ಮೈಸೂರು: ಸರಳ, ಸಹಜ ಬದುಕು ಸುಖ ಬದುಕಿನ ಸೋಪಾನ ಎಂದು ಹಾಸನ ನಗರಸಭಾ ಆಯುಕ್ತ ಬಿ.ಎ. ಪರಮೇಶ್ ತಿಳಿಸಿದರು. ನಗರದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ 30ನೇ ವರ್ಷದ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನಾಂಗ ವಿವಿಧ ಆಕ ರ್ಷಣೆಗಳಿಗೆ ಸಿಲುಕಿ ದೈಹಿಕ, ಮಾನಸಿಕ ಒತ್ತಡಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಕ್ಷೋಭೆ ಹೆಚ್ಚುತ್ತಿದೆ. ಇವುಗಳಿಂದ ಹೊರಬರಲು ಪ್ರತಿನಿತ್ಯ ಯೋಗ ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷ ಣಾರ್ಥಿ ಹಾಗೂ ಹೊಳೇ ನರಸೀಪುರ…
ಕುಮಾರವ್ಯಾಸನ ಸಾಹಿತ್ಯ ಅಧ್ಯಯನದಿಂದ ಬರವಣಿಗೆಯಲ್ಲಿ ರಸದ ಹದ ಸೃಷ್ಟಿ ಸಾಧ್ಯ
January 3, 2019ಮೈಸೂರು:-ಕುಮಾರ ವ್ಯಾಸನ ಸಾಹಿತ್ಯ ರಸ ಪ್ರವಾಹದಿಂದ ಕೂಡಿದ್ದು, ಇಂದಿನ ನಮ್ಮ ಲೇಖಕರು ಕುಮಾರವ್ಯಾಸನ ಸಾಹಿತ್ಯವನ್ನು ಆಳವಾಗಿ ಓದಿಕೊಂಡರೆ ತಮ್ಮ ಬರವಣಿಗೆಯಲ್ಲಿ ರಸದ ಹದ ಕಾಯ್ದುಕೊಳ್ಳಬಹುದು ಎಂದು ಸರ ಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ಉದಯ ರವಿ ರಸ್ತೆಯಲ್ಲಿರುವ ಡಾ.ಎಸ್.ಎಲ್.ಭೈರಪ್ಪ ಅವರ ನಿವಾಸದ ಆವರಣದಲ್ಲಿ ತನುಮನು ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟದ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಡಾ.ಸಿಪಿಕೆ ಅವರ ಸಂಯೋಜನೆಯಲ್ಲಿ ಹೊರತಂದಿ ರುವ ಕುಮಾರ ವ್ಯಾಸ ವಿರಚಿತ…
ರಫೇಲ್ ಚರ್ಚೆಗೆ ಹೆದರಿ ಪ್ರಧಾನಿ ಮೋದಿ ಮನೆಯಲ್ಲಿದ್ದಾರೆ
January 3, 2019ನವದೆಹಲಿ: ಇಂದು ಲೋಕಸಭೆಯಲ್ಲಿ ರಫೇಲ್ ಒಪ್ಪಂದದ ಕುರಿತಾಗಿ ಚರ್ಚೆ ನಡೆಯಿತು. ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೊಸ ವರ್ಷದಂದು ಪ್ರಧಾನಿ ಮೋದಿಯವರು ನೀಡಿದ ಸಂದರ್ಶನ ಸ್ಕ್ರಿಪ್ಟ್ ಸಂದರ್ಶನ ವಾಗಿದ್ದು, ಅಲ್ಲಿ ರಫೇಲ್ ವಿಚಾರವಾಗಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಿಲ್ಲ. ಲೋಕಸಭೆಯಲ್ಲಿ ನಮ್ಮನ್ನು ಎದುರಿಸುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಮನೆಯ ಕೋಣೆಯೊಂದರಲ್ಲಿ ಅವಿತುಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಂದು ಲೋಕಸಭೆಯಲ್ಲಿಯೂ ಪ್ರಧಾನಿಗಳು ಭಾಗಿಯಾಗಿ ರಲಿಲ್ಲ. ಇತ್ತ ರಾಹುಲ್ ಗಾಂಧಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸೇರಿದಂತೆ ಇತರೆ…
ಹಾಸನ ಮೊಮ್ಮಗನಿಗೆ ಬಿಟ್ಟು ಬೆಂಗಳೂರು ಉತ್ತರದತ್ತ ಹೆಚ್.ಡಿ.ದೇವೇಗೌಡರ ನಡೆ…
January 3, 2019ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಈ ಬಾರಿ ತಮ್ಮ ಮೊಮ್ಮಗ ಪ್ರಜ್ವಲ್ಗೆ ಆ ಕ್ಷೇತ್ರ ಬಿಟ್ಟು ಕೊಟ್ಟು, ತಾವು ಬೆಂಗಳೂರು ಉತ್ತರ ಕ್ಷೇತ್ರದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಗೌಡರು ಬೆಂಗಳೂರು ಕಡೆ ಬರುತ್ತಿರುವ ಮಾಹಿತಿ ಅರಿಯುತ್ತಿದ್ದಂತೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಎಚ್.ಎಂ. ರೇವಣ್ಣ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ತಮಗೇ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿಧಾನ ಪರಿಷತ್ ಸದಸ್ಯ ಅವಧಿ…
ಯೋಗವನ್ನು ‘ಕ್ರೀಡೆ’ ಎಂದು ಪರಿಗಣಿಸಿ
January 3, 2019ಮೈಸೂರು: ಯೋಗವನ್ನು ‘ಕ್ರೀಡೆ’ ಎಂದು ಪರಿಗಣಿಸಿ ಆದ್ಯತಾ ವಲಯ ದಲ್ಲಿ ಗುರುತಿಸುವಂತೆ ಕೋರಿ ಯೋಗಾಸನ ಪ್ರಿಯರೂ ಆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತಾರಾಷ್ಟ್ರೀಯ ಯೋಗ ಪ್ರತಿಭೆ, ಮೈಸೂರಿನ ಬಾಲಕಿ ಖುಷಿ ಮನವಿ ಪತ್ರ ಸಲ್ಲಿಸಿದ್ದಾಳೆ. ಕಳೆದ ಡಿ. 31ರಂದು ನವದೆಹಲಿಯಲ್ಲಿ ಪ್ರಧಾನಿಯವರನ್ನು ಸಂಸದ ಪ್ರತಾಪ್ ಸಿಂಹ ಅವರ ಜೊತೆಗೂಡಿ ಭೇಟಿ ಮಾಡಿದ ಖುಷಿ, ಇತರೆ ಕ್ರೀಡೆಗಳಿಗೆ ಸವಲತ್ತುಗಳನ್ನು ನೀಡುವಂತೆಯೇ ‘ಯೋಗ’ಕ್ಕೂ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲಿ ಎಂದು ಮನವಿ ಮಾಡಿದಳು. ಮೈಸೂರಿನ ಸೇಂಟ್ ಜೋಸೆಫ್ ಕೇಂದ್ರೀಯ…
70 ಅಡಿ ಎತ್ತರದ ಸೇತುವೆ ಏರಿ ರೈಲಿನ ಚೈನನ್ನು ಬಿಡಿಸಿದ ಗಾರ್ಡ್!
January 3, 2019ಶ್ರೀರಂಗಪಟ್ಟಣ ಕಾವೇರಿ ನದಿ ಸೇತುವೆ ಮೇಲೆ ನಡೆದ ಘಟನೆ ತಡವಾಗಿ ಬೆಳಕಿಗೆ ಬೆಂಗಳೂರು: ಜೀವದ ಹಂಗು ತೊರೆದು ರೈಲ್ವೆ ಗಾರ್ಡ್ ಒಬ್ಬರು 70 ಅಡಿ ಎತ್ತರದ ಸೇತುವೆ ಮೇಲೆ ನಿಂತಿದ್ದ ರೈಲಿನ ಚೈನನ್ನು ಬಿಡಿಸುವ ಸಲುವಾಗಿ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಮಾಡಿರುವ ಸಾಹಸದ ವೀಡಿಯೋ ಇದೀಗ ವೈರಲ್ ಆಗಿದೆ. ರೈಲ್ವೆ ಗಾರ್ಡ್ ಆಗಿರುವ ಎನ್ ವಿಷ್ಣುಮೂರ್ತಿ ಈ ಸಾಹಸ ಮಾಡಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದ ವಿಷ್ಣುಮೂರ್ತಿ ಕೆಲಸ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ…
ಸಾಹಿತ್ಯ, ಪುಸ್ತಕ ಪ್ರಕಾಶನ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ
January 3, 2019ಮೈಸೂರು: ನಾವೂ ಪುಸ್ತಕ ಪ್ರಕಾಶಕರಾಗಬಹುದೇ? ಸಾಹಿತ್ಯ ವನ್ನು ನಾವೂ ಬರೆಯಬಹುದೇ? ಪ್ರಕಾಶಕ ರಿಗೆ ಮೊದಲೇ ಹಣ ಕೊಡಬೇಕೆ? ಅನು ವಾದ ಮಾಡಿದರೆ ಮೂಲ ಲೇಖಕರ ಅನುಮತಿ ಬೇಕೇ? ಮೂಲ ಲೇಖಕ ರಿಗೂ ಗೌರವ ಧನ ಕೊಡಬೇಕೇ? ಕೃತಿ ಚೌರ್ಯ ಎಂದರೇನು? ಪ್ರಕಾಶಕರೂ ಸಾಹಿತಿಯಾಗಿರಬೇಕೇ? ಎಂಬಿತ್ಯಾದಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ರೂಪಾ ಪ್ರಕಾ ಶನ ಸಂಸ್ಥೆಯ ಯು.ಎಸ್.ಮಹೇಶ್ ಸವಿಸ್ತಾರವಾಗಿ ವಿವರಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರ, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇ ಜಿನ ಕನ್ನಡ ಸಾಹಿತ್ಯ ವೇದಿಕೆ ಕಾಲೇಜಿನ…
ಕುಕ್ಕರ್ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕಿಯ ಆರೋಗ್ಯ ವಿಚಾರಣೆ
January 3, 2019ಮೈಸೂರು: ಕುಕ್ಕರ್ ಸ್ಫೋಟಗೊಂಡು ಗಂಭೀರವಾಗಿ ಗಾಯ ಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಂಚನಾ (9)ಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆದ ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು ಬುಧ ವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಾಲಕಿಯ ಚಿಕಿತ್ಸೆಯ ಮಾಹಿತಿ ಪಡೆದ ಸಚಿವರು, ಉತ್ತಮ ಚಿಕಿತ್ಸೆ ನೀಡು ವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ ದರು. ಈ ಸಂದರ್ಭದಲ್ಲಿ ಮಾಧ್ಯಮದೊಂ ದಿಗೆ…
ಇನ್ನು ವಿವಾದಾತ್ಮಕ ಹೇಳಿಕೆ ನೀಡದಿರಲು ಮೌಖಿಕ ಆದೇಶ
January 3, 2019ಮೈಸೂರು:`ರಾಮಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಭಗವಾನ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡದಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಭಗವಾನ್ರಿಗೆ ಮೌಖಿಕವಾಗಿ ಆದೇಶ ನೀಡಿದ್ದಾರೆ. ಮಾಧ್ಯಮಗಳೂ ಭಗವಾನ್ ಸಂದರ್ಶನಕ್ಕೆ ಹೋದಾಗ ಅಲ್ಲಿದ್ದ ಪೊಲೀಸರೂ ಯಾವುದೇ ರೀತಿಯ ಸಂದರ್ಶನ ನೀಡದಂತೆ…
ಜ.30ರವರೆಗೆ ಸುಯೋಗ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಹೃದ್ರೋಗ ತಪಾಸಣೆ ಶಿಬಿರ
January 3, 2019ಮೈಸೂರು: ಸುಯೋಗ್ ಆಸ್ಪತ್ರೆ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳ ಸಂಯುಕ್ತಾಶ್ರಯಲ್ಲಿ ಜ.30ರವರೆಗೆ ಒಂದು ತಿಂಗಳ ಕಾಲ ವೈದ್ಯರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ರಾಮಕೃಷ್ಣನಗರದಲ್ಲಿರುವ ಸುಯೋಗ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ವೈದ್ಯರು ವೃತ್ತಿಯಲ್ಲಿನ ಒತ್ತಡದಿಂದ ತಮ್ಮ ಆರೋಗ್ಯದತ್ತ ಗಮನ ಹರಿಸದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಗುಪ್ತವಾಗಿ ಎದುರಾಗುವ ಲಕ್ಷಣ ಹೊಂದಿರುವ ಹೃದ್ರೋಗದ…










