ವಿರಾಜಪೇಟೆ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಆಚರಣೆ
ಕೊಡಗು

ವಿರಾಜಪೇಟೆ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಆಚರಣೆ

February 9, 2019

ವಿರಾಜಪೇಟೆ: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಾಂಪ್ರದಾಯಿಕ ದಿನ’ವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳು, ಉಪನ್ಯಾಸ ಕರು, ಅಧ್ಯಾಪಕರು ಬಿಳಿ ಬಣ್ಣದ ಉಡು ಪುಗಳನ್ನು ಧರಿಸುವ ಮೂಲಕ ಮೊದಲ ದಿನ ಸಂಸ್ಕøತಿ ಬಿಂಬಿಸುವಂತೆಯು, ಎರಡನೆ ದಿನ ಹಸಿರು ಉಡುಗೆಗಳನ್ನು ಧರಿಸಿ ಸಮೃದ್ಧಿ ಯಾಗಿರಲಿ ಎಂಬ ಸಂದೇಶ ಸಾರಿದರು.

ಮೂರನೆ ದಿನ ಕೊಡವರ ಸಂಸ್ಕøತಿ ಅಚಾರ-ವಿಚಾರದ ಸಂದೇಶ ಸಾರಿದರ ಲ್ಲದೆ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭ ವಿಸಿದ್ದರೂ ಎಲ್ಲಾ ಕಷ್ಟಗಳನ್ನು ದೂರಮಾಡಿ ಮತ್ತೆ ಕೊಡಗನ್ನು ಎತ್ತರಕ್ಕೆ ಬೆಳೆಸೋಣ ಎಂದು ಸಾರಿದರು. ವಿದ್ಯಾರ್ಥಿಗಳು ತಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುವಂತ ಉಡುಗೆಗಳನ್ನು ಧರಿಸುವ ಮೂಲಕ ವಿವಿಧ ಜಾತಿ ಧರ್ಮಗಳಾದರು ನಾವೆಲ್ಲರು ಭಾರತೀಯರು ಒಂದೇ ಎಂಬ ಸಂದೇ ಶವನ್ನು ಸಾರಲಾಯಿತು.

ಈ ಸಂದರ್ಭ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ, ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಪಿ.ಎನ್.ನಾಗರಾಜ್ ಮೂರ್ತಿ, ವೇಣುಗೋಪಾಲ್, ಸುಸಿತಾ ಹಾಗೂ ಎಲ್ಲಾ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Translate »