ಸೋಮವಾರಪೇಟೆ: ಹಿಂದೂ ದೇವತೆಗಳ ಹಾಗೂ ಹಿಂದೂ ನೇತಾರರನ್ನು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಪಮಾನ ಮಾಡುತ್ತಿರುವ ಸನ್ನಿ ವೇಶಗಳನ್ನು ತಡೆಗಟ್ಟಲು ಮಸೂದೆ ಜಾರಿಗೆ ತರ ಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ತಹ ಶೀಲ್ದಾರ್ಗೆ ಶನಿವಾರ ಮನವಿ ಸಲ್ಲಿಸಿತು. ತಕ್ಷಣವೇ ಇದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳ ಬೇಕೆಂದು ಭಾರತದ ಪ್ರಧಾನಮಂತ್ರಿ ಹಾಗೂ ರಾಜ್ಯದ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಕಿಬ್ಬೆಟ್ಟ ಆನಂದ್, ದೀಪಕ್, ಎಸ್.ಎಲ್ ಸೀತಾರಾಮ್, ಮಸಗೋಡು ಲೋಕೇಶ್,…
ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ
June 3, 2018ಗೋಣಿಕೊಪ್ಪಲು: ರುದ್ರಬೀಡು ಗ್ರಾಮದಲ್ಲಿ ಕಾಡಾನೆ ದಾಂಧಲೆಗೆ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ವಿತರಣೆ ಮಾಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದರು. ಅಲ್ಲಿನ ಕಾಫಿ ಬೆಳೆಗಾರರಾದ ಆಲೆಮಾಡ ಹರೀಶ್ ಹಾಗೂ ಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರವಾಣ ಕರೆ ಮಾಡಿ, ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಐಎಫ್ಎಸ್ ಅಧಿಕಾರಿ ಶಿವಶಂಕರ್, ಆರ್ಎಫ್ಓ ಆಶೋಕ್, ಡಿಆರ್ಎಫ್ಒ ಐಚಂಡ ಗಣಪತಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು. ಕಾಡಾನೆಗಳು ತೋಟಗಳಿಗೆ…
ಬ್ರೇಕ್ ವಿಫಲಗೊಂಡು ಅಂಗಡಿಗೆ ನುಗ್ಗಿದ ಬಸ್
June 2, 2018ಕುಶಾಲನಗರ: ಬ್ರೇಕ್ ವಿಫಲ ಗೊಂಡ ಖಾಸಗಿ ಬಸ್ ಅಂಗಡಿಗೆ ನುಗ್ಗಿದ ಪರಿಣಾಮ ಪಾದಚಾರಿ ಮೃತಪಟ್ಟು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ಕುಶಾಲನಗರದ ಬಿಎಂ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಇಲ್ಲಿನ ಪಟ್ಣಣ ಪಂಚಾಯಿತಿ ವ್ಯಾಪ್ತಿಯ ಬೈಚನಹಳ್ಳಿ ಗುಂಡುರಾವ್ ನಗರದ ನಿವಾಸಿ ಗೋಪಾಲ್ ಎಂಬುವರ ಪುತ್ರ ರಾಜೇಶ್ (17) ಅಪಘಾತದಲ್ಲಿ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಬಸ್ ಚಾಲಕ ಮೋಹನ್ ಕುಮಾರ್ ಕುಶಾಲ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿನ ಬೈಪಾಸ್ ಸರ್ಕಲ್ನಿಂದ ಐಬಿ ರಸ್ತೆ ಮಾರ್ಗವಾಗಿ ಕಾರ್ಯಪ್ಪ…
ಜೆಡಿಎಸ್ ಹೋಬಳಿ ಅಧ್ಯಕ್ಷನ ಮೇಲೆ ಹಲ್ಲೆ
June 2, 2018ಮಡಿಕೇರಿ: ಗ್ರಾಪಂ ಸದಸ್ಯರಾಗಿರುವ ಮಾದಾಪುರ ಹೋಬಳಿ ಜೆಡಿಎಸ್ ಅಧ್ಯಕ್ಷರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಸಮೀಪದ ಮೂವತೋಕ್ಲು ಗ್ರಾಮದಲ್ಲಿ ನಡೆದಿದೆ. ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ, ಜೆಡಿಎಸ್ ಹೋಬಳಿ ಅಧ್ಯಕ್ಷ ಮುಕ್ಕಾಟೀರ ಬೆಳ್ಳಿ ಯಪ್ಪ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದ ಹಬ್ಬ ಆಚರಣೆ ಸಂಬಂಧ ಸಭೆ ನಡೆಯುತ್ತಿದ್ದ ವೇಳೆ ಇವರ ಮೇಲೆ ಶ್ರೀನಾಥ್ ಎಂಬಾತ ಹಲ್ಲೆ ನಡೆಸಿದ್ದಾನೆ. ತನ್ನ ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ನೀರಿನ ಗೇಟ್ ವಾಲ್ ಅಳ…
ವಿರಾಜಪೇಟೆ ರಸ್ತೆ ದುರಸ್ತಿಗೆ ಆಗ್ರಹ
June 2, 2018ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ವಾರ್ಡ್ಗಳಲ್ಲಿ ರಸ್ತೆಗಳು ತೀರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರು ಓಡಾಡಲು ಸಾದ್ಯವಾಗುತ್ತಿಲ್ಲ ಇದರ ಬಗ್ಗೆ ಪಂಚಾಯಿತಿ ಗಮನ ಹರಿಸದಿ ರುವುದರಿಂದ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಇನ್ನು ಮೂರು ವಾರಗಳಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಸಂಘಟನೆ ವತಿಯಿಂದ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ನಗರ ಘಟಕದ ಕಾರ್ಯದರ್ಶಿ ಶಿವಪ್ಪ ಅವರು ಎಚ್ಚರಿಸಿದ್ದಾರೆ. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮತನಾಡಿದ ಅವರು, ಈಗಾಗಲೇ ಮಳೆಗಾಲ ಪ್ರಾರಂಭಿಸಿದಂತಿದ್ದು,…
ಕೊಡಗಿನ ಸುಟ್ಟತ್ಮಲೆಯಲ್ಲಿ ಅಕ್ರಮ ಹರಳು ಕಲ್ಲು ದಂಧೆ
June 2, 2018ಮಡಿಕೇರಿ: ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ವಲಯ ಹಾಗೂ ಕೊಡಗಿನ ಪುಷ್ಪಗಿರಿ ಅರಣ್ಯ ವಲಯದ ಗಡಿಯಲ್ಲಿ ರುವ ಕೂಜಿಮಲೆ ಮತ್ತು ಕೊಡಗಿನ ಸುಟ್ಟತ್ಮಲೆ ವ್ಯಾಪ್ತಿಯಲ್ಲಿ ಮರಳಿ ಅಕ್ರಮ ಹರಳು ಕಲ್ಲು ದಂಧೆ ನಡೆಯುತ್ತಿದ್ದು ಮಡಿಕೇರಿಯ ಕೆಲವರು ಈ ವನಸಂಪತ್ತು ಲೂಟಿಯಲ್ಲಿ ತೊಡಗಿರುವ ಸುಳಿವು ಲಭಿಸಿದೆ. ಒಂದೊಮ್ಮೆ ರೂ. 500 ರಿಂದ 700 ಮೊತ್ತಕ್ಕೆ ಹರಳು ಕಲ್ಲು ಕೆ.ಜಿ.ಯೊಂದಕ್ಕೆ ಮಾರಾಟ ವಾಗುತ್ತಿದ್ದರೆ, ಪ್ರಸಕ್ತ ಸುಮಾರು ರೂ.25 ಸಾವಿರ ದೊರಕಲಿದೆ ಎನ್ನಲಾಗುತ್ತಿದೆ. 1990ರ ಬಳಿಕ ಸುಬ್ರಹಣ್ಯ ವ್ಯಾಪ್ತಿಯ ಕೂಜಿಮಲೆಯಲ್ಲಿ ಈ ದಂಧೆ…
ಮಡಿಕೇರಿ ಕೋಟೆಯಲ್ಲಿ ವಾಸ್ತವ್ಯ ಹೂಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್
June 2, 2018ಮಡಿಕೇರಿ: ಮಡಿಕೇರಿಯಲ್ಲಿ ರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂ ರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಕೋಟೆ ಆವರಣ ದಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ದಾಖಲಾತಿ ಗಳ ಸಹಿತ ಗಂಟುಮೂಟೆಯೊಂದಿಗೆ ಮೈಸೂರಿನಿಂದ ಮಡಿಕೇರಿ ಆಗಮಿಸಿದ ಹಾಲೇರಿ ನಾಗರಾಜು ಒಡೆಯರ್ ಜಿಲ್ಲಾ ಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ಮಡಿಕೇರಿ ಕೋಟೆ ಪ್ರದೇಶ ತನಗೆ ಸೇರಬೇಕೆಂದು…
ಚುನಾವಣೆಗೆ ಕೊಡಗು ಜಿಲ್ಲಾಡಳಿತ ಸಿದ್ಧತೆ
June 2, 2018ಮಡಿಕೇರಿ: ಇದೇ ಜೂನ್ 8 ರಂದು ನಡೆಯುವ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 8 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪಂಚಾಯತ್(ಸೋಮವಾರಪೇಟೆ ತಾಲೂ ಕಿನ ಸೋಮವಾರಪೇಟೆ,…
ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ
May 31, 2018ಮಡಿಕೇರಿ: ಮುಂಗಾರು ಪ್ರವೇಶದಿಂದ ಕರಾವಳಿ ಮುಳುಗಿದ ಬೆನ್ನಲ್ಲೆ ಕರುನಾಡ ಕಾಶ್ಮೀರ ಮಡಿಕೇರಿ ಯಲ್ಲೂ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಗೊಂಡಿದ್ದಾರೆ. ಮನೆಯೊಂದರ ಭಾರೀ ತಡೆಗೋಡೆ ಕುಸಿದು ಬಿದ್ದಿದ್ದರೆ, ಮತ್ತೊಂದು ಮನೆಯ ಗೋಡೆಗೆ ಹಾನಿಯಾಗಿದೆ. ಸುಬ್ರಹ್ಮಣ್ಯ ನಗರದ ನಿವಾಸಿ ಪರಮೇಶ್ವರಪ್ಪ ಎಂಬುವರ ಮನೆಯ ಮುಂಭಾಗದ ತಡೆಗೋಡೆ ರಾತ್ರಿ 1.30ರ ಸಮಯದಲ್ಲಿ ಕುಸಿದ ಬಿದ್ದಿದೆ. ಪರಿ ಣಾಮ ತಡೆಗೋಡೆಯ ಮುಂಭಾಗದ ಮನೆ ಯೊಂದರ, ಕಾಂಪೌಂಡ್ಗೆ ಹಾನಿಯಾಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಪುಟಾಣ ನಗರ…
ಹೆಚ್ಚು ಹಣ ವಸೂಲಿ ಆರೋಪ: ಮಾಂದಲ್ಪಟ್ಟಿ ಪ್ರವಾಸಿ ವಾಹನಗಳಿಗೆ ದರ ನಿಗದಿ
May 31, 2018ಮಡಿಕೇರಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳು ನಿಯಮ ಬಾಹಿರವಾಗಿ ರಹದಾರಿ, ಷರತ್ತನ್ನು ಉಲ್ಲಂ ಘಿಸಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿ ಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಂದಲ್ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಸೂಕ್ತ ದರ ನಿಗದಿ ಪಡಿ ಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಗರಿಷ್ಠ ಆಸನ ಸಾಮಥ್ರ್ಯ 8 ಮೀರದ, ರಹದಾರಿ ಹೊಂದಿರುವ ಜೀಪ್(ಹಳದಿ ಫಲಕ) ವಾಹನಗಳಿಗೆ ಮತ್ತು ವಾಪಸ್ಸು ಪ್ರಯಾಣ ದರ ಸಹ ಒಳ ಗೊಂಡಂತೆ…