ಕೊಡಗು

ವಿವಾಹಿತ ಮಹಿಳೆ ಆತ್ಮಹತ್ಯೆ
ಕೊಡಗು

ವಿವಾಹಿತ ಮಹಿಳೆ ಆತ್ಮಹತ್ಯೆ

February 19, 2019

ಸೋಮವಾರಪೇಟೆ: ವಿವಾಹಿತ ಮಹಿಳೆಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮ ನಿವಾಸಿ ನೋಣು-ಕೊರಪಲಮ್ಮ ಅವರ ಪುತ್ರಿ ಹೆಚ್.ಎನ್. ರತ್ನ(36) ಎಂಬುವರು ಸೋಮ ವಾರ ರಾತ್ರಿ ಮನೆ ಸಮೀಪದ ಮಾವಿನ ಮರಕ್ಕೆ ವೇಲಿ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 4 ತಿಂಗಳ ಹಿಂದೆ ಶನಿವಾರಸಂತೆಯ ಮಹೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ರತ್ನ ಅವರು, ನಿನ್ನೆ ದಿನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಆದರೆ ಡೆತ್‍ನೋಟ್ ವಿವರಣೆ ಲಭ್ಯವಾಗಿಲ್ಲ….

ಅರ್ಹರಿಗೆ ಸೌಲಭ್ಯ ತಲುಪಲು ಹೆಚ್ಚಿನ ಗಮನ ಅಗತ್ಯ
ಕೊಡಗು

ಅರ್ಹರಿಗೆ ಸೌಲಭ್ಯ ತಲುಪಲು ಹೆಚ್ಚಿನ ಗಮನ ಅಗತ್ಯ

February 19, 2019

ಮಡಿಕೇರಿ: ರೋಟರಿ ಸೇರಿ ದಂತೆ ಸಾಮಾಜಿಕ ಸೇವಾ ಸಂಘಟನೆಗಳ ನೆರವು ಸಮಾಜದ ನೈಜ ಫಲಾನುಭವಿ ಗಳಿಗೆ ದೊರಕುವ ನಿಟ್ಟಿನಲ್ಲಿ ಸಂಘಟನೆ ಗಳು ಗಮನ ಹರಿಸಬೇಕಾಗಿದೆ ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಪಿ.ರೋಹಿನಾಥ್ ಕರೆ ನೀಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತ ನಾಡಿದ ಪಿ.ರೋಹಿನಾಥ್, ಯಾವುದೇ ವ್ಯಕ್ತಿ ಜೀವನದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳನ್ನು ಹೊಂದದೆ ಸಾಧನೆಯ ಗುರಿ ತಲುಪಲು ಅಸಾಧ್ಯ. ಆದರೆ ಯಾರೂ ಜೀವನದಲ್ಲಿ ಶಾಶ್ವತವಾಗಿ ಕಹಿ ನೆನಪಾಗಿ…

ಕೊಡಗು ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಭರವಸೆ
ಕೊಡಗು

ಕೊಡಗು ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಭರವಸೆ

February 18, 2019

ಮಡಿಕೇರಿ: ಕೊಡಗಿನ ರಸ್ತೆ ಅಭಿವೃದ್ಧಿ, ನಿರಾಶ್ರಿತರ ಮನೆ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಮುಖ್ಯಮಂತ್ರಿ ಕುಮಾರ ಸ್ವಾಮಿಯೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಅಡ ಗೂರು ಎಚ್. ವಿಶ್ವನಾಥ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ರಾಜ್ಯ ಸರಕಾರ, ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಂತ್ರಸ್ತರ ನೆರವಿಗೆ ನಿಂತಿತ್ತು. ಭೂಕುಸಿತ ದಿಂದಾಗಿ ಹಲವು ಕಡೆಗಳಲ್ಲಿ ರಸ್ತೆಗಳೇ ಕೊಚ್ಚಿ…

ಕಸ ವಿಂಗಡಣೆಗೆ ಜಿಲ್ಲೆಯ ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ
ಕೊಡಗು

ಕಸ ವಿಂಗಡಣೆಗೆ ಜಿಲ್ಲೆಯ ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ

February 18, 2019

ಸ್ವಚ್ಛ ಗ್ರಾಮಾಭಿವೃದ್ಧಿಗೆ ಶ್ರಮಿಸಲು ಸಿಇಓ ಕರೆ ಗೋಣಿಕೊಪ್ಪಲು: ರಾಜ್ಯ ಸರ್ಕಾರ ದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಗಳಲ್ಲಿ ಕಸ ವಿಂಗಡಣಾ ಘಟಕ ಸ್ಥಾಪನೆಗೆ ತಲಾ ರೂ.20 ಲಕ್ಷ ಅನುದಾನವನ್ನು ನೀಡುತ್ತಿದ್ದು, ಇದನ್ನು ಬಳಸಿಕೊಂಡು ಸ್ವಚ್ಛ ಗ್ರಾಮಾಭಿವೃದ್ಧಿಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಲಕ್ಷ್ಮಿಪ್ರಿಯಾ ಕರೆ ನೀಡಿದರು. ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಕುಟ್ಟ ಗ್ರಾಮ ಪಂಚಾಯ್ತಿ ವತಿಯಿಂದ ಕುಟ್ಟ ಗ್ರಾಮ ಪಂಚಾಯ್ತಿ ಹಾಗೂ ಮಾರುಕಟ್ಟೆ ಆವರಣದಲ್ಲಿ ಸ್ಥಾಪಿಸಿರುವ ಹಸಿ ಹಾಗೂ ಒಣಕಸ…

ಕೊಡಗು ಜಿಲ್ಲೆಯ ಪ್ರವಾಹ, ಭೂಕುಸಿತ ಪ್ರಕರಣ: ಜಿಎಸ್‍ಐ ತಂಡದಿಂದ ಪ್ರಕೃತಿ ವಿಕೋಪ ಕುರಿತು ಅಧ್ಯಯನ
ಕೊಡಗು

ಕೊಡಗು ಜಿಲ್ಲೆಯ ಪ್ರವಾಹ, ಭೂಕುಸಿತ ಪ್ರಕರಣ: ಜಿಎಸ್‍ಐ ತಂಡದಿಂದ ಪ್ರಕೃತಿ ವಿಕೋಪ ಕುರಿತು ಅಧ್ಯಯನ

February 18, 2019

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ತಳ ಮಟ್ಟದಿಂದ ಅಧ್ಯಯನ ನಡೆಸಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿ ಯಾದ ಹಿರಿಯ ಭೂ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಿ ಸಂಶೋಧನೆ ನಡೆಸುತ್ತಿದೆ. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿ ರುವ ವಿಜ್ಞಾನಿಗಳು 2 ತಂಡಗಳಾಗಿ ಪ್ರಕೃತಿ ವಿಕೋಪ ಸಂಭವಿಸಿದ ಜಿಲ್ಲೆಯ 34 ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸುತ್ತಿದೆ. ಜಿಎಸ್‍ಐನ ಹಿರಿಯ ಭೂ ವಿಜ್ಞಾನಿಗಳಾದ ಇಝಾಜ್ ಅಹಮದ್, ಜಮೀರ್ ಅಹಮದ್ ಷಾ ಒಂದು…

ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ
ಕೊಡಗು

ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ

February 15, 2019

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣ ದಲ್ಲಿ ಭೂಕುಸಿತ ಸಂಭವಿಸಿದ್ದು, ಬೆಟ್ಟಗುಡ್ಡಗಳ ಮಣ್ಣು ನದಿ ನೀರಿನೊಂದಿಗೆ ಮಿಶ್ರಣಗೊಂಡು ಹಾರಂಗಿ ಜಲಾ ಶಯದ ಒಡಲು ಸೇರುವ ಹಿನ್ನೆಲೆಯಲ್ಲಿ ಎಷ್ಟು ಪ್ರಮಾ ಣದಲ್ಲಿ ಹೂಳು ತುಂಬಿದೆ ಎಂಬುದನ್ನು ಪತ್ತೆ ಹಚ್ಚಲು ಇದೀಗ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸರ್ವೇ ಕಾರ್ಯ ಭರದಿಂದ ನಡೆಯುತ್ತಿದೆ. ರಾಜ್ಯ ಸಮ್ಮಿಶ್ರ ಸರ್ಕಾರ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರಗಳ ಪುನಶ್ಚೇತನ ಕಾಮ…

ಲಾರಿ ಡಿಕ್ಕಿ; ಕಾರು ಚಾಲಕ ಸಾವು
ಕೊಡಗು

ಲಾರಿ ಡಿಕ್ಕಿ; ಕಾರು ಚಾಲಕ ಸಾವು

February 15, 2019

ಮಡಿಕೇರಿ: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿ ಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರಗುಂದ ಗ್ರಾಮದಲ್ಲಿ ನಡೆದಿದೆ. ಮೂಲತಃ ಪೊನ್ನಂಪೇಟೆ ಸಮೀ ಪದ ಹಳ್ಳಿಗಟ್ಟು ನಿವಾಸಿ ಅಚ್ಚೇ ಯಂಡ ಅರುಣ(44) ಮೃತ ಚಾಲಕ. ಕಾರಿನಲ್ಲಿದ್ದ ಇತರ 4 ಮಂದಿಯ ಪೈಕಿ 3 ಮಂದಿಗೆ ಗಾಯಗಳಾ ಗಿವೆ. ಗಾಯಾಳುಗಳನ್ನು ಮಡಿ ಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿದೆ. ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ. ಘಟನೆ ವಿವರ: ಕಾರು…

ಅಕ್ರಮ ಮರ ಸಾಗಾಣೆ: ಆರೋಪಿ ಬಂಧನ
ಕೊಡಗು

ಅಕ್ರಮ ಮರ ಸಾಗಾಣೆ: ಆರೋಪಿ ಬಂಧನ

February 15, 2019

ಸಿದ್ದಾಪುರ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.5 ಲಕ್ಷ ರೂ. ಮೌಲ್ಯದ ಮರದ ನಾಟಾಗಳ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ ವಿರಾಜಪೇಟೆ ತಾಲೂಕು ಆಮ್ಮತ್ತಿ ಹೋಬಳಿ ಬೈರಂಬಾಡ ಗ್ರಾಮದ ಮಾರ್ಗವಾಗಿ ಲಾರಿ ಯೊಂದರಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದರು. ಲಾರಿಯಲ್ಲಿ ಮಾವು, ಧೂಪ ಹಾಗೂ ಕಾಡು ಜಾತಿಯ ಮರದ ನಾಟಾಗಳು ಕಂಡು ಬಂದಿದ್ದು, ವಾಹನ ಸೇರಿ ಅಂದಾಜು 3.5 ಲಕ್ಷ…

ಬೀಳುವ ಮರ ತೆರವಿಗೆ ಆಗ್ರಹ
ಕೊಡಗು

ಬೀಳುವ ಮರ ತೆರವಿಗೆ ಆಗ್ರಹ

February 15, 2019

ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಜಂಕ್ಷನ್ ನಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ರುವ ಬೃಹತ್ ಗಾತ್ರದ ನಂದಿ ಮರವೊಂದು ಬೀಳುವ ಆತಂಕ ಎದುರಾಗಿದ್ದು, ಕೂಡಲೇ ಮರ ವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮರದ ಬುಡದ ಸುತ್ತ ಮಣ್ಣು ತೆಗೆದಿರುವುದರಿಂದ, ಬೇರುಗಳು ಸಡಿಲಗೊಂಡಿದೆ. ಗಾಳಿ ಮಳೆಗೆ ಬೀಳುವ ಸಂಭವವಿದೆ. ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ತಂಗುದಾಣವಿದೆ. ಪ್ರತಿ ದಿನ ಜನ ಸಂದಣಿ ಇರುತ್ತದೆ. ರಾಜ್ಯ ಹೆದ್ದಾ ರಿಯಲ್ಲಿ ವಾಹನಗಳ ಸಂಚಾರವಿರು ತ್ತದೆ. ಸಮೀಪದಲ್ಲಿ ಸರ್ಕಾರಿ ಶಾಲೆಯಿದ್ದು, ಮಕ್ಕಳ ಓಡಾಟವಿರುತ್ತದೆ….

ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ದಾಳಿ ಪ್ರಕರಣ: ವಿರಾಜಪೇಟೆ, ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕೊಡಗು

ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ದಾಳಿ ಪ್ರಕರಣ: ವಿರಾಜಪೇಟೆ, ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

February 14, 2019

ವಿರಾಜಪೇಟೆ: ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮೇಲೆ ಜೆಡಿಎಸ್ ಪಕ್ಷದ ಕೆಲವರು ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ವೀರಾಜಪೇಟೆ ತಾಲೂಕು ಬಿಜೆಪಿ ಸಮಿತಿಯ ಕಾರ್ಯ ಕರ್ತರು ಇಂದು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು. ಪ್ರೀತಂ ಗೌಡರ ಹಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ನೇರ ಹೊಣೆಯಾಗಿ ದ್ದಾರೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊ ಳ್ಳಬೇಕೆಂದು ಆಗ್ರಹಿಸಿ ಸ್ಥಳದಲ್ಲಿಯೇ ತಾಲೂಕು ತಹಶಿಲ್ದಾರ್ ಗೋವಿಂದರಾಜು ಅವರಿಗೆ ಮನವಿ ನೀಡಿ ಇದನ್ನು ರಾಜ್ಯಪಾ ಲರಿಗೆ ಸಲ್ಲಿಸುವಂತೆ…

1 65 66 67 68 69 187
Translate »