ಕುಶಾಲನಗರ: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟೆ ಯನ್ನು ರೂ.10 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಕಾವೇರಿ ಕಣ ವೆಯ ಪ್ರಮುಖ ಜಲಾ ಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾ ಶಯಕ್ಕೆ 35 ವರ್ಷಗಳ ಬಳಿಕ ಕಾಯಕಲ್ಪಕ್ಕೆ ಮುಂದಾಗಿರುವ ನೀರಾವರಿ ಇಲಾಖೆ ಸಂಪೂರ್ಣ ದುರಸ್ತಿ ಪಡಿಸುತ್ತಿದೆ. ಜಲಾಶಯದಲ್ಲಿ ಪ್ರತಿ ವರ್ಷ ಮಳೆ ಗಾಲದಲ್ಲಿ ಜಲಾಶಯ ಭರ್ತಿಯಾದ ನಂತರ ಅಣೆಕಟ್ಟೆಯಲ್ಲಿ ನೀರು ಸೋರಿಕೆ ಯಾಗುತ್ತಿತ್ತು. ಈ ಬಗ್ಗೆ ನೀರಾವರಿ ಅಧಿ ಕಾರಿಗಳು…
ಕುಶಾಲನಗರದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
May 29, 2018ಕುಶಾಲನಗರ: ಇಲ್ಲಿನ ಬಿಎಂ ರಸ್ತೆಯ ಮನೆ ಯೊಂದರ ಶೌಚಗೃಹದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತನನ್ನು ವಾಲ್ನೂರು ತ್ಯಾಗತ್ತೂರು ನಿವಾಸಿ ಸೈದಲವಿ ಎಂಬುವವರ ಮಗ ಸಮದ್(36) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ. ಟಿಂಬರ್ ವ್ಯಾಪಾರಿಯಾಗಿದ್ದ ಸಮದ್ ತನ್ನ ವ್ಯಾಪಾರಕ್ಕೋಸ್ಕರ ಕುಶಾಲ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮೇ 22ಕ್ಕೆ ಈತನ ಮೊಬೈಲ್ನಲ್ಲಿ ಕೊನೆಯ ಕರೆ ದಾಖಲಾಗಿರುವುದು ಕಂದುಬಂದಿದ್ದು, ಅಂದೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈತನಿದ್ದ ಮನೆಯ ಬಳಿಯಲ್ಲಿ ಭಾನುವಾರ…
ಗೋಣ ಕೊಪ್ಪದಲ್ಲಿ ಮಾಜಿ ಸೈನಿಕರ ಬೃಹತ್ ಸಮಾವೇಶ ಮಾಜಿ ಸೈನಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯ
May 28, 2018ಮಡಿಕೇರಿ: ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಾಜಿ ಸೈನಿಕರು ಉದ್ಯೋಗ ಪಡೆಯಲು ಮುಂದಾಗ ಬೇಕಿದೆ ಎಂದು ಭಾರತೀಯ ಭೂಸೇನೆಯ ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥರಾದ ಲೆ.ಜ.ದಿವಾನ್ ರವೀಂದ್ರನಾಥ್ ಸೋನಿ ಅವರು ತಿಳಿಸಿದ್ದಾರೆ. ಭಾರತೀಯ ಸೇನೆ, ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ವತಿಯಿಂದ ಗೋಣ ಕೊಪ್ಪದ ಕಾವೇರಿ ಕಾಲೇಜಿನಲ್ಲಿ ಭಾನು ವಾರ ನಡೆದ ಮಾಜಿ ಸೈನಿಕರ ರ್ಯಾಲಿ ಯಲ್ಲಿ ಅವರು ಮಾಡಿದರು. ಮಾಜಿ ಸೈನಿಕರು ಮತ್ತು ಅವಲಂಬಿತ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಕಾರ್ಯಕ್ರಮ…
ಬಲಿಜ ಸಮಾಜದ ಕ್ರಿಕೆಟ್ ಕ್ರೀಡಾಕೂಟ: ಸಿಬಿ ಟಸ್ಕರ್ಸ್ ಚೊಚ್ಚಲ ಚಾಂಪಿಯನ್
May 28, 2018ಗೋಣಿ ಕೊಪ್ಪಲು: ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಕೊಡಗು ಬಲಿಜ ಸಮಾ ಜದ ವತಿಯಿಂದ ನಡೆದ ಪ್ರಥಮ ವರ್ಷದ ಕೊಡಗು ಬಲಿಜ ಕ್ರೀಡೋತ್ಸವದ ಕ್ರಿಕೆಟ್ನಲ್ಲಿ ಸಿಬಿ ಟಸ್ಕರ್ಸ್ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್ ಎತ್ತಿ ಹಿಡಿಯಿತು. ಫೈನಲ್ ನಲ್ಲಿ ಸೋಲನುಭವಿಸಿದ ತಿತಿಮತಿ ಬ್ಲೂ ಬಾಯ್ಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಳೆಯ ಕಾರಣ ಬಾಲೌಟ್ ನಿಯಮದ ಮೂಲಕ ವಿಜೇತರನ್ನು ಘೋಷಿಸಲಾಯಿತು. ಸಿ. ಬಿ. ಟಸ್ಕರ್ಸ್ ತಂಡವು ಬಾಲೌಟ್ನಲ್ಲಿ ತಿತಿಮತಿ ಬ್ಲೂಬಾಯ್ಸ್…
ಅಂಚೆ ನೌಕರರ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ
May 28, 2018ವಿರಾಜಪೇಟೆ: ಕೇಂದ್ರ ಸರಕಾರದ ಗ್ರಾಮೀಣ ಅಂಚೆ ನೌಕರರು ಅನೇಕ ದಶಕಗಳಿಂದಲೂ ಪ್ರಾಮಾಣ ಕತೆ ಯಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಇಲಾಖೆಯ ಸಚಿವರು, ವರಿ ಷ್ಠರು ಈ ಎಲ್ಲಾ ಬೇಡಿಕೆಗಳನ್ನು ಈಡೇರಿ ಸಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ. ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇ ರಿಯ ಎದುರು ಎರಡು ದಿನಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ಅಂಚೆ ಕಚೇರಿಗಳ ಸುಮಾರು…
ಬೋವಿ ಜನಾಂಗ ಶಾಸಕರಿಗೆ ಸಚಿವ ಸ್ಥಾನಕ್ಕೆ ಆಗ್ರಹ
May 28, 2018ಸೋಮವಾರಪೇಟೆ: ರಾಜ್ಯ ಸಚಿವ ಸಂಪುಟದಲ್ಲಿ ಭೋವಿ ಸಮುದಾಯದ ಶಾಸಕರಿಗೆ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಭೋವಿ ಜನಾಂಗಕ್ಕೆ ಸೇರಿದ ವೆಂಕಟರಮಣಪ್ಪ ಹುಲಿಗೇರಿ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳು ಆಯ್ಕೆಯಾಗಿದ್ದು, ಇವರಲ್ಲಿ ವೆಂಕಟರ ಮಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಭೋವಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು, ಶಾಸಕರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ…
ಮುಂಗಾರು ಮಳೆ ಪ್ರವಾಹ ಮುನ್ನೆಚ್ಚರಿಕೆ ಸಿದ್ಧತೆಗೆ ಸೂಚನೆ
May 28, 2018ಮಡಿಕೇರಿ: ಮುಂಗಾರು ಮಳೆ ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳು ವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ಮುಂಗಾರು ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆ ನಿಟ್ಟಿನಲ್ಲಿ ಜೂನ್ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಆದ್ದರಿಂದ…
ಕೊಡಗು ಬಲಿಜ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ
May 27, 2018ಗೋಣಿಕೊಪ್ಪಲು: ಕೊಡಗು ಬಲಿಜ ಸಮಾಜ ಕ್ರೀಡೋತ್ಸವಕ್ಕೆ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾ ನದಲ್ಲಿ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಕರ್ನಾಟಕ ಪ್ರದೇಶ ಬಲಿಜ ಸಂಘ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ದರು. ನಂತರ ಮಾತನಾಡಿ, ಬಲಿಜ ಜನಾಂ ಗಗಳ ನಡುವೆ ಮೊದಲ ಬಾರಿಗೆ ಕೊಡ ಗಿನಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಸರ್ಕಾರ ಬಲಿಜ ಜನಾಂಗದ ಗಣತಿ ನಡೆಸಿ ಸಂಖ್ಯೆವಾರು ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ನಾವೇ ಸಮಾಜದ ಮೂಲಕ ಗಣತಿ ನಡೆಸಿ…
ಬಿಜೆಪಿಯಿಂದ ನಾಳೆ ಕೊಡಗು ಬಂದ್ಗೆ ಕರೆ
May 27, 2018ಮಡಿಕೇರಿ: ಮುಖ್ಯಮಂತ್ರಿಯಾದರೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ಸರ್ಕಾರದ ವಿರುದ್ದ ಮೇ.28 ರಂದು ಕೊಡಗು ಜಿಲ್ಲಾ ಬಂದ್ಗೆ ಬಿಜೆಪಿ ಕರೆ ನೀಡಿದೆ. ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗಾಗಿ ರಾಷ್ಟ್ರಿಕೃತ ಮತ್ತು ಸಹಕಾರ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ತಾನು ರೈತರಿಗೆ ನೀಡಿದ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ರೈತರ ಬಗೆಗಿನ ಕುಮಾರಸ್ವಾಮಿ ಕಾಳಜಿಯ ನಿಜಬಣ್ಣ…
ಸಾಕು ತಂದೆ ಮನೆಯಲ್ಲೇ ಕಳವು ಮಾಡಿದ್ದ ಶಿಕ್ಷಕಿ ಸೆರೆ 3.60 ಲಕ್ಷ ಮೌಲ್ಯದ ಚಿನ್ನಾಭರಣ ವಶ
May 27, 2018ಮಡಿಕೇರಿ: ಮೂರ್ನಾಡಿನ ಸುಭಾಷ್ ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದ ಮನೆಕಳವು ಪ್ರಕ ರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿ ಯಾಗಿದ್ದು, ಮನೆಯೊಡೆಯನ ಸಾಕುಮ ಗಳೇ ಚೋರಿ ಎನ್ನುವುದು ಖಾತ್ರಿಯಾ ಗಿದೆ. ಕೃಪಾಶ್ರೀ(26) ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ. ಮೂರ್ನಾಡು ಸುಭಾಷ್ ನಗರ ನಿವಾಸಿ ವೆಂಕಟರಮಣ ಭಟ್ ಅವರು ಮೇ 20 ರಂದು ಕಾರ್ಯನಿಮಿತ್ತ ಪರ ಊರಿಗೆ ತೆರ ಳಿದ್ದು, ಮರಳಿ ಮನೆಗೆ ಬರುವಷ್ಟರಲ್ಲಿ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗಿದ್ದ ಸುಮಾರು…