ಮೈಸೂರು: ಸುಳವಾಡಿ ಕಿಚ್ಗುತ್ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 17 ಭಕ್ತರ ಸಾವಿಗೆ ಕಾರಣರಾದ ಪಾತಕಿಗಳಿಗೆ ಜಾಮೀನು ಮಂಜೂರು ಮಾಡದೇ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ದರು. ಮೈಸೂರಿನ ನ್ಯಾಯಾಲಯದ ಮುಂಭಾಗ ವಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು, ದೇವಾಲಯದ ಆಸ್ತಿ ಕಬಳಿಸುವ ದುರುದ್ದೇಶದಿಂದ ದುರುಳರು ಪ್ರಸಾದಕ್ಕೆ ವಿಷ ಬೆರೆಸಿದ್ದಾರೆ. ಇದರಿಂದ 17 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಆರೋಪಿ ಗಳ…
ನ್ಯಾಯಾಂಗ ಪ್ರಕ್ರಿಯೆ ಮುಗಿದರಷ್ಟೇ ರಾಮ ಮಂದಿರಕ್ಕೆ ಸುಗ್ರೀವಾಜ್ಞೆ
January 2, 2019ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ, ಹಾಗೊಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳುವುದಾದಲ್ಲಿ ಅದು ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ನಿರ್ಧಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯ ಸ್ಮಿತಾ ಪ್ರಕಾಶ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಕೀಲರು ಸುಪ್ರೀಂಕೋರ್ಟ್ ನಲ್ಲಿ ಅಡ್ಡಿಯುಂಟು ಮಾಡುತ್ತಿರುವ ಕಾರಣ ಅಯೋಧ್ಯೆ ಕುರಿತ ನ್ಯಾಯಾಲಯದ ತೀರ್ಮಾನ ವಿಳಂಬವಾಗುತ್ತಿದೆ ಎಂದಿದ್ದಾರೆ. “ಸಂವಿಧಾನದ ಪರಿಧಿಯೊಳಗೇ ಈ ವಿವಾದಕ್ಕೆ ಪರಿಹಾರವಿದೆ ಎಂದು ಈ…
ಏಕಾಂಗಿಯಾದ ಶಾಸಕ ರಮೇಶ್ ಜಾರಕಿಹೊಳಿ
January 2, 2019ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನ ಗೊಳಿಸಲು ಸಂಚು ರೂಪಿಸಿದ್ದ ಕಾಂಗ್ರೆಸ್ನ ಬಂಡಾಯ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರ ಲೆಕ್ಕಾಚಾರ ತಿರುಗುಮುರುಗಾಗಿದೆ. ಸಂಪುಟದಿಂದ ತಮ್ಮನ್ನು ಕೈಬಿಟ್ಟ ನಂತರ ನನಗೆ ಸ್ಥಾನಮಾನ ಇಲ್ಲದಿ ದ್ದರೆ, ಈ ಸರ್ಕಾರವೇ ಉಳಿಯ ಬಾರದೆಂದು ಕೆಲವು ಅತೃಪ್ತ ಸ್ನೇಹಿತರನ್ನು ನಂಬಿ ದೆಹಲಿಯಲ್ಲಿ ಬಿಡಾರ ಬಿಟ್ಟಿರುವ ರಮೇಶ್ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ಪುನರ್ರಚನೆ ನಂತರ ಕನಿಷ್ಠ 15 ಮಂದಿ ಯಾದರೂ ತಮ್ಮ…
ಬೇಸಿಗೆ ಭೀತಿ: ನೀರು ಮಿತವಾಗಿ ಬಳಸಲು ಮೇಯರ್ ಮನವಿ
January 2, 2019ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸು ವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದರು. ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗ ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಾಪುರ, ಬೆಳಗೊಳ, ಹೊಂಗಳ್ಳಿ, ಕಬಿನಿ ಮೂಲ ಸ್ಥಾವರಗಳಿಂದ ಪ್ರತಿ ನಿತ್ಯ 250 ಎಂಎಲ್ಡಿ ನೀರು ಸರಬರಾಜು ಮಾಡುತ್ತಿದ್ದು, ಹೊರ ವಲಯ, ಕೈಗಾರಿಕಾ ಪ್ರದೇಶಗಳು, ಕೆಹೆಚ್ಬಿ ಕಾಲೋನಿ, ಆರ್ಎಂಪಿ ವಸತಿ ಗೃಹ, ಚಾಮುಂಡಿಬೆಟ್ಟ, ರೈಲ್ವೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಿ ನಗರಕ್ಕೆ ಪ್ರತಿ ನಿತ್ಯ 180…
ಮೊದಲ ದಿನ ಬೆರಳೆಣಿಕೆಯಷ್ಟು ಆಸ್ತಿ ನೋಂದಣಿ
January 2, 2019ಮೈಸೂರು, ಜ.1(ಎಸ್ಬಿಡಿ)- ಸ್ಥಿರಾಸ್ತಿಗಳ ಪರಿಷ್ಕøತ ಮಾರ್ಗ ಸೂಚಿ ದರ(ಗೈಡ್ಲೈನ್ಸ್ ರೇಟ್) ಜಾರಿಯಾದ ಮೊದಲ ದಿನವಾದ ಇಂದು ಆಸ್ತಿಗಳ ನೋಂದಣಿ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಮೈಸೂರು ಪಶ್ಚಿಮ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯವಾಗಿ ಸುಮಾರು 40 ಆಸ್ತಿ ನೋಂದಣಿಯಾಗುತ್ತಿತ್ತು. ಆದರೆ ಇಂದು ನೋಂದಣಿಯಾಗಿರುವುದು 3 ಮಾತ್ರ. ದಕ್ಷಿಣ ಕಚೇರಿಯಲ್ಲಿ ಒಂದೇ ಒಂದು ನೋಂದಣಿಯೂ ಆಗಿಲ್ಲ. ಹೀಗೆ ಜಿಲ್ಲೆಯ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಗೆ ಬಂದವರ ಸಂಖ್ಯೆ ತೀರಾ ಕಡಿಮೆ. ಪರಿಷ್ಕøತ ಮಾರ್ಗಸೂಚಿ ದರದ ಅನ್ವಯ ಸ್ಥಿರಾಸ್ತಿಗಳ ಮೌಲ್ಯ…
ಬರದಿಂದ ರೈತರು ತತ್ತರಿಸಿ ಹೋಗಿದ್ದರೂ ಸಿಎಂ ಕುಮಾರಸ್ವಾಮಿ ಫ್ರಾನ್ಸ್ನಲ್ಲಿ ಮಗನ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ
January 2, 2019ಬೆಂಗಳೂರು: ಬರದಿಂದ ರೈತರು ಸಾಯುತ್ತಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಮ್ಮ ಮಗನ ಸಿನಿಮಾ ಚಿತ್ರೀಕರಣದ ವೀಕ್ಷಣೆಗೆ ಫ್ರಾನ್ಸ್ಗೆ ತೆರಳಿ ಮೋಜು,ಮಸ್ತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದಿಲ್ಲಿ ದೂರಿದ್ದಾರೆ. ರಾಜ್ಯದಲ್ಲಿ 156 ತಾಲೂಕುಗಳು ಬರಗಾಲ ಪೀಡಿತವಾಗಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹಿತಕಾ ಯಬೇಕಾದ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಸ್ಥರು ವಿದೇಶದಲ್ಲಿ ಹೊಸ ವರ್ಷ ಆಚರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಸಿಂಗಾಪುರಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ, ಮಗನ ಸಿನಿಮಾ ಶೂಟಿಂಗ್ ನೋಡಲು ಕುಟುಂಬ ಸಮೇತ ಫ್ರಾನ್ಸ್ಗೆ ಹೋಗಿದ್ದಾರೆ ಎನ್ನುವ ಮಾಹಿತಿ…
ಜ.12ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಅಭಿರಾಂ ಜಿ. ಶಂಕರ್
January 2, 2019ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 12ರಿಂದ 18ರವರೆಗೆ ರಂಗಾಯಣದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು. ಅವರು ಇಂದು ರಂಗಾಯಣದ ಕುಟೀರ ದಲ್ಲಿ ಆಯೋಜಿಸಲಾಗಿದ್ದ, ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಬಹುರೂಪಿ ನಾಟಕೋತ್ಸವದಲ್ಲಿ ಬೇರೆ ರಾಜ್ಯಗಳ 9 ಭಾಷೆಯ ನಾಟಕ ಗಳನ್ನು ಹಾಗೂ ನಾಟಕೋತ್ಸವ ನಡೆ ಯುವ 2 ದಿನಕ್ಕೊಮ್ಮೆ ಶ್ರೀರಾಮಾಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾ ಗುವುದು….
ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭೇಟಿಯಾದ ಡಿ.ಕೆ.ಶಿವಕುಮಾರ್ ಹೊಸ ವರ್ಷದ ಶುಭಾಶಯ ಕೋರಿಕೆ
January 2, 2019ಬೆಂಗಳೂರು: ಪ್ರತಿಪಕ್ಷ ಬಿಜೆಪಿಯ ಬ್ಲಾಕ್ಮೇಲ್ ತಂತ್ರಗಳಿಗೆ ಮಣಿಯದೇ ನಾವು ಸಾರ್ವಜನಿಕ ದೃಷ್ಟಿ ಯಿಂದ ಸಂಪರ್ಕ ರಸ್ತೆ ಹಾಗೂ ಅಭಿ ವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮನಾಂತರ ವಾಗಿ ಮೇಕೆದಾಟು ಯೋಜನೆಗೆ ಸಂಬಂಧಿ ಸಿದಂತೆ ಸಮಾಲೋಚನೆ ನಡೆಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು,…
ಹೊಸ ವರ್ಷದ ಮೊದಲ ದಿನ ಮೈಸೂರಲ್ಲಿ ದೈವದ ಮೊರೆ ಹೋದ ಆಸ್ತಿಕರು
January 2, 2019ಮೈಸೂರು: ಯುವ ಸಮುದಾಯವು ಸೋಮವಾರ ರಾತ್ರಿಯಿಡೀ ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸಂತಸದಿಂದ ಬರ ಮಾಡಿಕೊಂಡರೆ, 2019ರ ಮೊದಲ ದಿನ ವಾದ ಇಂದು ಆಸ್ತಿಕ ಮಹಾಶಯರು ಮೈಸೂರಿನ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡಿದರು. ಮುಂಜಾನೆಯಿಂದ ರಾತ್ರಿವರೆಗೂ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರು. ಸಾವಿರಾರು ಮಂದಿ ಇದೇ ವೇಳೆ ಪರಸ್ಪರ ಹೊಸ ವರ್ಷದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು. ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಮೈಸೂರು ನಗರ ದಾದ್ಯಂತ ದೇವಸ್ಥಾನಗಳಲ್ಲಿ ಜನವೋ…
ಮೈಸೂರಲ್ಲಿ ವಾಹನ ಚಾಲಕರಿಗೆ ಉಡುಗೊರೆ ನೀಡಿ ಸಂಚಾರಿ ಪೊಲೀಸರಿಂದ ಹೊಸ ವರ್ಷದ ಶುಭಾಶಯ
January 2, 2019ಮೈಸೂರು: ಮೈಸೂರು ಪೊಲೀಸರು ಜನಸ್ನೇಹಿಗಳಾಗುತ್ತಿದ್ದಾರೆ. ಮೈಸೂರು ಪೊಲೀಸರು, ಲಾಡು, ಗ್ರೀಟಿಂಗ್ಸ್ ಕಾರ್ಡ್ ನೀಡುವ ಮೂಲಕ ಇಂದು ನಾಗರಿಕರಿಗೆ ಕಾನೂನು ಪಾಲನೆ ಅರಿವು ಮೂಡಿಸುವುದರೊಂದಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತ ತಪ್ಪಿಸಿ, ಅಮೂಲ್ಯ ಜೀವ ಉಳಿಸುವ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಜಾಗೃತಿ ಮೂಡಿಸಿದ ಸಂಚಾರ ಪೊಲೀ ಸರು, ಡಿಎಲ್, ಆರ್ಸಿ ಬುಕ್, ಇನ್ಷೂ ರೆನ್ಸ್ ಸರಿಯಾಗಿಟ್ಟುಕೊಂಡು ವಾಹನ ವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಿ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿದ…










