Tag: Mysore

ಕಚೇರಿಯೊಳಗೆ ಎಡಗಾಲಿಟ್ಟ ವಕೀಲರನ್ನ ವಾಪಸ್ ಕರೆದ ಹೆಚ್.ಡಿ.ರೇವಣ್ಣರಿಂದ ವಾಸ್ತು ಶಾಸ್ತ್ರ ಬೋಧನೆ..!
ಮೈಸೂರು

ಕಚೇರಿಯೊಳಗೆ ಎಡಗಾಲಿಟ್ಟ ವಕೀಲರನ್ನ ವಾಪಸ್ ಕರೆದ ಹೆಚ್.ಡಿ.ರೇವಣ್ಣರಿಂದ ವಾಸ್ತು ಶಾಸ್ತ್ರ ಬೋಧನೆ..!

November 17, 2019

ಮೈಸೂರು: ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ದೇವರಳ್ಳಿ ನಾಮ ಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಸ್ತು ಶಾಸ್ತ್ರಗಳ ಬಗ್ಗೆ ನೀತಿ ಬೋಧನೆ ಮಾಡಿದ ಪ್ರಸಂಗ ನಡೆದಿದೆ. ನಾಮಪತ್ರ ಸಲ್ಲಿಕೆ ವೇಳೆ ವಕೀಲರೊಬ್ಬರು ಕಚೇರಿಯೊಳಗೆ ಪ್ರವೇ ಶಿಸಿದ್ದಾರೆ, ಪ್ರವೇಶಿಸುವಾಗ ಎಡಗಾಲನ್ನು ಮೊದ ಲಿಗೆ ಇಟ್ಟ ವಕೀಲರನ್ನು ವಾಪಸ್ ಕರೆದ ರೇವಣ್ಣ ಬಲಗಾಲಿಟ್ಟು ಒಳಗೆ ಹೋಗಬೇಕು ಅಂತ ಬುದ್ದಿ ಹೇಳಿ ಮತ್ತೆ ಕಳುಹಿಸಿದ್ದಾರೆ. ಈ ವೇಳೆ ಅಭ್ಯರ್ಥಿ ಸೋಮಶೇಖರ್, ರೇವಣ್ಣ ಕಾಲಿಗೆ ನಮಸ್ಕರಿಸಿ ಕಚೇರಿಯೊಳಗೆ…

ಪೊಲೀಸ್ ಪೇದೆ ಮೇಲೆ ಹಲ್ಲೆ: ಆಟೋ ಚಾಲಕನ ಬಂಧನ
ಮೈಸೂರು

ಪೊಲೀಸ್ ಪೇದೆ ಮೇಲೆ ಹಲ್ಲೆ: ಆಟೋ ಚಾಲಕನ ಬಂಧನ

November 17, 2019

ಮೈಸೂರು, ನ.16(ಎಸ್‍ಪಿಎನ್)-ಕರ್ತವ್ಯ ನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಟೋ ಚಾಲಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಆಟೋ ಚಾಲಕ ಮಹೇಶ್ ಬಂಧಿತ ಆರೋಪಿ. ಪ್ರಭುಸ್ವಾಮಿ ಹಲ್ಲೆಗೊಳಗಾದ ಸಂಚಾರ ಪೊಲೀಸ್ ಪೇದೆ. ನ.15ರಂದು ಸಂಜೆ ಮೈಸೂರಿನ ಗಾಂಧಿ ವೃತ್ತದ ಬಳಿ ನೋ ಪಾರ್ಕಿಂಗ್‍ನಲ್ಲಿ ಆಟೋ ಪಾರ್ಕ್ ಮಾಡಿದ್ದ ಚಾಲಕ ಮಹೇಶ್‍ನನ್ನು, ಸಂಚಾರ ಪೇದೆ ಪ್ರಭುಸ್ವಾಮಿ ದಾಖಲಾತಿ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಮಹೇಶ್ ಏಕಾಏಕಿ ರೊಚ್ಚಿ ಗೆದ್ದು, ಪೇದೆ ಪ್ರಭುಸ್ವಾಮಿ…

ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ಕಾಮಗಾರಿಗೆ ಶಾಸಕರಿಂದಲೇ ತಡೆ
ಮೈಸೂರು

ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ಕಾಮಗಾರಿಗೆ ಶಾಸಕರಿಂದಲೇ ತಡೆ

November 17, 2019

ಮೈಸೂರು,ನ.16(ಪಿಎಂ)-ತಾವು ಶಾಸಕರಾಗಿದ್ದ ಅವಧಿ ಯಲ್ಲಿ ಕೊಳಚೆ ನಿರ್ಮೂ ಲನಾ ಮಂಡಳಿಯಿಂದ ಮಂಜೂರಾದ 5,296 ಮನೆಗಳ ಕಾಮಗಾರಿ ಆರಂಭವಾಗದಂತೆ ಹಾಲಿ ಶಾಸಕ ಎಸ್.ಎ.ರಾಮ ದಾಸ್ ದುರುದ್ದೇಶದಿಂದ ತಡೆಯೊಡ್ಡಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸತತ 4 ವರ್ಷ ಗಳು ಶ್ರಮವಹಿಸಿ ಮುಡಾದಿಂದ ಜಮೀನು ಪಡೆದು ಮಳಲವಾಡಿಯಲ್ಲಿ 1,344, ವಿಶ್ವೇ ಶ್ವರನಗರದಲ್ಲಿ 868 ಮನೆಗಳು ಸೇರಿದಂತೆ ಒಟ್ಟು 2,212 ಮನೆಗಳನ್ನು ನಿರ್ಮಿಸಲು ಕೊಳಚೆ ನಿರ್ಮೂಲನಾ ಮಂಡಳಿಯಿಂದ…

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ
ಮೈಸೂರು

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ

November 15, 2019

ಬೆಂಗಳೂರು, ನ.14(ಕೆಎಂಶಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಕಮಲ ಸರ್ಕಾರವನ್ನು ರಾಜ್ಯದಲ್ಲಿ ಮರು ಸ್ಥಾಪಿಸಲು ಕಾರಣರಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅನರ್ಹಗೊಂಡ ಶಾಸಕರ ಪೈಕಿ 16 ಮಂದಿ ಇಂದು ವಿಧ್ಯುಕ್ತ ವಾಗಿ ಬಿಜೆಪಿ ಸೇರ್ಪಡೆಯಾದರು. ಪಕ್ಷದ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ನೂತನ ಸದಸ್ಯರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ನಂತರ ಮಾತನಾಡಿದ ಮುಖ್ಯಮಂತ್ರಿ…

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಮೈಸೂರು

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

November 15, 2019

ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಲ್ಲಿಸಿದ್ದ ಮರು ಪರಿ ಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಜತೆಗೆ ನ್ಯಾಯಾಂಗ ನಿಂದನೆ ದಾವೆಯಲ್ಲಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ತರಾಟೆಗೆ ತೆಗೆದುಕೊಂಡಿದೆ. ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಸುವುದರಲ್ಲಿ ಅಕ್ರಮ ನಡೆದಿದೆ. ಸುಪ್ರೀಂಕೋರ್ಟ್…

ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ
ಮೈಸೂರು

ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ

November 15, 2019

ಹುಣಸೂರು, ನ.14-ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿರುವ ಬೆನ್ನಲ್ಲೇ ಹುಣಸೂರಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಾಜಿ ಸಚಿವರೂ ಆದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಹಾಗೂ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಜಿ.ಡಿ.ಹರೀಶ್ ಗೌಡರನ್ನು ಕಣಕ್ಕಿಳಿಸಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಹುಣಸೂರಿನ ಜಿ.ಟಿ.ದೇವೇಗೌಡರ ನಿವಾಸದಲ್ಲಿ ಅವರ ಅನುಪಸ್ಥಿತಿಯಲ್ಲಿ ಜಮಾಯಿ ಸಿದ್ದ ಸಾವಿರಾರು ಬೆಂಬಲಿಗರು, ಜಿಟಿಡಿ ಪುತ್ರ ಜಿ.ಡಿ. ಹರೀಶ್‍ಗೌಡ ಅವರನ್ನು ಉಪ ಚುನಾವಣೆಯಲ್ಲಿ ಸ್ಪರ್ಧೆ…

ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಮೈಸೂರು

ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ

November 15, 2019

ಬೆಂಗಳೂರು, ನ.14(ಕೆಎಂಶಿ)-ಉಪ ಚುನಾವಣೆ ನಡೆಯಲಿರುವ ವಿಧಾನ ಸಭೆಯ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರ ಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಯಲ್ಲಾಪುರ ಕ್ಷೇತ್ರಕ್ಕೆ ಎ. ಚೈತ್ರಾಗೌಡ, ಹಿರೇಕೆರೂರು-ಉಜೆನಪ್ಪ ಜಟ್ಟೆಪ್ಪ ಕೋಡಿಹಳ್ಳಿ, ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ, ವಿಜಯ ನಗರ-ಎನ್.ಎಂ. ನಬಿ, ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ, ಕೆ.ಆರ್.ಪುರಂ-ಸಿ.ಕೃಷ್ಣಮೂರ್ತಿ, ಯಶವಂತಪುರ-ಟಿ.ಎನ್. ಜವರಾಯಿಗೌಡ, ಶಿವಾಜಿನಗರ-ತನ್ವೀರ್ ಅಹಮ್ಮದ್ ವುಲ್ಲಾ, ಕೆ.ಆರ್.ಪೇಟೆ- ಬಿ.ಎಲ್.ದೇವರಾಜ್, ಹುಣಸೂರು-ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಕುಟುಂಬದ ಕಡುವೈರಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ವಿರುದ್ಧ…

ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ
ಮೈಸೂರು

ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ

November 15, 2019

ಮೈಸೂರು,ನ.14(ಎಂಟಿವೈ)-ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆರಂಭ ವಾದ ಮೂರು ದಿನಗಳ 34ನೇ `ಅಖಿಲ ಭಾರತ ಅಂಚೆ ಅಥ್ಲೆಟಿಕ್ಸ್ ಮತ್ತು ಸೈಕ್ಲಿಂಗ್’ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ 220ಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದರು. ಕರ್ನಾಟಕ ವೃತ್ತ ಅಂಚೆ ಕ್ರೀಡಾ ಮಂಡಳಿ (ಬೋರ್ಡ್) ಆಯೋಜಿಸಿದ್ದ 34ನೇ ಅಖಿಲ ಭಾರತ ಅಂಚೆ ಸೈಕ್ಲಿಂಗ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಇಂದು ಬೆಳಿಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು….

ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!
ಮೈಸೂರು

ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!

November 15, 2019

`ಮತ್ತೆ ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಿ’ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಉಲ್ಲೇಖಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು `ಚೌಕಿದಾರ್ ಚೋರ್ ಹೈ’ ಎಂದು ಲೇವಡಿ ಮಾಡುತ್ತಿದ್ದ, ಅದಕ್ಕೆ ಸುಪ್ರೀಂ ಕೋರ್ಟ್ ಹೆಸರನ್ನೂ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರ, ಟೀಕಾ…

ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಯೋಗಾಭ್ಯಾಸ
ಮೈಸೂರು

ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಯೋಗಾಭ್ಯಾಸ

November 15, 2019

ಮೈಸೂರು, ನ.14(ಆರ್‍ಕೆಬಿ)- `ಹೃದ ಯದ ಆರೈಕೆಗಾಗಿ ಯೋಗ’ ವಿಷಯ ಕುರಿತು ನ.15ರಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರು ಅರ ಮನೆ ಅಂಗಳದಲ್ಲಿ ಗುರುವಾರ ಯೋಗಾ ಭ್ಯಾಸ ಕಾರ್ಯಕ್ರಮ ನಡೆಯಿತು. ನವದೆಹಲಿಯ ಮುರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಯೋಗದ 100 ಮಂದಿ ಸೇರಿದಂತೆ ಒಟ್ಟು 1800 ಮಂದಿ ಯೋಗಪಟುಗಳು ಪೂರ್ವಭಾವಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಯೋಗ ಶಿಷ್ಟಾ ಚಾರದ ಪ್ರಕಾರ ಪ್ರಾರ್ಥನೆ, ಚಾಲನಾ ಕ್ರಿಯೆ, ಕುಳಿತು ಮಾಡುವ ಆಸನಗಳು, ನಿಂತು ಮಾಡುವ ಆಸನಗಳು,…

1 134 135 136 137 138 330
Translate »