ಹೊಳೆಯಲ್ಲಿ ಮುಳುಗಿ ಬಾಲಕ ಸೇರಿ ಇಬ್ಬರು ಸಾವು
ಕೊಡಗು

ಹೊಳೆಯಲ್ಲಿ ಮುಳುಗಿ ಬಾಲಕ ಸೇರಿ ಇಬ್ಬರು ಸಾವು

October 27, 2020

ಸೋಮವಾರಪೇಟೆ, ಅ.26-ಕಾಲು ತೊಳೆಯಲೆಂದು ನದಿ ನೀರಿಗೆ ಇಳಿದು ಕಾಲು ಜಾರಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಚಿಕ್ಕಪ್ಪ ಕೂಡ ನೀರುಪಾಲಾಗಿರುವ ಧಾರಣ ಘಟನೆ ತಾಲೂಕಿನ ಮಾದಾಪುರದಲ್ಲಿ ಭಾನುವಾರ ನಡೆದಿದೆ.

ಮಡಿಕೇರಿ ಲಯನ್ಸ್ ಕ್ಲಬ್ ನಿರ್ದೇಶಕ ಬಾಚಿನಾಡಂಡ ಮಧು ನಂಜಪ್ಪ(48) ಹಾಗೂ ಅವರ ಅಣ್ಣನ ಪುತ್ರ ನಿರೋಶ್ ನಾಚಪ್ಪ(11) ಸಾವನ್ನಪ್ಪಿದವರು. ಮೂಲತ ತಾಲೂಕಿನ ಮಾದಾಪುರ ಸಮೀಪದ ಬಿಳಿಗೇರಿಯವರಾದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬಾಚಿನಾಡಂಡ ಮೊಣ್ಣಪ್ಪ ಮತ್ತು ಅವರ ಕುಟುಂಬದ 15 ಮಂದಿ ತಮ್ಮ ತೋಟದ ಮನೆಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಎಲ್ಲರೂ ಮನೆಯ ಸಮೀಪವಿರುವ ಮಾದಾಪುರ ಹೊಳೆಯ ವೀಕ್ಷಣೆಗೆ ಆಗಮಿಸಿ ದ್ದರು. ಈ ಸಂದರ್ಭ ಮೊಣ್ಣಪ್ಪ ಅವರ ಪುತ್ರ ನಿರೋಶ್ ಹೊಳೆಯಲ್ಲಿ ಕಾಲು ತೊಳೆಯ ಲೆಂದು ಹೋದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು, ಅತನನ್ನು ರಕ್ಷಿಸಲು ಚಿಕ್ಕಪ್ಪ ನಂಜಪ್ಪ ಅವರು ನೀರಿಗೆ ಧುಮಿಕಿದ್ದಾರೆ. ಆದರೆ ಬಾಲಕನ ರಕ್ಷಣಾ ಕಾರ್ಯ ವಿಫಲವಾಗಿ ಇಬ್ಬರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೆÇಲಿಸರು ಮತ್ತು ಸ್ಥಳೀಯರು ಮೃತ ದೇಹಗಳನ್ನು ನೀರಿನಿಂದ ಹೊರ ತೆಗೆದರು. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Translate »