ಮೈಸೂರು: ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ ಯಾಗಿರುವ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಟಗಳ್ಳಿಯ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುವ ಸುಧಾ(33) ಎಂಬುವರು ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ತಂದೆ ಮನೆಯಲ್ಲಿ ಇಬ್ಬರು ಮಕ್ಕಳ ಸಮೇತ ವಾಸವಾಗಿದ್ದರು. ಈಕೆ ಕಳೆದ ಡಿ13ರಂದು ಬೆಳಿಗ್ಗೆ ಗಾರ್ಮೆಂಟ್ಸ್ಗೆ ಹೋಗುವುದಾಗಿ ತಿಳಿಸಿ ತೆರಳಿದವರು ಈವರೆಗೆ ವಾಪಸಾಗಿಲ್ಲ ಎಂದು ಫೆ.4ರಂದು ಆಕೆಯ ತಂದೆ ಮಹ ದೇವ್ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ…
ಸಂತಾನಹರಣ ಶಸ್ತ್ರಚಿಕಿತ್ಸೆ ನಂತರ 27 ಸಾವಿರವಿದ್ದ ಬೀದಿನಾಯಿ 40 ಸಾವಿರಕ್ಕೇರಿಕೆ!
February 14, 2019ಮೈಸೂರು: ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ದಿಂದ ಬೀದಿ ನಾಯಿಗಳ ಉಪಟಳ ವೇನೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವನ್ನು ಗುರುವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಯಲ್ಲಿ ಅನೇಕ ಸದಸ್ಯರು ವ್ಯಕ್ತಪಡಿಸಿ, ಸದರಿ ಕಾರ್ಯಕ್ರಮಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪ್ರಯೋಜನ ವಾದರೂ ಏನು ಎಂದು ಪ್ರಶ್ನಿಸಿದರು. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ…
ಮೈಸೂರು ಪಾಲಿಕೆಯಿಂದ ಮುಡಾ ಸದಸ್ಯರಾಗಿ ಎಸ್ಬಿಎಂ ಮಂಜು ಆಯ್ಕೆ
February 14, 2019ಮೈಸೂರು: ಮೈಸೂರು ಮಹಾನಗರ ಪಾಲಿಕೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಾಗಿ ಪಾಲಿಕೆ ಜೆಡಿಎಸ್ ಸದಸ್ಯ ಎಸ್ಬಿಎಂ ಮಂಜು ಆಯ್ಕೆಯಾದರು. ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾ ಯಿತು. ಏಕೈಕ ಪ್ರತಿಸ್ಪರ್ಧಿ ಪಾಲಿಕೆ ಬಿಜೆಪಿ ಸದಸ್ಯ ಎಂ.ಯು. ಸುಬ್ಬಯ್ಯ ಅವರನ್ನು ಮಣಿಸಿ, ಎಸ್ಬಿಎಂ ಮಂಜು ಆಯ್ಕೆಯಾದರು. ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರೊಬ್ಬರು ಮುಡಾಗೆ ಸದಸ್ಯರಾಗಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಸ್ವಪಕ್ಷ ಜೆಡಿಎಸ್ ಹಾಗೂ…
ಹೆಬ್ಬಾಳಲ್ಲಿ ಚರ್ಚ್ ನಿರ್ಮಾಣ ವಿಚಾರ: ಮೈಸೂರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲ
February 14, 2019ಅಂತಿಮವಾಗಿ ಚರ್ಚ್ ನಿರ್ಮಾಣಕ್ಕೆ ಸಮ್ಮತಿ ಮೈಸೂರು: ಮೈಸೂರಿನ ಹೆಬ್ಬಾಳು ಬಡಾವಣೆಯ ನಾಗರಿಕ ಸೌಲಭ್ಯ(ಸಿಎ) ನಿವೇಶನದಲ್ಲಿ ಚರ್ಚ್ ನಿರ್ಮಾಣಕ್ಕೆ ಅನುಮತಿ ನೀಡುವ ಸಂಬಂಧ ನಗರಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಗದ್ದಲ ಉಂಟಾಗಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಮೈಸೂರು ನಗರಪಾಲಿಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಗುರು ವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಚರ್ಚ್ ವಿಚಾರ ಕೋಲಾಹಲಕ್ಕೆ ಕಾರಣ ವಾಯಿತು. ಹೆಬ್ಬಾಳು,…
ಬತ್ತಿದ ಕಾರಂಜಿಕೆರೆ: ದೋಣಿ ವಿಹಾರ ಸ್ಥಗಿತ
February 14, 2019ಮೈಸೂರು: ನೀರಿನ ಪ್ರಮಾಣ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಮೈಸೂರಿನ ಕಾರಂಜಿಕೆರೆ ಯಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ವಲಸೆ ಪಕ್ಷಿಗಳ ಸಂತಾನಾಭಿವೃದ್ಧಿ ಸಂದರ್ಭದಲ್ಲಿಯೇ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿ ಕೆರೆಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡಿ, ದೋಣಿ ವಿಹಾರ ಮಾಡಿ ಸಂಭ್ರಮಿಸುತ್ತಿದ್ದರು. ಕಳೆದ ಸಾಲಿನಲ್ಲಿ ವಾಡಿಕೆ ಮಳೆ ಬಾರದೆ ಕಾರಂಜಿಕೆರೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ನೀರು ಸಂಗ್ರಹವಾಗಿತ್ತು. ರಾಜಕಾಲುವೆ ಒತ್ತುವರಿ ಯಾಗಿರುವುದರಿಂದ ಚಾಮುಂಡಿಬೆಟ್ಟದಿಂದ ಮಳೆ…
ವಿಧಾನ ಮಂಡಲ ಅಧಿವೇಶನ ಮತ್ತೆ ಮುಂದೂಡಿಕೆ
February 14, 2019ಬೆಂಗಳೂರು: ಧ್ವನಿ ಸುರುಳಿ ವಿವಾದ ವಿಧಾನಸಭೆಯ ಮೂರನೇ ದಿನದ ಕಲಾಪವನ್ನೂ ನುಂಗಿ ಹಾಕಿತು. ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ನಡೆಸಿದ ಸಂಧಾನ ಸಭೆ ವಿಫಲಗೊಂಡ ನಂತರ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ನಡೆ ವಿರೋಧಿಸಿ ಧರಣಿ ನಡೆಸಿದರು. ಸರ್ಕಾರದ ವಿರುದ್ಧದ ಘೋಷಣೆ ನಡುವೆಯೇ ನಾಲ್ಕು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಮಸೂದೆ ಸೇರಿದಂತೆ ಕೆಲವು ತಿದ್ದುಪಡಿ ಕಾಯಿದೆಗಳಿಗೆ ಅಂಗೀಕಾರ ಪಡೆದುಕೊಂಡಿತು. ಸಭಾಧ್ಯಕ್ಷರು, ಗೊಂದಲ ತಿಳಿಗೊಳಿಸಲು ನಡೆಸಿದ ಪ್ರಯತ್ನ ವಿಫಲವಾದ ನಂತರ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಸದನ…
ಆಪರೇಷನ್ ಕಮಲ ಕೈಬಿಡಿ
February 14, 2019ಬೆಂಗಳೂರು: ಧ್ವನಿ ಸುರುಳಿ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆ ಬಿಜೆಪಿ ವರಿಷ್ಠರು ತಕ್ಷಣವೇ ಆಪರೇಷನ್ ಕಮಲ ಕಾರ್ಯಾ ಚರಣೆ ಕೈಬಿಡಿ ಎಂದು ರಾಜ್ಯ ಘಟಕದ ನಾಯಕರಿಗೆ ಕಟ್ಟಾ ದೇಶ ಮಾಡಿದ್ದಾರೆ. ಆಪರೇಷನ್ ಕಮಲದ ಸುಳಿಗೆ ಸಿಲುಕಿ ಮುಂಬೈನಲ್ಲಿ ಬಿಡಾರ ಹೂಡಿದ್ದ ಐವರು ಶಾಸಕರು ಬೆಳಿಗ್ಗೆಯೇ ಬೆಂಗಳೂರಿಗೆ ಬಂದಿಳಿದರು. ಇವರ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಪಕ್ಷದ ಮಲ್ಲೇಶ್ವರಂ ಶಾಸಕ ಡಾ|| ಅಶ್ವತ್ಥನಾರಾಯಣ ನೇತೃತ್ವದಲ್ಲಿ ಮುಂಜಾನೆ ನಗರಕ್ಕೆ ಆಗಮಿಸಿದರಲ್ಲದೆ, ಅಧಿ ವೇಶನದಲ್ಲೂ ಪಾಲ್ಗೊಂಡರು. ಧ್ವನಿ ಸುರುಳಿ ಪ್ರಸ್ತಾಪ ರಾಜ್ಯ ವಿಧಾನಮಂಡಲಕ್ಕೆ ಸೀಮಿತವಾಗದೆ ಸಂಸತ್ನಲ್ಲೂ…
ಸೋನಿಯಾ ಗಲಿಬಿಲಿ, ರಾಹುಲ್ ತಬ್ಬಿಬ್ಬು…
February 14, 2019ನವದೆಹಲಿ: ಪಕ್ಕದ ಆಸನ ದಲ್ಲಿ ಕುಳಿತಿದ್ದ ಮುಲಾಯಂ ಸಿಂಗ್ ಅವರು ಎದ್ದು ನಿಂತು ಮಾತನಾಡಲು ಆರಂಭಿಸಿದಾಗ ಕುತೂಹಲದಿಂದ ಕಿವಿಗೊಟ್ಟಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಮರು ಕ್ಷಣವೇ ಗಲಿಬಿಲಿಗೊಳಗಾದರೆ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ತಬ್ಬಿಬ್ಬಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ತಿಣುಕಾಡಿದರು. ಮುಲಾಯಂ ಅವರು ತಮ್ಮ ಕಡು ರಾಜಕೀಯ ವಿರೋಧಿ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸ ಲಾರಂಭಿಸಿದ್ದು ಕಿವಿಗೆ ಬಿದ್ದೊಡನೆ ಸೋನಿಯಾ ಜೀ ಅವರ ಕಣ್ಣುಗಳು ಹಿಗ್ಗಿದವು. `ಇದೇನಿದು’ ಎನ್ನುವಂತೆ ಮುಲಾಯಂ ಅವರತ್ತ ನೋಡಿದರು. ಮರುಕ್ಷಣ ಹಿಂದಿನ…
ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆಗೆ ಯದುವೀರ್ ಭೇಟಿ, ಪರಿಶೀಲನೆ
February 14, 2019ಮೈಸೂರು: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಅಲ್ಲಿದ್ದ ಸಾರ್ವಜನಿಕರು, ಸದರಿ ಕಟ್ಟಡಗಳನ್ನು ನಿಮ್ಮ ಪೂರ್ವಿಕರೇ ನಿರ್ಮಿಸಿದ್ದಾರೆ. ಆದರೆ ಸರ್ಕಾರ ಇದನ್ನು ಕೆಡವಿ ಪುನರ್ ನಿರ್ಮಿಸಲು ಹೊರಟಿದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡಿ ಎಂದು ಯದುವೀರ್ ಅವ ರಿಗೆ ಮನವಿ ಮಾಡಿಕೊಂಡರು. ಸರ್ಕಾರ ಮೈಸೂರಿನ ಲ್ಯಾನ್ಸ್ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರು ಕಟ್ಟೆ…
ಧಾರ್ಮಿಕ ವಿಕೇಂದ್ರೀಕರಣದತ್ತ ಮುರುಘಾ ಮಠ
February 14, 2019ಮೈಸೂರು: ಇಂದು ಧಾರ್ಮಿಕ ವಿಕೇಂದ್ರೀಕರಣ, ಜಾಗೃತೀ ಕರಣ ಆಗಬೇಕು. ಸಾಮಾಜಿಕ ಅಸಮಾ ನತೆ, ಅಸ್ಪøಶ್ಯತೆ, ಶೋಷಣೆ ನಿವಾರಣೆ ಆಗಬೇಕು. ಆ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ ಎಂದು ಚಿತ್ರದುರ್ಗ ಬೃಹನ್ಮಠ ಬಸವಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ಮೈಸೂರಿನ ದಸರಾ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಮೈಸೂರು ನಗರ ಮೇದರ ಜನಾಂಗದ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್, ಮೇದ ಸೇವಾ ಸಂಘ, ಅಖಿಲ ಕರ್ನಾಟಕ ಮೇದ ಗಿರಿಜನ ಕಲ್ಯಾಣ ಸೇವಾ ಸಂಘ…