ಯಳಂದೂರು: ಯಳಂದೂರು ತಾಲೂಕು ಹಾಗೂ ಚಾಮ ರಾಜನಗರ ಜಿಲ್ಲೆಯ ಸಾಹಿತ್ಯಕ್ಕೆ ಸುಮಾರು 500 ವರ್ಷದ ಇತಿಹಾಸವಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಇಲ್ಲಿನ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಶಂಕನಪುರ ಮಹದೇವ್ ಹೇಳಿದರು. ಪಟ್ಟಣದ ದಿವಾನ್ ಪೂರ್ಣಯ್ಯನವರ ಪ್ರಾಚ್ಯವಸ್ತು ಸಂಗ್ರಹಾಲಯದ ಆವರಣದ ಎಂ.ಎನ್.ವ್ಯಾಸರಾವ್ ಸಭಾ ಮಂಟಪದ ವೇದಿಕೆಯಲ್ಲಿ ಶನಿವಾರ ನಡೆದ ಯಳಂ ದೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಳಂದೂರು ತಾಲೂಕಿನ ಮೊದಲ ಕವಿ ಷಡಕ್ಷರಿ. ಇವರು ಕ್ರಿ.ಶ. 1500ರ ಸುಮಾರಿಗೆ…
ವಿಜೃಂಭಣೆಯ ಶ್ರೀಹಿಂಡಿ ಮಾರಮ್ಮನ ಕೊಂಡೋತ್ಸವ
November 10, 2018ಯಳಂದೂರು: ತಾಲೂಕಿನ ಅಗರ ಮಾಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋತ್ಸವ ವಿಭೃಂಜನೆ ಯಿಂದ ನಡೆಯಿತು. ಅಗರ, ಮಾಂಬಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಕಿನಕಹಳ್ಳಿ, ಬಸವಪುರ, ಕಟ್ನವಾಡಿ, ಬನ್ನಿ ಸಾರಿಗೆ, ಕುಣ್ಣಗಳ್ಳಿ ಸೇರಿದಂತೆ 7 ಗ್ರಾಮಸ್ಥರು ಪ್ರತಿವರ್ಷ ದೀಪಾವಳಿ ಮಾರನೇ ದಿನದಿಂದ 2 ದಿನಗಳ ಕಾಲ ಗ್ರಾಮ ದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋ ತ್ಸವವನ್ನು ಸಂಭ್ರಮದಿಂದ ಆಚರಿಸುವರು. ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ದೇವಾಲ ಯದಲ್ಲಿ ಸಪ್ತಮಾತೃಕೆಯರಿಗೆ ಪೂಜೆ ಸಲ್ಲಿಸಿ, ವಿಶೇಷ ಹೋವಿನ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ…
ಭ್ರಷ್ಟಾಚಾರ ಪ್ರಶ್ನಿಸಿದ ವ್ಯಕ್ತಿ ಮೇಲೆ ಗ್ರಾಪಂ ಅಧ್ಯಕ್ಷ ಹಲ್ಲೆ
October 27, 2018ಯಳಂದೂರು: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆನ್ನಲಾದ ಭ್ರಷ್ಟಚಾರದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಅಂಬಳೆ ಗ್ರಾಮ ಪಂಚಾ ಯಿತಿ ಅಧ್ಯಕ್ಷರೇ ನಡು ರಸ್ತೆಯಲ್ಲಿ ರೌಡಿ ಯಂತೆ ಹಲ್ಲೆ ನಡೆಸಿರುವ ಘಟನೆ ಅಂಬಳೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಅಂಬಳೆ ಗ್ರಾಪಂ ಅಧ್ಯಕ್ಷ ಸಿ.ಸಿದ್ದನಾಯಕ ಅದೇ ಗ್ರಾಮದ ವೀರ ಶೈವ ಬೀದಿಯ ಮಾಜಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸಿ.ಚಾಮರಾಜು ಮೇಲೆ ನಡೆಸಿದ್ದಾರೆ. ಗುರುವಾರ ಅಂಬಳೆ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಕೆಲವು ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿರುವ ಬಗ್ಗೆಯೂ…
ಯಳಂದೂರಿನಲ್ಲಿ ವಾಲ್ಮೀಕಿ ಭಾವಚಿತ್ರ ಆದ್ದೂರಿ ಮೆರವಣಿಗೆ
October 25, 2018ಯಳಂದೂರು: ರಾಮಾಯಣ ಕಾವ್ಯ ಪುರುಷ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಚಾಲನೆ ನೀಡಿದರು. ತಾಲೂಕು ಆಡಳಿತ ಮತ್ತು ತಾಲೂಕು ನಾಯಕ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ತಾಲೂಕು ಕಚೇರಿ ಅವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಯೋಗೇಶ್, ಮಹರ್ಷಿ ವಾಲ್ಮೀಕಿ ಒಬ್ಬ ಆದರ್ಶ ಪುರುಷರಾಗಿದ್ದರು. ಅವರ ತತ್ವ ಸಿದ್ಧಾಂತಗಳನ್ನು ಎಲ್ಲಾ ಜನಾಂಗವು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಮೆರವಣಿಗೆ…
ಯಳಂದೂರಿನಲ್ಲಿ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ
October 3, 2018ಯಳಂದೂರು: ಯಳಂದೂರು ತಾಲೂಕು ನೂತನ ಸಂಘವನ್ನು ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಹಾಗೂ ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ನಂದೀಶ್ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಟ್ಟಣ ಪ್ರವಾಸಿ ಮಂದಿರಲ್ಲಿ ನಡೆದ ಸಭೆÀಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಪಿ.ಶಂಕರ್, ಉಪಾಧ್ಯಕ್ಷರಾಗಿ ಪರ್ತಕರ್ತ ಅಂಬಳೆ ವೀರಭದ್ರ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಗೂಳಿಪುರ ನಂದೀಶ್, ಖಜಾಂಚಿಯಾಗಿ ಯರಿಯೂರು ನಾಗೇಂದ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತುಸ. ಸಂಘದ ಪದಾಧಿಕಾರಿಗಳಾಗಿ ಪರ್ತಕರ್ತರಾದ ಪೈರೋಜ್ಖಾನ್, ಡಿ.ಪಿ.ಮಹೇಶ್. ಇರ್ಫಾನ್ಸೈಯದ್, ವಿ.ನಾಗರಾಜು….
ಅಂಬಳೆಯಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ಹಬ್ಬ
September 27, 2018ಯಳಂದೂರು: ತಾಲೂಕಿನ ಅಂಬಳೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಕ್ತಬೀಜಾಸುರ ಸಂಹಾರ ದೊಡ್ಡಹಬ್ಬ (ಬಾಳೆ ಕತ್ತರಿಸುವ ಹಬ್ಬ) ವಿಜೃಂಭಣೆಯಿಂದ ಬುಧವಾರ ಜರುಗಿತು. ಬೆಳಿಗ್ಗೆಯಿಂದಲೇ ಗ್ರಾಮದ ಎಲ್ಲಾ ಕೋಮಿನ ಜನರು ವಾದ್ಯ ಮೇಳ, ನಗರಿ ಜತೆಯಲ್ಲಿ ಛತ್ರಿ ಚಾಮರಗಳೊಂದಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿರುವ ಸುವರ್ಣಾವತಿ ನದಿಯಲ್ಲಿ ವಿಶೇಷ ಪೂಜೆ ಮಾಡಿದರು. ನಂತರ ಭಕ್ತರು ಹೊಸ ಕೇಲು ಜತೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಬಳಿಕ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹೊತ್ತ ಭಕ್ತರು…
ಕಂದಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ
September 18, 2018ಜನಪ್ರತಿನಿಧಿಗಳು, ಪೊಲೀಸರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರÀ ನಾಮಫಲಕಕ್ಕೆ ಸಗಣಿ ಬಳಿದು ಅಪಮಾನ ಮಾಡಿರುವ ಆರೋಪಿಗಳನ್ನು ಬಂಧಿಸು ವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಸೋಮ ವಾರ ಕಂದಹಳ್ಳಿ ಗ್ರಾಮಸ್ಥರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಗ್ರಾಮದ ಅಂಬೇಡ್ಕರ್ ಭಾವಚಿತ್ರ ಇರುವ ಸ್ಥಳದಲ್ಲಿ ಸಮಾವೇಶಗೊಂಡ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆ ಗಳ ಮುಖಂಡರು ಯಳಂದೂರಿನ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ಪೊಲೀಸ್ ಇಲಾಖೆ, ಸ್ಥಳೀಯ ಜನಪ್ರತಿ…
ಪೊಲೀಸ್ ಠಾಣೆ ಮುಂದೆ ಗುಂಪು ಘರ್ಷಣೆ! ಲಾಠಿ ಚಾರ್ಜ್
September 15, 2018ಯಳಂದೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿರುವ ಘಟನೆ ಗುರುವಾರ ರಾತ್ರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘರ್ಷಣೆ ತಪ್ಪಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಜ್ನಿಂದ ತಪ್ಪಿಸಿಕೊಳ್ಳಲು ಜನರು ತಾವು ತಂದಿದ್ದ ಸುಮಾರು 20 ಕ್ಕೂ ಹೆಚ್ಚು ಬೈಕ್ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿ ದ್ದರಿಂದ ಪೊಲೀಸರು ಬೈಕ್ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಯಳಂದೂರು ತಾಲೂಕಿನ ಹೊನ್ನೂರು (ಬಿಚ್ಚಹಳ್ಳಿ) ಗ್ರಾಮದ ಒಂದೇ ಕೋಮಿನ ಎರಡು ಗುಂಪುಗಳ ನಡುವೆ…
ಉಪಹಾರ ಸೇವಿಸಿದ 42 ಮಕ್ಕಳು ಅಸ್ವಸ್ಥ
September 9, 2018ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವರು, ಸಂಸದರ ಸೂಚನೆ ಯಳಂದೂರು: ಬೆಳಗಿನ ಉಪಹಾರ ಸೇವಿಸಿ 42 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಉಪಾ ಹಾರಕ್ಕೆ ತಯಾರಿಸಿದ ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದಿದ್ದಾರೆ. ತಿಂದ ಸ್ವಲ್ಪ ಸಮಯದಲ್ಲಿಯೇ ವಿದ್ಯಾರ್ಥಿಗಳಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಶಿಕ್ಷಕರು ಮಕ್ಕಳನ್ನು…
‘ಇಲ್ಲ’ಗಳ ನಡುವೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ
September 3, 2018ಯಳಂದೂರು:- ಮೃತ್ಯುಗೆ ಆಹ್ವಾನ ನೀಡುವ ವಿದ್ಯುತ್ ಪರಿವರ್ತಕ….. ದೈಹಿಕ ಶಿಕ್ಷ ಕರೇ ಇಲ್ಲದೆ ಕ್ರೀಡಾ ವಂಚಿತ ವಿದ್ಯಾರ್ಥಿಗಳು… ಚುಮು ಚುಮು ಚಳಿಯಲ್ಲಿ ಹೆಣ್ಣು ಮಕ್ಕಳಿಗೆ ತಣ್ಣೀರು ಸ್ನಾನ! ಬಿಸಿ ನೀರು ಬೇಕೆಂದರೆ, ಮಕ್ಕಳೇ ಸ್ವತಃ ಒಲೆಯಲ್ಲಿ ನೀರು ಕಾಯಿಸಬೇಕಾದ ಪರಿಸ್ಥಿತಿ… ಇದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ದುಸ್ಥಿತಿ. ಯಳಂದೂರು ತಾಲೂಕು ಕೇಂದ್ರದಿಂದ 3 ಕಿಮೀ ದೂರದಲ್ಲಿರುವ ಮೆಲ್ಲಹಳ್ಳಿ ಗೇಟ್ ಬಳಿ ದುಗ್ಗಹಟ್ಟಿ ಗ್ರಾಮದ ರಾಜೇಶ…