ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವ ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ. “ಭಾರತೀಯ ವಾಯುಪಡೆಯ ಗಾಯಗೊಂಡ ಪೈಲಟ್ ಅನ್ನು ಅಸಭ್ಯ ರೀತಿಯಲ್ಲಿ ನಡೆಸಿಕೊಳ್ಳ ಬೇಡಿ” ಎಂದು ಪಾಕ್ಗೆ ಭಾರತ ಎಚ್ಚರಿ ಸಿದೆ. ಅಲ್ಲದೆ ಪಾಕ್ ತಮ್ಮ ಪೈಲಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಸಮನ್ ಮಾಡಿದ್ದ ಭಾರತ ವಿದೇಶಾಂಗ ಸಚಿವಾಲ…
ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಮುಂದುವರಿಕೆ
February 28, 2019ಬೆಂಗಳೂರು: ಪ್ರಸ್ತುತ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ಅಧಿಕಾರಿ ಹಾಗೂ ನೌಕರರನ್ನು ಹಿಂಬಡ್ತಿ ಮಾಡದೆ, ಪರಿಶಿಷ್ಟ ಸಮುದಾಯದ ಬಡ್ತಿ ಮೀಸಲಾತಿಯನ್ನು ಮುಂದುವರಿಸಿ ಮಹತ್ವದ ಆದೇಶವನ್ನು ಸರ್ಕಾರ ಇಂದು ಹೊರಡಿಸಿದೆ. ಕಳೆದ ಸೋಮವಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿ ದಂತೆ ಸಂಪುಟ ಸಭೆ ನಿರ್ಧಾರ ಕೈಗೊಂಡ ಹಿನ್ನೆಲೆ ಯಲ್ಲಿ ಕೆಲವು ಷರತ್ತುಗಳೊಂದಿಗೆ ಆದೇಶ ಜಾರಿ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಮಾರು 3,799 ಮಂದಿ ಅಧಿಕಾರಿ, ನೌಕರರಿಗೆ ಈ ಆದೇಶ ನಿರಾಳತೆ ಉಂಟು ಮಾಡಿದೆ. ಅಧಿಕಾರ…
ಮೈಸೂರು-ಕುಶಾಲನಗರ ರೈಲ್ವೆ ಕಾಮಗಾರಿಗೆ ಕೇಂದ್ರ ಹಸಿರು ನಿಶಾನೆ
February 28, 2019ಮೈಸೂರು: ಮೈಸೂರು (ಬೆಳಗೊಳ)-ಕುಶಾಲ ನಗರ ರೈಲ್ವೆ ಯೋಜನೆಯ ಬಹು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ತಮ್ಮ ಅವಿರತ ಪ್ರಯತ್ನದಿಂದ ಮೈಸೂರು (ಬೆಳಗೊಳ)-ಕುಶಾಲನಗರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು (ಬೆಳಗೊಳ)-ಕುಶಾಲನಗರ ಒಟ್ಟು 87 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಮಾರ್ಗ ಜೋಡಣೆ ಕಾಮಗಾರಿಗೆ ಇಂದು ರೈಲ್ವೆ ಸಚಿವಾಲಯವು ಹಸಿರು ನಿಶಾನೆ ತೋರಿದೆ. ಈ ಕಾಮಗಾರಿಗೆ 1854.62 ಕೋಟಿ ರೂ. ಅಂದಾಜು ವೆಚ್ಚ…
ಖರ್ಗೆ ಸಿಎಂ ಮಾಡಿ ಎಂದೆ, ಆದರೆ ಕಾಂಗ್ರೆಸ್ನವರು ನಿಮ್ಮ ಮಗನೇ ಸಿಎಂ ಆಗಲಿ ಎಂದು ದುಂಬಾಲು ಬಿದ್ದರು
February 28, 2019ಅರಸೀಕೆರೆ: ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದೆ. ಆದರೆ, ಕಾಂಗ್ರೆಸ್ ನವರು ನಿಮ್ಮ ಮಗ ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ, ತೀವ್ರ ಒತ್ತಡ ಹೇರಿದ ಕಾರಣ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾನು ಒಪ್ಪಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದರು. ಅರಸೀಕೆರೆಯಲ್ಲಿ 300 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, 224 ಸ್ಥಾನಗಳಿರುವ ರಾಜ್ಯದಲ್ಲಿ ನಮ್ಮದು ಕೇವಲ 37…
ವೃದ್ಧೆಯರಿಂದ ಆಭರಣ ಕದಿಯುತ್ತಿದ್ದ ಮಹಿಳೆ ಸೆರೆ
February 28, 2019ಮೈಸೂರು: ಅಮಾಯಕ ವಯೋವೃದ್ಧೆಯರನ್ನೇ ಗುರಿಯಾಗಿಸಿಕೊಂಡು ನಿದ್ರೆ ಮಾತ್ರೆ ಹಾಕಿದ್ದ ಜ್ಯೂಸ್ ಕುಡಿಸಿ ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದ ನಯವಂಚಕಿಯನ್ನು ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಎನ್.ಆರ್. ಮೊಹಲ್ಲಾದ ಗಣೇಶನಗ ರದ ಸೆಂಟ್ ಮೇರಿಸ್ ರಸ್ತೆ, 12ನೇ ಕ್ರಾಸ್ ನಿವಾಸಿ ಮಣಿಕಂಠ ಎಂಬುವರ ಪತ್ನಿ ಸುವರ್ಣ(28) ಬಂಧಿತ ವಂಚಕಿಯಾಗಿದ್ದು, ಆಕೆಯಿಂದ 18 ಲಕ್ಷ ರೂ. ಮೌಲ್ಯದ 581 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ರೂಪಾನಗರ ನಿವಾಸಿ 75 ವರ್ಷದ ಶ್ರೀಮತಿ ದಾಕ್ಷಾಯಿಣಿ ಎಂಬುವರು ಬೆಂಗಳೂರಿನ ಸ್ಯಾಟ ಲೈಟ್ ಬಸ್…
ಬಲಿಷ್ಠ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು
February 28, 2019ಮೈಸೂರು: ಬಲಿಷ್ಠ ಭಾರತ ಕಟ್ಟಬೇಕಾ ದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು. ಜೆಎಲ್ಬಿ ರಸ್ತೆಯ ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಆಯೋಜಿಸಿದ್ದ 23ನೇ ವಾರ್ಡಿನ ಮತದಾರರಿಗೆ ಕೇಂದ್ರ ಸರ್ಕಾರದ `ಆಯುಷ್ಮಾನ್ ಭಾರತ್’ ಕಾರ್ಡ್ಗಳನ್ನು ವಿತರಿಸಿ ಅವರು ಮಾತನಾಡಿದರು. ಬಡವರ ಆರೋಗ್ಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು `ಆಯುಷ್ಮಾನ್ ಭಾರತ’ ಬೃಹತ್ ಆರೋಗ್ಯ ಯೋಜನೆ ಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗವನ್ನು ಮೈಸೂರು ಮತ್ತು…
ವಾಯುಪಡೆ ಸರ್ಜಿಕಲ್ ಸ್ಟ್ರೈಕ್ಗೆ ಸೆಲ್ಯೂಟ್ ಎಂದ ತನ್ವೀರ್ಸೇಠ್
February 28, 2019ಮೈಸೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತೀಕಾರ ವಾಗಿ ನಮ್ಮ ಭಾರತೀಯ ವಾಯುಸೇನೆ ನಡೆಸಿದ `ಏರ್ ಸ್ಟ್ರೈಕ್’ಗೆ ನನ್ನದೊಂದು ಸಲಾಂ ಎಂದು ಹೇಳುವ ಮೂಲಕ ಶಾಸಕ ತನ್ವೀರ್ ಸೇಠ್ ವಾಯುಪಡೆ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದರು. ಮೈಸೂರು ನಗರಪಾಲಿಕೆ ಆವ ರಣದಲ್ಲಿ ತಮ್ಮ ಕಚೇರಿ ಉದ್ಘಾಟಿಸಿದ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ವಿಚಾರ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಅದರಂತೆ ಕಾಂಗ್ರೆಸ್ ಪಕ್ಷವು ಭಾರತೀಯ…
ನಾಳೆ 128 ಕೋಟಿ ವೆಚ್ಚದ ಮೆಗಾ ಡೇರಿ ಲೋಕಾರ್ಪಣೆ
February 28, 2019ಮೈಸೂರು: 128 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 6 ಲಕ್ಷ ಲೀಟರ್ ಸಾಮಥ್ರ್ಯದ ನೂತನ ಮೆಗಾ ಡೇರಿಯನ್ನು ಮಾ.1ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾ ಟಿಸಲಿದ್ದಾರೆ. ಬನ್ನೂರು ರಸ್ತೆಯಲ್ಲಿರುವ ನೂತನ ಡೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಎಸ್.ವಿಜಯಕುಮಾರ್, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳು ನೂತನ ಮೆಗಾ ಡೇರಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಡಾ.ವರ್ಗೀಸ್ ಕುರಿಯನ್ ಪ್ರತಿಮೆ ಅನಾವರಣಗೊಳಿಸುವರು. ಸಚಿವ ರಾದ…
ಇಂದಿನಿಂದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸಿಎಂ ಹೆಚ್ಡಿಕೆ ಪ್ರವಾಸ
February 28, 2019ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಫೆ.28) ಹಾಗೂ ಮಾರ್ಚ್ 1ರಂದು ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು. ಫೆಬ್ರವರಿ 28ರಂದು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣ ದಿಂದ ಹೊರಡುವ ಅವರು, ಸಂಜೆ 4.15 ಗಂಟೆಗೆ ಕೊಡಗು ಜಿಲ್ಲೆ, ಹಾರಂಗಿ ಜಲಾಶಯದ ಹೆಲಿಪ್ಯಾಡ್ಗೆ ಆಗಮಿಸಿ, ಅಲ್ಲಿಂದ ಕಾರಿನಲ್ಲಿ ಸೋಮವಾರಪೇಟೆ ತಾಲೂಕು, ಬಸವನ ಹಳ್ಳಿಗೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಗಿಡ್ಡಹಳ್ಳಿ ನಿರಾಶ್ರಿತರಿಗೆ ಮನೆಗಳನ್ನು ಹಸ್ತಾಂತರಿಸುವರು. ಅಂದು ರಾತ್ರಿ ಮಡಿಕೇರಿ ಅಥವಾ ಕುಶಾಲನಗರದಲ್ಲಿ…
ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ: ಜೇಟ್ಲಿ
February 28, 2019ನವದೆಹಲಿ: ಭಾರತೀಯ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ಮತ್ತೊಂದೆಡೆ ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ನೀಡಿ ರುವ ಹೇಳಿಕೆ ಬಗ್ಗೆ ಚರ್ಚೆ ನಡೆಯತೊಡಗಿದೆ. ಅಲ್ ಖೈದಾ ಭಯೋತ್ಪಾದನೆ ಸಂಘಟನೆಯ ರೂವಾರಿ ಒಸಾಮಾ ಲಾಡೆನ್ನನ್ನು ಅಮೆರಿಕ ಅಬೋಟಾಬಾದ್ನೊಳಗೆ ನುಗ್ಗಿ ಹೊಡೆದು ಹಾಕಿಲ್ಲವೇ? ಅದೇ ರೀತಿ ಇಂದು ಏನು ಬೇಕಾದರೂ ನಡೆಯಬಹುದು. ನಮಗೆ ಯಾಕೆ ಅದು ಸಾಧ್ಯವಿಲ್ಲ…










