ಮಂಡ್ಯ:ಮಂಡ್ಯದ ಚುನಾವಣೆಯನ್ನು ಇಡೀ ಇಂಡಿಯಾವೇ ಎದುರು ನೋಡುತ್ತಿತ್ತು. ಇಲ್ಲಿ ಗೆದ್ದದ್ದು ಹಣವಲ್ಲ, ಸ್ವಾಭಿಮಾನ ಎಂಬುದನ್ನು ಮಂಡ್ಯದ ಜನರು ಇಂಡಿಯಾಗೆ ತೋರಿಸಿದ್ದಾರೆ ಎಂದು ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದಿಲ್ಲಿ ಹೇಳಿದರು. ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಇಂದು ಏರ್ಪ ಡಿಸಲಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಹಾಗೂ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾಭಿಮಾನದ ಮಂಡ್ಯ ಜನತೆಗೆ ಅನಂತ ಕೋಟಿ ವಂದನೆ ಎಂದು ಮಾತು ಪ್ರಾರಂಭಿಸಿದ ಸುಮಲತಾ, ನಾನು ದೆಹಲಿಗೆ ಹೋಗಿ ಪ್ರಮಾಣ…
ಮೈಸೂರು-ಕೊಡಗಿನಿಂದ ಪ್ರತಾಪ್ ಸಿಂಹ, ಮಂಡ್ಯದಿಂದ ಸುಮಲತಾ ಅಂಬರೀಶ್, ಚಾ.ನಗರದಿಂದ ಶ್ರೀನಿವಾಸಪ್ರಸಾದ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜಯಭೇರಿ
May 24, 2019ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳ ಪೈಕಿ ಬಿಜೆಪಿ 2 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪುನರಾಯ್ಕೆ ಆಗಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆ ಯಾದ 13,18,103 ಮತಗಳ ಪೈಕಿ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ…
ಮಂಡ್ಯದಲ್ಲಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ಅನುಮಾನ: ಸುಮಲತಾ
April 1, 2019ಮಂಡ್ಯ: ನಾನು ಕಣಕ್ಕಿಳಿದ ಮೊದಲ ದಿನದಿಂದಲೂ ನನಗೆ ಅನ್ಯಾಯವಾಗು ತ್ತಲೇ ಇದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವೇ ಆಗುತ್ತಿಲ್ಲ. ನನಗೆ ನ್ಯಾಯ ಸಿಗುತ್ತಲೇ ಇಲ್ಲ. ಈ ಚುನಾವಣೆ ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ನಡೆಯುವುದೇ ಅನುಮಾನ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಚುನಾವಣೆ ನಡೆಸಲು ಇದೆಯೋ ಅಥವಾ ಮುಖ್ಯಮಂತ್ರಿಗಳ ಮಗನನ್ನು ಗೆಲ್ಲಿಸಲು…
ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ
April 1, 2019ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರವಾಗಿ ದೂರು ದಾಖಲಾಗಿದ್ದರಿಂದ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ಕುಮಾರ್ ಅವರು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಭಾನುವಾರ ವಿಚಾರಣೆ ನಡೆಸಿದರು. ಪಕ್ಷೇತರ ಅಭ್ಯರ್ಥಿ ಎ.ಸುಮಲತಾ (ಅಂಬರೀಶ್ ಪತ್ನಿ) ಅವರ ಚುನಾವಣಾ ಏಜೆಂಟ್ ಮದನ್ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಶನಿವಾರ ಮಂಡ್ಯ ಚುನಾವಣಾ ಶಾಖೆಗೆ ಭೇಟಿ ನೀಡಿ ಸಭೆ…
ಸುಮಲತಾ ವಾಹನ ಒಂದೇ ದಿನದಲ್ಲಿ 4 ಬಾರಿ ತಪಾಸಣೆ
April 1, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಾಹನ ವನ್ನು ಪ್ರಚಾರದ ವೇಳೆ ಚುನಾವಣಾ ಧಿಕಾರಿಗಳು ಪದೇ ಪದೆ ತಪಾಸಣೆ ನಡೆಸಿದ ಘಟನೆ ಮೇಲುಕೋಟೆ ಕ್ಷೇತ್ರದ ಬಳಿ ಭಾನುವಾರ ನಡೆದಿದೆ. ಮೇಲು ಕೋಟೆ ಕ್ಷೇತ್ರದ ದುದ್ದ, ಶಿವಳ್ಳಿ, ಬೇವು ಕಲ್ಲು ಸೇರಿದಂತೆ ಮೇಲುಕೋಟೆ ಮಾರ್ಗದ ವಿವಿಧ ಗ್ರಾಮಗಳಲ್ಲಿ ಇಂದು ಪ್ರಚಾರ ನಡೆಸುತ್ತಿದ್ದ ಸುಮಲತಾ ಅವ ರಿದ್ದ ವಾಹನವನ್ನು ಒಂದೇ ದಿನ 4 ಬಾರಿ ತಪಾಸಣೆ ನಡೆಸಿದರು ಎನ್ನಲಾ ಗಿದೆ. ಪಾಂಡವಪುರ ಉಪ ವಿಭಾಗಾ…
ಸುಮಲತಾ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ
March 31, 2019ಮಂಡ್ಯ: ತಾಲೂಕಿನ ಕೀಲಾರ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರ ರೋಡ್ ಶೋನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ರೈತ ಸಂಘದ ಬಾವುಟ ಗಳು ರಾರಾಜಿಸಿದವು. ಅಲ್ಲದೇ, ಅವರ ಚಿಹ್ನೆಯಾದ ಕಹಳೆಯನ್ನು ವಿಶೇಷ ವಸ್ತ್ರ ಧರಿಸಿದ್ದ ಇಬ್ಬರು ರೋಡ್ ಶೋನಲ್ಲಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಇಂದು ಬೆಳಿಗ್ಗೆ ಸುಮಲತಾ ಅವರು ಕೀಲಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಅಷ್ಟರ ಲ್ಲಾಗಲೇ ನೆರೆದಿದ್ದ ಸಾವಿರಾರು ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ಬಾವುಟಗಳನ್ನು ಹಿಡಿದು ರೋಡ್ ಶೋನಲ್ಲಿ ಹೆಜ್ಜೆ ಹಾಕಿದರು….
ಸುಮಲತಾ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ
March 28, 2019ಮಂಡ್ಯ: ಸುಮಲತಾ ಅವರಲ್ಲಿ ಅಂಬರೀಷ್ ಅವರನ್ನು ಕಳೆದುಕೊಂಡಿ ರುವ ನೋವಿನ ಛಾಯೆಯಾಗಲೀ, ಮಂಡ್ಯ ರೈತರ ನೋವಿನ ಛಾಯೆಯಾಗಲೀ ಕಾಣಿಸುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆ ಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ತಮ್ಮ ಪುತ್ರ ನಿಖಿಲ್ ಅವರನ್ನು ಬೆಂಬಲಿಸು ವಂತೆ ಮನವಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ ಜಿ.ಮಾದೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರ ಜೊತೆ ಮಾತ ನಾಡುತ್ತಾ, ನಾನು ಸುಮಲತಾ ಅವರ ನಿನ್ನೆಯ ಭಾಷಣವನ್ನು ನೋಡಿದ್ದೇನೆ. ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನ ಛಾಯೆ…
ಮಂಡ್ಯ ಬೇರೆ ಜಿಲ್ಲೆಯವರ ಪಿತ್ರಾರ್ಜಿತ ಆಸ್ತಿಯಲ್ಲ
March 28, 2019ಕೆ.ಆರ್.ಪೇಟೆ: ಬೇರೆ ಜಿಲ್ಲೆಯವರು ಮಂಡ್ಯವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ವಶಪಡಿಸಿಕೊಳ್ಳಲು ಬಂದಿದ್ದಾರೆ. ಸ್ವಾಭಿಮಾನದಿಂದ ನಮ್ಮ ಆಸ್ತಿಯನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಗುಡುಗಿದ ಸುಮಲತಾ, ಮಂಡ್ಯ ಜನ ಪ್ರಜ್ಞಾವಂತರು, ಸ್ವಾಭಿಮಾನಿಗಳು ಎಂಬುದನ್ನು ಇಂಡಿಯಾಗೆ ತೋರಿಸಲು ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಅವರು ಇಂದು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ನಾನು ಸ್ಪರ್ಧಿಸುತ್ತಿರುವುದು ರಾಜ್ಯದ ಮುಖ್ಯಮಂತ್ರಿಗಳ ಮಗನ…
ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ 6 ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಚಾಟನೆ
March 25, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಛಾಟನೆ ಪರ್ವ ಮುಂದುವರೆದಿದೆ.ನಿನ್ನೆ ಇಂಡುವಾಳು ಸಚ್ಚಿದಾನಂದ, ಹನಕೆರೆ ಶಶಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದ ಕಾಂಗ್ರೆಸ್, ಇಂದು ಕೂಡ ಯುವ ಕಾಂಗ್ರೆಸ್ನ 6 ಪದಾಧಿಕಾರಿಗಳನ್ನು ಉಚ್ಚಾಟನೆ ಮಾಡಿ ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣ ಆದೇಶ ಹೊರಡಿಸಿದ್ದಾರೆ. ಯುವ ಕಾಂಗ್ರೆಸ್ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನಸಭಾ ಕ್ಷೇತ್ರದ…
ಮಂಡ್ಯ ಜನತೆಗಾಗಿ ನನ್ನ ಸ್ಪರ್ಧೆ
March 21, 2019ಮಂಡ್ಯ: ಅಂಬರೀಷ್ ತಮ್ಮ ಜೀವನದಲ್ಲಿ ಯಾರ ಬಳಿಯೂ ಕೈಚಾಚಿಲ್ಲ. ಶತ್ರುಗಳಿಗೂ ಕೊಡುತ್ತಿದ್ದ ಕೊಡುಗೈ ದಾನಿ ಅವರು. ಆದರೆ ಅವರ ಧರ್ಮಪತ್ನಿಯಾಗಿ ನಾನು ನಿಮ್ಮ ಬಳಿ ಕೈಚಾಚುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ. ಜೀವನ ಪೂರ್ತಿ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮನ್ನು ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾವುಕರಾಗಿ ನುಡಿದರು. ಇಂದು ಬೆಳಿಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ನಡೆದ…