ಅತ್ತೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧೃಡ ಕಳಸ ಪೂಜೆ
ಕೊಡಗು

ಅತ್ತೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧೃಡ ಕಳಸ ಪೂಜೆ

June 10, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಕಳೆದ 48 ದಿನಗಳ ಹಿಂದೆ ನೂತನವಾಗಿ ನಿರ್ಮಿ ಸಿದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾನ ಕಾರ್ಯವು 5 ದಿನಗಳ ಕಾಲ ವಿವಿಧ ಹೋಮ ಮತ್ತು ಪೂಜಾ ಕಾರ್ಯಗಳು ನಡೆದ್ದಿತ್ತು.

ಅಲ್ಲದೆ ಹೊಸದಾಗಿ ನಿರ್ಮಿಸಿದ ದೇವ ಸ್ಥಾನದ ಪಕ್ಕದಲ್ಲಿದ್ದ ಸುಮಾರು 5 ಅಡಿ ಉದ್ದದ ಶಿವಲಿಂಗವನ್ನು ಮಣ ್ಣನಡಿಯಿಂದ ತೆಗೆದ ಕೆರಳದ ಪ್ರಸಿದ್ದ ತಂತ್ರಿಗಳ ಸಮ್ಮು ಖದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇಂದು ದೇವ ಸ್ಥಾನದಲ್ಲಿ ಕಳಸಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಈ ಸಂಧರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಉಗ್ರಾಣ ಮನೋಜ್ ಮತ್ತು ಸಮಿತಿ ಸದಸ್ಯರು, ಅತ್ತೂರಿನ ಸರ್ವ ಗ್ರಾಮಸ್ಥರು ಹಾಜರಿದ್ದರು. ಈ ಸಂಧರ್ಭ ಅನ್ನ ಸಂತರ್ಪಣೆ ಕಾರ್ಯ ನಡೆಯಿತು.

ತಿಂಗಳ ಪ್ರತಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ವಿಶೇಷ ಪೂಜೆ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Translate »