ಅಕ್ರಮ ಮರ ಸಾಗಾಣೆ: ಆರೋಪಿ ಬಂಧನ
ಕೊಡಗು

ಅಕ್ರಮ ಮರ ಸಾಗಾಣೆ: ಆರೋಪಿ ಬಂಧನ

February 15, 2019

ಸಿದ್ದಾಪುರ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.5 ಲಕ್ಷ ರೂ. ಮೌಲ್ಯದ ಮರದ ನಾಟಾಗಳ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ

ವಿರಾಜಪೇಟೆ ತಾಲೂಕು ಆಮ್ಮತ್ತಿ ಹೋಬಳಿ ಬೈರಂಬಾಡ ಗ್ರಾಮದ ಮಾರ್ಗವಾಗಿ ಲಾರಿ ಯೊಂದರಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದರು. ಲಾರಿಯಲ್ಲಿ ಮಾವು, ಧೂಪ ಹಾಗೂ ಕಾಡು ಜಾತಿಯ ಮರದ ನಾಟಾಗಳು ಕಂಡು ಬಂದಿದ್ದು, ವಾಹನ ಸೇರಿ ಅಂದಾಜು 3.5 ಲಕ್ಷ ಮೌಲ್ಯದ 92 ನಾಟಗಳ 10.093 ಘನ ಮೀಟರ್ ನಷ್ಟು ಸ್ವತ್ತನ್ನುವಶಪಡಿಸಿಕೊಳ್ಳಲಾಗಿದೆ, ನಾಪೋಕ್ಲು ಗ್ರಾಮದ ಅಹಮದ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊಶಿಣಿ, ವಲಯ ಅರಣ್ಯಾಧಿಕಾರಿ ಕೆ.ಪಿ.ಗೋಪಾಲ್ ರವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ.ದೇವಯ್ಯ ಹಾಗೂ ಕೆ.ಎಸ್.ಸುಬ್ರಾಯ ಮತ್ತು ಅರಣ್ಯ ರಕ್ಷಕ ಅರುಣ ಸಿ. ಮತ್ತು ದಿಲೀಪ್ ಹಾಗೂ ಆರ್‍ಆರ್‍ಟಿ ತಂಡದ ಹರೀಶ್, ಆದರ್ಶ, ಮಂಜು, ಸಲೀಂ, ವಿನೋದ್, ಮುರುಗನ್, ಶೇಖರ್ ಹಾಗೂ ವಾಹನ ಚಾಲಕ ಶರತ್ ಹಾಗೂ ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »