ಮಂಗಳೂರು: ಮಂಗಳೂರು ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಹಂತಕ ದಂಪತಿಗಳನ್ನು ಬಂಧಿಸಿದ್ದಾರೆ. ಕರಾವಳಿ ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ (35) ಹತ್ಯೆ ಕೇಸ್ ಬೆನ್ನು ಹಿಡಿದಿದ್ದ 30 ಮಂದಿ ಪೊಲೀಸ್ ತಂಡ, ಆರೋಪಿಗಳಾದ ಜಾನ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್ ಎಂಬುವರನ್ನು ಬಂಧಿಸಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಕಮಿಷನರ್ ಸಂದೀಪ್ ಪಾಟೀಲ್, “ಹಣಕಾಸು ವ್ಯವಹಾರದ ವೈಷಮ್ಯವು ಕೊಲೆಗೆ ಕಾರಣವಾಗಿದೆ. ಪೊಲೀಸರು…
ಮುಂಗಾರು: ಜೂ.6ರಂದು ಕೇರಳ ಪ್ರವೇಶ
May 16, 2019ನವದೆಹಲಿ: ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂ.6ರಂದು ಕೇರಳ ಪ್ರವೇ ಶಿಸಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಜೂ.1ರಂದು ಕೇರಳ ಕರಾವಳಿ ಪ್ರವೇಶಿ ಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ ಈ ವರ್ಷ ಮುಂಗಾರು ಸ್ವಲ್ಪ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಡಮಾನ್ ಸಮುದ್ರದ ದಕ್ಷಿಣ ಭಾಗ, ನಿಕೋ ಬಾರ್ ದ್ವೀಪಗಳು ಮತ್ತು ಆದಕ್ಕೆ ತಾಗಿಕೊಂಡಿರುವ ಆಗ್ನೇಯ…
ಅಂಗವಿಕಲತೆ ಸಮಸ್ಯೆಗೆ ಪರಿಹಾರದ ಪ್ರಯತ್ನ ಸಮರ್ಪಕವಾಗಿಲ್ಲ
May 15, 2019ಮೈಸೂರು: ನಮ್ಮ ದೇಶದ ಕೋಟ್ಯಾಂತರ ಮಕ್ಕಳು ವಾಕ್ ಮತ್ತು ಶ್ರವಣ ದೋಷ ಸಮಸ್ಯೆ ಯಿಂದ ಬಳಲುತ್ತಿದ್ದಾರೆ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ಬಿ.ಸುರೇಶ್ ಅಭಿಪ್ರಾಯಪಟ್ಟರು. ಮೈಸೂರು ಜೆಎಸ್ಎಸ್ ಆಸ್ಪತ್ರೆ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಜೆಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಸಹಯೋಗ ದೊಂದಿಗೆ ಆಯೋಜಿಸಿದ್ದ 2018-19ನೇ ಸಾಲಿನ `ಪದವಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ಒಟ್ಟು ಒಂದು ಶತಕೋಟಿ ಮಂದಿ ಕಿವುಡು, ಮೂಕರಾಗಿದ್ದಾರೆ. ವಿಶ್ವದ…
ನಾಳೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ಜಾಥಾ
May 15, 2019ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಾಣಾಧಿಕಾರಿ ಕಚೇರಿಯು ಸಾರ್ವಜನಿ ಕರಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಮೇ16ರಂದು ಬೆಳಿಗ್ಗೆ 10 ಗಂಟೆಗೆ ಹಳೇ ಅಗ್ರಹಾರದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ರಾಷ್ಟ್ರೀಯ ಡೆಂಗ್ಯು ದಿನ ಪ್ರಯುಕ್ತ ಜಾಥಾವನ್ನು ಆಯೋಜಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಜಾಥಾವು ಹಳೇ ಅಗ್ರಹಾರ ಆಸ್ಪತ್ರೆ ಆವರಣದಿಂದ ಹೊರಟು ಗಾಯತ್ರಿ ಚಿತ್ರಮಂದಿರ 100 ಅಡಿ ರಸ್ತೆ-…
ಆರಂಭವಾಗಿದೆ ಮಳೆ: ರಸ್ತೆಯಲ್ಲೂ ನೀರು, ಸೊಳ್ಳೆಗಳ ಹಾವಳಿ
May 15, 2019ಮೈಸೂರು: ಮಳೆ ಗಾಲ ಬಂತೆಂದರೆ ಇಲ್ಲಿನ ನಿವಾಸಿಗಳಿಗೆ ನಿತ್ಯ ಜಾಗರಣೆ… ಮನೆಯೊಳಗೆ ಹಾಗೂ ರಸ್ತೆ ಇಕ್ಕೆಲಗಳಲ್ಲೆಲ್ಲಾ ಎಲ್ಲಿ ನೋಡಿದರೂ ಬರೀ ನಿಂತ ನೀರು… ಸೊಳ್ಳೆಗಳ ಹಾವಳಿ ಯೊಂದಿಗೆ ದುರ್ನಾತ…! ಹೌದು! ಮೈಸೂರಿನ 54ನೇ ವಾರ್ಡ್ ವ್ಯಾಪ್ತಿಯ ಶಾಪಗ್ರಸ್ತ ಕನಕಗಿರಿಯಲ್ಲಿ ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿ ಗಳು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ. ನಿನ್ನೆ ಸುರಿದ ಕೇವಲ ಅರ್ಧಗಂಟೆಯ ಮಳೆಗೆ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ನೀರೆಲ್ಲಾ ರಸ್ತೆಯಲ್ಲಿ ಹರಿದು ಕೆರೆಯಂತಾಗಿರುವುದೇ ನಿದರ್ಶನವಾಗಿದೆ. ನಗರದ ತಗ್ಗು ಪ್ರದೇಶದಲ್ಲಿರುವ ಕನಕಗಿರಿಯಲ್ಲಿ…
ಹೋಟೆಲ್ ಉದ್ಯಮ ಸಿಬ್ಬಂದಿ ಕೌಶಲವೃದ್ಧಿಗೆ ಎಫ್ಸಿಐ ಪಣ
May 15, 2019ಮೈಸೂರು: ಬಾಣಸಿಗರು ಸೇರಿದಂತೆ ಹೋಟೆಲ್ ಉದ್ಯಮದ ಸಿಬ್ಬಂದಿಗಳಿಗೆ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಯುಕ್ತಾಶ್ರಯದಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ರಾಜ್ಯದ ಏಕೈಕ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ಗೆ ಬೇಡಿಕೆ ಹೆಚ್ಚಾಗಿದ್ದು, ನಿರುದ್ಯೋಗಿ ಯುವಕ-ಯವತಿಯರು ವಿವಿಧ ಕೋರ್ಸ್ಗೆ ದಾಖಲಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವ ಹಾದಿ ಕಂಡುಕೊಳ್ಳುತ್ತಿದ್ದಾರೆ. ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಕನ್ನಡ ಕಾರಂಜಿ ಕಟ್ಟಡದಲ್ಲಿ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್(ಎಫ್ಸಿಐ) ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್…
ಪುಲ್ವಾಮ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ
May 15, 2019ಮೈಸೂರು: ಪುಲ್ವಾಮದಲ್ಲಿ ಸೈನಿಕರ ಮೇಲಿನ ದಾಳಿ, ಶ್ರೀಲಂಕಾದಲ್ಲಿ ಚರ್ಚ್ ಹಾಗೂ ನ್ಯೂಜಿ ಲೆಂಡ್ನಲ್ಲಿ ಮಸೀದಿ ಮೇಲಿನ ದಾಳಿ ಗುಪ್ತಚರ ಇಲಾಖೆ ವೈಫಲ್ಯವನ್ನು ಎತ್ತಿ ಹಿಡಿದಿವೆ. ಮಾಹಿತಿಯನ್ನು ಮೊದಲು ನೀಡಿ ಶಹಬ್ಬಾಸ್ಗಿರಿ ಪಡೆಯಬೇಕೆಂಬ ಹಂಬಲ ಗುಪ್ತದಳದಲ್ಲಿರುವ ಕೆಲವರಲ್ಲಿರುವ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೆಯಾಗದೆ ಅನಾಹುತಕ್ಕೆ ಎಡೆ ಮಾಡಿಕೊಡುತ್ತವೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ವಿಷಾದಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಡಾ. ಡಿ.ವಿ.ಗುರು ಪ್ರಸಾದ್ ಅವರ `ಗೂಢಚರ್ಯೆಯ ಆ ದಿನಗಳು’ ಕೃತಿ ಕುರಿತು ಸಂವಾದ…
ಮೇ 24 ರಿಂದ ಮೈಸೂರಲ್ಲಿ ಮಾವು, ಹಲಸು ಮೇಳ
May 15, 2019ಮೈಸೂರು: `ಹಸಿದು ಹಲಸು ತಿನ್ನು… ಉಂಡು ಮಾವು ತಿನ್ನು…’ ಎಂಬ ಗಾದೆ ಮಾತಿದೆ. ಇದನ್ನು ಕೇಳಿದರೆ ಸಾಕು ಈ ಹಣ್ಣುಗಳ ಮಹತ್ವ ಏನೆಂಬುದು ಅರಿವಿಗೆ ಬಾರದಿರದು. ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲಸಿನ ಘಮಲು ಕೂಡ ಸೂಸತೊಡಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರ ರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಅನೇಕ ವರ್ಷಗಳಿಂದ ಮಾವು ಮತ್ತು ಹಲಸು…
ಮೌಲ್ಯಮಾಪಕರ ಎಡವಟ್ಟು…ಆಕೆಯ ಅತೀವ ವಿಶ್ವಾಸ ಗಣಿತದಲ್ಲಿ 100ಕ್ಕೆ 100 ಅಂಕ ತಂದು ಕೊಟ್ಟಿತು!
May 15, 2019ಮೈಸೂರು: ಉತ್ತರ ಪತ್ರಿಕೆ ಫೋಟೋ ಕಾಪಿಗೆ ಅರ್ಜಿ ಹಾಕಿದ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯ ಗಣಿತ ವಿಷಯ ದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚುವರಿಯಾಗಿ 30 ಅಂಕ ಬಂದಿದೆ. ಮೈಸೂರಿನ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ದೇವ ಸ್ಥಾನ ಬಳಿಯ ನಿವಾಸಿ ವಿ.ಮೋಹನ್ ಅವರ ಪುತ್ರಿ ಎಂ.ಮೇಘನಾ ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿನಿ. ಫಲಿತಾಂಶ ಪ್ರಕಟವಾದಾಗ ಸಂಸ್ಕøತದಲ್ಲಿ 125, ಇಂಗ್ಲೀಷ್ನಲ್ಲಿ 98, ಕನ್ನಡದಲ್ಲಿ 99, ವಿಜ್ಞಾನದಲ್ಲಿ 97, ಸಮಾಜ ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತಾದರೂ, ಗಣಿತ ವಿಷಯದಲ್ಲಿ ಕೇವಲ 70 ಅಂಕ…
ಸರ್ಕಾರದ ನಿರ್ಧಾರಕ್ಕೆ ಕಾದಿರುವ ಮೈಸೂರು ಜಿಲ್ಲಾಡಳಿತ
May 15, 2019ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ 120 ವರ್ಷಗಳ ಹಳೆಯದಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಪಾರಂ ಪರಿಕ ಕಟ್ಟಡಗಳ ಅಳಿವು-ಉಳಿವು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ಶಿಥಿಲಾವಸ್ಥೆಯಲ್ಲಿರುವ ಈ ಎರಡೂ ಕಟ್ಟಡಗಳನ್ನು ಯಥಾಸ್ಥಿತಿ ಕಾಯ್ದು ಕೊಂಡು ನವೀಕರಣ ಮಾಡಿ ಸಂರಕ್ಷಿಸಿ ಕೊಳ್ಳಬೇಕೋ ಅಥವಾ ಕೆಡವಿ ಅದೇ ಪಾರಂಪರಿಕ ಮಾದರಿಯಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬುದರ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ. ಪಾರಂಪರಿಕ ನಗರವಾದ ಮೈಸೂರಲ್ಲಿ ಹಳೆಯ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳ ಮೇಲೆ ಜನರ ಭಾವನಾತ್ಮಕ ಸಂಬಂಧವಿರುವುದೇ…