ಹನೂರು: ತಾಲೂಕಿನ ರಾಮಾಪುರ ಠಾಣೆಯ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದ ದಿನ್ನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುರುಗೇಶ್ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಾಗಿದೆ. ಘಟನೆ ವಿವರ : ಗೊಲ್ಲರದಿಂಬ ಗ್ರಾಮದಲ್ಲಿ ಕಳೆದ 1 ವಾರದಿಂದ ಟ್ರಾನ್ಸ್ಪಾರಂ ಸುಟ್ಟು ಹೋಗಿದ್ದು, ಈ ಸಂಬಂಧ ಗ್ರಾಪಂ ಸದಸ್ಯ ಮುರುಗೇಶ್ ಇಂದು ಬೆಳಿಗ್ಗೆ ರಾಮಾಪುರದ ಚೆಸ್ಕಾಂ ಕಛೇರಿಗೆ 11.30ರಲ್ಲಿ ಬಂದು ಗ್ರಾಮಕ್ಕೆ ಟಿ.ಸಿ ಅಳವಡಿಸುವ ವಿಚಾರವಾಗಿ ಗಲಾಟೆ ಮಾಡಿಕೊಂಡು ಅಲ್ಲೇ ಇದ್ದ ಲೈನ್ಮೈನ್ ಜೊತೆಯಲ್ಲಿ ಗಲಾಟೆ ಮಾಡಿ ಎಳೆದಾಡಿರುವ ಬಗ್ಗೆ ಲೈನ್ಮೇನ್…
ಆಮೆ ವೇಗದಲ್ಲಿ ಸಾಗುತ್ತಿರುವ ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಹಾದಿಯಲ್ಲಿ ನೂರೆಂಟು ಕಿರಿಕಿರಿ
June 15, 2018ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರ ಅಭಿ ವೃದ್ಧಿ ಹೊಂದುತ್ತಿದೆಯೇ ಎಂಬ ಪ್ರಶ್ನೆ ಯನ್ನು ನಗರದ ಜನತೆಯ ಮುಂದಿಟ್ಟರೆ ಹೌದು ಎಂದು ಪ್ರಶ್ನೆ ತಟ್ಟನೆ ಹಾಗೂ ಸಹಜವಾಗಿ ಬರುತ್ತದೆ. ಇದಕ್ಕೆ ಕಾರಣ ಇಲ್ಲಿನ ಪ್ರಮುಖ ರಸ್ತೆ ಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ಇರುವುದು. ಆದರೆ ಈ ಕಾಮಗಾರಿಗಳು ನಿಯಮಾನುಸಾರ ಹಾಗೂ ಸಮರ್ಪಕ ರೀತಿಯಲ್ಲಿ ನಡೆಯದೇ ಇರುವುದರಿಂದ ನಾಗರಿಕರು ಮತ್ತು ಸವಾರರು ಯಮ ಯಾತನೆ ಅನುಭವಿಸುತ್ತಿದ್ದಾರೆ. ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ನೀರು ಶುದ್ಧೀಕರಣ…
ಗುಂಡ್ಲುಪೇಟೆಯಲ್ಲಿ ಜಿಟಿ ಜಿಟಿ ಮಳೆ: ಕೆಸರು ಗದ್ದೆಯಾದ ರಸ್ತೆಗಳು
June 15, 2018ಗುಂಡ್ಲುಪೇಟೆ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಬೀಳುತ್ತಿರುವ ಜಿಟಿ ಜಿಟಿ ಮಳೆಗೆ ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಕೆಸರು ಗದ್ದೆ ಯಂತಾಗಿದ್ದು, ವಾಹನ ಮತ್ತು ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳಿಲ್ಲದ ಹಿನ್ನೆಲೆ ಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಯಾಗಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ದ.ರಾ.ಬೇಂದ್ರೆ ನಗರ, ಕೆ.ಎಸ್. ನಾಗರತ್ನಮ್ಮ ಬಡಾವಣೆ, ಹೊಸೂರು ಬಡಾ ವಣೆ, ಅಶ್ವಿನಿ ಬಡಾವಣೆ, ಜನತಾ…
ದುಗ್ಗಹಟ್ಟಿಯಲ್ಲಿ ವಿದ್ಯುತ್ ಅವಘಡ, ಇಬ್ಬರ ಸಾವು
June 15, 2018ಯಳಂದೂರು: ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಗುರುವಾರ ಸಂಭ ವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಸಂಭವಿಸಿದೆ. ಗ್ರಾಮದ ಬಸವರಾಜು (55) ಹಾಗೂ ಶ್ರೀನಿವಾಸ (46) ಎಂಬುವರೆ ಮೃತಪ ಟ್ಟಿದ್ದು, ಕಾಮರಾಜು ತೀವ್ರವಾಗಿ ಗಾಯ ಗೊಂಡ ವ್ಯಕ್ತಿಯಾಗಿದ್ದು, ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ: ದುಗ್ಗಹಟ್ಟಿ ಗ್ರಾಮದ ಬಸವರಾಜು ಎಂಬುವರ ಮನೆಯ ಬಳಿ ವಿದ್ಯುತ್ ತಂತಿ ಶ್ರೀನಿವಾಸ ಎಂಬುವರಿಗೆ ತಗುಲಿದೆ. ಇವರನ್ನು ರಕ್ಷಿಸಲು ಯತ್ನಿಸಿದ ಬಸವರಾಜು ಅವರಿಗೂ…
ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ
June 14, 2018ಹನೂರು: ಹನೂರು ತಾಲೂಕಿನ ಪ್ರಸಿದ್ಧ ಪುಣ್ಯಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆಮಹ ದೇಶ್ವರಸ್ವಾಮಿ ದೇಗುಲದಲ್ಲಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗಿನ ಜಾವ 3 ಗಂಟೆಯಿಂದಲೇ ಶ್ರೀ ಸ್ವಾಮಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಹ ಮಾದಪ್ಪನ ದರುಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆಯಲು ಜಮಾಯಿಸಿದ್ದರು. ಮಂಗಳವಾರ ರಾತ್ರಿ ನಡೆದ ಎಣ್ಣೆ ಮಜ್ಜನ ಸೇವೆಗೆ ಸೋಮವಾರದಿಂದಲೇ ರಾಜ್ಯದ ನಾನಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ…
ಗುಂಡ್ಲುಪೇಟೆ ವಿವಿಧೆಡೆ ಹಾಡಹಗಲೇ ಚಿರತೆ ಹಾವಳಿ
June 14, 2018ಗುಂಡ್ಲುಪೇಟೆ: ತಾಲೂಕಿನ ವಿವಿಧೆಡೆ ಹಾಡಹಗಲೇ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ತಾಲೂಕಿನ ಕೊಡಸೋಗೆ ಗ್ರಾಮದ ಮದ್ದಾನಪ್ಪ ಎಂಬುವರ ಜಮೀ ನಿನ ಬಳಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಜಮೀ ನಿನಲ್ಲಿದ್ದ ಮಾಲೀಕರ ಮಗ ಸ್ವಾಮಿ ಎಂಬುವರು ಚಿರತೆಯನ್ನು ನೋಡಿ ಸಮೀಪದ ಮರದ ಮರೆಯಲ್ಲಿ ಅಡಗಿಕೊಂಡಿದ್ದಾರೆ. ನಂತರ ಚಿರತೆಯು ರಸ್ತೆಯಲ್ಲಿ ವಾಹನಗಳ ಶಬ್ದ ಕೇಳಿ ಪೆÇದೆಗಳತ್ತ ನುಸುಳಿದೆ. ಇತ್ತೀಚೆಗೆ ಚಿರತೆಯ ಹಾವಳಿಯಿಂದ ಹೊಸಬಡಾವಣೆಯ ಹಲವು ನಾಯಿಗಳು ಕಣ್ಮರೆಯಾಗುತ್ತಿವೆ. ಕೆಲವು ದಿನಗಳ…
ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪ್ರತಿಭಟನೆ
June 14, 2018ಚಾಮರಾಜನಗರ: ಶಾಸಕ ಸತೀಶ್ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮಾನವ ಬಂಧುತ್ವ ವೇದಿಕೆ, ಪಾಳೇಗಾರ ಮಾರನಾಯಕ ಯುವ ಬ್ರಿಗೇಡ್, ಪ್ರಬುದ್ಧ ಭಾರತ ನಿರ್ಮಾಣ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿ ಯಿಂದ ನಗರದಲ್ಲಿ ಬುಧವಾರ ಪ್ರತಿ ಭಟನೆ ನಡೆಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಳ್ಳಿ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ನಾಯಕ, ಪ್ರಬುದ್ಧ ಭಾರತ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಮಹದೇವನಾಯಕ ಅವರ…
ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ
June 14, 2018ಗುಂಡ್ಲುಪೇಟೆ: ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಪಟ್ಟಣದ ಜನತೆಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಹೇಳಿದರು. ಪಟ್ಟಣದಲ್ಲಿ ಹಿಂದಿನಿಂದಲೂ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬಂದಿರು ವುದು ಉತ್ತಮವಾದ ಬೆಳವಣಿಗೆಯಾಗಿದ್ದು, ರಂಜಾನ್ ಹಬ್ಬದಂದು ಪಟ್ಟಣದಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡುವುದು ಸುಲಭ. ಈ ನಿಟ್ಟಿನಲ್ಲಿ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಹಬ್ಬವನ್ನು ಹಬ್ಬವಾಗಿ ಆಚರಿಸಬೇಕು. ಇದಕ್ಕೆ ಪೆÇಲೀಸ್ ಇಲಾ ಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು….
ಅಗತಗೌಡನಹಳ್ಳಿ ರಸ್ತೆಯ ದುರವಸ್ಥೆ
June 14, 2018ಬೇಗೂರು: ಸಮೀಪದ ಅಗತಗೌಡನಹಳ್ಳಿ-ಹೆಗ್ಗಡ ಹಳ್ಳಿ- ಹಕ್ಕಲಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕಬ್ಬಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ 766 ರಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಗುಂಡ್ಲುಪೇಟೆ, ನಂಜನಗೂಡು, ಹಾಗೂ ಮೈಸೂರು ನಗರ ಪ್ರದೇಶಗಳಿಗೆ ತೆರಳುವ ಸಾವಿರಾರು ಸಂಖ್ಯೆ ಪ್ರಯಾಣಿಕರಿಗೆ ಈ ರಸ್ತೆಯೇ ಪ್ರಮುಖ ಮಾರ್ಗವಾಗಿದೆ. ಆದರೆ ಈ ರಸ್ತೆ ಹಳ್ಳಗುಂಡಿಗಳು ಬಿದ್ದಿದ್ದು, ಇದನ್ನು ಸರಿಪಡಿಸುವ ಗೋಜಿಗೆ…
ಹಾವು ಕಚ್ಚಿ ರೈತ ಮಹಿಳೆ ಸಾವು
June 14, 2018ಚಾಮರಾಜನಗರ: ಹಾವು ಕಚ್ಚಿದ ಪರಿಣಾಮ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುರಟಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಣ್ಣ ಎಂಬುವರ ಪತ್ನಿ ಭಾಗ್ಯಲಕ್ಷ್ಮೀ (20) ಮೃತ ರೈತ ಮಹಿಳೆ. ಘಟನೆಯ ವಿವರ: ಭಾಗ್ಯಲಕ್ಷ್ಮೀ ಅವರು ಬುಧವಾರ ಬೆಳಗಿನ ಜಾವ ಹಸುವಿಗೆ ಮೇವು ಹಾಕಲು ತೆರಳಿದ್ದಾರೆ. ಮೇಲಿನ ಗುಡ್ಡೆಗೆ ಕೈ ಹಾಕಿದಾಗ ಹಾವು ಕಚ್ಚಿದೆ. ಇದರಿಂದ ಗಾಯಗೊಂಡ ಭಾಗ್ಯಲಕ್ಷ್ಮೀ ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬೆಳಿಗ್ಗೆ 6.15ಕ್ಕೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಬೆಳಿಗ್ಗೆ 6.45ಕ್ಕೆ ಮೃತರಾದರು…