ಮೈಸೂರು, ನ.23- ಕಲುಷಿತ ನೀರು ಸೇವಿಸಿ, ಹಲವರು ಅಸ್ವಸ್ಥಗೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರುಣಾ ಹೋಬಳಿ ಹಡಜನ ಗ್ರಾಮಸ್ಥರು ಆರೋಪಿಸಿದ್ದಾರೆ. ಗಂಭೀರ ಸಮಸ್ಯೆ ಬಗ್ಗೆ ಪತ್ರಿಕಾ ಪ್ರಕ ಟಣೆ ಮೂಲಕ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಅಸಮರ್ಪಕ ನಿರ್ವಹಣೆ ಯಿಂದಾಗಿ ಹಡಜನ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಪರಿಣಾಮ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಚಿಕಿತ್ಸೆ ಪಡೆದಿದ್ದಾರೆ. ಇವ ರಲ್ಲಿ ಕೆಲವರು ಮೈಸೂರಿನ ಕೆ.ಆರ್.ಆಸ್ಪ ತ್ರೆಗೆ ದಾಖಲಾಗಿ, ಚೇತರಿಸಿಕೊಂಡಿದ್ದಾರೆ. ಕಲುಷಿತ ನೀರು…
ಸಾವಯವ ಕೃಷಿ ಮಹತ್ವ ತಿಳಿಸಿದ ಬ್ಯಾತಹಳ್ಳಿ ಮಾದಪ್ಪ
November 24, 2019ಮೈಸೂರು,ನ.23(ಪಿಎಂ)-ಮೈಸೂರಿನ ಜೆಪಿ ನಗ ರದ ಸಿದ್ಧಲಿಂಗೇಶ್ವರ ಬಡಾವಣೆ ನಿವಾಸಿ ಬ್ಯಾತಹಳ್ಳಿ ಮಾದಪ್ಪ ತಮ್ಮ 1 ಎಕರೆ ಜಮೀನಿನಲ್ಲಿ ಹಣ್ಣು, ತರಕಾರಿ ಬೆಳೆದು ಯಶಸ್ವಿಯಾಗಿ ದ್ದಾರೆ ಎಂದು ನಾಗನಹಳ್ಳಿ ಸಾವ ಯವ ಕೃಷಿ ಸಂಶೋಧನಾ ಕೇಂದ್ರದ ಡಾ.ಹೆಚ್.ಸಿ.ಗೋವಿಂದರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕಿನ ಬ್ಯಾತಹಳ್ಳಿಯಲ್ಲಿ 6 ಎಕರೆ ಜಮೀನು ಹೊಂದಿ ರುವ ಮಾದಪ್ಪ 1 ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬಾಳೆ, ತೆಂಗು, ಗಜನಿಂಬೆ, ಚಕ್ಕೊತ, ಸಪೋಟ ಸೇರಿದಂತೆ…
ಹೊಸಕೋಟೆ ಕೈ ಅಭ್ಯರ್ಥಿ ಟೀಕಿಸಿದ ಎಂಟಿಬಿ ನಾಗರಾಜ್ ಕ್ಷಮೆಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷರ ಆಗ್ರಹ
November 24, 2019ಮೈಸೂರು, ನ.23(ಪಿಎಂ)-ಹೊಸಕೋಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಬಗ್ಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಲಘುವಾಗಿ ಮಾತ ನಾಡಿದ್ದಾರೆ ಎಂದು ಖಂಡಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಂಟಿಬಿ ನಾಗರಾಜ್ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಚುನಾವಣಾ ಪ್ರಚಾರ ಮಾಡುತ್ತಿದ್ದ ಎಂಟಿಬಿ ನಾಗರಾಜ್ `ಮಹಿಳೆಯಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ’ ಎಂದು ಕಾಂಗ್ರೆಸ್…
ಮುಕ್ತ ವಿವಿ ವಿಶ್ರಾಂತ ಕುಲಪತಿಗಳು, ಅಧಿಕಾರಿಗಳ ವಿರುದ್ಧ ಎಸಿಬಿ, ಪೊಲೀಸರಲ್ಲಿ ದೂರು ಸಲ್ಲಿಕೆ
November 22, 2019ಮೈಸೂರು, ನ.21(ಎಂಟಿವೈ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)ದಲ್ಲಿ ನಡೆದಿರುವ ಅಕ್ರಮ ಕುರಿತಂತೆ ಈ ಹಿಂದಿನ ನಾಲ್ವರು ಉಪ ಕುಲಪತಿಗಳು, ಹಣಕಾಸು ಅಧಿಕಾರಿ, ರಿಜಿಸ್ಟ್ರಾರ್ಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ 5 ಹಾಗೂ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಎರಡು ಪ್ರಕರಣ ಸಲ್ಲಿಕೆಯಾಗಿದೆ. ನಿಯಮ ಗಾಳಿಗೆ ತೂರಿ ವಿವಿಧ ಸಂಸ್ಥೆ ಗಳೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡು ವಿವಿಧೆಡೆ ಕೋರ್ಸ್ ಆರಂಭ, ಪ್ರಾದೇಶಿಕ ಕೇಂದ್ರ ಸ್ಥಾಪನೆ, ಸಿಬ್ಬಂದಿ ನೇಮಕ, ಅಂಕಪಟ್ಟಿ ಮುದ್ರಣ, ಪದವಿ ಪ್ರಮಾಣ ಪತ್ರ ಮುದ್ರಣ ಸೇರಿ ದಂತೆ…
ವಾಯುಮಾಲಿನ್ಯ, ತಂಬಾಕಿನಿಂದ ಬರುವ ಶ್ವಾಸಕೋಶ ಕಾಯಿಲೆ ಕ್ಯಾನ್ಸರ್ಗೂ ತಿರುಗಬಹುದು
November 22, 2019ಮೈಸೂರು, ನ.21(ಪಿಎಂ)- ವಾಯುಮಾಲಿನ್ಯ ಹಾಗೂ ತಂಬಾಕು ಸೇವನೆಯಿಂದ ಬರುವ ಶ್ವಾಸಕೋಶ ಸಂಬಂಧಿ ಕಾಯಿಲೆ ಕ್ಯಾನ್ಸರ್ಗೂ ತಿರುಗುವ ಸಾಧ್ಯತೆ ಇದೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಎಚ್ಚರಿಸಿದರು. ಮೈಸೂರಿನ ಶಾರದಾವಿಲಾಸ ಔಷಧ ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ವಿದ್ಯಾಲಯದ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ `ವಿಶ್ವ ಸಿಓಪಿಡಿ ದಿನ’ದ ಅಂಗವಾಗಿ `ಲಿವಿಂಗ್ ವೆಲ್ ವಿತ್ ಸಿಓಪಿಡಿ’ ಶೀರ್ಷಿಕೆಯಡಿ ದೀರ್ಘ ಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಓ ಪಿಡಿ) ಕುರಿತಂತೆ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ…
ಕೆಇಬಿ ಮುಸ್ಲಿಂ ನೌಕರರ ಸಂಘದಿಂದ ಮೀಲಾದ್-ಉನ್-ನಬಿ
November 22, 2019ಮೈಸೂರು,ನ.21(ಎಂಕೆ)-ಮೈಸೂರಿನ ಬೆಂಗಳೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಂಕ್ಷನ್ ಹಾಲ್ನಲ್ಲಿ ಕೆಇಬಿ ಮುಸ್ಲಿಂ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮೀಲಾದ್-ಉನ್-ನಬಿ ಆಚರಿಸಲಾಯಿತು. ಧರ್ಮಗುರು ಮಹಮ್ಮದ್ ಸಂಸುಲ್ ಹುದಾ ಚಿಸ್ಟಿ ಸಾಹೇಬ್, ಖುರಾನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಬಳಿಕ ಮೈಸೂರಿನ ಸರ್ಖಾರ್ಜಿ ಹಜರತ್ ಮಹಮ್ಮದ್ ಉಸ್ಮಾನ್ ಷರೀಫ್ ಮಾತನಾಡಿ, ಜಗತ್ತಿನ ಎಲ್ಲೆಡೆ ಶಾಂತಿ ಮತ್ತು ಸದ್ಭಾವನೆ ನೆಲೆಸಬೇಕು. ಯಾವುದೇ ಕಾರ ಣಕ್ಕೂ ನಮ್ಮ ನಡುವೆ ಒಡಕು ಉಂಟಾಗ ಬಾರದು. ನಮಾಜ್ ಮತ್ತು ಮಸೀದಿಗಳಿಗೆ ಭೇಟಿ ನೀಡುವುದನ್ನು ಮರೆತರೂ…
ಆದಿವಾಸಿಗಳು ಸಂಗ್ರಹಿಸುವ ಅರಣ್ಯ ಉತ್ಪನ್ನಗಳಿಗೆ ಸಬ್ಸಿಡಿ ದ್ವಿಗುಣ ಭರವಸೆ
November 22, 2019ಮೈಸೂರು,ನ.21(ವೈಡಿಎಸ್)- ಆದಿ ವಾಸಿಗಳು ಕಾಡಿನಲ್ಲಿ ಸಂಗ್ರಹಿಸುವ ಉತ್ಪನ್ನ ಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಸಹಕಾರ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಮಹಾ ಮಂಡಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಆರ್ಥಿಕ ನೆರವಿನಿಂದ ನಿರ್ಮಿಸಿರುವ ಜೇನು ಸಂಸ್ಕರಣಾ ಮತ್ತು ಸೀಗೆಪುಡಿ ಘಟಕ, ಗೋದಾಮು ಕೊಠಡಿಗಳನ್ನು…
ಉದ್ಯಾನ್ ಎಕ್ಸ್ಪ್ರೆಸ್ ಮೈಸೂರಿಗೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಮನವಿ
November 22, 2019ಮೈಸೂರು, ನ.21- ಬೆಂಗಳೂರು-ಮುಂಬೈ ನಡುವಿರುವ ಉದ್ಯಾನ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಮೈಸೂ ರಿಗೆ ವಿಸ್ತರಿಸುವಂತೆ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದಾರೆ. ಮೈಸೂರಿನ ಪ್ರವಾಸೋದ್ಯ ಮಕ್ಕೆ ಪೂರಕವಾಗಿ ಹಾಗೂ ಭಕ್ತಾಧಿಗಳಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಉದ್ಯಾನ್ ಎಕ್ಸ್ಪ್ರೆಸ್ ಸಂಚಾರ ವಿಸ್ತರಣೆ ಅಗತ್ಯವಾಗಿದೆ. ಬೆಂಗಳೂರಿನಿಂದ ಗುಂಟ್ಕಲ್, ಮಂತ್ರಾಲಯ, ರಾಯಚೂರು, ಕಲಬುರ್ಗಿ, ಸೋಲಾಪುರ, ಪುಣೆ ಮಾರ್ಗ ವಾಗಿ ಮುಂಬೈಗೆ ಸಂಚರಿಸುವ ಉದ್ಯಾನ್ ಎಕ್ಸ್ಪ್ರೆಸ್ ರೈಲು ಮೈಸೂರಿಗೆ ಬರುವುದರಿಂದ…
ಇಂದಿನಿಂದ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ವಿಶೇಷ ಕೈಮಗ್ಗ ಮೇಳ-ಸಂಸ್ಕøತಿ
November 22, 2019ಮೈಸೂರು, ನ.21(ಆರ್ಕೆಬಿ)- ಮೈಸೂರಿನ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ನ.22ರಿಂದ ಡಿ.8ರವರೆಗೆ `ವಿಶೇಷ ಕೈಮಗ್ಗ ಮೇಳ- ಸಂಸ್ಕøತಿ -2019 ಆಯೋಜಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ ತಿಳಿಸಿದರು. ನವದೆಹಲಿಯ ಜವಳಿ ಮಂತ್ರಾಲಯ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಮೇಳ-ಸಂಸ್ಕøತಿ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ ಎಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಆಂಧ್ರ್ರ ಪ್ರದೇಶ, ರಾಜ್ಯದ ಚಾಮರಾಜನಗರÀ, ಮಂಡ್ಯ,…
ಕೆನಡಾ ಸಂಪುಟದಲ್ಲಿ ಹಿಂದೂ ಮಹಿಳೆಗೆ ಸಚಿವ ಸ್ಥಾನ
November 22, 2019ಒಟ್ಟಾವಾ, ನ.21- ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊಸದಾಗಿ ವಿಸ್ತರಿಸಿದ ತಮ್ಮ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಅವರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ. ಕೆನಡಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ಮೊದಲ ಹಿಂದೂ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಇಂದಿರಾ ಆನಂದ್ ಪಾತ್ರರಾಗಿದ್ದಾರೆ. ಅವರು, ಇತ್ತೀಚೆಗೆ ಕೆನಡಾ ಸಂಸತ್ತಿಗೆ ಆಯ್ಕೆಯಾಗಿ ದ್ದರು. ಇನ್ನು ಕೆನಡಾ ಸಂಪುಟದಲ್ಲಿ ಇನ್ನೂ ಮೂವರು ಇಂಡೋ -ಕೆನಡಿಯನ್ ಮಂತ್ರಿಗಳು ಇದ್ದು ಅವರೆಲ್ಲಾ ಸಿಖ್ಖ್ ಧರ್ಮೀಯರಾಗಿ…










