2ನೇ ದಿನವೂ ಮುಂದುವರೆದ  ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸಭೆ
ಮೈಸೂರು

2ನೇ ದಿನವೂ ಮುಂದುವರೆದ  ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸಭೆ

July 12, 2018

ಮೈಸೂರು: ಆರ್‍ಬಿಐ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಮತ್ತು ಜಿಎಸ್‍ಟಿ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಮಂಗಳವಾರ ಮೈಸೂರಿಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರು 2ನೇ ದಿನವಾದ ಇಂದೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿದ ಮೊಯ್ಲಿ ಅವರು, ನಂತರ ಮಧ್ಯಾಹ್ನ ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಸಂಜೆ ಕೆಆರ್‍ಎಸ್‍ಗೆ ಸಮಿತಿಯ ಸದಸ್ಯರನ್ನು ಕರೆದೊಯ್ದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ (ಜು.12) ಬೆಳಿಗ್ಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ, ಬೆಳಿಗ್ಗೆ 11.30 ಗಂಟೆಗೆ ಮಡಿಕೇರಿಯಲ್ಲಿ ಎಫ್‍ಕೆಸಿಸಿ, ಸಿಐಐ, ಪ್ಲಾಂಟ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಮಂಗಳೂರಿಗೆ ಭೇಟಿ ನೀಡು ವರು. ಜುಲೈ 13ರಂದು ಅಲ್ಲಿ ವಿಮಾನ ನಿಲ್ದಾಣ, ಶಿಪ್ಪಿಂಗ್ ಯಾರ್ಡ್ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸುವ ಸಂಸದರು ರಾಜ್ಯಾದ್ಯಂತ ಕಲೆ ಹಾಕಿರುವ ಸಲಹೆ, ಮಾರ್ಗದರ್ಶನಗಳನ್ನೊಳ ಗೊಂಡ ಕ್ರೋಢಿಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ.

Translate »