ಗುಡ್ಡೆಹೊಸೂರಿನಲ್ಲಿ ಪರಿಸರ ಮಾಲಿನ್ಯ ತಡೆ ಜಾಥಾ
ಕೊಡಗು

ಗುಡ್ಡೆಹೊಸೂರಿನಲ್ಲಿ ಪರಿಸರ ಮಾಲಿನ್ಯ ತಡೆ ಜಾಥಾ

June 11, 2018

ಗುಡ್ಡೆಹೊಸೂರು:  ಕಾವೇರಿ ನದಿ ದಡದಲ್ಲಿ ಮತ್ತು ಆನೆಕಾಡು ಮಿಸಲು ಅರಣ್ಯವ್ಯಾಪ್ತಿಯಲ್ಲಿ ಗಿಡ ನೆಡುವುದರೊಂದಿಗೆ ಪರಿಸರವನ್ನು ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಎರಡು ದಿನಗಳಿಂದ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಸಭೆ ಸಮಾರಂಭ ನಡೆಸಲಾಯಿತು. ಜೂ.10ರಂದು ಗುಡ್ಡೆಹೊಸೂರಿಗೆ ಜಾಥಾ ಆಗಮಿಸಿ ಗುಡ್ಡೆಹೊಸೂರು ವೃತ್ತದ ಬಳಿ ಸಮಾರಂಭ ನಡೆಯಿತು. ಕಾಲು ನಡಿಗೆಯಲ್ಲಿ ಮತ್ತು ದ್ವಿಚಕ್ರ ವಾಹನದ ಮೂಲಕ ಜಾಥಾ ಆಗಮಿಸಿತು. ಭಾರೀ ಮಳೆಯ ನಡೆವೆಯು ಜಾಥಾ ಮುಂದುವರಿಯಿತು.

ಜಾಥಾದಲ್ಲಿ ಕಾವೇರಿ ನದಿ ಸ್ವಚ್ಚತಾ ಆಂದೋಲನದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಆರ್ಟ್ ಆಫ್ ಲಿವಿಂಗ್‍ನ ಸದಸ್ಯರು, ಗ್ರೀನ್ ಸಿಟಿ ಕೊಡಗು ಫೋರಂನ ಸದಸ್ಯರು, ಕೊಡವ ಜಾವ ಯಜ್ಡಿಯ ಮೋಟಾರ್ ಸೈಕಲ್ ಸಂಸ್ಥೆ ಬೆಂಗಳೂರಿನ ಸದಸ್ಯರು ಹಾಜರಿದ್ದರು. ಜಾಥಾವು ಆನೆಕಾಡಿಗೆ ತೆರಳಿ ವಿವಿಧ ರೀತಿಯ ಕಾಡುಮರಗಳ ಬೀಜಗಳನ್ನು ಕಾಡಿನಲ್ಲಿ ಬಿತ್ತುವ ಕಾರ್ಯನಡೆಸಿದರು. ಅಲ್ಲದೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟರು.

Translate »