ಹನಗೋಡು: ರಾಜ್ಯದಲ್ಲಿ ಹೈನುಗಾರರಿಗೆ ಪ್ರತಿ ಲೀ. ಹಾಲಿಗೆ ಸರಾಸರಿ 23.50 ರೂ. ದೊರೆಯುತ್ತಿದ್ದು, ಜೊತೆಗೆ ಸರ್ಕಾರ ಪ್ರತಿ ಲೀ.ಗೆ ಜಿಡ್ಡಿನಾಂಶದ ಆಧಾರದ ಮೇಲೆ 5 ರೂ. ವರೆವಿಗೂ ಪ್ರೋತ್ಸಾಹಧನ ನೀಡು ತ್ತಿರುವುದು ದೇಶದಲ್ಲೇ ಪ್ರಥಮ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.ಹನಗೋಡು ಹೋಬಳಿಯ ಕಡೇಮನು ಗನಹಳ್ಳಿ-ಬೋವಿಕಾಲೋನಿ ಗ್ರಾಮದಲ್ಲಿ 1789ನೇ ನೂತನ ಹಾಲು ಉತ್ಪಾದಕರ ಸಹ ಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹುಣಸೂರು ತಾಲೂಕಿನ 178 ಸಂಘ ಗಳಿಂದ ಪ್ರತಿನಿತ್ಯ 85 ಸಾವಿರ ಲೀ….
ಸರಗೂರು ಬಯಲು ಶೌಚ ಮುಕ್ತವಾಗಿಸಲು ಅಗತ್ಯ ಕ್ರಮ
December 10, 2018ಸರಗೂರು: ಸ್ವಚ್ಛ ಭಾರತ ಅಭಿಯಾನದ ಮೂಲಕ ಪಟ್ಟಣ ವನ್ನು ಬಯಲು ಶೌಚ ಮುಕ್ತ ಪಟ್ಟಣವ ನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸಿ. ಅಶೋಕ್ ತಿಳಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ನ ಜನಧ್ವನಿ ಸಮುದಾಯ ಬಾನುಲಿಯು ಏರ್ಪಡಿಸಿದ್ದ ನೇರ ಸಂದ ರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಪಟ್ಟಣದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ಸಮುದಾಯದಿಂದ ಬಂದಂತಹ ಮೂಲ ಸೌಕರ್ಯ ಮತ್ತು ಬೇಡಿಕೆಯ ಕರೆಗಳಿಗೆ ಉತ್ತರಿಸಿದರು. ಸರಗೂರಿನಿಂದ ವೆಂಕಟೇಶ್ ಮತ್ತು ಆನಂದ್ ಕರೆ ಮಾಡಿ,…
ಪಿರಿಯಾಪಟ್ಟಣದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
December 10, 2018ಪಿರಿಯಾಪಟ್ಟಣ: ಯುವ ಜನತೆ ದೇಶದ ಶಕ್ತಿಯಾಗಿದ್ದು, ಒಳ್ಳೆಯ ಮಾರ್ಗದರ್ಶನದಲ್ಲಿ ವಿದ್ಯಾ ವಂತರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಾರಾಜ ಕೈಗಾರಿಕಾ ತರಬೇತಿ ಸಂಸ್ಥೆ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹೇಳಿದರು. ಪಟ್ಟಣದ ಮಹಾರಾಜ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯ ದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ…
ಡಿಸ್ನಿಲ್ಯಾಂಡ್ ಮಾದರಿ ಕೆಆರ್ಎಸ್ ಅಭಿವೃದ್ಧಿ ಯೋಜನೆಗೆ ತಿಂಗಳಲ್ಲಿ ಟೆಂಡರ್
December 9, 2018ಮೈಸೂರು: ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕೆಆರ್ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ತಿಂಗಳಲ್ಲಿ ಜಾಗತಿಕ ಟೆಂಡರ್(ಗ್ಲೋಬಲ್ ಟೆಂಡರ್) ಕರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದಾರೆ. ಕೃಷ್ಣರಾಜಸಾಗರ (ಕೆಆರ್ಎಸ್)ಕ್ಕೆ ಭೇಟಿ ನೀಡಿ ಉದ್ದೇಶಿತ ಯೋಜನೆ ಸಂಬಂಧ ಬೃಂದಾವನ, ನಾರ್ತ್ಬ್ಯಾಂಕ್ ಮತ್ತು ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೆ ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇ ಗೌಡ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ…
ಚಾಮರಾಜನಗರದಲ್ಲಿ ನಳಂದ ವಿವಿ ಕಟ್ಟಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
December 9, 2018ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ ಸಮೀಪದ ಯಡಬೆಟ್ಟದಲ್ಲಿ ನಳಂದ ವಿಶ್ವವಿದ್ಯಾನಿಲಯ, ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಕಟ್ಟಡಕ್ಕೆ ಇಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸದೊಂದಿಗೆ ಗತಿಸಿ ಹೋಗಿದ್ದ 12ನೇ ಶತಮಾನದ ನಳಂದ ವಿಶ್ವವಿದ್ಯಾಲಯಕ್ಕೆ ಇಂದು ಪುನರ್ಜನ್ಮ ನೀಡಿದ್ದು, ಈ ದಿನ ಚರಿತ್ರಾರ್ಹ ದಿನವಾಗಿದೆ. ಮಾತ್ರವಲ್ಲ ಇದೊಂದು ಚಾರಿತ್ರಾರ್ಹ ಕಾರ್ಯಕ್ರಮ ಎಂದರು. ಸಮಾಜದಲ್ಲಿ ಅಂದು ಇದ್ದ ಅಸಮಾನತೆ, ಶೋಷಣೆ,…
