`ಅವಳ್ ಸಲ್ವಾಗಿ’ ಆನಂದ್‍ಸಿಂಗ್-ಗಣೇಶ್‍ಬಡಿದಾಡಿದ್ರಾ…!?
ಮೈಸೂರು

`ಅವಳ್ ಸಲ್ವಾಗಿ’ ಆನಂದ್‍ಸಿಂಗ್-ಗಣೇಶ್‍ಬಡಿದಾಡಿದ್ರಾ…!?

March 3, 2019

ಬೆಂಗಳೂರು: ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‍ನಲ್ಲಿ ಜ.19ರಂದು ರಾತ್ರಿ ಗಲಾಟೆ ಸಂಬಂಧ ವೀಡಿಯೋ ವೊಂದು ವೈರಲ್ ಆಗಿದ್ದು, ಈ ಬಳ್ಳಾರಿ ಶಾಸಕರ ಗಲಾಟೆ ನಡೆದದ್ದು `ಆಪರೇಷನ್ ಕಮಲ’ ವಿಚಾರಕ್ಕಾಗಿ ಅಲ್ಲ. ಅದು `ಅವಳಿಗಾಗಿ’ ನಡೆದಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಜೈಲಿನಲ್ಲಿರುವ ಕಾಂಗ್ರೆಸ್ ನಿಂದ ಅಮಾನತಾಗಿರುವ ಕಂಪ್ಲಿ ಶಾಸಕ ಗಣೇಶ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿ ರುವ ಇಂದೇ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಡೀ ಪ್ರಕರಣಕ್ಕೆ ತಿರುವು ನೀಡಿದೆ. ವೈರಲ್ ಆಗಿರುವ ಕೆಲ ಸೆಕೆಂಡ್‍ಗಳ ವೀಡಿಯೋ ದಲ್ಲಿ ಕಪ್ಪು ಟೀ-ಷರ್ಟ್ ಮತ್ತು ಶಾಟ್ರ್ಸ್ (ಬರ್ಮುಡಾ ನಿಕ್ಕರ್)ಧರಿಸಿರುವ ಆನಂದ್ ಸಿಂಗ್ ಅವರು ಕಪ್ಪು ಪ್ಯಾಂಟ್ ಮತ್ತು ಬಿಳಿ ಷರ್ಟ್ ಧರಿಸಿರುವ ಕಂಪ್ಲಿ ಶಾಸಕ ಗಣೇಶ್ ಅವರ ಕಾಲರ್ ಪಟ್ಟಿಯನ್ನು ಹಿಡಿದುಕೊಂಡು ಆಕ್ರೋಶವಾಗಿ `ಅವಳ್ ಸಲ್ವಾಗಿ ನೀನ್ ಹೊಡೀತೀಯೇನೋ? ಏಯ್, ಹೊಡ್ಯೋ ನನ್ಗೆ’ ಎಂದು ಘರ್ಜಿಸುತ್ತಾರೆ. ಆಗ ಕಂಪ್ಲಿ ಶಾಸಕ ಗಣೇಶ್ `ಅಣ್ಣಾ ಇದೆಲ್ಲಾ ತಪ್ಪು’ ಎಂದು ಹೇಳುತ್ತಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಇಷ್ಟು ಮಾತ್ರ ದೃಶ್ಯ ಗಳಿವೆ. ವೀಡಿಯೋದಲ್ಲಿ ಬಳಕೆಯಾಗಿರುವ `ಅವಳ್ ಸಲ್ವಾಗಿ ನೀನ್ ಹೊಡೀತೀಯೇನೋ?’ ಎಂಬ ಪ್ರಶ್ನೆ ಯನ್ನು ಗಮನಿಸಿದಾಗ ಯಾರೋ ಮಹಿಳೆಗಾಗಿ ಇವರಿ ಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಭಾಸವಾಗು ತ್ತದೆ. ಆದರೆ ಆ ಮಹಿಳೆ ಯಾರು? ಮಹಿಳೆಗೂ ಈ ಇಬ್ಬರು ಶಾಸಕರ ನಡುವಿನ ಸಂಬಂಧ ವೇನು? ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸಿವೆ.

ಕಂಪ್ಲಿ ಗಣೇಶ್ ಆಪರೇಷನ್ ಕಮಲಗೆ ಒಳಗಾಗಿ ಮುಂಬೈಗೆ ತೆರಳಿದ್ದರು. ಅವರು ಮುಂಬೈನಲ್ಲಿ ಬಿಜೆಪಿಯವರ ಜೊತೆ ಇರುವ ವಿಚಾರವನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆನಂದ್‍ಸಿಂಗ್ ತಿಳಿಸಿದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎಂದು ಘರ್ಷಣೆ ನಡೆದು ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಹೇಳಲಾಗಿತ್ತು. ಆದರೆ ಇದೀಗ ವೈರಲ್ ಆಗಿರುವ ವೀಡಿಯೋ ಮೂಲಕ ಗಲಾಟೆ ನಡೆದದ್ದು ಆಪರೇಷನ್ ಕಮಲ ವಿಚಾರವಾಗಿ ಅಲ್ಲ, ಓರ್ವ ಮಹಿಳೆಯ ವಿಚಾರವಾಗಿ ಎಂಬ ತಿರುವು ದೊರೆತಿದೆ. ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ಹೆಣ್ಣಿಗಾಗಿ ಗಲಾಟೆ ನಡೆದಿದೆ ಎಂದು ಸುದ್ದಿವಾಹಿನಿಗಳು ಈ ಗಲಾಟೆಯ ವೀಡಿಯೋವನ್ನು ಪ್ರಸಾರ ಮಾಡಿವೆ. ವೈರಲ್ ಆಗಿರುವ ವೀಡಿಯೋವನ್ನು ಶಾಸಕ ಕಂಪ್ಲಿ ಗಣೇಶ್ ವಕೀಲರು ಜಾಮೀನು ಅರ್ಜಿ ಜೊತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಅನಾರೋಗ್ಯ ಕಾರಣದಿಂದ ಕಂಪ್ಲಿ ಗಣೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Translate »