ಬಾಲಾಪರಾಧಿ ಸೇರಿ ಮೂವರು  ಖದೀಮರ ಬಂಧನ: ಬೈಕ್, ಮೊಬೈಲ್ ವಶ
ಹಾಸನ

ಬಾಲಾಪರಾಧಿ ಸೇರಿ ಮೂವರು ಖದೀಮರ ಬಂಧನ: ಬೈಕ್, ಮೊಬೈಲ್ ವಶ

December 17, 2018

ಅರಸೀಕೆರೆ: ಬಾಲಾಪರಾಧಿ ಸೇರಿದಂತೆ ಮೂವರು ಖದೀಮರನ್ನು ಬಂಧಿಸಿರುವ ತಾಲೂಕಿನ ಗಂಡಸಿ ಠಾಣೆ ಪೊಲೀಸರು ಒಂದು ಪಲ್ಸರ್ ಬೈಕ್ ಮತ್ತು 12 ಸಾವಿರ ರೂ ಮೌಲ್ಯದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ನಾಗರಹಳ್ಳಿ ಗ್ರಾಮದ ಅಂಜು ಅಲಿಯಾಸ್ ಬೇತಾಳ(27), ಮೈಸೂರಿನ ಕುಂಬಾರ ಕೊಪ್ಪಲು ನಿವಾಸಿ ಶಿವಪ್ರಸಾದ್(19) ಮತ್ತು ಬೆಂಗಳೂರಿನ ಕೆಂಗೇರಿಯ 14 ವರ್ಷದ ಬಾಲಕ ಬಂಧಿತ ಆರೋಪಿಗಳು.

ಇವರುಗಳು ಗಂಡಸಿ ಹ್ಯಾಂಡ್‍ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಪಲ್ಸರ್ ಬೈಕ್‍ನಲ್ಲಿ ಬಂದಾಗ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ವೇಳೆ ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಇವರು ಮತ್ತು ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಡಿವೈಎಸ್‍ಪಿ ಸದಾನಂದ ಅ.ತಿಪ್ಪಣ್ಣನವರ ಅವರ ಮಾರ್ಗದರ್ಶನದಲ್ಲಿ ಅರಸೀಕೆರೆ ಸರ್ಕಲ್ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ, ಗಂಡಸಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಶಬ್ಬೀರ್ ಹುಸೇನ್, ಸಿಬ್ಬಂದಿಗಳಾದ ನಂಜುಂಡೇಗೌಡ, ಗಂಗಾಧರ, ಮೋಹನ್‍ಕುಮಾರ್, ಶೇಖರೇಗೌಡ ಸಿರಿಗೆರೆ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »