ಹಾಸನ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗಾಭ್ಯಾಸ ಅವಶ್ಯಕ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ತಿಳಿಸಿದರು.ನಗರದ ಶ್ರೀ ಶಂಕರ ಮಠದಲ್ಲಿ ವೇದ ಭಾರತಿ ಸಹಕಾರದೊಂದಿಗೆ ಪತಂಜಲಿ ಪರಿ ವಾರದಿಂದ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ರಾಷ್ಟ್ರಯಜ್ಞದಲ್ಲಿ ಭಾಗವಹಿಸಿ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ಜೀವನ ಪದ್ಧತಿಯಲ್ಲಿ ಯೋಗಾ ಭ್ಯಾಸ ಅನಿವಾರ್ಯ. ಪ್ರತಿ ವಾರ್ಡಿನಲ್ಲೂ ಒಂದು ಯೋಗ ಕೇಂದ್ರ ತೆರೆದು ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡಬೇಕು ಎಂದರು. ಅಂದು ಪತಂಜಲಿ ಪರಿವಾರ ಆಶೀರ್ವದಿಸಿದಂತೆ…
ಅಭಿವೃದ್ಧಿ ಕಾರ್ಯಗಳಿಗೆ ಜನತೆಯಿಂದ ಫುಲ್ ಮಾಕ್ರ್ಸ್ಶಾಸಕ ಕೆ.ಎಂ.ಶಿವಲಿಂಗೇಗೌಡ ಮೆಚ್ಚುಗೆ ನುಡಿ
June 11, 2018ಅರಸೀಕೆರೆ: ರಾಜಕಾರಣ ಕ್ಕಾಗಿ ನನ್ನ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲಿ ನಾನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಫುಲ್ ಮಾಕ್ರ್ಸ್ ನೀಡಿ ನನ್ನನ್ನು ಸತತ 3ನೇ ಬಾರಿ ಗೆಲ್ಲಿಸಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ನುಡಿದರು. ನಗರದ ಗೃಹ ಕಚೇರಿಯಲ್ಲಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಅಭಿವೃದ್ಧಿ ಕಾರ್ಯಗಳನ್ನು ಅರಿತು 3ನೇ ಬಾರಿ ದಾಖಲೆ ಮತಗಳ ಅಂತರಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿ ರುವ ಕ್ಷೇತ್ರದ ಜನತೆಗೆ ನಾನು ಅಭಾರಿ…
ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.83.42 ಮತದಾನ
June 9, 2018ಹಾಸನ: ವಿಧಾನ ಪರಿಷತ್ ದಕ್ಷಿಣ ಶಿಕಕ್ಷರ ಕ್ಷೇತ್ರದ ಮತದಾನ ಶಾಂತಿ ಯುತವಾಗಿ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಶೇ.83.42 ಮತದಾನವಾಗಿದೆ. ಒಟ್ಟು 4,277 ಮತದಾರರಿದ್ದು, 10 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,428 ಪುರುಷರು, 1,141 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. ಹಾಸನ ವರದಿ: ನಗರದಲ್ಲಿ ವಿಧಾನ ಪರಿಷತ್ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮಳೆ ನಡುವೆಯೂ ಮತದಾನ ಶಾಂತಿಯುತವಾಗಿ ಜರುಗಿತು. ಹಾಸನ ಪೂರ್ವದಲ್ಲಿ ಶೇ.83.25ರಷ್ಟು ಮತ ದಾನವಾಗಿದ್ದು, 181 ಪುರುಷರು ಹಾಗೂ 157 ಮಹಿಳೆಯರು ಮತದಾನ ಮಾಡಿ ದ್ದಾರೆ. ಹಾಸನ…
ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಜಾಥಾ
June 9, 2018ಹೊಳೆನರಸೀಪುರ: ಗ್ರಾಮ ಅಭಿವೃದ್ಧಿಯನ್ನು ಅಲ್ಲಿನ ವಿದ್ಯಾವಂತರ ದೃಢಪಡಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಶಿವರಾಜು ಅಭಿಪ್ರಾಯಪಟ್ಟರು. ಪೇಟೆ-2 ಕ್ಲಸ್ಟರ್ ವ್ಯಾಪ್ತಿಯ ಕಡವಿನ ಹೊಸಹಳ್ಳಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂ ಭೋತ್ಸವ ಹಾಗೂ `ಶಾಲೆ ಕಡೆ ನನ್ನ ನಡೆ’ ಶೈಕ್ಷಣ ಕ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಪೋಷಕರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದ ರೊಂದಿಗೆ ಸರ್ಕಾರಿ ಶಾಲೆಗಳ ಸಬಲೀ ಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ದೊರಕುವ ಸೌಲಭ್ಯ…
ಹೆಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನಾಗರಾಜು ಅವಿರೋಧ ಆಯ್ಕೆ
June 9, 2018ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೂತನ ಅಧ್ಯಕ್ಷರಾಗಿ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಅವರನ್ನು ಅವಿರೋಧವಾಗಿ ಆಯ್ಕೆಯಾದರು. ನಗರದ ಹೆಚ್ಡಿಸಿಸಿ ಬ್ಯಾಂಕ್ ಮುಂದಿನ ಅವಧಿಗೆ ಶುಕ್ರವಾರ ಚುನಾವಣೆ ನಿಗದಿ ಮಾಡಲಾಗಿತ್ತು. ಯಾರು ನಾಮ ಪತ್ರ ಸಲ್ಲಿಸದ ಕಾರಣ ಮಧ್ಯಾಹ್ನದ ವೇಳೆಗೆ ನಾಗರಾಜು ಸೋಮನಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಗಿರೀಶ್ ಚನ್ನವೀರಪ್ಪ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ನಾಗರಾಜು ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ ಮುಖಂಡರ ಆಶೀರ್ವಾದದಲ್ಲಿ ಜಿಲ್ಲಾ ಸಹಕಾರ…
ಜನಮನ ಸೆಳೆದ ಮಾವು-ಹಲಸು ಮೇಳ
June 8, 2018ಮಾವು ಕೊಳ್ಳಲು ಮುಗಿ ಬಿದ್ದ ಗ್ರಾಹಕರು, ಕಡಿಮೆ ದರದಲ್ಲಿ ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟ 3 ದಿನದಲ್ಲಿ 10 ಟನ್ ಮಾವು, 0.5ಟನ್ ಹಲಸು ಮಾರಾಟ ಹಾಸನ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಮೇಳವೂ ಜನ-ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ…
ಡೆಂಗ್ಯೂ ನಿಯಂತ್ರಣಕ್ಕಾಗಿ ಅಧಿಕಾರಿಗಳಿಂದ ಪರಿಶೀಲನೆ
June 8, 2018ಹಾಸನ: ಜಿಲ್ಲೆಯಲ್ಲಿ ಡೆಂಗ್ಯೂ ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಸರ್ಕಾರಿ ಕಚೇರಿಗಳ ಸ್ವಚ್ಛತೆ ಹಾಗೂ ನೀರು ನಿಂತಿರುವ ಬಗ್ಗೆ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜ್ ಗೋಪಾಲï ಮಾತನಾಡಿ, ಸೊಳ್ಳೆ ಯಿಂದ ಹರಡಬಹುದಾದ ರೋಗದ ಬಗ್ಗೆ ಮಾಹಿತಿ ನೀಡಿದರು. ಡೆಂಗ್ಯೂ ಜೂನ್ ಮತ್ತು ಜುಲೈನಲ್ಲಿ ಹರಡುವುದು ಹೆಚ್ಚು. ಮಳೆ ಬಂದು ಕಡಿಮೆಯಾದ ಸಮಯ ದಲ್ಲಿ ಲಾರ್ವ ಉತ್ಪತ್ತಿಯಾಗುತ್ತದೆ. ಕಳೆದ ಬಾರಿ ಪ್ರಕರಣ ಕಾಣ ಸಿಕೊಂಡಿದ್ದರೂ ಯಾವುದೇ ಸಾವು ಸಂಭವಿಸಿರಲಿಲ್ಲ….
ಸಹಕಾರ ಸಂಘಗಳ ಚುನಾವಣೆಗೆ ತರಬೇತಿ ಕಾರ್ಯಾಗಾರ
June 8, 2018ಹಾಸನ: ಚುನಾವಣೆಗೆ ಅಗತ್ಯವಿರುವ ಮತದಾರರ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು, ಚುನಾವಣೆಯ ಅಗತ್ಯವಿರುವ ಸಹಕಾರ ಸಂಘಗಳ ಕಾನೂನಿನ ತಿದ್ದುಪಡಿಗಳನ್ನು ತಮ್ಮ ಸಹಕಾರ ಸಂಘ ಗಳಿಗೆ ಅಳವಡಿಸಿಕೊಂಡು ಅದಕ್ಕೆ ತಕ್ಕಂತಹ ಕಾರ್ಯಕ್ರಮ ರೂಪಿಸಿ ಜಾರಿ ಗೊಳಿಸುವಂತಾಗ ಬೇಕು ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಆರ್. ಲೋಕೇಶ್ ಹೇಳಿದರು. ನಗರದ ಹೆಚ್ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಹೆಚ್.ಡಿ.ದೇವೇಗೌಡ ರೈತ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮ ಬೆಂಗಳೂರು, ಹಾಸನ ಜಿಲ್ಲಾ…
ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ
June 8, 2018ಹಾಸನ: ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪಧವೀದರರ ಕ್ಷೇತ್ರದ, ನೈಋತ್ಯ ಶಿಕ್ಷಕರ ಕ್ಷೇತ್ರದ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾ ವಣೆಯ ಮತದಾನವು ಜೂ. 8ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ 2,801 ಪುರುಷರು ಹಾಗೂ 1,476 ಮಹಿಳೆಯರು ಸೇರಿ ಒಟ್ಟಾರೆ 4,277 ಮತದಾರರು ಮತದಾನವನ್ನು ಮಾಡಲಿದ್ದಾರೆ. ಚುನಾವಣೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ, ನೈಋತ್ಯ ಶಿಕ್ಷಕರ ಕ್ಷೇತ್ರದ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವವರು ಮಾತ್ರ ಮತದಾರರಾಗಿರುತ್ತಾರೆ. ದಕ್ಷಿಣ…
ಅಹಿಂಸೆಯ ಜನ್ಮಸ್ಥಳ ಶ್ರವಣಬೆಳಗೊಳ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಮತ
June 8, 2018ಶ್ರವಣಬೆಳಗೊಳ: ‘ಜೈನಕಾಶಿ ಶ್ರವಣಬೆಳಗೊಳದಲ್ಲಿ ಸುಮಾರು 600ಕ್ಕೂ ಹೆಚ್ಚು ಶಾಸನಗಳಿದ್ದು ಅತಿ ಹೆಚ್ಚು ಶಾಸನ ಗಳನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶ್ರವಣಬೆಳಗೊಳ ವನ್ನು ಅಹಿಂಸೆಯ ಜನ್ಮಸ್ಥಳ ಎಂದರೆ ತಪ್ಪಾಗ ಲಾರದು’ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು. ಶ್ರವಣಬೆಳಗೊಳದ ಚಾಮುಂಡರಾಯ ಸಭಾಮಂಟಪದಲ್ಲಿ ಗುರುವಾರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ವರ್ಷಿಯಾ ದಿಗಂಬರ ಜೈನ ಶಾಸ್ತ್ರೀಯ ಪರಿ ಷತ್ತು ವಾರ್ಷಿಕ ಅಧಿವೇಶನ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದರು….