ಮೈಸೂರು: ಎರಡು ತಿಂಗಳ ಹಿಂದಷ್ಟೇ ಹೋಂಡಾ ಆಕ್ಟೀವಾದ ಡಿಕ್ಕಿಯಲ್ಲಿ 2.4 ಲಕ್ಷ ರೂ ಎಗರಿಸಿದ್ದ ಸ್ಥಳದಲ್ಲೇ ಮಾರುತಿ ಸ್ವಿಫ್ಟ್ ಕಾರಿನ ಕಿಟಕಿ ಗಾಜು ಒಡೆದು 2 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ಎಸ್ಬಿಐ ಎದುರು ಇಂದು ಮಧ್ಯಾಹ್ನ ನಡೆದಿದೆ. ಮೈಸೂರು ತಾಲೂಕು, ಮನುಗನಹಳ್ಳಿ ನಿವಾಸಿಯಾದ ಸೌದೆ ವ್ಯಾಪಾರಿ ರಾಜು ಹಣ ಕಳೆದುಕೊಂಡವರು. ಸ್ನೇಹಿತರಿಗೆ ಹಣ ಕೊಡುವ ಸಲುವಾಗಿ ತಮ್ಮ ಮಾರುತಿ ಸ್ವಿಫ್ಟ್ (ಕೆಎ09, ಎಂಬಿ5747) ಕಾರಿನಲ್ಲಿ ವಿಜಯನಗರ…
ಮೈಸೂರಲ್ಲಿ ರೈತರ ಪ್ರತಿಭಟನೆ
January 29, 2019ಮೈಸೂರು: ಭತ್ತ ಖರೀದಿಯ ವಿಳಂಬದಿಂದ ಉಂಟಾದ ನಷ್ಟ ಭರಿಸಲು ಕ್ವಿಂಟಾಲ್ ಭತ್ತಕ್ಕೆ 500 ರೂ. ಪರಿಹಾರ ನೀಡಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಾರಳ್ಳಿ ಮಂಜು ನೇತೃತ್ವ ದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಎಪಿಎಂಸಿಗೆ ಭತ್ತ ಖರೀದಿ ಜವಾಬ್ದಾರಿ ವಹಿಸಬೇಕು, ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಬೇಕು, ಕಬ್ಬಿನ ಕಟಾವು ಮತ್ತು…
ಮೈಸೂರಲ್ಲಿ ಇಂದಿನಿಂದ `ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ’
January 29, 2019ಮೈಸೂರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ ವತಿ ಯಿಂದ ಟೀಚರ್ ಮಾಸಪತ್ರಿಕೆಯ 16ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ ಜ.29 ಮತ್ತು 30ರಂದು ಮೈಸೂರಿನ ಪುರಭವನದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 600ಕ್ಕೂ ಹೆಚ್ಚಿನ ಶಿಕ್ಷಕರು ಹಾಗೂ ಶಿಕ್ಷಣ ಆಸಕ್ತರು ಭಾಗವಹಿಸಲಿದ್ದಾರೆ. ಎರಡು ದಿನ ಗಳ ಶೈಕ್ಷಣಿಕ ಹಬ್ಬದಲ್ಲಿ ಪ್ರಾಥಮಿಕ ಶಿಕ್ಷಣ ದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿಚಾರಗಳನ್ನು ಕುರಿತು ಏಳು ವಿಚಾರ ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ಆರ್ಟಿಐ- ಪ್ರಸ್ತುತ ಸ್ಥಿತಿಗತಿಗಳು,…
ಮೈಸೂರು ಜಿಲ್ಲೆಯಲ್ಲಿ ಮಂಗನ ಖಾಯಿಲೆ ದೃಢಪಟ್ಟಿಲ್ಲ
January 29, 2019ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಂಗನ ಖಾಯಿಲೆ ಪ್ರಕರಣ ಗಳು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಕೋರ್ಟ್ ಹಾಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೆಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಹಳ್ಳಿ ಹಾಡಿಯಲ್ಲಿ ಜ್ವರ, ರಕ್ತದ ಒತ್ತಡ, ಕಿಡ್ನಿ ತೊಂದರೆಯಿಂದ ಬಳಲಿ ಇಬ್ಬರು ಸಾವನ್ನಪ್ಪಿದ್ದರಿಂದ ಅಲ್ಲಿನ ಜನರು ಮಂಗನ ಖಾಯಿಲೆ ಇರಬಹುದೆಂದು ಭಾವಿಸಿ ಆತಂಕಗೊಂಡಿದ್ದರು ಎಂದರು. ವಿಷಯ ತಿಳಿದ ತಕ್ಷಣ ಆರೋಗ್ಯ ಇಲಾಖೆ, ಅರಣ್ಯ, ಪಶುಪಾಲನಾ ಇಲಾಖೆ ಅಧಿಕಾರಿ ಗಳೊಂದಿಗೆ ತಿಮ್ಮನಹೊಸಹಳ್ಳಿ ಹಾಡಿಗೆ…
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ
January 29, 2019ಮೈಸೂರು: ಮೈಸೂ ರಿನ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗೆ ಇಂದು ಚಾಲನೆ ದೊರೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಂಘದ ಬೆಂಗಳೂರು ಹಾಗೂ ಮೈಸೂರು ಶಾಖೆ ಮತ್ತು ಮೈಸೂರು ಜಿಲ್ಲಾಡಳಿತದ ಸಹಯೋಗ ದಲ್ಲಿ ಇಂದಿನಿಂದ ಜ.30ರವರೆಗೆ ನಡೆಯ ಲಿರುವ ಸ್ಪರ್ಧೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಗಣ್ಯರೊಡಗೂಡಿ ಬಲೂನ್ಗಳ ಗುಚ್ಛವನ್ನು ಹಾರಿ ಬಿಡುವ ಮೂಲಕ ಚಾಲನೆ…
ಡಾ.ಬಿ.ರಮಣರಾವ್ ಅವರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಪ್ರದಾನ
January 29, 2019ಮೈಸೂರು: ಬೆಂಗಳೂರಿನ ಟಿ.ಬೇಗೂರು ಗ್ರಾಮೀಣ ಔಷಧಾಲಯದ ಡಾ.ಬಿ.ರಮಣರಾವ್ ಅವರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ನೀಡಿ, ಗೌರವಿಸಿದರು. ಜೆಎಸ್ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕ, ಮೈಸೂರು ಕದಳಿ ಮಹಿಳಾ ವೇದಿಕೆ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ `ಡಾ.ಸಿ.ಎನ್. ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ’ಯನ್ನು ಪ್ರಧಾನ ಮಾಡಿದರು….
ಸಾಮಾಜಿಕ ಜಾಲತಾಣಗಳ ಬಳಕೆಯ ಅರಿವಿಲ್ಲದೆ ಸಮಯ ವ್ಯಯವಾಗುತ್ತಿದೆ
January 29, 2019ಮೈಸೂರು: ‘ಮಾನವನ ಬದುಕಿ ನಲ್ಲಿ ಸಮಯ ಅತ್ಯಂತ ಮಹತ್ವವಾದುದು. ಆದರೆ ಇಂದು ಯುವಜನತೆ ಸಮಯ ವನ್ನು ವ್ಯರ್ಥ ಮಾಡುತ್ತಿದ್ದಾರೆ. ಅದರ ಲ್ಲಿಯೂ ಸಾಮಾಜಿಕ ಜಾಲತಾಣಗಳ ಬಳ ಕೆಯ ಅರಿವಿಲ್ಲದೆ ಅವುಗಳಿಗೆ ದಾಸರಾಗಿ ಸಮಯ ವ್ಯರ್ಥವಾಗುತ್ತಿದೆ’ ಎಂದು ಸಾಹಿತಿ ಹಾಗೂ ಪತ್ರಕರ್ತರೂ ಆದ ಡಾ.ಗಣೇಶ ಅಮೀನಗಡ ಅಭಿಪ್ರಾಯಪಟ್ಟರು. ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಜಾಣ-ಜಾಣೆಯರ ಬಳಗವು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಪ್ರಬಂಧ…
