ಬೀಳುವ ಮರ ತೆರವಿಗೆ ಆಗ್ರಹ
ಕೊಡಗು

ಬೀಳುವ ಮರ ತೆರವಿಗೆ ಆಗ್ರಹ

February 15, 2019

ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಜಂಕ್ಷನ್ ನಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ರುವ ಬೃಹತ್ ಗಾತ್ರದ ನಂದಿ ಮರವೊಂದು ಬೀಳುವ ಆತಂಕ ಎದುರಾಗಿದ್ದು, ಕೂಡಲೇ ಮರ ವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮರದ ಬುಡದ ಸುತ್ತ ಮಣ್ಣು ತೆಗೆದಿರುವುದರಿಂದ, ಬೇರುಗಳು ಸಡಿಲಗೊಂಡಿದೆ. ಗಾಳಿ ಮಳೆಗೆ ಬೀಳುವ ಸಂಭವವಿದೆ. ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ತಂಗುದಾಣವಿದೆ. ಪ್ರತಿ ದಿನ ಜನ ಸಂದಣಿ ಇರುತ್ತದೆ. ರಾಜ್ಯ ಹೆದ್ದಾ ರಿಯಲ್ಲಿ ವಾಹನಗಳ ಸಂಚಾರವಿರು ತ್ತದೆ. ಸಮೀಪದಲ್ಲಿ ಸರ್ಕಾರಿ ಶಾಲೆಯಿದ್ದು, ಮಕ್ಕಳ ಓಡಾಟವಿರುತ್ತದೆ. ಮರ ಉರುಳಿದರೆ ಅನಾಹುತವಾಗಬಹುದು ಎಂದು ದೊಡ್ಡಮಳ್ತೆ ಗ್ರಾ.ಪಂ ಉಪಾಧ್ಯಕ್ಷ ಗೋಪಾಲಕೃಷ್ಣ ಎಚ್ಚರಿಸಿದ್ದಾರೆ. ಲೋಕೋಪಯೋಗಿ, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೆ ಗ್ರಾಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Translate »