ಜ.12ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ   ನಾಟಕೋತ್ಸವ: ಅಭಿರಾಂ ಜಿ. ಶಂಕರ್
ಮೈಸೂರು

ಜ.12ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಅಭಿರಾಂ ಜಿ. ಶಂಕರ್

January 2, 2019

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 12ರಿಂದ 18ರವರೆಗೆ ರಂಗಾಯಣದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ಅವರು ಇಂದು ರಂಗಾಯಣದ ಕುಟೀರ ದಲ್ಲಿ ಆಯೋಜಿಸಲಾಗಿದ್ದ, ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಬಹುರೂಪಿ ನಾಟಕೋತ್ಸವದಲ್ಲಿ ಬೇರೆ ರಾಜ್ಯಗಳ 9 ಭಾಷೆಯ ನಾಟಕ ಗಳನ್ನು ಹಾಗೂ ನಾಟಕೋತ್ಸವ ನಡೆ ಯುವ 2 ದಿನಕ್ಕೊಮ್ಮೆ ಶ್ರೀರಾಮಾಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾ ಗುವುದು. ನಾಟಕ ಕಾರ್ಯಕ್ರಮಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿದೆ ಎಂದರು.

ಬೇರೆ ರಾಜ್ಯಗಳಿಂದ ಕಲಾವಿದರು ಆಗ ಮಿಸುತ್ತಿದ್ದು, ಇವರಿಗೆ ಬೇಕಿರುವ ವಸತಿ ಹಾಗೂ ವಸತಿಯ ಸ್ಥಳದಿಂದ ಸಾರಿಗೆ ವ್ಯವಸ್ಥೆ ಮಾಡಬೇಕಿದ್ದು, ಲೋಕೋಪಯೋಗಿ ಇಲಾಖೆ, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಅತಿಥಿಗೃಹಗಳನ್ನು ಕಾಯ್ದಿರಿಸಲು ಪತ್ರ ಬರೆಯುವಂತೆ ತಿಳಿಸಿದರು.
ಬಹುರೂಪಿ ನಾಟಕೋತ್ಸವ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸರ್ಕಾರಿ ರಜೆ ಇದ್ದು, ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ. ಹೋಟೆಲ್ ಅಸೋಸಿಯೇಷನ್ ಹಾಗೂ ಪ್ರವಾ ಸೋದ್ಯಮ ಇಲಾಖೆಯೊಂದಿಗೆ ಪ್ರಚಾರ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ನಾಟಕೋತ್ಸವ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನೀರಿನ ಟ್ಯಾಂಕರ್, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಸ್ವಚ್ಛತಾ ವ್ಯವಸ್ಥೆ, ಪ್ರತಿದಿನ ಸೊಳ್ಳೆ ನಿಯಂ ತ್ರಣ ಔಷಧಿ ಸಿಂಪಡಿಸುವಂತೆ ತಿಳಿಸಿದರು.

ರಂಗಾಯಣದ ಹೊರ ಆವರಣದಲ್ಲಿ ಕುಕ್ಕರಹಳ್ಳಿ ಕೆರೆ ಇದ್ದು, ಈ ಭಾಗದಲ್ಲಿ ಕಸ ವಿಲೇವಾರಿ ಮಾಡದಂತೆ ನೋಡಿ ಕೊಳ್ಳುವಂತೆ ರಂಗಾಯಣದವರು ನೋಡಿ ಕೊಳ್ಳಬೇಕು. ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಒದಗಿಸುವಂತೆ ಚೆಸ್ಕಾಂ ಇಲಾಖೆ ಅವರಿಗೆ ತಿಳಿಸಿದರು.
ಸಭೆಯಲ್ಲಿ ರಂಗಾಯಣದ ನಿರ್ದೇಶಕ ರಾದ ಭಾಗೀರಥಿ ಬಾಯಿ ಕದಂ, ಮೈಸೂರು ಮಹಾನಗರಪಾಲಿಕೆ ಆಯುಕ್ತ ಜಗದೀಶ್, ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾ ರ್ಜುನ್ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »