ಬೇಲೂರು: ಪಟ್ಟಣದ ಎಸ್ಬಿಐ ಬ್ಯಾಂಕಿನಿಂದ ಸಾಲ ಮೇಳ ಕಾರ್ಯಕ್ರಮ ವನ್ನು ಉದ್ಘಾಟಿಸಲಾಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಬೇಲೂರು ನ್ಯಾಯಾಲಯದ ನ್ಯಾಯಾ ಧೀಶ ಶಶಿಧರ್ ಎಂ.ಗೌಡ ಅವರು, ಬ್ಯಾಂಕಿನ ಇತಿಹಾಸವನ್ನು ಕಂಡಂತೆ ಸ್ವತಂತ್ರ ಪೂರ್ವದಲ್ಲಿ ಆರ್ಥಿಕವಾಗಿ ಸಬಲೀಕರಣ ವಾಗಿ ಇರುವವರು ಮಾತ್ರ ಬ್ಯಾಂಕಿನ ವಹಿ ವಾಟುಗಳನ್ನು ನಿರ್ವಹಿಸುತ್ತಿದ್ದರು. ಬಡ ವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕೈಗೆ ಎಟುಕದ ವಸ್ತುವಾಗಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಎಲ್ಲಾ ಬಡವರೂ ಹಾಗೂ ಪ್ರತಿಯೊಬ್ಬ ನಾಗರಿಕರೂ ಕೂಡ ಬ್ಯಾಂಕಿನ ವಹಿವಾಟುಗಳನ್ನು ನಡೆಸಬ ಹುದು….
ಸುತ್ತೂರು ಜಾತ್ರೆ ಜನಜಾಗೃತಿ ರಥಕ್ಕೆ ಸ್ವಾಗತ
January 8, 2019ರಾಮನಾಥಪುರ: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಪ್ರಚಾರದ ಜನ ಜಾಗೃತಿ ರಥಯಾತ್ರೆ ದಿಬ್ಬಣಕ್ಕೆ ಶರಣೆ ಶಾಂತಮ್ಮ ಮುಂತಾದವರು ಪೂಜೆ ಸಲ್ಲಿಸಿದರು. ರಾಮನಾಥಪುರ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆಬ್ರವರಿ 1ರಿಂದ 6ರವರೆಗೆ ನಡೆಯುವ ಕಾರ್ಯಕ್ರಮದ ಪ್ರಯುಕ್ತ ಆಗಮಿಸಿರುವ ಜನಜಾಗೃತಿ ರಥಯಾತ್ರೆ ದಿಬ್ಬಣಕ್ಕೆ ವೀರಶೈವ ಮಹಾ ಸಭಾ, ಶರಣ ಸಾಹಿತ್ಯ ಪರಿಷತ್, ವಿವಿಧ ಸಮಾಜದ ಮುಖಂಡರು ಬರ ಮಾಡಿ ಕೊಂಡರು. ಹಿರಿಯ…
ಹಾಸನ ತಾಲೂಕು ಪಂಚಾಯಿತಿ ಕೆಡಿಪಿ ಸಭೆ
January 8, 2019ಎಂಎಸ್ಐಎಲ್ನಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ ಹಾಸನ: ಸರ್ಕಾರದಿಂದ ತೆರೆ ಯಲ್ಪಟ್ಟಿರುವ ಎಂಎಸ್ಐಎಲ್ ಮದ್ಯ ದಂಗಡಿಯಲ್ಲಿ ಮದ್ಯದ ದರ ನಮೂದಿ ಸಿರುವ ನಾಮಫಲಕ ಹಾಕದೆ ಒಂದೊಂದು ಬಾಟಲಿಗೆ 5 ರಿಂದ 10 ರೂ.ಗಳ ಹೆಚ್ಚಿಗೆ ದರ ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ತಾಪಂ ಸದಸ್ಯರು ಮಾತ ನಾಡಿ, ಮದ್ಯದ ಬಾಟಲಿ…
ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳಕ್ಕೆ ಖಂಡನೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
January 6, 2019ಹಾಸನ: ಪೆಟ್ರೋಲ್-ಡೀಸೆಲ್ ಬೆಲೆ ಇಳಿಮುಖವಾಗಿದ್ದರೂ ಕರ್ನಾಟಕದ ಸಮಿಶ್ರ ಸರ್ಕಾರ ತೆರಿಗೆ ಏರಿಕೆ ಮಾಡಿ ರಾಜ್ಯದಲ್ಲಿ ದರ ಏರಿಸಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ದರ ಇಳಿಮುಖ ವಾಗುವ ಮೂಲಕ ವಾಹನ ಸವಾರರಿಗೆ ತುಸು ನಿರಾಳ ಉಂಟಾಗುತ್ತಿರುವ ಹೊತ್ತಿ ನಲ್ಲಿ ಪೆಟ್ರೋಲ್ ಡೀಸೆಲ್ ಮೇಲೆ ಕರ್ನಾ ಟಕದ ಸಮಿಶ್ರ ಸರ್ಕಾರ ತೆರಿಗೆ…
