ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಬಳಿ ಅಕ್ರಮ ಬೀಟಿ ನಾಟ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕುಶಾಲನಗರ ಅರಣ್ಯ ಸಿಬ್ಬಂದಿಗಳು ಮಾಲು ಸಮೇತ ಕಾರು ವಶಪಡಿಸಿಕೊಂಡಿದ್ದಾರೆ. ಸಮೀಪದ ಬಸವನಹಳ್ಳಿ ಬಳಿ ಅರಣ್ಯ ಸಿಬ್ಬಂದಿ ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಗಸ್ತಿನಲ್ಲಿ ಇದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಬೆಲೆಬಾಳುವ ಬೀಟಿ ಸಾಗಾಟ ಮಾಡುತ್ತಿದ್ದ ರೂ.1.50 ಲಕ್ಷ ಮೌಲ್ಯದ ನಾಲ್ಕು ಬೀಟೆ ನಾಟ ಸೇರಿದಂತೆ ಮಾರುತಿ ಕಾರನ್ನು ವಶಪಡಿಸಿಕೊಂಡರು. ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸರಂಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾರ್ಗದರ್ಶನದಲ್ಲಿ…
ಸಿಎಂ ಹೆಚ್ಡಿಕೆಯಿಂದ ಜಿಲ್ಲೆಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿಶ್ವಾಸ
May 27, 2018ಮಡಿಕೇರಿ: ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರು ವುದರಿಂದ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಸಮಸ್ಯೆಗಳು ಶೀಘ್ರ ಬಗೆಹರಿ ಯಲಿವೆ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಎರಡು ತಿಂಗಳ ಒಳ ಗಾಗಿ ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಆಹ್ವಾನಿಸಿ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾ ರಕ್ಕೆ ಬಂದಿದ್ದು, ಕೊಡಗಿನಲ್ಲಿ ಜಾತ್ಯತೀತ ಜನತಾದಳದ ಶಾಸಕರಿಲ್ಲದಿದ್ದರೂ, ಜಿಲ್ಲೆಯ…
ಮೇ 31 ರಂದು ವಾಹನಗಳ ಹರಾಜು
May 27, 2018ಕುಶಾಲನಗರ: ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತ್ತುಪಡಿಸಲಾಗಿದ್ದ ಮಾರುತಿ 800 ಕಾರನ್ನು ಅದರ ಮಾಲೀಕರು ಮರಳಿ ವಶಕ್ಕೆ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೆಎ12ಎಂ5062 ಸಂಖ್ಯೆಯ ಈ ಕಾರನ್ನು ನ್ಯಾಯಾಲಯದ ಆದೇಶದಂತೆ ಈ ತಿಂಗಳ 31ರಂದು ಪೊಲೀಸ್ ಠಾಣಾ ಆವರಣದಲ್ಲಿ ಹರಾಜು ಹಾಕಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಅಮಾನ ತ್ತಾಗಿರುವ ಟಾಟಾ ಸಿಯೆರಾ ವಾಹನವನ್ನೂ ಮಾಲಿಕರು ವಶಕ್ಕೆ ಪಡೆದುಕೊಂಡಿಲ್ಲವಾದ ಕಾರಣ ಕೆಎ12ಎಂ1399 ನಂಬರಿನ ಈ ವಾಹನವನ್ನೂ ಮೇ 31ರಂದು ಹರಾಜು ಹಾಕಲಾಗುತ್ತಿದೆ. ಆಸಕ್ತ ಸಾರ್ವಜನಿಕರು ಪಾಲ್ಗೊಳ್ಳುವಂತೆ…
ಬೋಡ್ನಮ್ಮೆ ವೇಷಧಾರಿಗೆ ಅಪರಿಚಿತ ವಾಹನ ಡಿಕ್ಕಿ ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನಿಗೆ ಸಂಕೇತ್ ಪೂವಯ್ಯ ನೆರವು
May 27, 2018ಗೋಣಿ ಕೊಪ್ಪಲು: ಹೆಬ್ಬಾಲೆ ಬೋಡ್ನಮ್ಮೆ ಸಂದರ್ಭ ನಡೆದಿದ್ದ ವಾಹನ ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ವೇಷದಾರಿ ಕಾರ್ಮಿಕ ಮುತ್ತ ಅವರ ಚಿಕಿತ್ಸೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಧನಸಹಾಯ ಮಾಡಿದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಕಾರ್ಮಿಕನ ಯೋಗ ಕ್ಷೇಮ ವಿಚಾರಿಸಿ, ಆತನ ಪತ್ನಿ ಕವಿತಾಳಿಗೆ 10 ಸಾವಿರ ವೈಯಕ್ತಿಕ ಧನ ಸಹಾಯ ನೀಡಿದರು. ಕಳೆದ ಬುಧವಾರ ರಾತ್ರಿ ಪಾಲಿಬೆಟ್ಟ ರಸ್ತೆಯಲ್ಲಿ ಹಬ್ಬದ ವೇಷತೊಟ್ಟು ಸಂಭ್ರಮಿಸುತ್ತಿದ್ದ ಸಂದರ್ಭ ಅಪರಿಚಿತ ವಾಹನ ವೊಂದು ಡಿಕ್ಕಿಯಾಗಿ ತಲೆಭಾಗಕ್ಕೆ ಗಂಭೀರ ಪೆಟ್ಟಾಗಿತ್ತು….
2015ರ ಟಿಪ್ಪು ಜಯಂತಿ ಘರ್ಷಣೆ ಹಿಂದಿನ ಎಸ್ಪಿ ವರ್ತಿಕಾ ಕಟಿಯಾರ್ಗೆ ಕ್ಲೀನ್ಚಿಟ್
May 27, 2018ಮಡಿಕೇರಿ: ಕೊಡಗು 2015 ರಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಕೋಮು ಘರ್ಷಣೆಯಲ್ಲಿ ಕರ್ತವ್ಯ ಲೋಪ ಆರೋಪ ಎದುರಿಸಿದ್ದ ಆಗಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಗೃಹ ಇಲಾಖೆ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಕಳೆದ 3 ವರ್ಷಗಳ ಹಿಂದೆ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಕುಟ್ಟಪ್ಪ ಮಡಿಕೇರಿ ಜಿಲ್ಲೆ ಆಸ್ಪತ್ರೆಯ ಆವರಣದಲ್ಲಿ ಮೃತ ಪಟ್ಟಿದ್ದರು. ಆ ಬಳಿಕ ನೀರುಕೊಲ್ಲಿ ಬಳಿ ಟಿಪ್ಪು ಜಯಂತಿ ಆಚರಿಸಿ…
ವಿ.ಪೇಟೆಯಲ್ಲಿ ಅಂಚೆ ಕಚೇರಿ ನೌಕರರ ಮುಷ್ಕರ
May 27, 2018ವಿರಾಜಪೇಟೆ: ಅಂಚೆ ನೌಕರರ ವಿವಿಧ ಬೇಡಿಕೆ ಗಳು ಹಾಗೂ ಕಮಲೇಶ್ ಚಂದ್ರ ಸಮಿತಿಯ ಏಳನೇ ಆಯೋ ಗದ ವರದಿಯನ್ನು ಜಾರಿಗೊಳಿ ಸುವಂತೆ ಆಗ್ರಹಿಸಿ ಅಂಚೆ ನೌಕರರ ಸಂಘ ಟನೆಯು ವಿರಾಜಪೇಟೆ ಗಡಿಯಾರ ಕಂಬದ ಬಳಿ ಯಿರುವ ತಾಲೂಕಿನ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ಗಳು ಕೆಲಸಕ್ಕೆ ಹಾಜ ರಾಗದೆ ಮುಷ್ಕರ ನಡೆಸಿದರು. ಈ ಸಂದರ್ಭ ಎ.ಐ.ಜಿ.ಡಿಎಸ್ಯು ಸಂಘಟನೆಯ ಕಾರ್ಯದರ್ಶಿ ಮಂಜು ನಾಥ್ ಮಾತನಾಡಿ, ಈ ಹಿಂದೆ ಇದೇ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಿದಾಗ ಬೇಡಿಕೆಗಳಿಗೆ ಕೇಂದ್ರ ಸರ…
ಅನಾಥ ಮಗು ಪತ್ತೆ
May 27, 2018ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅನಾಥ ಗಂಡು ಮಗುವೊಂದು ಪತ್ತೆಯಾಗಿದೆ. ವರಸುದಾರರು ರಾತ್ರಿ ವೇಳೆ ಯಾರು ಇಲ್ಲದ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಮಲಗಿಸಿ ಹೋಗಿದ್ದಾರೆ. ಟೌನ್ ಕಡೆಗೆ ಹೋಗುತ್ತಿದ್ದ ಗ್ರಾಪಂ ಮಾಜಿ ಸದಸ್ಯ ಗೋವಿಂದರಾಜ್ ಮಗುವಿನ ಅಳು ಕೇಳಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಕೂಡಲೇ ಮಗವುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಗು ಯಾರಿಗೆ ಸೇರಿದೆ ಎಂಬುದು ತಿಳಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಗು ವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ…
ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಸಂಪನ್ನ ಕಾವೇರಿ ಸನ್ನಿಧಿಯಲ್ಲಿ ಮತ್ತೊಂದು ಸುಬ್ರಮಣ್ಯ ಗುಡಿ ನಿರ್ಮಾಣಕ್ಕೆ ಸೂಚನೆ
