ವಿರಾಜಪೇಟೆ: ವಿರಾಜಪೇಟೆ ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಬೊಪ್ಪಂಡ ತ್ರಿಶು ಗಣಪತಿ ಆಯ್ಕೆಯಾಗಿ ದ್ದಾರೆ. ಕಾರ್ಯದರ್ಶಿಯಾಗಿ ಪೊಯ್ಯೆಟ್ಟಿರ ಪ್ರಧಾನ್ ತಮ್ಮಯ್ಯ, ಖಜಾಂಚಿಯಾಗಿ ಕೆ.ಪಿ.ನಿಯಾಝ್ ಅಧಿಕಾರ ವಹಿಸಿಕೊಂಡರು. ಮಂಗೋಲಿಯಾ ರೆಸಾರ್ಟ್ನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಎಂಜೆಎಫ್ ಕಮಾಂಡರ್ ಲಯನ್ ಕುಕ್ಕೆರ ಉತ್ತಪ್ಪ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಂದರ್ಭದಲ್ಲಿ ಎಸ್ಎಸ್ ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ಸ್ವಾಗತಿ ಸಿದರು. ಕಾರ್ಯದರ್ಶಿ ಪ್ರಧಾನ್…
ವಕೀಲ ವೃತ್ತಿ ಮಹತ್ವಪೂರ್ಣವಾದದ್ದು: ನ್ಯಾ.ಎಸ್.ಬೋಪಣ್ಣ
June 25, 2018ವಿರಾಜಪೇಟೆ: ವಕೀಲರು ನ್ಯಾಯ ಒದಗಿಸುವಲ್ಲಿ ನ್ಯಾಯಾಧೀಶ ರೊಂದಿಗೆ ಸಹಕರಿಸಬೇಕು. ಇಂದಿನ ಸಮಾಜದಲ್ಲಿ ವಕೀಲ ವೃತ್ತಿ ಮಹತ್ವದಿಂದ ಕೂಡಿದೆ. ನ್ಯಾಯಾಲಯದಲ್ಲಿಯೂ ವಕೀ ಲರ ಪಾತ್ರ ಪ್ರಾಮುಖ್ಯತೆಯನ್ನು ಪಡೆದಿರು ವುದರಿಂದ ಕರ್ತವ್ಯ ನಿಷ್ಠೆಯನ್ನು ಪಾಲಿಸ ಬೇಕು ಎಂದು ರಾಜ್ಯ ಉಚ್ಚ ನ್ಯಾಯಾ ಲಯದ ಹಿರಿಯ ನ್ಯಾಯಮೂರ್ತಿ ಅಜ್ಜಿ ಕುಟ್ಟೀರ ಎಸ್.ಬೋಪಣ್ಣ ಹೇಳಿದರು. ವಕೀಲ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿದ ಶಾನುಭೋಗರ ಆರ್.ಜಗ ದೀಶ್ ಅವರಿಗೆ ವಿರಾಜಪೇಟೆ ವಕೀಲರ ಸಂಘದಿಂದ ಪಾಲಿಬೆಟ್ಟದ ಕೂರ್ಗ್ ಕ್ಲಿಫ್ ರೆಸಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ…
ಭಾರೀ ಮಳೆ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ
June 25, 2018ವಿರಾಜಪೇಟೆ: ವಿರಾಜ ಪೇಟೆ ವಿಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಟ್ಟಣದ ಅರಸುನಗರ, ಮಲೆ ತಿರಿಕೆಬೆಟ್ಟ ಹಾಗೂ ನೆಹರೂ ನಗರ ಪ್ರದೇಶ ಗಳಲ್ಲಿ ಮಳೆಗೆ ಮುನ್ನ ತಾಲೂಕು ಆಡಳಿತ ಮುಂಜಾಗರೂ ಕ್ರಮ ವಹಿಸಬೇಕು. ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಟುಂಬಗಳು ಭಾರೀ ಮಳೆಗೆ ಅವರ ಜನಜೀವನ ತತ್ತರಿ ಸುತ್ತಿವೆ. ಬಡ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ತಾಲೂಕು ತಹಸಿಲ್ದಾರ್ ಆರ್.ಗೋವಿಂದರಾಜು ಅವರಿಗೆ ವಿನಂತಿಸಿದ್ದಾರೆ. ನಿನ್ನೆ…
ಹಿರಿಯ ನಾಗರಿಕರ ವೇದಿಕೆ ವಾರ್ಷಿಕ ಮಹಾಸಭೆ
June 24, 2018ವಿರಾಜಪೇಟೆ: ವಿರಾಜ ಪೇಟೆಯ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕು ಹಿರಿಯ ನಾಗರೀಕರ ಮಹಾಸಭೆ ನಡೆಯಿತು. ವೇದಿಕೆ ಅಧ್ಯಕ್ಷ ಬಿ.ಬಿ.ನಾಣಯ್ಯ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಾ, ಹಿರಿಯ ನಾಗರಿಕರು ನೆಮ್ಮದಿ ಜೀವನ ನಡೆಸು ವಂತಾಗಲು ಸರ್ಕಾರದಿಂದ ದೊರೆ ಯುವ ಸವಲತ್ತುಗಳನ್ನು ವೇದಿಕೆ ವತಿಯಿಂದ ಪ್ರತಿಯೊಬ್ಬರಿಗೂ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಚೆರುಮಂಡ ನಾಣ್ಯಯ್ಯ, ಅಪ್ಪನೆರವಂಡ ಜೋಯಪ್ಪ, ಪುಲಿಯಂಡ ಪೊನ್ನಪ್ಪ, ಪುಟ್ಟಿಚಂಡ ಅಯ್ಯಣ್ಣ, ಕೂತಂಡ ಪೆಮ್ಮಯ್ಯ, ಸಿ.ಎಸ್.ಮಹ್ಮದ್ ಯೂಸುಫ್, ಖಲೀಲ್ ರೆಹಮಾನ್, ಬೊಳ್ಳಚಂಡ…
ವಿರಾಜಪೇಟೆ ಪಪಂ ಸಾಮಾನ್ಯ ಸಭೆ
June 23, 2018ವಿರಾಜಪೇಟೆ: ವಿರಾಜ ಪೇಟೆ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರೊಂದಿಗೆ ಧನಗಳನ್ನು ಸಾಕಿದವರು ಕೊಟ್ಟಿಗೆಯಲ್ಲಿ ಕಟ್ಟದೆ ಬೀದಿ ಯಲ್ಲಿ ಬಿಡುವುದರಿಂದ ವಾಹನ ಸಂಚಾ ರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಹೇಳಿದಾಗ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳು ವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪೆರುಂಬಾಡಿ ಘನತ್ಯಾಜ್ಯ ನಿರ್ವಾಹಣೆ ಘಟಕದಲ್ಲಿ ಘನತ್ಯಾಜ್ಯ ನಿರ್ವಾಹಣೆಯ ಕಾಮಾಗಾರಿಯನ್ನು ಪ್ರಾರಂಭಿಸುವ…
ವಿರಾಜಪೇಟೆಯಲ್ಲಿ ವಿಶ್ವ ಯೋಗ ದಿನಾಚರಣೆ
June 22, 2018ವಿರಾಜಪೇಟೆ: ಯೋಗ ಎಂಬುದು ಋಷಿ ಮುನಿಗಳ ಕಾಲದಿಂದಲೂ ನಡೆದುಕೋಂಡು ಬರುತ್ತಿದೆ. ಯೋಗಭ್ಯಾಸಕ್ಕೆ ಜಾತಿ ಭೇದಗಳಿಲ್ಲ. ವಯೋಮಿತಿ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಮತ ಮಲ್ಲಿಕಾರ್ಜುನಸ್ವಾಮಿ ಹೇಳಿದರು. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತ ಮಲ್ಲಿ ಕಾರ್ಜುನ ಸ್ವಾಮಿ, ಇಂದಿನ ಒತ್ತಡದ ಬದುಕಿನಲ್ಲಿ ಸಮಸ್ಯೆಗಳೇ ಹೆಚ್ಚಾಗಿದ್ದು, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳುವ ಮೂಲಕ ಯೋಗದಿಂದ ಮಾನಸಿಕ ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ…
ಭಾರೀ ಮಳೆಗೆ ಮನೆ ಕುಸಿತ
June 22, 2018ವಿರಾಜಪೇಟೆ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಅರಸು ನಗರದ ಶಶಿಕಲಾ ಎಂಬವರ ಮನೆ ರಾತ್ರಿ 12 ಗಂಟೆಗೆ ಕುಸಿದು ಬಿದ್ದಿದೆ. ರೂ.3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಮನೆ ಬೀಳುವ ಸಂದರ್ಭ ಶಶಿಕಲಾ ಅವರು ಸಂಭಂದಿಕರ ಮದುವೆಗೆ ತೆರಳಿದ್ದರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್, ಸದಸ್ಯ ರಾಜೇಶ್ ಪಧ್ಮನಾಭ, ಕಂದಾಯ ಇಲಾಖೆಯ ಅಧಿಕಾರಿ ಪಳಂಗಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿದಿರುವಬಗ್ಗೆ ತಹಶಿಲ್ದಾರ್ಗೆ ದೂರು ನೀಡಿದ್ದಾರೆ.
ಪೆರುಂಬಾಡಿ-ಮಾಕುಟ್ಟ ರಸ್ತೆ ಪರಿಶೀಲನೆ
June 19, 2018ವಿರಾಜಪೇಟೆ: ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಹಾನಿಯಾಗಿ, ಸಾರಿಗೆ ಸಂಪರ್ಕ ಕಡಿತಗೊಂಡಿ ರುವ ಅಂತರರಾಜ್ಯ ಹೆದ್ದಾರಿ ಪೆರುಂಬಾಡಿ-ಮಾಕುಟ್ಟ ರಸ್ತೆಗೆ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಸೋಮ ವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅತಿವೃಷ್ಟಿಯಿಂದಾಗಿ ಪೆರುಂಬಾಡಿ-ಮಾಕುಟ್ಟ ಮಾರ್ಗದ ರಸ್ತೆಯಲ್ಲಿ ಸುಮಾರು 30 ಕಡೆಗಳಲ್ಲಿ ಬರೆ ಕುಸಿತ ಹಾಗೂ ಮರಗಳು ಉರುಳಿ ದೊಡ್ಡ ಅನಾಹುತವಾಗಿದ್ದು, ಇದನ್ನು ತುರ್ತಾಗಿ ಸರಿಪಡಿಸಲು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಲಾಗು ವುದು ಎಂದು ಸಚಿವರು ತಿಳಿಸಿದರು. ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಕೃತಿ ವಿಕೋಪಕ್ಕಾಗಿ 10…
ವಿರಾಜಪೇಟೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಇಳಿಮುಖ
June 18, 2018ವಿರಾಜಪೇಟೆ: ವಿರಾಜಪೇಟೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಇಳಿ ಮುಖಗೊಂಡಿದ್ದು, ಬೇತ್ರಿ ಗ್ರಾಮದಲ್ಲಿ ಕಾವೇರಿ ಹೊಳೆ ನೀರಿನ ಪ್ರಮಾಣ ಕಡಿಮೆಯಾಗಿದೆ. ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಬಿಸಿಲಿನ ವಾತಾವರಣ ಕಂಡು ಬಂತು. ತಾಲೂಕು ತಹಸಿಲ್ದಾರ್ ಆರ್.ಗೋವಿಂದ ರಾಜು ಅವರು ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ಜಲಾವೃತ ಗೊಂಡ ಗದ್ದೆ, ತೋಡುಗಳಲ್ಲಿಯೂ ನೀರು ಇಳಿಮುಖ ವಾಗುತ್ತಿದೆ. ಕೊಡಗು-ಕೇರಳ ಗಡಿ ಪ್ರದೇಶ ವಾದ ಮಾಕುಟ್ಟ ಅಂತಾರಾಜ್ಯ ಹೆದ್ದಾರಿ ಯು ಹಾನಿಗೊಳಗಾದ ಸಂದರ್ಭ ಉಪ ಆಯುಕ್ತ ರಮೇಶ್ ಕೋನರೆಡ್ಡಿ ಅವ ರೊಂದಿಗೆ ಭೇಟಿ…
ತೋರ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸೆರೆ
June 18, 2018ವಿರಾಜಪೇಟೆ: ವಿರಾಜ ಪೇಟೆ ಬಳಿಯ ತೋರ ಗ್ರಾಮದ ಮನೆ ಯಲ್ಲಿ ಸೇರಿಕೊಂಡಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಅದೇ ಗ್ರಾಮದ ಮಹೇಶ್ ಎಂಬುವರು ಹಿಡಿದು ಅದನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಹಾಯಕ ಅಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.