ವಿರಾಜಪೇಟೆ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳು ಹಾನಿಗೊಳಗಾಗಿದ್ದು, ರೂ,50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದ ರಿಂದ ಮಳೆ ಕಡಮೆಯಾದ ಕೂಡಲೆ ರೂ. 32 ಲಕ್ಷ ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಪಡಿಸುವುದು ಹಾಗೂ ವಿವಿಧ ವಾರ್ಡ್ಗಳಲ್ಲಿ ಜನಪರ ಅಗತ್ಯ ಕಾಮಗಾರಿಗಳನ್ನು ಮಳೆ ಹಾನಿ ಪರಿಹಾರ ದಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಹಿರಿಯ ಸದಸ್ಯ ಎಸ್.ಎಚ್.ಮೈನುದ್ದೀನ್ ಮಾತನಾಡಿ,…
ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ
July 30, 2018ವಿರಾಜಪೇಟೆ: ಪರಿಸರದಿಂದ ಗಾಳಿ ಬೆಳಕು ಅಹಾರಗಳನ್ನು ಪಡೆದು ಕೊಳ್ಳುವ ನಾವು ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೇಟೋಳಿ, ಹಾಗೂ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಸತಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ,…
ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಉದ್ಘಾಟನೆ
July 29, 2018ವಿರಾಜಪೇಟೆ: ವಿ.ಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸುಣ್ಣದ ಬೀದಿ ರಸ್ತೆಗೆ ಇಂದು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಪಪಂ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳು ನಾಮಕರಣ ಮಾಡಿದರು. ರಸ್ತೆಯ ನಾಮಪಲಕವನ್ನು ಪಪಂ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಹಿರಿಯ ಸದಸ್ಯ ಎಸ್.ಹೆಚ್.ಮೈನೂದ್ದಿನ್ ಉದ್ಘಾಟಿಸಿದರು. ಈ ಸಂದರ್ಭ ಪಪಂ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಹೆಮ್ ಕುಮಾರ್, ಮಾಜಿ ಅಧ್ಯಕ್ಷರಾದ ಎಂ.ಕೆ.ದೇಚಮ್ಮ, ಸಚಿನ್ ಕುಟ್ಟಯ್ಯ, ಸದಸ್ಯರಾದ ಎನ್.ವಿಶ್ವನಾಥ್, ಶಿಭಾ ಪ್ರತ್ವಿನಾಥ್,…
ಕಾಡಾನೆ ಹಾವಳಿಯಿಂದ ಜರ್ಜರಿತರಾದ ಗ್ರಾಮಸ್ಥರು
July 26, 2018ವಿರಾಜಪೇಟೆ: ಕಳೆದ ಜೂನ್ ತಿಂಗಳಿಂದ ವಿರಾಜಪೇಟೆ ಸಮೀಪದ ದೇವಣಗೇರಿ, ಅಂಬಲ, ಮೈತಾಡಿ, ಚಾಮಿಯಾಲ, ಹಾಲುಗುಂದ ಗ್ರಾಮಗಳ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಒಂದು ಮರಿಆನೆ ಬಿಡಾರ ಹೂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡಿಸುವುದರಲ್ಲೆ ಬೆಳೆಗಾರರ ಪಸಲು ನಷ್ಟಉಂಟಾಗುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ದೂರಿದ್ದಾರೆ. ಗ್ರಾಮಸ್ಥರು ಬಸ್ಸಿಗಾಗಿ ರಸ್ತೆಯಲ್ಲಿ ನಿಂತಾಗ ಭಟ್ಟಮಕ್ಕಿಯ ರಸ್ತೆಯ ಮದ್ಯದಲ್ಲಿಯೇ ಕಾಡಾನೆಗಳು ಓಡಾಡುತ್ತಿರುವುದರಿಂದ ಆನೆಯನ್ನು ಕಂಡ ಗ್ರಾಮಸ್ಥರು ಓಡಿಹೋಗಿ ದ್ದಾರೆ. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಓಡಾಡುವಂತಾಗಿದೆ. ಬೈರಂಬಾಡ…