May 26, 2018ಮಡಿಕೇರಿ: ತಲಕಾವೇರಿ ಸನ್ನಿಧಿಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೋತ್ತರ ವಿಧಿವಿಧಾನಗಳು ಸಂಪನ್ನಗೊಂಡಿದೆ. ಐದನೇ ದಿನ ನಡೆದ ಅಷ್ಟಮಂಗಲ ಪ್ರಶ್ನೋತ್ತರದಲ್ಲಿ ಕನ್ನಿಕೆ ಹೊಳೆ ಮತ್ತು ಕೆರೆಯನ್ನು ಸಂಪೂರ್ಣವಾಗಿ ಶುದ್ಧಿಕರಿಸ ಬೇಕೆಂಬುದು ಕಂಡುಬಂತು. ಮಾತ್ರವ ಲ್ಲದೇ ತಲಕಾವೇರಿ ಸನ್ನಿಧಿಯ ನಾಲ್ಕು ದಿಕ್ಕುಗಳಲ್ಲಿ ಹಲವು ದೇವನೆಲೆಗಳಿದ್ದು, ಅವುಗಳನ್ನು ಶೋಧಿಸಬೇಕೆಂಬುದು ಪ್ರಶ್ನೆ ಯಲ್ಲಿ ಗೋಚರವಾಗಿದೆ. ಕಾವೇರಿ ಸನ್ನಿಧಿ ಯಲ್ಲಿ ಮತ್ತೊಂದು ಸುಬ್ರಹ್ಮಣ್ಯ ಗುಡಿ ಯನ್ನು ನಿರ್ಮಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ತಲಕಾವೇರಿ ಯಲ್ಲಿ ಮತ್ತೊಂದು ದೇವಿಯ ಸನ್ನಿಧಿಯು ಇದ್ದು, ಆ…
ಅಷ್ಟಮಂಗಲ ಪ್ರಶ್ನೆ ಕಾಲಹರಣ, ಹಣ ಮಾಡುವ ದಂಧೆ ಅಲ್ಲಾರಂಡ ವಿಠಲ್ ನಂಜಪ್ಪ ಆಕ್ರೋಶ
May 26, 2018ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲ ಕಾವೇರಿಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯ ಕ್ರಮಕ್ಕೆ ಅಲ್ಲಾರಂಡ ರಂಗ ಚಾವಡಿಯ ಸಂಚಾಲಕರಾದ ಅಲ್ಲಾರಂಡ ವಿಠಲ್ ನಂಜಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಲಕಾವೇರಿಯಲ್ಲಿ ದೋಷ ನಿವಾರಣೆಯ ಹೆಸರಿ ನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಧಿ, ವಿಧಾನ ಕೇವಲ ಕಾಲಹರಣ ಮತ್ತು ಹಣ ಮಾಡುವ ದಂಧೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ಮೈಸೂರು ಮಿತ್ರ’ದೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿಠಲ್ ನಂಜಪ್ಪ, ತಲ ಕಾವೇರಿಯಲ್ಲಿ ಮಂಡೀರ, ಮಣವಟ್ಟಿರ, ಪಟ್ಟಮಾಡ ಕುಟುಂಬಸ್ಥರ ತಕ್ಕಾಮೆ ತಪ್ಪಿ…
ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಕಾಂಗ್ರೆಸ್ ವಕ್ತಾರ ರಾಜೇಶ್
May 26, 2018ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಪಾಲರ ಆಹ್ವಾ ನದ ಮೇರೆಗೆ ಪ್ರಮಾಣ ವಚನ ಸ್ವೀಕರಿ ಸಲಾಯಿತು. ಇದನ್ನು ಕರಾಳದಿನ ಎಂದು ಅಚರಿಸಿರುವ ಬಿಜೆಪಿಯವರಿಗೆ ಸಂವಿ ಧಾನದ ಹಾಗೂ ಪ್ರಜಾಪ್ರಭು ತ್ವದ ಮೇಲೆ ನಂಬಿಕೆ ಇಲ್ಲವಾಗಿರುವುದು ಕಂಡುಬರು ತ್ತದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಡಿ.ಪಿ.ರಾಜೇಶ್ ಹೇಳಿದರು. ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಲಾಯಿತು. ಆದರು ಅವ ಕಾಶವನ್ನು ಸದುಪಯೋಗ ಪಡಿಸಿ…