ಮೈಸೂರು: ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ಹಾಗೂ ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಜಂಟಿ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆ ಮಕ್ಕಳು ಮಂಗಳವಾರ ಮೈಸೂರಿನಲ್ಲಿ ಮಕ್ಕಳ ಹಕ್ಕುಗಳು ಹಾಗೂ ಬಾಲ್ಯ ವಿವಾಹ ತಡೆಗಟ್ಟುವಿಕೆ ಕುರಿತು ಜಾಥಾ ನಡೆಸಿ, ಜಾಗೃತಿ ಮೂಡಿಸಿದರು. ಬೇಸಿಗೆ ಶಿಬಿರದ ಮುಕ್ತಾಯದ ಅಂಗವಾಗಿ ನಡೆದ ಈ ಜಾಗೃತಿ ಜಾಥಾದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದರು. `ಮಕ್ಕಳನ್ನು ಪಕ್ಷಿಯಂತೆ ಹಾರಲು ಬಿಡಿ…’, `ಹೆಣ್ಣೊಂದು…
ಆಪರೇಷನ್ ಫಾಸ್ಟ್ ಟ್ರ್ಯಾಕ್ನಲ್ಲಿ ಮಹಿಳಾ ಪೊಲೀಸರ ನಿಗಾ
May 15, 2019ಮೈಸೂರು: ಸರಗಳ್ಳರನ್ನು ಪತ್ತೆ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೈಸೂರು ನಗರದಲ್ಲಿ ಆರಂಭಿಸಿರುವ `ಆಪರೇಷನ್ ಫಾಸ್ಟ್ ಟ್ರ್ಯಾಕ್’ನಲ್ಲಿ ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಮಹಿಳೆಯರೊಂದಿಗೆ ಮಾತನಾಡಿ ಅರಿವು ಮೂಡಿಸಲು ಮಹಿಳಾ ಪೊಲೀಸರಿಗೆ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ತಿಳಿಸಿದ್ದಾರೆ. ಠಾಣೆಯ ದಿನ ನಿತ್ಯದ ಕೆಲಸಗಳ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಆಪರೇಷನ್ ಫಾಸ್ಟ್ ಟ್ರ್ಯಾಕ್ ಕಾರ್ಯಾ ಚರಣೆಯಲ್ಲೂ ಪುರುಷ ಸಿಬ್ಬಂದಿ ತೊಡಗಿಸಿಕೊಂಡರೆ…
ರೈಲ್ವೆ ನಿಲ್ದಾಣದ ಪಾರಂಪರಿಕತೆಗೆ ಧಕ್ಕೆಯಾಗದಂತೆ ಪ್ರಯಾಣಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ
May 15, 2019ಮೈಸೂರು:ರೈಲ್ವೆ ನಿಲ್ದಾಣದ ಪಾರಂಪರಿಕತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ, ಪ್ರಯಾಣಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮೂಲಸೌಕರ್ಯ ಒದಗಿಸ ಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಸ್ಪಷ್ಟಪಡಿಸಿದ್ದಾರೆ. ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಿ ನಲ್ಲಿ ರೈಲು ನಿಲ್ದಾಣದ ಪಾರಂಪಕರಿಕತೆಗೆ ಹಾನಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಭಾ ಗೀಯ ರೈಲ್ವೆ ಪ್ರಬಂಧಕರ ಕಚೇರಿ ಸಭಾಂ ಗಣದಲ್ಲಿ…
ಮೈವಿವಿ ವೆಬ್ಸೈಟ್ ಹ್ಯಾಕ್ ಯತ್ನ!
May 15, 2019ತಕ್ಷಣ ಎಚ್ಚೆತ್ತು ಮಾಹಿತಿ ಸೋರಿಕೆಯಾಗದಂತೆ ತಡೆದ ಸಿಬ್ಬಂದಿ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವೆಬ್ಸೈಟ್ ಹ್ಯಾಕ್ ಮಾಡುವ ಯತ್ನ ನಡೆದಿದ್ದು, ಅಲರ್ಟ್ ಕಾಲ್ ಬರುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಕಂಪ್ಯೂ ಟರ್ ಸೈನ್ಸ್ ವಿಭಾಗದ ಸಿಬ್ಬಂದಿ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ವಿಭಾಗದ ವೆಬ್ಸೈಟ್ ಹ್ಯಾಕ್ ಮಾಡಲು ದುಷ್ಕರ್ಮಿಗಳು ಮಂಗಳವಾರ ಮಧ್ಯಾಹ್ನ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಕೆಲವು ಪೇಜ್ಗಳನ್ನು ಈ ವೆಬ್ಸೈಟ್ಗೆ ಡಂಪ್ ಮಾಡಲು ಪ್ರಯತ್ನಿಸಿದ್ದಾರೆ. ಕೂಡಲೇ ಸುರಕ್ಷತಾ ಸಾಧನವಾದ ಫೈರ್ವಾಲ್ನಿಂದ ಅಲರ್ಟ್ ಮೆಸೇಜ್ ರವಾನೆಯಾಗಿದೆ….
ಪಾಲಿಕೆಯಿಂದ ಒಣಗಿದ ಮರದ ರೆಂಬೆ ತೆರವು ಕಾರ್ಯಾಚರಣೆ
May 15, 2019ಮೈಸೂರು: ಭಾರೀ ಗಾಳಿ ಸಹಿತ ಮಳೆಗಾಲ ಆರಂಭವಾಗಿರುವುದರಿಂದ ಮೈಸೂರು ನಗರದಲ್ಲಿ ಒಣಗಿದ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರದ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದೆ. ರೆಂಬೆಗಳನ್ನು ಕತ್ತರಿಸುವ ಉಪ ಕರಣ ಹಾಗೂ ಟ್ರೆಕ್ಗಳನ್ನು ಬಳಸಿ ರೈಲ್ವೆ ಸ್ಟೇಷನ್ ಸರ್ಕಲ್ನಿಂದ ಆಯು ರ್ವೇದ ಕಾಲೇಜು ಸರ್ಕಲ್ವರೆಗೆ ಇಂದು ಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಒಣಗಿದ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸಿ ದರು. ಗಾಳಿ, ಮಳೆ, ಸಿಡಿಲಿಗೆ ಒಣಗಿದ ರೆಂಬೆಗಳು ವಾಹನಗಳು, ಜನರ ಮೇಲೆ ಮುರಿದು ಬಿದ್ದು ಅಪಾಯ…
ಜೂನ್ 2ರಿಂದ ಬಂಡೀಪುರ ಸಫಾರಿ ಸೇವೆ ಸ್ಥಳಾಂತರ
May 15, 2019ಮೈಸೂರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗ ಸೂಚಿಗಳನ್ವಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ ಹಾಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮದ ಸಫಾರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಜಿ.ಎಸ್ ಬೆಟ್ಟ ವಲಯದ ಮೇಲುಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 181ರ ಪಕ್ಕದ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ಗೆ ಜೂನ್ 2ರಿಂದ ಕಾರ್ಯರೂಪಕ್ಕೆ ಬರುವಂತೆ ಸ್ಥಳಾಂತರ ಮಾಡಲಾಗುವುದು. ಸಫಾರಿ ಕೈಗೊಳ್ಳಲು ಇಚ್ಛಿಸುವವರು ಹಾಗೂ ಸಾರ್ವಜನಿಕರು ಜೂನ್ 2 ರಿಂದ ಸ್ಥಳಾಂತರಗೊಂಡ ಸ್ಥಳದಲ್ಲಿ ಸಫಾರಿ ಸೇವೆಗಳನ್ನು ಉಪಯೋಗಿಸಿ ಕೊಳ್ಳುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ…
ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ದಂಪತಿಗೆ ಅಭಿನಂದನೆ
May 15, 2019ಮೈಸೂರು: ತೋಂಟದಾರ್ಯ ಅಭಿನಂದನಾ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಹಿರಿಯ ವಕೀಲ ತೋಂಟದಾರ್ಯ ಅವರನ್ನು ಮಂಗಳ ವಾರ ಅಭಿನಂದಿಸಲಾಯಿತು. ಮೈಸೂರಿನ ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಶ್ರೀ ಜ್ಞಾನಯೋಗಾ ಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿ ಗಳು ಹಾಗೂ ಅಭಿಮಾನಿಗಳ ಉಪಸ್ಥಿತಿ ಯಲ್ಲಿ ಪತ್ನಿ ಡಾ.ಕಮಲಾಕುಮಾರಿ ಅವ ರೊಂದಿಗೆ ತೋಂಟದಾರ್ಯ ಅವರನ್ನು ಆತ್ಮೀಯವಾಗಿ…
ಅಬಕಾರಿ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ 10 ಲಕ್ಷ ವಂಚನೆ
May 15, 2019ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಹೆಸರೇಳಿಕೊಂಡು ನಿವೃತ್ತ ಪೊಲೀಸ್ ಅಧಿಕಾರಿ ಯೊಬ್ಬರಿಂದ 10 ಲಕ್ಷ ರೂ. ಪಡೆದು, ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೆಪಿಎಸ್ಸಿ ಅಧ್ಯಕ್ಷ ಶ್ಯಾಂಭಟ್ ಅವರು ಪರಿಚಿತ ರಾಗಿದ್ದು, ನಿಮ್ಮ ಮಗನಿಗೆ ಅಬಕಾರಿ ಇನ್ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ, ಸಿಎಆರ್ನ ನಿವೃತ್ತ ಆರ್ಎಸ್ಐ ಸಿದ್ದಯ್ಯ ಅವರನ್ನು ವಂಚಿಸ ಲಾಗಿದೆ. ಈ ಸಂಬಂಧ ಧನರಾಜ್ ಹಾಗೂ ಪ್ರದೀಪ್ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಪುತ್ರ ನಾಗೇಂದ್ರನಿಗೆ ಅಬಕಾರಿ ಇನ್ಸ್ಪೆಕ್ಟರ್ ಹುದ್ದೆ…
ಕೈಗಾರಿಕಾ ನೀತಿ ಕರಡು ಸಿದ್ಧತೆ: ನಾಳೆ ಸಂವಾದ
May 15, 2019ಮೈಸೂರು,ಮೇ 14- ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ಕೈಗಾರಿಕಾ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರವನ್ನು ಮೇ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು, ಮೈಸೂರು ವಿಭಾಗ ಮಟ್ಟದ ಪ್ರಸಿದ್ಧ ರಫ್ತುದಾರರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು…
ಮೈತ್ರಿಗೆ ಮುಳುವಾಗುತ್ತಿದೆ ‘ಚಮಚಾಗಿರಿ’!
May 14, 2019ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಅವರ ನಡುವಿನ ವಾಕ್ಸ ಮರ ಮುಂದುವರೆದಿದ್ದು, ಇದನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ವಿಶ್ವನಾಥ್ ಪದೇ ಪದೆ ತಮ್ಮ ವಿರುದ್ಧ ಹರಿಹಾಯು ತ್ತಿರುವುದಕ್ಕೆ ಕೆಂಡಾಮಂಡಲವಾಗಿರುವ ಸಿದ್ದರಾಮಯ್ಯ, ಕಿಡಿಗೇಡಿತನದ ಹೇಳಿಕೆಗಳಿಗೆ ಉತ್ತರ ನೀಡಲು ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಟೀಕೆಗಳಿಗೆ ಟ್ವೀಟ್ ಮೂಲಕ ಉತ್ತರಿಸಿ ರುವ ಸಿದ್ದರಾಮಯ್ಯ, ‘ಅವರ ಬೇಜವಾಬ್ದಾರಿ ಹೇಳಿಕೆಗಳಿಗೆ ಸದ್ಯಕ್ಕೆ ನನ್ನಿಂದ ಉತ್ತರ…