ಕಾಡಾಣೆ ದಾಳಿಗೆ ಯುವಕ ಬಲಿ
ಮೈಸೂರು ಗ್ರಾಮಾಂತರ

ಕಾಡಾಣೆ ದಾಳಿಗೆ ಯುವಕ ಬಲಿ

October 22, 2020

ನಂಜನಗೂಡು, ಅ.21-ಕಾಡಾನೆ ತುಳಿತದಿಂದ ಆದಿವಾಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಡಿಯಾಲ ಸಮೀಪದ ವೆಂಕಟಗಿರಿ ಕಾಲೋನಿಯಲ್ಲಿ ನಡೆದಿದೆ.

ಕಾಲೋನಿಯ ಕೆಂಪ-ಚಿಕ್ಕಮ್ಮ ದಂಪತಿ ಪುತ್ರ ಗಣೇಶ್ ಅಲಿಯಾಸ್ ಹನ್ಸ್ ಗಣೇಶ(25)ಮೃತ ಯುವಕ. ಈತ ಮಂಗಳವಾರ ರಾತ್ರಿ ಬಂಕಹಳ್ಳಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಡೋರನಕಟ್ಟೆ ಕಾಲೋನಿ ಸಮೀಪ ರಸ್ತೆಯಲ್ಲಿ ಕಾಡಾನೆ ಎದುರಾಗಿದೆ. ಈ ವೇಳೆ ಈತನ ಜೊತೆಯಲ್ಲಿದ್ದ ಮತ್ತೋರ್ವ ಸಮೀಪದಲ್ಲಿದ್ದ ಮರವನ್ನೇರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಗಣೇಶ್ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಹೆಡಿಯಾಲ ಅರಣ್ಯ ಉಪವಿಭಾಗದ ಎಸಿಎಫ್ ರವಿಕುಮಾರ್, ಆರ್‍ಎಫ್‍ಓ ಮಂಜುನಾಥ್ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು.

Translate »