ಅಂಚೆ ನೌಕರರ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ
ಕೊಡಗು

ಅಂಚೆ ನೌಕರರ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ

May 28, 2018

ವಿರಾಜಪೇಟೆ: ಕೇಂದ್ರ ಸರಕಾರದ ಗ್ರಾಮೀಣ ಅಂಚೆ ನೌಕರರು ಅನೇಕ ದಶಕಗಳಿಂದಲೂ ಪ್ರಾಮಾಣ ಕತೆ ಯಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಇಲಾಖೆಯ ಸಚಿವರು, ವರಿ ಷ್ಠರು ಈ ಎಲ್ಲಾ ಬೇಡಿಕೆಗಳನ್ನು ಈಡೇರಿ ಸಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ.

ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇ ರಿಯ ಎದುರು ಎರಡು ದಿನಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ಅಂಚೆ ಕಚೇರಿಗಳ ಸುಮಾರು 190 ಗ್ರಾಮೀಣ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನಲೆ ಯಲ್ಲಿ ಸ್ಥಳಕ್ಕೆ ತೆರಳಿ ಮಾತನಾಡಿದ ಸಂಕೇತ್ ಪೂವಯ್ಯ ಅವರು, ಅಂಚೆ ನೌಕರರು ಹೊತ್ತು ಗೊತ್ತಿಲ್ಲದೆ ದುಡಿಯುತ್ತಿದ್ದಾರೆ. ಮಲೆನಾಡು ಪ್ರದೇಶದಲ್ಲಿಯೂ ಮಳೆಗಾಲದಲ್ಲಿ ಆರು ತಿಂಗಳಲ್ಲಿ ಅಂಚೆ ನೌಕರರು ಕಠಿಣ ಸೇವೆಗೂ ಬದ್ಧರಾಗಿರುತ್ತಾರೆ. ಅಂಚೆ ನೌಕರರ ಪರಿ ಶ್ರಮ, ನಿಷ್ಠಾವಂತ ಸೇವೆಗೆ ಕೇಂದ್ರ ಸರ ಕಾರ ಗದಾ ಪ್ರಹಾರ ಮಾಡಲು ಹೊರ ಟಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಅಂಚೆ ನೌಕರರಿಗೆ ಯಾವುದೇ ಮೂಲ ಸೌಲಭ್ಯಗಳು ದೊರಕುತ್ತಿಲ್ಲ. ಬದಲಿಗೆ ಸೇವೆಯ ಹೆಸರಿನಲ್ಲಿ ಕಿರುಕುಳ ನೀಡಿ ದೌರ್ಜನ್ಯವೆಸಗಲಾಗುತ್ತಿದೆ. ಅಂಚೆ ನೌಕರರ ಬೇಡಿಕೆಯಂತೆ ಕಮಲೇಶ್ ಚಂದ್ರ ಸಮಿತಿ ಆಯೋಗದ(ಜಿಡಿಎಸ್) ಏಳನೇ ವೇತ ನದ ವರದಿಯನ್ನು ಜಾರಿಗೊಳಿಸುವುದು. ಎಂಟು ಗಂಟೆ ಕೆಲಸ ಕಾಯಂಗೊಳಿಸು ವುದು. ದೆಹಲಿ ಮತ್ತು ಮದ್ರಾಸ್ ನ್ಯಾಯಾ ಲಯಗಳ ನೌಕರರಿಗೆ ಪಿಂಚಣ ನೀಡು ವುದು. ಅಂಚೆ ಇಲಾಖೆಯ ನೌಕರರಿಗೆ ಇತರ ಎಲ್ಲ ನೌಕರರಂತೆ ಸಮಾನತೆಯನ್ನು ಕಾಯ್ದುಕೊಂಡು ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದರಲ್ಲದೆ, ಈ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ನೌಕರರಿಗೆ ತಿಳಿಸಿದರು.

ಮುಷ್ಕರದ ಸ್ಥಳಕ್ಕೆ ಇಂದು ಭೇಟಿ ನೀಡಿದ ಸಂಕೇತ್ ಪೂವಯ್ಯ ಅವರಿಗೆ ಸಂಘಟನೆಯ ಪ್ರಮುಖರು ಮನವಿ ಪತ್ರ ನೀಡಿದರು. ಇದೇ ಸಂದರ್ಭದಲ್ಲಿ ಸಂಘ ಟನೆಯ ಕಾರ್ಯದರ್ಶಿ ಬಿ.ಎಂ.ಮಂಜು ನಾಥ್ ಮಾತನಾಡಿ, ಅಂಚೆ ನೌಕರರ ಮುಷ್ಕರಕ್ಕೆ ಸಂಕೇತ್ ಪೂವಯ್ಯ ಅವರ ಬೆಂಬಲವನ್ನು ಸಂಘಟನೆ ಸ್ವಾಗತಿಸು ತ್ತದೆ. ಈ ಹಿಂದೆಯೂ ಸಂಘಟನೆ ವತಿ ಯಿಂದ ಮುಷ್ಕರ ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗದ್ದರಿಂದ ಈಗ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿ ಕೊಂಡಿರುವುದಾಗಿ ತಿಳಿಸಿದರಲ್ಲದೆ, ಬೇಡಿಕೆಗಳು ಈಡೇರುವ ತನಕ ಮುಷ್ಕರ ಮುಂದುವರೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಸ್.ಎಚ್. ಮತೀನ್, ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತಿತರರಿದ್ದರು.

Translate »