ಮೈಸೂರು: ಅಂಬರೀಶ್ ಅವರಿಗೆ ಕುದುರೆ ರೇಸ್ ಎಂದರೆ ಬಲು ಇಷ್ಟ. ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಶೂ, ಕೂಲಿಂಗ್ ಗ್ಲಾಸ್ನಲ್ಲೇ ಮಿಂಚುತ್ತಿದ್ದ ಅಂಬಿ, ಮೈಸೂರಿನ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಕಾಲೇಜು ಸುತ್ತಲಿನ ರಸ್ತೆಗಳು, ಚಾಮುಂಡಿಪುರಂ ಸರ್ಕಲ್ನಲ್ಲಿ ಸದಾ ಅಡ್ಡಾಡುತ್ತಿದ್ದರಂತೆ. ಕಾರು ಓಡಿಸುವ ಕ್ರೇಜ್ ಹೆಚ್ಚಾಗಿದ್ದ ಅಂಬಿ, ಅಜೀಜ್ ಸೇಟ್ರಂತೆ ಸಿಗರೇಟ್ ಹಚ್ಚಿಕೊಂಡು ಮೈಸೂರಿನ ರಸ್ತೆಗಳಲ್ಲಿ ಕಾರು ಚಾಲನೆ ಮಾಡುವುದೆಂದರೆ ಬಲು ಇಷ್ಟ ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯರಾದ ಕೃಷ್ಣಪ್ಪ ಹೇಳುತ್ತಾರೆ. ಇನ್ನು ಮೈಸೂರು ರೇಸ್…
ಎಂಆರ್ಸಿ ನೂತನ ಸ್ಟೀವರ್ಡ್ಗಳಾಗಿ ಹೆಚ್. ಕುಸುಮಾಕರ್ಶೆಟ್ಟಿ, ಎಲ್. ವಿವೇಕಾನಂದ ಆಯ್ಕೆ
August 28, 2018ಮೈಸೂರು: ಮೈಸೂರು ರೇಸ್ ಕ್ಲಬ್ (ಎಂಆರ್ಸಿ)ನ ನೂತನ ಸ್ಟೀವರ್ಡ್ಗಳಾಗಿ ಹೆಚ್. ಕುಸುಮಾಕರ್ ಶೆಟ್ಟಿ (139 ಮತ), ಎಲ್. ವಿವೇಕಾ ನಂದ (116) ಹಾಗೂ ಆಡಳಿತ ಮಂಡಳಿ ಸಮಿತಿ ಸದಸ್ಯರಾಗಿ ಬಿ.ಎನ್. ಕಾರ್ಯಪ್ಪ (147), ಎಂ.ಸಿ. ಮಲ್ಲಿಕಾರ್ಜುನ್ (102) ಆಯ್ಕೆಯಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಎಂಆರ್ಸಿ ವಾರ್ಷಿಕ ಮಹಾಸಭೆ ನಡೆಯಿತು. ನಂತರ ಖಾಲಿ ಇದ್ದ ಎರಡು ಸ್ಟೀವರ್ಡ್ ಹಾಗೂ ಎರಡು ಆಡಳಿತ ಮಂಡಳಿ ಸಮಿತಿ ಸದಸ್ಯ ಸ್ಥಾನಕ್ಕೆ ಮಧ್ಯಾಹ್ನ ಚುನಾವಣೆ ನಡೆದು, ಮತ ಎಣಿಕೆ ನಂತರ ಫಲಿತಾಂಶವೂ…
ಆ.29ರಿಂದ ಮೈಸೂರು ರೇಸುಗಳು ಆರಂಭ
August 21, 2018ಮೈಸೂರು: ಆಗಸ್ಟ್ 29ರಿಂದ ಅಕ್ಟೋಬರ್ 21ರವರೆಗೆ ಮೈಸೂರು ರೇಸುಗಳು-2018 ನಡೆಯಲಿವೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕ್ಲಬ್(ಒಖಅ) ಲಿಮಿಟೆಡ್ನಲ್ಲಿ ಇಂದು ಎಂಆರ್ಸಿ ಅಧ್ಯಕ್ಷ ಜಿ.ವೆಂಕಟೇಶ ಸುದ್ದಿಗೋಷ್ಠಿಯಲ್ಲಿ ರೇಸುಗಳ ಮಾಹಿತಿ ನೀಡಿದರು. ಆಗಸ್ಟ್ 30ರಂದು 4 ವರ್ಷ ಮತ್ತು ಮೇಲ್ಪಟ್ಟ ಕುದುರೆಗಳಿಗಾಗಿ ಕೃಷ್ಣರಾಜ ಒಡೆಯರ್ ಮೆಮೋರಿಯಲ್ ಟ್ರೋಫಿ(ಗ್ರೇಡ್-3) ಪಂದ್ಯ, ಸೆಪ್ಟೆಂಬರ್ 3ರಂದು ದಿ ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ 1000 ಗಿನ್ನೀಸ್ ಪಂದ್ಯ, ಸೆಪ್ಟೆಂಬರ್ 13ರಂದು ದಿ ಮಹರಾಜಾಸ್ ಕಪ್, ಸೆಪ್ಟೆಂಬರ್ 27ರಂದು ಜಯಚಾಮರಾಜ…
ಮೈಸೂರು ಜನರ ಹಿತದೃಷ್ಟಿಯಿಂದ ರೇಸ್ ಕ್ಲಬ್ ಸ್ಥಳಾಂತರ: ಸಚಿವ ಸಾ.ರಾ.ಮಹೇಶ್ ಪುನರುಚ್ಚಾರ
July 17, 2018ಮೈಸೂರು: ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಮೈಸೂರಿನ ಜನರ ಹಿತದೃಷ್ಟಿಯಿಂದ ರೇಸ್ಕೋರ್ಸ್ ಕ್ಲಬ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದ್ದೇನೆ. ಅನಧಿಕೃತ ಕಟ್ಟಡಗಳ ತೆರವಿಗೆ ಮೂರು ತಿಂಗಳು ಗಡುವು ನೀಡಲಾಗಿದ್ದು, ಗಡುವು ಪೂರ್ಣ ಗೊಂಡರೂ ತೆರವು ಮಾಡದೆ ಇದ್ದರೆ ಜಿಲ್ಲಾಡಳಿತದೊಂದಿಗೆ ಅಕ್ರಮ ಕಟ್ಟಡಗಳ ನೆಲಸಮ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪುನರುಚ್ಚರಿಸಿದ್ದಾರೆ. ಹೊಟೇಲ್ ಮಾಲೀಕರ ಸಂಘದ ಆವರಣದಲ್ಲಿ ಭಾನುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ರೇಸ್ಕೋರ್ಸ್ ಸ್ಥಳಾಂತರ ಮಾಡುವ ವಿಷಯದಲ್ಲಿ ನನ್ನ ಹಿತಾಸಕ್ತಿ ಅಡಗಿಲ್ಲ….
ಮೈಸೂರು ರೇಸ್ಕೋರ್ಸ್ಗೆ ಸಚಿವ ಸಾ.ರಾ.ಮಹೇಶ್ ಭೇಟಿ: ಪರಿಶೀಲನೆ
July 2, 2018ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು ನಗರ ಪಾಲಿಕೆ ಅಧಿಕಾರಿಗೆ ತರಾಟೆ ಮೈಸೂರು: ಮೈಸೂರಿನ ರೇಸ್ ಕೋರ್ಸ್ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಿ ಸ್ವಚ್ಛತೆ ಕಾಪಾಡುವುದಕ್ಕೆ ಮೂರು ತಿಂಗಳ ಗಡುವು ನೀಡಲಾಗಿದ್ದು, ಗಡುವು ಉಲ್ಲಂಘಿಸಿದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ. ಭಾನುವಾರ ಬೆಳಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರೇಸ್ಕೋರ್ಸ್ಗೆ ಭೇಟಿ ನೀಡಿದ ಸಚಿವರು, ಅಕ್ರಮವಾಗಿ ನಿರ್ಮಿಸಿರುವ ಕುದುರೆ ಸಾಕಾಣಿಕೆಯ ಲಾಯದ ಕಟ್ಟಡ ಹಾಗೂ ರೇಸ್ಕೋರ್ಸ್ ಆವರಣದಲ್ಲಿರುವ ಅನೈರ್ಮಲ್ಯ ಕಂಡು ವಿಷಾದಿಸಿದರಲ್ಲದೆ, ಪಾಲಿಕೆಯ…
ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಆಫರ್ ರೂ. 4500ಕ್ಕೆ ಮೈಸೂರು ರೇಷ್ಮೆ ಸೀರೆ
June 30, 2018ಮೈಸೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ (ಕೆಎಸ್ಐಸಿ) ವತಿಯಿಂದ ಉಡುಗೊರೆಯಾಗಿ ಕೇವಲ 4.500 ರೂ.ಗೆ ಮೈಸೂರು ಸಿಲ್ಕ್ ಸೀರೆಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾ ಸೋಧ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ರೇಷ್ಮೆ ಸೀರೆಗಳು ಉತ್ತಮ ಗುಣಮಟ್ಟದೊಂದಿಗೆ ವಿಶ್ವ ಪ್ರಸಿದ್ಧಿ ಪಡೆದಿವೆ. ಮೈಸೂರಿನಲ್ಲಿರುವ ರೇಷ್ಮೆ ಉದ್ಯಮ ನಿಗಮ ದಲ್ಲಿ ಸುಮಾರು…
ರೇಸ್ಕೋರ್ಸ್ ಸ್ಥಳಾಂತರಕ್ಕೆ ಬದ್ಧ
June 30, 2018ಮೈಸೂರು : ಮೈಸೂರು ರೇಸ್ ಕೋರ್ಸ್ ಸ್ಥಳಾಂತ ರಕ್ಕೆ ಬದ್ಧವಾಗಿದ್ದು, ಅನಧಿಕೃತವಾಗಿ ನಿರ್ಮಿಸಿರುವ ಶೆಡ್ಗಳ ತೆರವು ಕಾರ್ಯಾ ಚರಣೆಯನ್ನು ರೇಸ್ ಕೋರ್ಸ್ ಆಡಳಿತ ಮಂಡಳಿಯೇ ಇಂದಿನಿಂದ ಆರಂಭಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ಸರ್ಕಾರದ 139 ಎಕರೆ ಜಾಗದಲ್ಲಿ ನಡೆಯುತ್ತಿರುವ ರೇಸ್ ಕೋರ್ಸ್ನಿಂದ ಹಲವಾರು ತೊಂದರೆ ಉಂಟಾಗುತ್ತಿದೆ. ಮರಳು ಲಾರಿ ನಿಲು ಗಡೆಯ ರಸ್ತೆಯುದ್ದಕ್ಕೂ ಕುದುರೆ ಲದ್ದಿಯ ರಾಶಿಹಾಕಲಾಗಿದೆ. ಇದರಿಂದ ಸ್ಥಳೀಯರು ಹಾಗೂ ಮೃಗಾಲಯದ ಪ್ರಾಣಿಗಳ ಮೇಲೆ…
ಮೈಸೂರು ರೇಸ್ ಕೋರ್ಸ್ನ ಅನಧಿಕೃತ ಶೆಡ್ಗಳ ತೆರವು
June 30, 2018ಮೈಸೂರು: ಮೈಸೂರಿನ ರೇಸ್ಕೋರ್ಸ್ ಆವರಣದಲ್ಲಿದ್ದ ಅನಧಿಕೃತ ಶೆಡ್ಗಳನ್ನು ತೆರವುಗೊಳಿಸಲಾಗುತ್ತಿದೆ. ಇತ್ತೀಚೆಗೆ ರೇಸ್ಕೋರ್ಸ್ಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಕುದುರೆಗಳು ಹಾಗೂ ಪಾಲಕರ ವಾಸಕ್ಕಾಗಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಶೆಡ್ಗಳನ್ನು ತೆರವುಗೊಳಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲೂ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೆಡ್ಗಳನ್ನು ನೆಲಸಮಗೊಳಿಸಲಾಗಿದೆ. ಈ ಸಂಬಂಧ ಶಾಸಗಿ ವಾಹಿನಿಯೊಂದಿಗೆ ಮಾತನಾಡಿದ ಸಚಿವ ಸಾ.ರಾ.ಮಹೇಶ್, ರೇಸ್ಕೋರ್ಸ್ನ…
ರೇಸ್ಕೋರ್ಸ್ ಸ್ಥಳಾಂತರ ಪ್ರಸ್ತಾಪಕ್ಕೆ ಸ್ವಾಗತ
June 23, 2018ಮೈಸೂರು: ರೇಸ್ ಕೋರ್ಸ್ ಸ್ಥಳಾಂತರಿಸಿ ಅಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಬೇಕೆನ್ನುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಪ್ರಸ್ತಾಪ ಸೂಕ್ತವಾಗಿದ್ದು, ಇದನ್ನು ಕರ್ನಾಟಕ ಕನ್ನಡ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್ಬಾಬು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ರೇಸ್ ಕೋರ್ಸ್ ಸ್ಥಳಾಂತರ ಸೂಕ್ತವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಲಾಟರಿ ಮತ್ತು ಸಾರಾಯಿ ನಿಷೇಧ ಮಾಡಿದ್ದರು. ಅದೇ ರೀತಿ ರೇಸ್ ಕೋರ್ಸ್ ವ್ಯವಸ್ಥೆಗೆ ನಿಷೇಧ ತರುವಂತಹ…
ಮೈಸೂರು ರೇಸ್ ಕೋರ್ಸ್ನಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ
June 22, 2018ಅಗತ್ಯ ಮುನ್ನೆಚ್ಚರಿಕೆಯಿಂದ ಸಾಂಗವಾಗಿ ನೆರವೇರಿದ ಮೆಗಾ ಕಾರ್ಯಕ್ರಮ ದೇಶದ ಸಂಸ್ಕೃತಿ ಪ್ರತೀಕವಾದ ಯೋಗಕ್ಕೆ ಮೈಸೂರಿಗರಿಂದ ಸಿಕ್ಕಿತು ಮೆರಗು ಮೈಸೂರು: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಚಾಮುಂಡಿ ಬೆಟ್ಟದ ತಪ್ಪಲು, ಕಂಗೊಳಿಸುತ್ತಿದ್ದ ಹಸಿರು ವಲಯ ಮೋಡ ಕವಿದ ವಾತಾವರಣ ಹಾಗೂ ಚುಮು ಚುಮು ಚಳಿಯ ನಡುವೆ ಮೈಸೂರಿನ ರೇಸ್ ಕೋರ್ಸ್ನಲ್ಲಿ ಸಾವಿರಾರು ಮಂದಿಯಿಂದ ಯೋಗ ಪ್ರದರ್ಶನ. ಗುರುವಾರ ನಡೆದ ನಾಲ್ಕನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ…