ಮೈಸೂರು: ಗುಡಿಸಲು ವಾಸಿಗಳ ಹೆಸರಲ್ಲಿ ಮನೆ ನಿರ್ಮಿಸಿ, ಗುಡಿಸಲು/ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅವುಗಳನ್ನು ವಿತರಿಸಿಲ್ಲ ಎಂದು ಆರೋ ಪಿಸಿ ಮೇದರ ಬ್ಲಾಕ್ ಮೈಸೂರು ಸಾ ಮಿಲ್ ಮುಂಭಾ ಗದ ಕೊಳಚೆ ಪ್ರದೇಶದ ನಿವಾಸಿಗಳು ಗುರುವಾರ ಮೈಸೂ ರಿನ ಹೈವೇ ವೃತ್ತದ ಬಳಿಯಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಮೊದಲ ಬಾರಿ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಮನೆ ನೀಡುವುದಾಗಿ ಭರವಸೆ…
ನಾಳೆ ಮುಡಾ ಬಜೆಟ್ ಮಂಡನೆ
March 1, 2019ಮೈಸೂರು: ಮಾರ್ಚ್ 2ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 2019-20ನೇ ಸಾಲಿನ ಬಜೆಟ್ ಮಂಡನೆ ಯಾಗಲಿದೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಮುಡಾ ಕಚೇರಿ ಸಭಾಂ ಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಆಯುಕ್ತ ಪಿ.ಎಸ್.ಕಾಂತರಾಜು ಅವರು 2019-20ನೇ ಸಾಲಿನ ಆಯವ್ಯಯ ಮಂಡನೆ ಮಾಡುವರು. ಮುಡಾ ಸದಸ್ಯರಾದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ತನ್ವೀರ್ಸೇಠ್, ಎಲ್.ನಾಗೇಂದ್ರ, ರವೀಂದ್ರ ಶ್ರೀಕಂಠಯ್ಯ, ಎಸ್.ಎ.ರಾಮದಾಸ, ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂದೇಶನಾಗರಾಜ್,…
ನಾಳೆ ಶ್ರುತಿ ವಿಶ್ವನಾಥ್ರ `ವಿಠ್ಠು ಮಾeóÁ’ ವಾರಕರಿ ಅಭಂಗ್ ಹಾಡುಗಳ ಪ್ರಸ್ತುತಿ
March 1, 2019ಮೈಸೂರು: ಗಾನಭಾರತೀ ಸಂಸ್ಥೆಯು ಇಂಡಿಯನ್ ಫೌಂಡೇ ಷನ್ ಫಾರ್ ಆಟ್ರ್ಸ್ ಸಹಯೋಗದಲ್ಲಿ ಮೈಸೂರಿನಲ್ಲಿ ಮಾ.2ರಂದು ಸಂಜೆ 6 ಗಂಟೆಗೆ ಪ್ರಸಿದ್ಧ ಮರಾಠಿ ವಾರಕರಿ ಕವಯತ್ರಿಯರ ಹಾಡುಗಳನ್ನು ಆಧರಿಸಿದ `ವಿಠ್ಠು ಮಾeóÁ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಖ್ಯಾತ ಗಾಯಕಿ ಶ್ರುತಿ ವಿಶ್ವನಾಥ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಅವ ರೊಂದಿಗೆ ಗಿಟಾರ್ನಲ್ಲಿ ಹಿತೇಶ್ ದುಟಿಯಾ, ತಬಲಾದಲ್ಲಿ ವಿನಾಯಕ್ ನೇಟ್ಕೆ ಸಾಥ್ ನೀಡಲಿದ್ದಾರೆ. ಗಾನಭಾರತಿಯ ರಮಾಬಾಯಿ ಗೋವಿಂದರಾವ್ ಸಭಾಂಗಣದಲ್ಲಿ ಕಾರ್ಯ ಕ್ರಮ ನಡೆಯಲಿದೆ. ಶ್ರುತಿ ವಿಶ್ವನಾಥ್ ಅವರು ಸಂಗೀತಗಾರ್ತಿ ಹಾಗೂ ಸಂಯೋಜಕಿ. 20…
ಬೆಂಗಳೂರು ಏರ್ಶೋ ವೇಳೆ ಅಗ್ನಿಗಾಹುತಿಯಾದ ಕಾರುಗಳ ಮಾಹಿತಿ ಸಂಗ್ರಹಕ್ಕೆ ಸಹಾಯ ಕೇಂದ್ರ
