ಸರಗೂರು: ವಾಜಪೇಯಿ ನಗರಾಭಿವೃದ್ಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡದ ಹಾಗೂ ಮೂಲಭೂತ ಸೌಕರ್ಯ ಒದಗಿಸದ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ಫಲಾನುಭವಿಗಳು ಸರಗೂರು ಪಟ್ಟಣ ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮುಖಂಡ ಎಸ್.ಎಲ್. ರಾಜಣ್ಣ ಮಾತನಾಡಿ, 216 ವಸತಿ ರಹಿತ ಫಲಾನುಭವಿಗಳು ತೀರ ಬಡವರಾಗಿದ್ದಾರೆ. ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ವಿದ್ದಾರೆ. ಅಷ್ಟೇ ಅಲ್ಲ ಬಾಡಿಗೆ ಕಟ್ಟಲೂ ಅಸಹಾಯಕ ರಾಗಿದ್ದಾರೆ ಎಂದು ಸಮಸ್ಯೆ ತೀವ್ರತೆ ವಿವರಿಸಿದರು. 15 ವರ್ಷಗಳ…
ವಿಶ್ವ ಅಯೋಡಿನ್ ಸಪ್ತಾಹ ಜಾಥಾಗೆ ಚಾಲನೆ
December 12, 2018ಸರಗೂರು: ವಿಶ್ವ ಅಯೋಡಿನ್ ಸಪ್ತಾಹ ಇದರ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರಾಷ್ಟ್ರೀಯ ಅಯೋಡಿನ್ ಕೊರೆತೆ ನಿಯಂತ್ರಣಾ ದಿನ ಹಾಗೂ ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ಕಾರ್ಯಕ್ರಮ ಜರುಗಿತು. ಇದರ ಅಂಗವಾಗಿ ಏರ್ಪಡಿಸಿದ್ದ ಅರಿವು ಜಾಥಾಗೆ ಹೆಚ್.ಡಿ.ಕೋಟೆ ಆರೋಗ್ಯಾಧಿ ಕಾರಿ ರವಿಕುಮಾರ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ರವಿಕುಮಾರ್, ಉತ್ತಮ ಆರೋಗ್ಯಕ್ಕೆ ಅಯೋಡಿನ್ ಅಂಶ ಅಗತ್ಯವಾಗಿದ್ದು, ಅಯೋಡಿನ್ ಉಪ್ಪಿನಲ್ಲಿ ಹೆಚ್ಚು ಖನಿಜಾಂಶ ಇರುವುದರಿಂದ ಪ್ರತಿದಿನ…
ಸರಗೂರು ಬಯಲು ಶೌಚ ಮುಕ್ತವಾಗಿಸಲು ಅಗತ್ಯ ಕ್ರಮ
December 10, 2018ಸರಗೂರು: ಸ್ವಚ್ಛ ಭಾರತ ಅಭಿಯಾನದ ಮೂಲಕ ಪಟ್ಟಣ ವನ್ನು ಬಯಲು ಶೌಚ ಮುಕ್ತ ಪಟ್ಟಣವ ನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸಿ. ಅಶೋಕ್ ತಿಳಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ನ ಜನಧ್ವನಿ ಸಮುದಾಯ ಬಾನುಲಿಯು ಏರ್ಪಡಿಸಿದ್ದ ನೇರ ಸಂದ ರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಪಟ್ಟಣದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ಸಮುದಾಯದಿಂದ ಬಂದಂತಹ ಮೂಲ ಸೌಕರ್ಯ ಮತ್ತು ಬೇಡಿಕೆಯ ಕರೆಗಳಿಗೆ ಉತ್ತರಿಸಿದರು. ಸರಗೂರಿನಿಂದ ವೆಂಕಟೇಶ್ ಮತ್ತು ಆನಂದ್ ಕರೆ ಮಾಡಿ,…
ಸರಗೂರು ಪಪಂ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್
October 5, 2018ಸರಗೂರು: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್, ಉಪಾಧ್ಯಕ್ಷರಾಗಿ ಮಂಜುಳಾ ರವಿಕುಮಾರ್ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಕಾಂಗ್ರೆಸ್ ಪಕ್ಷದ ಜ್ಯೋತಿ ಯೋಗೀಶ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಬಿಜೆಪಿಯ ಮಂಜುಳಾ ರವಿಕುಮಾರ್ ಆಯ್ಕೆಯಾಗಿ ದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷಗಾದಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಇದೇ ಸಂದರ್ಭ ದಲ್ಲಿ ಮಾತನಾಡಿದ ಸಂಸದರಾದ ಆರ್. ಧ್ರುವನಾರಾಯಣ್ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಪಕ್ಷದವರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು….
