನಾಗಲಿ ನಮ್ಮಲ್ಲಿ ಟಿಕೇಟ್ ಕೇಳುವ ಪ್ರಶ್ನೆಯೇನೂ ಉದ್ಬವ ವಾಗುವುದಿಲ್ಲ ಎಂದರು. ಅಂಬರೀಶ್ ನಿಧನದ ವೇಳೆ ಅಂಬಿ ಅವರಿಗೆ ಗೌರವ ಸಲ್ಲಿಸಲು ನನ್ನ ಕರ್ತವ್ಯ ಮಾಡಿದೆ,ಜನರ ಭಾವನೆಗಳಿಗೆ ಸ್ಪಂದಿಸಿದೆ ಅಷ್ಟೆ, ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ…

ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ
ಮಂಡ್ಯ

ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ

January 15, 2019

ಭಾರತೀನಗರ: ಹೊಸ ವರ್ಷದ ಪ್ರಪ್ರಥಮ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ಬರುವ ಎಲ್ಲಾ ಹಬ್ಬಗಳಿಗೂ ಮುನ್ನುಡಿಯಾಗಿದೆ. ಸಂಕ್ರಾಂತಿ ಎಂದಾ ಕ್ಷಣ ರೈತರು ತಮ್ಮ ಜಾನುವಾರುಗಳನ್ನು ಶೃಂಗರಿಸಿ, ದನಗಳನ್ನು ಕಿಚ್ಚಾಯಿಸುವುದು ಸಂಭ್ರಮದ ಕ್ಷಣವಾಗಿತ್ತು. ಆದರೆ ಬರದ ಕರಿನೆರಳಿನಿಂದಾಗಿ ರೈತರು ತಮ್ಮ ಜಾನು ವಾರುಗಳನ್ನು ಮಾರಿಕೊಳ್ಳುವುದರ ಮೂಲಕ ಎತ್ತುಗಳ ಸಂಖ್ಯೆ ಗಣನೀಯವಾಗಿ ವರ್ಷದಿಂದ ವರ್ಷದಿಂದ ಕಡಿಮೆಯಾದ ಹಿನ್ನೆಲೆ ಯಲ್ಲಿ ಸಂಕ್ರಾಂತಿಯ ವೈಭವ ಕ್ಷೀಣಿಸುವಂತಿದೆ. ಹಬ್ಬಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿವೆ. ಹಬ್ಬಗಳ ಆಚರಣೆ ನಮ್ಮ ಪೂರ್ವಿಕರು ಸ್ನೇಹ ವಿಶ್ವಾಸದಿಂದ, ಸೌಹಾ…

ಮಾದರಿ ಪಟ್ಟಣವಾಗಲಿದೆ ಪಾಂಡವಪುರ
ಮಂಡ್ಯ

ಮಾದರಿ ಪಟ್ಟಣವಾಗಲಿದೆ ಪಾಂಡವಪುರ

January 15, 2019

ಪಾಂಡವಪುರ: ಪಾಂಡವಪುರ ಪಟ್ಟಣವನ್ನು ಸಕಲ ಸೌಕರ್ಯ ನಿರ್ಮಿ ಸುವ ಮೂಲಕ ಮೈಸೂರಿಗೆ ಪರ್ಯಾಯ ಉಪಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ 14.5 ಕೋಟಿ ರೂ. ವೆಚ್ಚದ ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾ ಡಿದರು. ಮೂರು ಬಾರಿ ಶಾಸಕನಾಗಿ, ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಟ್ಟಣಕ್ಕೆ ಏನೇನು ಸೌಲಭ್ಯಗಳು ಬೇಕೆಂಬುದನ್ನು ಮನ ಗಂಡಿರುವ ತಾವು ಶಕ್ತಿ…

1 26 27 28 29 30 56
Translate »