ವಿಜಯ ವಿಠ್ಠಲ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಮೈಸೂರು

ವಿಜಯ ವಿಠ್ಠಲ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

December 6, 2018

ಮೈಸೂರು:  ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಭಾಗ ಮಟ್ಟದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಪಡೆದು, ಚಿಕ್ಕಬಳ್ಳಾಪುರದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬಹುಮಾನ ವಿಜೇತರು: ಪ್ರಥಮ ಪಿಯುಸಿಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭರತ್ ಎಸ್. ಮತ್ತು ದೀಪಕ್ ಎಂ. (ಪ್ರಥಮ ಸ್ಥಾನ), ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಅನಘ.ಜಿ.ಅಡಿಗ (ಪ್ರಥಮ ಸ್ಥಾನ), ಜನಪದಗೀತೆ ಸ್ಪರ್ಧೆಯಲ್ಲಿ ಪ್ರಕೃತಿ ಎನ್.ಭಟ್ (ದ್ವಿತೀಯ ಸ್ಥಾನ), ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಶ್ರೀನಂದಿನಿ ಕೆ.ಆರ್. (ತೃತೀಯ ಸ್ಥಾನ), ಭಕ್ತಿಗೀತೆ ಸ್ಪರ್ಧೆ ಯಲ್ಲಿ ಮಾನ್ಯ ಎಂ. (ತೃತೀಯ ಸ್ಥಾನ) ಗಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಚಿಲ್ಕುಂದ ಅರುಣ ತ್ಯಾಗರಾಜು (ಪ್ರಥಮ ಸ್ಥಾನ), ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪಲ್ಲವಿ.ಪಿ (ತೃತೀಯ ಸ್ಥಾನ) ಗಳಿಸಿದ್ದಾರೆ.

Translate »