ಕಸ ವಿಂಗಡಣೆಗೆ ಜಿಲ್ಲೆಯ ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ
ಕೊಡಗು

ಕಸ ವಿಂಗಡಣೆಗೆ ಜಿಲ್ಲೆಯ ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ

February 18, 2019

ಸ್ವಚ್ಛ ಗ್ರಾಮಾಭಿವೃದ್ಧಿಗೆ ಶ್ರಮಿಸಲು ಸಿಇಓ ಕರೆ
ಗೋಣಿಕೊಪ್ಪಲು: ರಾಜ್ಯ ಸರ್ಕಾರ ದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಗಳಲ್ಲಿ ಕಸ ವಿಂಗಡಣಾ ಘಟಕ ಸ್ಥಾಪನೆಗೆ ತಲಾ ರೂ.20 ಲಕ್ಷ ಅನುದಾನವನ್ನು ನೀಡುತ್ತಿದ್ದು, ಇದನ್ನು ಬಳಸಿಕೊಂಡು ಸ್ವಚ್ಛ ಗ್ರಾಮಾಭಿವೃದ್ಧಿಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಲಕ್ಷ್ಮಿಪ್ರಿಯಾ ಕರೆ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಕುಟ್ಟ ಗ್ರಾಮ ಪಂಚಾಯ್ತಿ ವತಿಯಿಂದ ಕುಟ್ಟ ಗ್ರಾಮ ಪಂಚಾಯ್ತಿ ಹಾಗೂ ಮಾರುಕಟ್ಟೆ ಆವರಣದಲ್ಲಿ ಸ್ಥಾಪಿಸಿರುವ ಹಸಿ ಹಾಗೂ ಒಣಕಸ ವಿಂಗಡಣಾ ಘಟಕವನ್ನು ವೀಕ್ಷಿಸಿ ನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಕೊಂಡರು. ಎಲ್ಲಾ ಕಸವನ್ನು ವಿಂಗಡಿಸಿ ಪ್ರತ್ಯೇಕವಾಗಿ ಶೇಖರಿಸಿಟ್ಟಿರುವುದನ್ನು ವೀಕ್ಷಿಸಿ ಖುಷಿ ಪಟ್ಟರು. ಸ್ಥಳೀಯರ ಸಹ ಕಾರದಲ್ಲಿ ಹೆಚ್ಚು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.

ಕುಟ್ಟ ಪಂಚಾಯ್ತಿಯಲ್ಲಿ ಸ್ಥಾಪಿಸಿರುವ ಘಟಕ ಜಿಲ್ಲೆಗೆ ಮಾದರಿಯಾಗಿದೆ. ಸ್ವಚ್ಚ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಂದ ಪ್ರತೀ ಗ್ರಾಮ ಪಂಚಾಯ್ತಿಗೆ ತಲಾ ರೂ.20 ಲಕ್ಷ ಅನುದಾನ ದೊರೆಯ ಲಿದ್ದು, ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಘಟಕ ನಿರ್ಮಾಣವಾಗಬೇಕಿದೆ ಎಂದರು.

ದೇಶದಲ್ಲಿ ಸ್ವಚ್ಚತೆ ವಿಚಾರದಲ್ಲಿ 16ನೇ ಸ್ಥಾನದಲ್ಲಿ ಜಿಲ್ಲೆ ಇದೆ. ಇದರಿಂದಾಗಿ ನಾವು ಸ್ವಚ್ಛತೆ ಬಗ್ಗೆ ಅನುಷ್ಠಾನಗೊಳಿಸು ತ್ತಿರುವ ಯೋಜನೆ ನಮ್ಮ ಶ್ರಮ ಎಲ್ಲವನ್ನು ಗುರುತಿಸುವ ಕೆಲಸವಾಗುತ್ತಿದೆ ಎಂಬು ದನ್ನು ನಾವು ಅರಿಯಬೇಕಿದೆ. ಕುಟ್ಟದಲ್ಲಿ ಸ್ಥಾಪಿಸಿರುವ ಕಸವಿಂಗಡಣಾ ಘಟಕ ನಿರ್ವಹಣೆಗೆ ಹೆಚ್ಚು ಒತ್ತು ಕೊಡು ವಂತಾಗಬೇಕು ಎಂದರು.

ಜಿಪಂ ಸದಸ್ಯ ಶಿವುಮಾದಪ್ಪ ಮಾತ ನಾಡಿ, ಕಸದ ವಿಚಾರದಲ್ಲಿ ಸಾಕಷ್ಟು ಯೋಜನೆಗಳನ್ನು ಇಲ್ಲಿವರೆಗೆ ನಡೆಸಿ ದ್ದೇವೆ. ಕಸದ ಬುಟ್ಟಿ ಸ್ಥಾಪನೆ, ಜಾಗೃತಿ ಗಳು ನಡೆದಿವೆ. ವಿಂಗಡಣಾ ಘಟಕದಿಂದ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಬಹುದಾಗಿದೆ ಎಂದರು. ಪಿಡಿಒ ಬಲರಾಮೇಗೌಡ ಮಾತ ನಾಡಿ, ಒಟ್ಟು 14.86 ಲಕ್ಷ ಅನುದಾನದಲ್ಲಿ 2 ಘಟಕ ಸ್ಥಾಪನೆ ಹಾಗೂ ಕಸ ಸಾಗಣೆಗೆ ಗೂಡ್ಸ್ ವಾಹನ ಖರೀದಿಸಿರುವುದಾಗಿ ತಿಳಿಸಿದರು. ಈ ಸಂದರ್ಭ ಹಸಿರು ದಳದ ಕಾರ್ಯಕರ್ತರು, ಮಹಿಳಾ ಸಂಘದ ಪ್ರಮುಖರುಗಳು, ಕ್ಲೀನ್‍ಕೂರ್ಗ್ ತಂಡದ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಕುಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾಪ್ರಭು, ಉಪಾಧ್ಯಕ್ಷ ಹೆಚ್.ಎಂ.ಉತ್ತಪ್ಪ, ತಾಪಂ ಇಒ ಜಯಣ್ಣ, ಸ್ವಚ್ಛ ಭಾರತ್ ಮಿಷನ್ ನೋಡೆಲ್ ಅಧಿಕಾರಿ ಅಜ್ಜಿಕುಟ್ಟೀರ ಸೂರಜ್, ತಾಲೂಕು ಪಂಚಾಯಿತಿ ಸದಸ್ಯ ಪಲ್ವಿನ್ ಪೂಣಚ್ಚ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಲರಾಮೇಗೌಡ ಇತರರು ಉಪಸ್ಥಿತರಿದ್ದರು.

Translate »