ಜ.12, 13 ಶ್ರೀನಿವಾಸ ಕಲ್ಯಾಣೋತ್ಸವ
January 6, 2019ಚನ್ನರಾಯಪಟ್ಟಣ: ಪ್ರತಿ ವರ್ಷದಂತೆ ಈ ಬಾರಿಯೂ ಲೋಕ ಕಲ್ಯಾಣಕ್ಕಾಗಿ ಶ್ರೀ ಶ್ರೀನಿವಾಸ ಕಲ್ಯಾಣೋ ತ್ಸವವನ್ನು ಆಧ್ಯಾತ್ಮಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ ತಿಳಿಸಿದರು. ತಾಲೂಕಿನ ಕತ್ತರಿಘಟ್ಟ ಗ್ರಾಮದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಆವರಣದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜ. 12 ಮತ್ತು 13ರಂದು ಶ್ರೀನಿವಾಸ ಕಲ್ಯಾ ಣೋತ್ಸವ ನಡೆಯಲಿದ್ದು, ವಿವಿಧೆಡೆ ಯಿಂದ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು. ಅಂದು ಬೆಳಿಗ್ಗೆ 6 ಗಂಟೆಗೆ…
ಕಲಿಕೆಗೆ ಖಾಸಗಿ ಶಾಲೆ, ಬದುಕಿಗೆ ಸರ್ಕಾರಿ ಶಾಲೆ; ಶಾಸಕ ಲಿಂಗೇಶ್
January 6, 2019ಬೇಲೂರು: ಖಾಸಗಿ ಶಾಲೆ-ಕಾಲೇಜುಗಳಲ್ಲಿ ಓದಿಗೆ ಅವಕಾಶವಿದೆ. ಆದರೆ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಬದುಕಿಗೆ ಅವಕಾಶವಿದೆ. ಹಾಗಾಗಿಯೇ ಸರ್ಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಗಮನ ಹರಿಸಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕರ್ನಾಟಕ ಪಬ್ಲಿಕ್ ಸ್ಕೂಲ್) ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 1 ರಿಂದ 12ನೇ ತರಗತಿವರೆಗೆ ಎಲ್ಲ ಮಕ್ಕಳು ಒಂದೇ ಆಡಳಿತದಲ್ಲಿ ಶಿಕ್ಷಣ ಪಡೆಯಲಿ ದ್ದಾರೆ. ಎಲ್ಲಾ ರೀತಿಯ ಆಧುನಿಕ…
ಏಡ್ಸ್ ನಿರ್ಮೂನೆಗೆ ಯುವ ಜನತೆ ಪಾತ್ರ ಮುಖ್ಯ
January 6, 2019ಅರಸೀಕೆರೆ: ಹೆಚ್ಐವಿ ಎಂಬ ಮಾರಕ ರೋಗವನ್ನು ತಡೆಗಟ್ಟುವಲ್ಲಿ ಯುವಜನತೆ ಪಾತ್ರಗಳು ಅತೀ ಮುಖ್ಯ ವಾಗಿವೆ. ಆರೋಗ್ಯವಂತ ಸಮಾಜವನ್ನು ಕಾಣಬೇಕಾದರೆ ಪ್ರತಿಯೊಬ್ಬರು ಈ ಮಾರಕ ರೋಗದ ಬಗ್ಗೆ ಜಾಗೃತರಾಗಿ ರಬೇಕು ಎಂದು ಜೆ.ಸಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅನೀಲ್ಕುಮಾರ್ ಹೇಳಿದರು. ತಾಲೂಕಿನ ಕಣಕಟ್ಟೆಯ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಮತ್ತು ಕೈಗಾ ರಿಕಾ ತರಬೇತಿ ಕೇಂದ್ರದ ರಾಷ್ಟ್ರೀಯ ಸೇವಾಯೋಜನೆಯಿಂದ ಆಯೋಜಿಸಿದ್ದ “ವಿಶ್ವ ಏಡ್ಸ್ ದಿನಾಚರಣೆ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಐವಿ/ಏಡ್ಸ್ ಕಾಯಿಲೆ ನಿಯಂತ್ರಿ ಸುವಲ್ಲಿ…
ಹಾರಂಗಿ ಎಡದಂಡೆ ಆಧುನೀಕರಣ ಕಾಮಗಾರಿಗೆ ಚಾಲನೆ
January 6, 2019116 ಕೋಟಿ ವೆಚ್ಚದಡಿ ಕಾಮಗಾರಿ, 8,110 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ರಾಮನಾಥಪುರ: ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಹಾರಂಗಿ ಎಡದಂಡೆ ನಾಲೆ ಆಧುನೀ ಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿದ್ದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು. ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ಮುಗಳೂರು ಗ್ರಾಮದ ಹಾರಂಗಿ ಎಡದಂಡೆ ನಾಲೆಯ 27.083ರ ಸರಪಳಿಯಿಂದ 85.905 ಸರಪಳಿವರೆಗೆ ಮೆಕ್ಯಾನಿಕಲ್ ಪವರ್ ಉಪಯೋಗಿಸಿ ನಾಲೆಗೆ ಸಿಮೆಂಟ್ ಲೈನಿಂಗ್ ಜೊತೆಗೆ ಆಧುನೀಕರಣವನ್ನು 116 ಕೋಟಿ…
ಹಾಸನ, ಮಂಡ್ಯ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ
January 6, 2019ಹಾಸನ, ಜ.5- ಹಾಸನ ಮತ್ತು ಮಂಡ್ಯ ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಸುಲಿಗೆಕೋರರನ್ನು ಬಂಧಿಸಿ, 3,01,600 ರೂ ಮೌಲ್ಯದ ಸ್ವತ್ತುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕು ಜಿ.ಸೋಮನಹಳ್ಳಿ ಗ್ರಾಮದ ಕಾರು ಚಾಲಕ ಅಶ್ವಥ್(23), ಚೆನ್ನರಾಯ ಪಟ್ಟಣ ತಾಲೂಕು ಆನೆಕೆರೆ ಗ್ರಾಮದ ಜೆಸಿಬಿ ಚಾಲಕ ಮೇಘನಾಥ್(23), ಚೆನ್ನರಾಯಪಟ್ಟಣ ಸಜ್ಜೆಕೊಪ್ಪಲು ಗ್ರಾಮದ ಕಾರು ಚಾಲಕ ಸೋಮ ಶೇಖರ್(28) ಮತ್ತು ಚೆನ್ನರಾಯಪಟ್ಟಣ ತಾಲೂಕು ಬರಾಳು ಗ್ರಾಮದ ಹೋಟೆಲ್ ಸಪ್ಲೇಯರ್ ಚಂದ್ರಶೇಖರ್(22) ಬಂಧಿತ ಸುಲಿಗೆಕೋರರಾ ಗಿದ್ದು, ಇವರಿಂದ ನಿಸ್ಸಾನ್…
ಆಲದಮರಕ್ಕಾಗಿ ನಡೆದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ
January 6, 2019ಮರ ಮಾರಿದ್ದವನನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿಗಳು ಆಲೂರು ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; ಐವರ ಸೆರೆ ಆಲೂರು: ಆಲದಮರಕ್ಕಾಗಿ ಆರಂಭವಾದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯವಾದ ಬಗ್ಗೆ ವರದಿ ಯಾಗಿದೆ. ವ್ಯಕ್ತಿಯೋರ್ವ ತನ್ನ ಚಿಕ್ಕಪ್ಪನ ಮಕ್ಕಳಿಂದಲೇ ಹತ್ಯೆಗೀಡಾಗಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಆಲೂರು ಸಮೀಪ ಪತ್ತೆಯಾಗಿದೆ. ನೆಲಮಂಗಲ ನಿವಾಸಿ ನವೀನ್ ಅಲಿಯಾಸ್ ನಾಗರ ಹಾವು(23) ಎಂಬಾತನೇ ಹತ್ಯೆಗೀಡಾದವನಾಗಿದ್ದು, ಈತನನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಈತನ ಚಿಕ್ಕಪ್ಪನ ಮಗ ವೇಣುಗೋಪಾಲ್, ಜಗದೀಶ್, ನರಸಿಂಹ ಮೂರ್ತಿ,…