ಸೋಮವಾರಪೇಟೆ: ಕಳೆದ 2013ರ ಸೆ.25ರಂದು ನಡೆದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಈರ್ವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿ ಚಾಲಕ ಸಿದ್ದಲಿಂಗಪುರ ಗ್ರಾಮದ ಕೆ.ಎನ್. ವಿಜಯಕುಮಾರ್ ಅವರಿಗೆ 2 ವರ್ಷ ಸಜೆ ವಿಧಿಸಿದೆ.
ಕೊಡಗಿನಾದ್ಯಂತ ವರುಣನ ರೌದ್ರಾವತಾರ
July 12, 2018ಉಕ್ಕಿ ಹರಿಯುತ್ತಿರುವ ನದಿ ತೊರೆಗಳು ಜನ ಜೀವನ ಅಸ್ತವ್ಯಸ್ತ, ಪರದಾಟ ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನ ಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜು.12)ಯೂ ಸಹ ಜಿಲ್ಲಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ…
ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು
July 10, 2018ಮಡಿಕೇರಿ: ಪುನರ್ವಸು ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಮಡಿಕೇರಿಯ ತ್ಯಾಗರಾಜ ಕಾಲೋನಿ, ಗದ್ದುಗೆ ಹಿಂಭಾಗ ಸೋಮವಾರ ಬೆಳಗಿನ ಜಾವ ಸುಮಾರು 1.30 ರ ಸಮಯದಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದ್ದುಗೆಯ ನಿವಾಸಿಗಳಾದ ಸುನೀತಾ, ಅಬೂಬ ಕ್ಕರ್ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹೊಲಿಗೆ ಯಂತ್ರಗಳನ್ನೇ ನಂಬಿಕೊಂಡು ಬದುಕು ತ್ತಿದ್ದ ಸುನೀತಾ…
ಸೆಲ್ಫಿ ತೆಗೆದುಕೊಳ್ಳುವಾಗ ಮಲ್ಲಳ್ಳಿ ಜಲಪಾತದಲ್ಲಿ ನೀರು ಪಾಲಾದ ಯುವಕನ ಶವ ವಾರದ ನಂತರ ಪತ್ತೆ
June 30, 2018ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿಬಿದ್ದು, ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯ ನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿ ಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾ ಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ಕಾಲು ದಾರಿಯಲ್ಲಿ…
ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ
June 26, 2018ಸೋಮವಾರಪೇಟೆ: ಭಾನುವಾರ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಸರಣಿ ಕಳ್ಳತನವಾಗಿದ್ದು, ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಯಾಗಿದೆ. ಭಾನುವಾರ ಬೆಳಗ್ಗಿನ ಜಾವ 4 ಗಂಟೆಯ ಸಮಯದಲ್ಲಿ ಪಟ್ಟಣಕ್ಕೆ ಸಮೀಪದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲರ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಲಾಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ. ಶಬ್ದದಿಂದ ಅನು ಮಾನಗೊಂಡ ವಾಚ್ಮನ್ ಬೊಬ್ಬೆಹೊಡೆದ ಸಂದರ್ಭ, ವಿಚಲಿತ ನಾದ ಕಳ್ಳ, ಡ್ರಾಯರ್ನಲ್ಲಿದ್ದ 250 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ….
ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಗೀಳಿಗೆ ಯುವಕ ನೀರುಪಾಲು
June 23, 2018ಸೋಮವಾರಪೇಟೆ: ಮಲ್ಲಳ್ಳಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿ ದ್ದಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ಸಂಭವಿಸಿದೆ. ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್ (24) ಸೆಲ್ಫಿ ಗೀಳಿಗೆ ಬಲಿಯಾದ ಯುವಕ ಮೃತ ಮನೋಜ್ ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇ ಶ್ವರ ಸಮೂದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರದಲ್ಲಿ ಸಂಜೆ ಸುಮಾರು…
ಬಸ್ನಲ್ಲೇ ಹೃದಯಾಘಾತ; ಯುವಕ ಸಾವು
June 20, 2018ಸೋಮವಾರಪೇಟೆ: ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬಜೆಗುಂಡಿ ಗ್ರಾಮದ ಸುರೇಶ್ ಎಂಬವರ ಮನೆ ಯಲ್ಲಿ ನೆಲೆಸಿದ್ದ ಪ್ರಕಾಶ್ (28) ಸಾವನ್ನಪ್ಪಿದವನಾಗಿದ್ದು, ಈತ ಇಂದು ಬೆಳಗ್ಗೆ 8.30ಕ್ಕೆ ಕುಂಬೂರು ಗ್ರಾಮದ ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದ ಎದೆನೋವು ಕಾಣಿಸಿಕೊಂಡಿದ್ದರಿಂದ ವಾಪಸ್ ಮನೆಗೆ ಬರಲೆಂದು ಮಧ್ಯಾಹ್ನ ಖಾಸಗಿ ಬಸ್ ಹತ್ತಿದ್ದು, ಸ್ವಲ್ಪ ದೂರ ಸಂಚರಿಸು ವಷ್ಟರಲ್ಲೇ ಹೃದಯಾಘಾತ ಸಂಭವಿಸಿದೆ. ತಕ್ಷಣ ಸಹ ಪ್ರಯಾಣಿಕರು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದು, ಪ್ರಕಾಶ್ ಅವರನ್ನು ಸೋಮವಾರಪೇಟೆ…
ವರದಕ್ಷಿಣೆ ಕಿರುಕುಳ: ಗೃಹಿಣ ಆತ್ಮಹತ್ಯೆ
June 18, 2018ಸೋಮವಾರಪೇಟೆ: ಗಂಡನ ವರದಕ್ಷಿಣೆ ಕಿರುಕುಳದಿಂದ ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿ ರುವ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸಂಭವಿಸಿದೆ. ಕಾಗಡಿಕಟ್ಟೆ ಗ್ರಾಮದ ಯೂಸೂಫ್ ಎಂಬುವರ ಮಗಳು ರಂಶಿನಾ(22) ಆತ್ಮ ಹತ್ಯೆ ಮಾಡಿಕೊಂಡವರು. ಹೊಸತೋಟ ಗ್ರಾಮದ ಮಹಮ್ಮದ್ ಎಂಬುವರ ಪುತ್ರ ರಶೀದ್(28) ಆರೋಪಿಯಾಗಿದ್ದಾನೆ. 2015ರಲ್ಲಿ ರಂಶಿನಾ ಅವರನ್ನು ರಶೀದ್ಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಕುಟುಂಬದಲ್ಲಿ ಒಡಕು ಮೂಡಿದ್ದು, 2016ರ ಮಾರ್ಚ್ನಲ್ಲಿ ಕಾಗಡಿಕಟ್ಟೆ ಹಾಗೂ ಹೊಸತೋಟ ಜಮಾಅತ್ನಲ್ಲಿ ಪ್ರಕರಣವನ್ನು ಸರಿಪಡಿಲಾಗಿತ್ತು. ನಂತರ ಪತಿಯ ಕಿರುಕುಳ ಜಾಸ್ತಿಯಾಗಿ, ಪ್ರಕರಣ ಪಟ್ಟಣದ ಠಾಣೆಯಲ್ಲಿ…
ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
June 17, 2018ಸೋಮವಾರಪೇಟೆ: ಭಾರಿ ಮಳೆ ಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗು ತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತ ದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾ ಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು…
ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
June 15, 2018ಸೋಮವಾರಪೇಟೆ: ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗುತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು ಮುಂದಿನ ಎರಡು ದಿನಗಳಲ್ಲಿ ಧಾರಾಕಾರ…