ವಿರಾಜಪೇಟೆಯಲ್ಲಿ ಶ್ರೀ ಗುರು ಪೂಜಾ ಉತ್ಸವ
July 23, 2018ವಿರಾಜಪೇಟೆ: ದೇಶದಲ್ಲಿ ಲಕ್ಷದ ಅರವತ್ತು ಸಾವಿರ ಸೇವಾ ಚಟು ವಟಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಸ್ವಯಂಸೇವಕ ಸಂಘಗಳು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿವೆ. ಹಿಂದೂಗಳು ನಾವೆಲ್ಲರೂ ಒಂದು ರಾಷ್ಟ್ರದ ಮಕ್ಕಳೆಂಬ ನಂಬಿಕೆಯಿಂದ ಬದುಕು ನಡೆಸುವಂತಾಗಬೇಕು ಎಂದು ಬೆಂಗಳೂರು ಸಂಸ್ಕೃತ ಭಾರತಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ದತ್ತಾ ತ್ರೇಯ ವಜ್ರಳ್ಳಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರಾಜಪೇಟೆ ಶಾಖೆ ವತಿಯಿಂದ ಸ್ಥಳಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಶ್ರೀ ಗುರು ಪೂಜಾ ಉತ್ಸವ” ಸಭಾ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದ ದತ್ತಾತ್ರೇಯ ವಜ್ರಳ್ಳಿ ಅವರು,…
ಅಮ್ಮತ್ತಿ ಪಿಎಸಿಸಿ ನಿವ್ವಳ ಲಾಭದಲ್ಲಿ ದಾಖಲೆ ನಿರ್ಮಾಣ
July 16, 2018ವಿರಾಜಪೇಟೆ: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನಲ್ಲಿ ದಾಖಲೆಯ 35,29,608.15 ರೂ. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಮೂಕೊಂಡ ಸಿ.ಅಯ್ಯಪ್ಪ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ನಂತರ ಮಾತನಾಡುತ್ತಾ ಸಂಘವು ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದೆ. ನವ ಪೀಳಿಗೆಯ ಕೃಷಿಕರನ್ನು ಸಂಘದ ಸದಸ್ಯರನ್ನಾಗಿಸಿ ಸಂಘದ ಬಲವರ್ಧನೆ, ರೈತರಿಗೆ ಅಗತ್ಯದ ಮಾಹಿತಿಗಳನ್ನು ಏಕಕಾಲದಲ್ಲಿ ಆನ್ ಲೈನ್ ಮೂಲಕ ಮೊಬೈಲ್ ದೂರವಾಣಿಗೆ ರವಾನಿಸುವ ಉದ್ದೇಶ…
ವಿರಾಜಪೇಟೆಯಲ್ಲಿ ರೋಟರಿ ಪದಗ್ರಹಣ ಸಮಾರಂಭ
July 16, 2018ವಿರಾಜಪೇಟೆ: ರೋಟರಿ ಸಂಸ್ಥೆಯ ಸಮಾಜ ಸೇವೆ ಅಮೂಲ್ಯ ವಾದದ್ದು. ಬಡವರು, ನಿರ್ಗತಿಕರು, ಅರ್ಹ ಫಲಾನುಭವಿಗಳಿಗೆ ವಿದ್ಯಾಭ್ಯಾಸ, ಆರೋಗ್ಯದ ದೃಷ್ಟಿಯಿಂದ ಸಮಗ್ರ ಮಾಹಿತಿ, ತಿಳುವಳಿಕೆಯನ್ನು ನೀಡುವಂತಾಗಬೇಕು. ಈ ಸೇವೆಯಿಂದ ಪ್ರತಿಯೊಬ್ಬರಿಗೂ ಸಾರ್ಥಕತೆಯ ಸೇವೆ ಒದಗಿಸುವಂತಾಗ ಬೇಕು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೋ:ಎಂ.ಎಂ.ಸುರೇಶ್ ಚಂಗಪ್ಪ ಹೇಳಿದರು. ರೋಟರಿ ಕ್ಲಬ್ನಿಂದ ವಿರಾಜಪೇಟೆ ರೋಟರಿ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಸಾಲಿನ ಆಡಳಿತ ಮಂಡಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತ ನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜ…
ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ
July 14, 2018ಮಡಿಕೇರಿ: ಹೋಂ ಸ್ಟೇಗೆ ಬಂದಿದ್ದ ಪ್ರವಾಸಿಗರೋರ್ವರು ಮಳೆಯ ತೀವ್ರತೆಯ ನಡುವೇ ಕಿರು ಸೇತುವೆ ದಾಟುವ ಸಂದರ್ಭ ಆಯ ತಪ್ಪಿ ನದಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಬೀರುಗ ಗ್ರಾಮದಲ್ಲಿ ನಡೆದಿದೆ. ಬೀರುಗ ಗ್ರಾಮದಲ್ಲಿರುವ ಅಜ್ಜಮಾಡ ಚಿಮ್ಮ ಎಂಬುವವರ ಹೋಂಸ್ಟೇಗೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡ ಶುಕ್ರವಾರ ಹೋಂಸ್ಟೇ ಬಳಿಯೇ ಇರುವ ನದಿಯನ್ನು ಕಿರಿದಾದ ಸೇತುವೆ ಮೇಲೆ ದಾಟುತ್ತಿತ್ತು. ಈ ಸಂದರ್ಭ ಸಂದೀಪ್ ಎಂಬವರು ಆಯತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದ್ದಾರೆ. ಕೂಡಲೇ ನದಿಗಿಳಿದ…
ಮಗುವಿಗೆ ಜನ್ಮವಿತ್ತು ತಾಯಿ ಸಾವು ಪ್ರಕರಣ: ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
July 13, 2018ವಿರಾಜಪೇಟೆ: ವಿರಾಜಪೇಟೆ ಸಮೀಪದ ಮರಂದೋಡ ಗ್ರಾಮದ ಕೀರ್ತನ್ ಕಾರ್ಯಪ್ಪ ಅವರ ಪತ್ನಿ ಲಾಸ್ಯ ತೇಜಸ್ವಿನಿ [26] ಸಾವಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬಿಕಾ ಖಾಸಗಿ ನರ್ಸಿಂಗ್ ಹೋಂನ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿವರೆಗೆ ಮೆರವಣಿಗೆ ಸಾಗಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ತಾಲೂಕು ತಾಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಲಾಸ್ಯ ತೇಜಸ್ವಿನಿ ಹೆರಿಗೆ ನೋವಿನ ಸಂದರ್ಭ…
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
July 10, 2018ವಿರಾಜಪೇಟೆ: ಮನುಷ್ಯನ ಬದುಕಿಗೆ ಪರಿಸರವು ಪರಿಪೂರ್ಣತೆಯನ್ನು ನೀಡುತ್ತಿರುವ ಕಾರಣದಿಂದಾಗಿ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಇದೆಯೆಂದು ಹಿರಿಯ ಪರಿಸರ ತಜ್ಞ ಡಾ. ಎಸ್.ವಿ.ನರಸಿಂಹನ್ ಹೇಳಿದ್ದಾರೆ. ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಹೊಂಬೆಳಕು” ಮಾಸಿಕ ತತ್ವ ಚಿಂತನ ಗೋಷ್ಠಿಯ 178ನೇ ಕಿರಣದಲ್ಲಿ “ಪರಿಸರ ಗೀತೆಗಳು, ಒಂದು ರೂಪಕ” ಎಂಬ ವಿಷಯದ ಬಗ್ಗೆ ಗೀತೆಗಳ ಪ್ರಸ್ತುತಿ ಕಾರ್ಯಕ್ರಮದ ನಿರೂಪಕರಾಗಿ ಮಾತನಾಡಿದ ನರಸಿಂಹನ್, “ಭೂಮಿಯಲ್ಲಿ ಲಕ್ಷಾಂತರ ವರ್ಷಗಳಿಂದ ಪರಿಸರವನ್ನು ಅನುಭವಿಸುತ್ತಾ ಬದುಕುತ್ತಿ ರುವ ಮನುಷ್ಯ…