ಜು.1ಕ್ಕೆ ಮುಳ್ಳೂರು ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ
June 29, 2018ಮೈಸೂರು: ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನ, ಯೋಗವನ ಆಶ್ರಮ ಟ್ರಸ್ಟ್ ಆಶ್ರಯದಲ್ಲಿ ಜು.1ರಂದು ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀಕಾಂತಸ್ವಾಮಿ ವಾರ್ಷಿಕ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ ದೊಡ್ಡ ಹರಿಸೇವೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಯೋಗಪ್ರಕಾಶ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಅನಿಲ್ ಚಿಕ್ಕಮಾಧು ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಮುಳ್ಳೂರು ಗ್ರಾಮವನ್ನು ಯೋಗ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸುಂದರ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು….
ಆರೋಗ್ಯಾಧಿಕಾರಿ ದಿಢೀರ್ ದಾಳಿ
June 9, 2018ಅಂಗಡಿ ಮುಂಗಟ್ಟುಗಳ ಪರಿಶೀಲನೆ: ನಿಯಮ ಉಲ್ಲಂಘಿಸಿದವರಿಗೆ ದಂಡ ಸರಗೂರು: ಸರಗೂರು ಪಟ್ಟಣಕ್ಕೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ, ಕ್ಯಾಂಟೀನ್, ಬೇಕರಿ, ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಪರಿಶೀಲನೆ ಮಾಡಿದರು. ಪಟ್ಟಣದ ಲಯನ್ಸ್ ಶಾಲಾ ಅವರಣದ ಮಂದೆ ಇರುವ ರವಿ ಬೇಕರಿಗೆ ಭೇಟಿ ನೀಡಿ, ಸಿಗರೇಟ್ ಮಾರಾಟಕ್ಕೆ ಇಟ್ಟಿದ್ದರಿಂದ ಬೇಕರಿ ಮಾಲೀಕರಿಗೆ ದಂಡ ವಿಧಿಸಿದರು. ನಂತರ ನವೀನ್, ಲಕ್ಷ್ಮಿ, ಜಯಲಕ್ಷ್ಮಿ ಬೇಕರಿ ಸೇರಿದಂತೆ ಇನ್ನಿತರ ಬೇಕರಿಗಳನ್ನೂ ಪರಿಶೀಲಿಸಿ, ಲೈಸೆನ್ಸ್ ಪಡೆಯದೇ ಇರುವುದು, ತಿಂಡಿ ತಿನಿಸುಗಳ…
ಕಾಡಾನೆಗಳಿಂದ ಬಾಳೆ ಬೆಳೆ ನಾಶ
May 31, 2018ಸರಗೂರು: ಸಮೀಪದ ಹೂವಿನಕೊಳ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿಯಿಟ್ಟು ಬಾಳೆ ಫಸಲು ನಾಶಪಡಿಸಿವೆ. ಗ್ರಾಮದ ಹೆಚ್.ಎಂ. ಬಸವರಾಜು ಹಾಗೂ ಸಿದ್ದಯ್ಯ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಫಸಲನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಆನೆ ಹಾವಳಿ ತಡೆಯಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಾವು ಕಚ್ಚಿ ಯುವಕ ಸಾವು
May 31, 2018ಸರಗೂರು: ಹಾವು ಕಚ್ಚಿ ಯುವಕ ನೊಬ್ಬ ಸಾವನ್ನ ಪ್ಪಿರುವ ಘಟನೆ ಸಮೀಪದ ಚೆನ್ನಿ ಪುರ ಗ್ರಾಮದಲ್ಲಿ ನಡೆದಿದೆ. ಯುವ ರೈತ ಮಧು(20) ಮೃತಪಟ್ಟವ. ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ದನ-ಕರು ಗಳನ್ನು ಮೇಯಿಸುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡ ಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿದ್ದಾನೆ. ಮಧು ನಿಧನಕ್ಕೆ ಮುಖಂಡ ಸುನೀಲ್ ಕುಮಾರ್, ಪಪಂ ಮಾಜಿ ಸದಸ್ಯ ಶ್ರೀನಿವಾಸ್, ಕರವೇ ಮಾಜಿ ಅಧ್ಯಕ್ಷ ಎಸ್.ಎಂ. ನಾಗೇಂದ್ರ, ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ವನಸಿರಿ…
ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿ: ವಿಜಯೇಂದ್ರ
April 30, 2018ಸರಗೂರು: ಕಾಂಗ್ರೆಸ್ ನವರ ದುರಾಡಳಿತದಿಂದ ಬೇಸತ್ತಿರುವ ಜನರೇ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಠ ಕಲಿಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು. ಪಟ್ಟಣದ ಅಖಿಲ ನಾಮಧಾರಿ ಗೌಡರ ಸಮುದಾಯ ಭವನದಲ್ಲಿ ಹಮ್ಮಿಕೊಂ ಡಿದ್ದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದ ರಾಜು ಪರ ಮತ ಯಾಚಿಸಿ ಮಾತನಾ ಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಂಬರ್ ಒನ್ ಸರ್ಕಾರ ಎನ್ನು ತ್ತಾರೆ. ಆದರೆ ಮೈಸೂರು ಜಿಲ್ಲೆಯಲ್ಲೇ ರೈತರ ಸಾವು ನಂಬರ್…