ಕೊಡಗಿನ ವಿನಾಶಕ್ಕೆ ನಾಂದಿ ಹಾಡುವ ರೈಲು, ಹೆದ್ದಾರಿ ಯೋಜನೆ ವಿರೋಧಿಸಿ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ
December 9, 2018ಮಡಿಕೇರಿ: ಕೊಡಗಿನ ವಿನಾಶಕ್ಕೆ ನಾಂದಿಯಾಗಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗಗಳನ್ನು ವಿರೋಧಿಸಿ ‘ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ’ ಮಡಿಕೇರಿಯಲ್ಲಿ ಇಂದು ಬೃಹತ್ ರ್ಯಾಲಿ ಹಾಗೂ ಜನಜಾಗೃತಿ ಸಭೆ ಏರ್ಪಡಿಸಿತ್ತು. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಗಾಂಧಿ ಮೈದಾನ ದವರೆಗೆ ರ್ಯಾಲಿ ನಡೆಯಿತು. ಇದರಲ್ಲಿ ‘ಕೊಡಗನ್ನು ರಕ್ಷಿಸಿ, ಕಾವೇರಿ ನದಿಯನ್ನು ಉಳಿಸಿ’ ಘೋಷಣೆಗಳನ್ನು ಕೂಗಲಾಯಿತು. ನಂತರ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ ನಡೆಯಿತು. ರ್ಯಾಲಿ ಮತ್ತು ಸಭೆಯಲ್ಲಿ ಖ್ಯಾತ ಪರಿಸರವಾದಿ ಹಾಗೂ ಚಿತ್ರ…
ಧರ್ಮದ ಬಗ್ಗೆ ಇನ್ನು ಮುಂದೆ ಎಚ್ಚರ ವಹಿಸುವೆ…
December 9, 2018ಚಾಮರಾಜನಗರ: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಹೀಗಾಗಿ ನಾನು ಈಗ ಧರ್ಮದ ಬಗ್ಗೆ ಬಹಳ ಎಚ್ಚರಿಕೆ ಯಿಂದ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಉಂಟಾದ ಗೊಂದಲವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ವೀರಶೈವ-ಲಿಂಗಾಯತರಲ್ಲಿಗುರುಪರಂಪರೆ ಮತ್ತು ವಿರಕ್ತ ಪರಂಪರೆ ಎಂದು ಎರಡು ವಿಧ ಇದೆ. ಅದರಲ್ಲಿ ಒಂದು ವಿಧದವರು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕು ಎಂದು ನನಗೆ ಮನವಿ ಸಲ್ಲಿಸಿದ್ದರು….
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಸಂಬಂಧ ತಿಂಗಳಲ್ಲಿ ಟೆಂಡರ್
December 9, 2018ಮೈಸೂರು: ಕೆ.ಆರ್. ನಗರ ತಾಲೂಕು ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವ ರಿಗೆ ವಹಿಸುವ ನಿಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಸಂಬಂಧ ಶನಿವಾರ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಿಂದ ನಿರ್ವಹಿಸು ತ್ತಿರುವ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ. ಹಾಗಾಗಿ ಈ ಹಿಂದೆಯೇ ಶ್ರೀರಾಮ ಸಹ…
ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ ‘ವಿಶ್ವ ಸುಂದರಿ’
December 9, 2018ಸ್ಯಾನ್ ಸಿಟಿ ಅರೆನಾ: ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಈ ಬಾರಿಯ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ಪಡೆದಿದ್ದ ಭಾರತದ ಮಾನುಷಿ ಚಿಲ್ಲರ್, ವನೆಸ್ಸಾ ಪೊನ್ಸ್ ಡೆ ಡಿಲಿಯಾನ್ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು. ಮೊದಲ ರನ್ನರ್ ಆಫ್ ಬಿರುದು ಥೈಲ್ಯಾಂಡ್ ಪ್ರತಿನಿಧಿ ಪಾಲಾಯಿತು. ಫೆಮಿನಾ ಮಿಸ್ ಇಂಡಿಯಾ ಅನುಕೃತಿ ವಾಸ್ ಅಗ್ರರ 12ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಪ್ರಶಸ್ತಿ ಜಯಿಸಿದ ಬಳಿಕ ಮಾತನಾಡಿದ ವನೆಸ್ಸಾ, ವಿಶ್ವ ಸುಂದರಿ ಪ್ರಶಸ್ತಿ…
ರೈತರ ಸತಾಯಿಸುವ ಅಧಿಕಾರಿಗಳ ಅಮಾನತು
December 9, 2018ಮೈಸೂರು: ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ರೈತ ರನ್ನು ಅಲೆದಾಡಿಸುವ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಎಚ್ಚರಿಸಿದರು. ಇಲವಾಲ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶನಿವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಉಂಡುವಾಡಿ ಯೋಜನೆ ಪೂರ್ಣಗೊಂಡ ನಂತರ ನಾಲ್ಕೈದು ದಶಕಗಳ ಕಾಲ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ. ಯೋಜ ನೆಗೆ ಕನಿಷ್ಠ 3 ವರ್ಷಗಳ ಕಾಲಾವಕಾಶ…