ವಿರಾಜಪೇಟೆ: ಪಟ್ಟಣ ಪಂಚಾ ಯಿತಿಯ ಮಳಿಗೆಗಳ ಹರಾಜು, ಸಂತೆ ಶುಲ್ಕ ಎತ್ತುವಳಿ, ವಾಹನ ನಿಲುಗಡೆ ಶುಲ್ಕ, ಹಂದಿ, ಕೋಳಿ ಮಾಂಸ ಮಾರುಕಟ್ಟೆ ಹರಾ ಜುವಿನ ಸಂದರ್ಭ ನೂತನವಾಗಿ ನಿರ್ಮಾಣ ವಾದ ಮೀನು ಮಳಿಗೆಯ ಹರಾಜು ಪ್ರಕ್ರಿಯೆ ಸ್ಥಳೀಯ ಪುರಭವನದಲ್ಲಿ ನಡೆಯಿತು. ಹರಾಜು ವೇಳೆ ಎಸ್.ಹೆಚ್.ಮೈನೂದ್ಧಿನ್, ಪಟ್ರಪಂಡ ರಘು ನಾಣಯ್ಯ, ಎಸ್.ಹೆಚ್. ಮತೀನ್ ಇತರರು ಹಸಿ ಮೀನುಗಳ ನೂತನ ಮಳಿಗೆ ಕಾಮಗಾರಿ ಪೂರ್ಣವಾಗದ ಕಾರಣ ಹರಾಜು ಮುಂದೂಡುವಂತೆ ಆಗ್ರಹಿಸಿ ದರಲ್ಲದೆ, ಮತೀನ್ ವೇದಿಕೆ ಬಳಿ ಏರು ಧ್ವನಿಯಲ್ಲಿ ಮಾತನಾಡಿದರು….
ವಿರಾಜಪೇಟೆ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಆಚರಣೆ
February 9, 2019ವಿರಾಜಪೇಟೆ: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಾಂಪ್ರದಾಯಿಕ ದಿನ’ವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳು, ಉಪನ್ಯಾಸ ಕರು, ಅಧ್ಯಾಪಕರು ಬಿಳಿ ಬಣ್ಣದ ಉಡು ಪುಗಳನ್ನು ಧರಿಸುವ ಮೂಲಕ ಮೊದಲ ದಿನ ಸಂಸ್ಕøತಿ ಬಿಂಬಿಸುವಂತೆಯು, ಎರಡನೆ ದಿನ ಹಸಿರು ಉಡುಗೆಗಳನ್ನು ಧರಿಸಿ ಸಮೃದ್ಧಿ ಯಾಗಿರಲಿ ಎಂಬ ಸಂದೇಶ ಸಾರಿದರು. ಮೂರನೆ ದಿನ ಕೊಡವರ ಸಂಸ್ಕøತಿ ಅಚಾರ-ವಿಚಾರದ ಸಂದೇಶ ಸಾರಿದರ ಲ್ಲದೆ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭ ವಿಸಿದ್ದರೂ ಎಲ್ಲಾ ಕಷ್ಟಗಳನ್ನು ದೂರಮಾಡಿ ಮತ್ತೆ ಕೊಡಗನ್ನು ಎತ್ತರಕ್ಕೆ ಬೆಳೆಸೋಣ ಎಂದು…
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ
January 21, 2019ವಿರಾಜಪೇಟೆ: ವಿರಾಜಪೇಟೆ ಸಮೀಪದ ಮೈತಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮೈತಾಡಿ ಗ್ರಾಮದ ದಾಸಪ್ಪ ಅವರ ಪುತ್ರ, ಉದ್ಯಮಿ ಡಿ.ರಮೇಶ್ ಅವರು ಉಚಿತ ಬ್ಯಾಗ್, ಮತ್ತು ಶಾಲೆಗೆ ಅನ್ನದಾಸೋಹಕ್ಕೆ ಎರಡು ಕುಕ್ಕರ್ಗಳನ್ನು ನೀಡಿದ್ದಾರೆ. ಈ ಸಂದರ್ಭ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಫ್ಲೋರಿನ ಮೆನೆಜಸ್ ಮತ್ತು ಸಹ ಶಿಕ್ಷಕಿ ಭಾಗ್ಯ, ದಾನಿಗಳಾದ ಎಂ.ಟಿ. ದಾಸಪ್ಪ, ಕದನೂರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಣಿ, ಗ್ರಾಮಸ್ಥರಾದ ಕುಂಞರ ಸುನು ಸುಬ್ಬಯ್ಯ, ಐಯಮಂಡ ವೇಣು ಮತ್ತು ವಿ.ಸಿ.ಮನು ಹಾಗೂ ಇತರರು…
ವಿರಾಜಪೇಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ
January 4, 2019ವಿರಾಜಪೇಟೆ: ವಿರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವವು ಕಳೆದ ಮೂರುದಿನಗಳಿಂದ ದೇವರಿಗೆ ಗಣಪತಿಹೋಮ, ಲಕ್ಷಾರ್ಚನೆ, ವಿಶೇಷ ಪೂಜೆ, ಮಹಾ ಪೂಜೆ ಸಂದರ್ಭ ಜೋಡಿ ಗರುಡಗಳು ದೇವಾಲಯದ ಪ್ರದರ್ಶನ ಹಾಗೂ ಅನ್ನಸಂತಾರ್ಪಣೆಯೊಂದಿಗೆ ವಿಜೃಂಭಣೆಯ ಉತ್ಸವವನ್ನು ಆಚರಿಸಲಾಯಿತು. ಕೇರಳದ ಚಂಡೆ ಮದ್ದಳೆ, ಅಯ್ಯಪ್ಪನ ಚಲನ ವಲನಗಳಿರುವ ವಿಗ್ರಹ, ಗೊಂಬೆಕುಣಿತ ಹಾಗೂ ವಿವಿಧ ಮನರಂಜನಾ ತಂಡಗಳೊಂದಿಗೆ ಮಲೆತಿರಿಕೆ ಬೆಟ್ಟದಿಂದ ಅಯ್ಯಪ್ಪ ಸ್ವಾಮಿಯ ಅದ್ದೂರಿಯ ಮೆರವಣಿಗೆ ಹೊರಾಟು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿ ಮೀನುಪೇಟೆಯಲ್ಲಿರುವ ಶ್ರೀ ಮುತ್ತಪ್ಪ ದೇವಲಯದಲ್ಲಿ ಪೂಜೆಸಲ್ಲಿಸಿದ…
ವೀರಾಜಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸ್ವಾಮಿ ಮಧುರೈವೀರನ್ ಆಲಯ ಪ್ರತಿಷ್ಠಾಪನೆ
January 1, 2019ವೀರಾಜಪೇಟೆ, ಡಿ.31- ವೀರಾಜಪೇಟೆ ತೆಲುಗರ ಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಧುರೈವೀರನ್ ಸ್ವಾಮಿಯ ಆಲಯದ ಸಮರ್ಪಣಾ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು. ಡಿ.24ರಂದು ಪ್ರಾರಂಭಗೊಂಡ ವಿನಾಯಗರ್ ಅನುಷ್ಠಾನಂ, ಕೊಡಿ ಏಟ್ರುವಿಳಾ, ಮಹಾಪೂಜಾ ಸೇವೆ, ಡಿ.25 ರಂದು ಪಂದಲ್ ನೆಡುಂ ವಿಳಾ, 26 ರಂದು ಪುಲಿಯಾಟ್ಟಂ ದೈವ ಆರಾಧನೈ ಉರುಮಿ ಮೇಳಂ, 27 ರಂದು ಕುಮ್ಮಿ ಪಾಟ್ಟು ವಿಳಾ, 28 ರಂದು ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನದ ಬಳಿಕ ಪೂಜಾ ಸೇವೆ, ಡಿ.29 ಸ್ವಾಮಿ…
ವಿರಾಜಪೇಟೆ: ಏಳು ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ
December 27, 2018ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಪಶುವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಪಟ್ಟಣದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆರ್ಐ ಡಿಎಫ್ ಯೋಜನೆಯಡಿಯಲ್ಲಿ ರೂ.27. 90 ಲಕ್ಷ ಅನುದಾನದಲ್ಲಿ ಕೆಆರ್ಐಡಿಎಲ್ ಸಂಸ್ಥೆ ಕೈಗೆತ್ತಿಕೊಂಡಿರುವ ನೂತನ ಕಟ್ಟ ಡಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಶಾಸಕ ಬೋಪಯ್ಯ, ಈಗಾಗಲೇ ಅಮ್ಮತ್ತಿ ಮತ್ತು ಪಾಲಿಬೆಟ್ಟ ದಲ್ಲಿ ಪಶು ವೈದ್ಯಕಿಯ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ…
ಜೂಜು ಅಡ್ಡೆ ಮೇಲೆ ದಾಳಿ: ಪ್ರತ್ಯೇಕ ಪ್ರಕರಣದಲ್ಲಿ 14 ಮಂದಿ ಬಂಧನ
December 26, 2018ವಿರಾಜಪೇಟೆ: ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಒಟ್ಟಾರೆ 14 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟದ್ದ 28 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿಸಿದ್ದಾರೆ.ವಿರಾಜಪೇಟೆ ಪಟ್ಟಣದ ಜೈನರ ಬೀದಿಯ ಮೆಸ್ನ ಒಂದರ ಹಿಂಬದಿಯಲ್ಲಿ ಜೂಜಾಟ ಆಡುತ್ತಿದ್ದ 12 ಮಂದಿಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 8900 ರೂ.ಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ. ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡ ಗಿದ್ದ…
ಮಾಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ
December 22, 2018ವಿರಾಜಪೇಟೆ: ಕಳೆದ ಆಗಸ್ಟ್ನಲ್ಲಿ ನೆರೆ ಹಾವಳಿಯಿಂದ ಭೂಕುಸಿತವುಂಟಾಗಿ ಸಂಚಾರ ಸ್ಥಗಿತ ಗೊಂಡಿದ್ದ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿಯ ಮಾಕುಟ್ಟ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಜೂನ್-ಜುಲೈ ತಿಂಗಳು ಸುರಿದ ಭಾರಿ ಮಹಾ ಮಳೆಯಿಂದಾಗಿ ಭೂಕುಸಿದ ಕಾರಣ ಅನೇಕ ಕಡೆ ಗಳಲ್ಲಿ ಮರಗಳು ರಸ್ತೆಗೆ ಉರುಳಿದಲ್ಲದೆ, ಬರೆಕುಸಿದು ಕೊಡಗು ಕೇರಳ ಮಾಕುಟ್ಟ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ನಂತರ ಇತ್ತೀಚೆಗೆ ಈ ರಸ್ತೆಯನ್ನು ದುರಸ್ಥಿ ಪಡಿಸಿದ ಬಳಿಕ ಲಘು ವಾಹನ ಸಂಚಾ ರದ ನಂತರ ಕೊಡಗು ಜಿಲ್ಲಾ…
ಆಂಬುಲೆನ್ಸ್ನಲ್ಲಿ ಹರಳು ಕಲ್ಲು ಸಾಗಾಣೆ: ನಾಲ್ವರ ಬಂಧನ
December 20, 2018ಕುಶಾಲನಗರ: ಆಂಬುಲೆನ್ಸ್ನಲ್ಲಿ ಹರಳು ಕಲ್ಲು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯ ರಫೀಉಲ್ಲಾ ಖಾನ್, ಎಂ.ಎಂ. ಸಿರಾಜ್, ಸಿಕಂದರ್, ಎಂ.ಎಂ.ಮೊಹಮ್ಮದ್ ಆಲಿ ಬಂಧಿತ ಆರೋಪಿಗಳು. ಆರೋಪಿಗಳು ಮೇಕೇರಿ ಗ್ರಾಮದಿಂದ ಹರಳು ಕಲ್ಲುಗಳನ್ನು ತುಂಬಿಕೊಂಡು ಮೈಸೂರಿಗೆ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಶಾಲನಗರ ಪೊಲೀಸರು ಮಾದಪಟ್ಟಣ ಬಳಿ ಆಂಬು ಲೆನ್ಸ್ ಅನ್ನು ಪರಿಶೀಲಿಸಿದಾಗ ಸುಮಾರು 50 ಸಾವಿರ ರೂ. ಮೌಲ್ಯದ ಹರಳು ಕಲ್ಲುಗಳು ಪತ್ತೆಯಾಗಿವೆ. ಇದರಿಂದ ವಾಹನ ವಶಪಡಿಸಿಕೊಂಡು…
ರಾಜಕೀಯ ರಹಿತವಾಗಿ ಕೊಡವ ಸಮಾಜಗಳ ಕರ್ತವ್ಯ ನಿರ್ವಹಣೆ ಅಗತ್ಯ
December 20, 2018ವಿರಾಜಪೇಟೆ: ಕೊಡವ ಸಂಸ್ಕøತಿ ಅಚಾರ ವಿಚಾರ ವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಕೊಡವ ಸಮಾಜಗಳು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಕಾನೂನು ಸಚಿವ ಮೇರಿಯಂಡ ಸಿ.ನಾಣಯ್ಯ ಹೇಳಿದರು. ವಿರಾಜಪೇಟೆ ಕೊಡವ ಸಮಾಜದಲ್ಲಿ ‘ಬೆಂದು-ಬಿಡಾರ’ ವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಿಯವನ್ನು ಬದಿಗೊತ್ತಿ ಕೆಲಸ ಮಾಡಬೇಕು. ಹಾಗೂ ಶಿಕ್ಷಣ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡುವ…