ನೆಪ್ರೋ-ಯುರಾಲಜಿ ಸಂಸ್ಥೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ
ಮೈಸೂರು

ನೆಪ್ರೋ-ಯುರಾಲಜಿ ಸಂಸ್ಥೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ

March 20, 2021

ಮೈಸೂರು,ಮಾ.18-ಕೆ.ಆರ್. ಆಸ್ಪತ್ರೆಯ ಆವರಣದಲ್ಲಿರುವ ನೆಪ್ರೋ-ಯುರಾಲಜಿ ಸಂಸ್ಥೆಯ ವತಿಯಿಂದ ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಯಿತು. ಕೆ.ಆರ್.ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕ ಡಾ. ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಧ್ಯಾಪಕಿ ಡಾ.ಹಿಮಮಣಿ ಮಾತ ನಾಡಿ, ಕಿಡ್ನಿ ಕಾಯಿಲೆ ಇರುವವರು ಹೇಗೆ ಉತ್ತಮ ಜೀವನ ನಡೆಸಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರ್ಥವಾಗುವಂತೆ ಪವರ್ ಪಾಯಿಂಟ್ ಮೂಲಕ ತಿಳಿಸಿದರು.

ಮನೋವೈದ್ಯ ಡಾ.ಶಿವಾನಂದ ಮನೋ ಹರ್ ಮಾತನಾಡಿ, ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳು ಮಾನಸಿಕ ಸ್ಥೈರ್ಯವನ್ನು ಹೇಗೆ ಜೀವನದಲ್ಲಿ ಅಳ ವಡಿಸಿಕೊಂಡು ದೀರ್ಘಕಾಲ ಬದುಕ ಬಹುದೆಂದು ತಿಳಿಸಿದರು.

ಆಹಾರ ತಜ್ಞ ಡಾ.ಸಿದ್ದರಾಜು ಮಾತನಾಡಿ, ಕಿಡ್ನಿ ರೋಗಿಗಳು ಪ್ರತಿದಿನ ಯಾವ ಯಾವ ಆಹಾರವನ್ನು ತೆಗೆದುಕೊಂಡರೆ ಸಾಮಾನ್ಯ ರಂತೆ ಜೀವನ ಸಾಗಿಸಬಹುದೆಂದರು.

ಮೈಸೂರು ಯುರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ|| ನರೇಂದ್ರ ಮಾತನಾಡಿ, ನಿರ್ದೇಶಕರಾದ ಡಾ.ಆರ್.ಕೇಶವ ಮೂರ್ತಿ ಅವರ ಪರಿಶ್ರಮ ಹಾಗೂ ವಿಶೇಷ ಆಸಕ್ತಿ ಯಿಂದ ಈ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆವಿಗೂ 328 ರೋಗಿಗಳಿಗೆ ಮೇಜûರ್ ಆಪರೇಷನ್ ಮಾಡಿದ್ದು, 716 ರೋಗಿಗಳಿಗೆ ಮೈನರ್ ಆಪರೇಷನ್ ಮಾಡಲಾಗಿದೆ. 17040 ಜನರಿಗೆ ಡಯಾಲಿಸಿಸ್ ಮಾಡಲಾಗಿದೆ. 24173 ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 1392 ಜನರು ಒಳರೋಗಿಗಳಾಗಿ ಚಿಕಿತ್ಸೆ ಪಡೆ ದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಾದ ಕರ್ನಾಟಕ ಆರೋಗ್ಯಭಾಗ್ಯ ಇತರೆ ಯೋಜನೆ ಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಿರಿ ಎಂದರು.

ಡಾ. ಅನಿಕೇತ್ ಪ್ರಭಾಕರ್ ಮಾತನಾಡಿ, ಡಯಾಲಿಸಿಸ್ ರೋಗಿಗಳಿಗೆ ಪೂರ್ವದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಡಯಾ ಲಿಸಿಸ್ ಪಡೆದುಕೊಳ್ಳಲು ಅನುಸರಿಸ ಬೇಕಾದ ಕ್ರಮದ ಬಗ್ಗೆ ತಿಳಿಸಿದರು. ನಂತರ ಮೈಸೂರಿನ ಇಂಟಿಮೇಟ್ ಥಿಯೇಟರ್ ಕಲಾವಿದರಿಂದ ಕಿಡ್ನಿ ಕಸಿ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಿಸಲಾಯಿತು.
ಈ ವೇಳೆ ಡಾ.ಡೇವಿಯರ್ ಡಿಸೋಜû, ಡಾ. ಪ್ರಕಾಶ್‍ಪ್ರಭು ಉಪಸ್ಥಿತರಿದ್ದರು. ಡಾ.

 

Translate »