March 1, 2019ಮೈಸೂರು: ಇತ್ತೀಚೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ಪ ಡಿಸಿದ್ದ ಏರ್ಶೋ ವೇಳೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾದ ಸಂಬಂಧ ವಾಹನಗಳ ಮಾಲೀಕರ ಅನುಕೂಲಕ್ಕೋಸ್ಕರ ವಾಹನ ನೋಂದಣಿ ಮತ್ತು ಚಾಲನಾ ಪತ್ರಗಳ ವಿವರಗಳನ್ನು ಪಡೆದು, ಮುಂದಿನ ಕ್ರಮಕ್ಕಾಗಿ ಸಾರಿಗೆ ಇಲಾಖೆ ವತಿಯಿಂದ ಯಲಹಂಕದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಲಾಗಿದೆ. ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, 29729909, ಮೊ. 9449864050 ಮೂಲಕ ಸಂಬಂಧಪಟ್ಟವರು ಉಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಸಹಾಯ…
ಪೊಲೀಸ್ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ
March 1, 2019ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶ ಕರ ಆಯ್ಕೆ ಯಾಗಿದೆ. ಸಾಮಾನ್ಯ ಕ್ಷೇತ್ರದಿಂದ ಕಾಳಪ್ಪ ನಾಯಕ, ಜಿ.ಎನ್.ಪ್ರದೀಪ್, ಎಂ.ಜಿ.ರಘು, ಮರಪ್ಪ, ಧನಂಜಯ, ಪ್ರಭುರಾಜೇ ಅರಸ್, ಬಿ.ಆರ್.ರಘು, ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಛಾಯಾಗ್ರಾಹಕ ಎಂ.ಮಹೇಶ್, ಹಿಂದುಳಿದ ವರ್ಗ(ಎ) ಕ್ಷೇತ್ರದಿಂದ ಎನ್.ಪ್ರಶಾಂತ್, ಕೆ.ಮಹೇಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ರಾಜಕುಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಜ, ಮಹಿಳಾ ಮೀಸಲು ಕ್ಷೇತ್ರದಿಂದ ವನಜಾಕ್ಷಿ ಹಾಗೂ ವಿದ್ಯಾರಾಣಿ ಕಾವೇರಪ್ಪ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ…
ಪಾಕ್ ಪ್ರತಿ ದಾಳಿಗೆ ಭಾರತ ದಿಟ್ಟ ಉತ್ತರ
February 28, 2019ನವದೆಹಲಿ: ಭಾರತದ ವಾಯುಪಡೆ ಮಂಗಳವಾರ ಮುಂಜಾನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕ್ ವಾಯುಪಡೆ ಇಂದು ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಮೇಲೆ ಪ್ರತಿದಾಳಿಗೆ ಮುಂದಾಯಿತು. ಆದರೆ ಭಾರತದ ವಾಯುಪಡೆ ಅದನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಬುಧವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಪಾಕಿಸ್ತಾನದ ಎಫ್-16 ಮೂರು ಯುದ್ಧ ವಿಮಾನಗಳು ರಜೌರಿ ಸೆಕ್ಟರ್ ಮೂಲಕ ಭಾರತದ ಗಡಿಯನ್ನು ಪ್ರವೇಶಿಸಿದವು. ಅದಾಗಲೇ ಕಟ್ಟೆಚ್ಚರ ವಹಿಸಿದ್ದ ಭಾರತದ ವಾಯುಪಡೆ ಮಿಗ್-21 ಮೂಲಕ ಪಾಕಿಸ್ತಾನದ…
ಅಭಿನಂದನ್ ತಕ್ಷಣ ಬಿಡುಗಡೆ ಮಾಡಿ
February 28, 2019ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವ ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ. “ಭಾರತೀಯ ವಾಯುಪಡೆಯ ಗಾಯಗೊಂಡ ಪೈಲಟ್ ಅನ್ನು ಅಸಭ್ಯ ರೀತಿಯಲ್ಲಿ ನಡೆಸಿಕೊಳ್ಳ ಬೇಡಿ” ಎಂದು ಪಾಕ್ಗೆ ಭಾರತ ಎಚ್ಚರಿ ಸಿದೆ. ಅಲ್ಲದೆ ಪಾಕ್ ತಮ್ಮ ಪೈಲಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಸಮನ್ ಮಾಡಿದ್ದ ಭಾರತ ವಿದೇಶಾಂಗ ಸಚಿವಾಲ…
ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಮುಂದುವರಿಕೆ
February 28, 2019ಬೆಂಗಳೂರು: ಪ್ರಸ್ತುತ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ಅಧಿಕಾರಿ ಹಾಗೂ ನೌಕರರನ್ನು ಹಿಂಬಡ್ತಿ ಮಾಡದೆ, ಪರಿಶಿಷ್ಟ ಸಮುದಾಯದ ಬಡ್ತಿ ಮೀಸಲಾತಿಯನ್ನು ಮುಂದುವರಿಸಿ ಮಹತ್ವದ ಆದೇಶವನ್ನು ಸರ್ಕಾರ ಇಂದು ಹೊರಡಿಸಿದೆ. ಕಳೆದ ಸೋಮವಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿ ದಂತೆ ಸಂಪುಟ ಸಭೆ ನಿರ್ಧಾರ ಕೈಗೊಂಡ ಹಿನ್ನೆಲೆ ಯಲ್ಲಿ ಕೆಲವು ಷರತ್ತುಗಳೊಂದಿಗೆ ಆದೇಶ ಜಾರಿ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಮಾರು 3,799 ಮಂದಿ ಅಧಿಕಾರಿ, ನೌಕರರಿಗೆ ಈ ಆದೇಶ ನಿರಾಳತೆ ಉಂಟು ಮಾಡಿದೆ. ಅಧಿಕಾರ…
ಮೈಸೂರು-ಕುಶಾಲನಗರ ರೈಲ್ವೆ ಕಾಮಗಾರಿಗೆ ಕೇಂದ್ರ ಹಸಿರು ನಿಶಾನೆ
February 28, 2019ಮೈಸೂರು: ಮೈಸೂರು (ಬೆಳಗೊಳ)-ಕುಶಾಲ ನಗರ ರೈಲ್ವೆ ಯೋಜನೆಯ ಬಹು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ತಮ್ಮ ಅವಿರತ ಪ್ರಯತ್ನದಿಂದ ಮೈಸೂರು (ಬೆಳಗೊಳ)-ಕುಶಾಲನಗರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು (ಬೆಳಗೊಳ)-ಕುಶಾಲನಗರ ಒಟ್ಟು 87 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಮಾರ್ಗ ಜೋಡಣೆ ಕಾಮಗಾರಿಗೆ ಇಂದು ರೈಲ್ವೆ ಸಚಿವಾಲಯವು ಹಸಿರು ನಿಶಾನೆ ತೋರಿದೆ. ಈ ಕಾಮಗಾರಿಗೆ 1854.62 ಕೋಟಿ ರೂ. ಅಂದಾಜು ವೆಚ್ಚ…
ಖರ್ಗೆ ಸಿಎಂ ಮಾಡಿ ಎಂದೆ, ಆದರೆ ಕಾಂಗ್ರೆಸ್ನವರು ನಿಮ್ಮ ಮಗನೇ ಸಿಎಂ ಆಗಲಿ ಎಂದು ದುಂಬಾಲು ಬಿದ್ದರು
February 28, 2019ಅರಸೀಕೆರೆ: ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದೆ. ಆದರೆ, ಕಾಂಗ್ರೆಸ್ ನವರು ನಿಮ್ಮ ಮಗ ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ, ತೀವ್ರ ಒತ್ತಡ ಹೇರಿದ ಕಾರಣ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾನು ಒಪ್ಪಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದರು. ಅರಸೀಕೆರೆಯಲ್ಲಿ 300 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, 224 ಸ್ಥಾನಗಳಿರುವ ರಾಜ್ಯದಲ್ಲಿ ನಮ್ಮದು ಕೇವಲ 37…