ಮನಸೂರೆಗೊಂಡ ಶಾಸ್ತ್ರೀಯ ನೃತ್ಯೋತ್ಸವ
January 29, 2019ಮೈಸೂರು: ನಗರದ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಬಿ.ನಾಗ ರಾಜ್ ನೇತೃತ್ವದಲ್ಲಿ ಇತ್ತೀಚೆಗೆ 32ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ನಡೆಯಿತು. ಅಂದು ಸಂಜೆ ಎರಡು ದ್ವಂದ್ವ ಹಾಗೂ ಎರಡು ಏಕವ್ಯಕ್ತಿ ಪ್ರಕಾರದಲ್ಲಿ ಭರತನಾಟ್ಯ ಹಾಗೂ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದ ರ್ಶನ ಪ್ರದರ್ಶಿತಗೊಂಡವು. ಮೊದಲಿಗೆ ವಿದ್ಯಾ ವಿ.ತಾಯೂರ್ರವ ರಿಂದ ಶೃಂಗಾರ ರಸದಲ್ಲಿ ದೇವಿ ಪಾರ್ವತಿಯ ನೃತ್ಯ ನಡೆಯಿತು. ರಾಮಾಯಣದ ‘ರಾಮನಾಟಕಮ್’ ಎಂಬ ನೃತ್ಯಾಭಿನಯ ದೊಂದಿಗೆ ತಮ್ಮ ಪ್ರದರ್ಶನವನ್ನು ಪೂರ್ಣಗೊಳಿಸಿದರು. ನಂತರ ಹಿರಿಯ ಕಲಾವಿದೆ ಕಾಶ್ಮೀರ ತ್ರಿವೇದಿಯವರು ತಮ್ಮ ಶಿಷ್ಯೆ ಸ್ವಾತಿ…
ಡಾ.ಧರಣಿದೇವಿ ಮಾಲಗತ್ತಿಯವರು ಎರಡು ಕೃತಿಗಳ ಬಿಡುಗಡೆ
January 29, 2019ಮೈಸೂರು: ಐಪಿಎಸ್ ಅಧಿಕಾರಿ ಹಾಗೂ ಕವಯತ್ರಿ ಡಾ.ಧರಣಿ ದೇವಿ ಮಾಲಗತ್ತಿ ಅವರ `ಧರಣಿ’ ಚುಟುಕು ಕವಿತೆಗಳು ಮತ್ತು `ಭಾಗವತ ಭಾವಗೀತೆ’ ಎರಡು ಕೃತಿಗಳನ್ನು ಸೋಮವಾರ ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್ಚಂದ್ರ ಲೋಕಾರ್ಪಣೆ ಮಾಡಿದರು. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ವೈದ್ಯ ವಾರ್ತಾ ಪ್ರಕಾಶನ, ಬೆಂಗಳೂರಿನ ಶ್ರೀಮಾತಾ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಎರಡು ಕೃತಿಗಳನ್ನು ಬಿಡು ಗಡೆ ಮಾಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಒತ್ತಡದ ಕೆಲಸದ ಮಧ್ಯೆಯೂ ಸಾಹಿತ್ಯದ…
ಮೈಸೂರು ತಾಪಂ ಆಡಳಿತಾರೂಢ ಸದಸ್ಯರ ರಾಜಕೀಯ ಜಿದ್ದಾಜಿದ್ದಿ
January 29, 2019ಮೈಸೂರು: ಕೆಲ ತಿಂಗಳಿಂದ ಮೈಸೂರು ತಾಲೂಕು ಪಂಚಾ ಯಿತಿ ಸದಸ್ಯರ ನಡುವಿನ ರಾಜಕೀಯ ಜಿದ್ದಾಜಿದ್ದಿಯಿಂದಾಗಿ ತಾಲೂಕಿನ ಅಭಿ ವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅಧಿಕಾರಕ್ಕಾಗಿ ಹಠಕ್ಕೆ ಬಿದ್ದ ಅಧ್ಯಕ್ಷ, ಉಪಾ ಧ್ಯಕ್ಷರ ಜಿದ್ದಾಜಿದ್ದಿಯಿಂದಾಗಿ ವಿಶೇಷ ಸಭೆ ಗಳು ಪ್ರತಿ ಬಾರಿಯೂ ಮುಂದೂಡಲ್ಪಟ್ಟು, ತಾಲೂಕಿನ ಜನತೆ ಅಭಿವೃದ್ಧಿ ಕಾಮಗಾರಿ ಗಳಿಲ್ಲದೆ ಹೈರಾಣಾಗುವಂತೆ ಮಾಡಿದೆ. ಇಂದೂ ಸಹ ಅದೇ ಆಯಿತು. 2018 -19ನೇ ಸಾಲಿಗೆ ಸಂಬಂಧಿಸಿದಂತೆ 2 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿ ಸಿದಂತೆ ಕರೆದಿದ್ದ ವಿಶೇಷ ಸಭೆ ಸದಸ್ಯರ…